Saturday, July 21, 2012

ಕರ್ತವ್ಯ

ಮನುಜ...
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...