Showing posts with label ಕೇಳಿದೆ. Show all posts
Showing posts with label ಕೇಳಿದೆ. Show all posts

Saturday, January 28, 2012

ಸಮುದ್ರದ ಕಣ್ಣೀರು

ಕೇಳಿದೆ ನಾ ಸಮುದ್ರಕ್ಕೆ
"ನೀ ಎಂದೂ ಪ್ರೀತಿಸಿದಿಯೇ ?
ಸಮುದ್ರ ಹೇಳಿತು ನಕ್ಕು
"ನಾನೂ ನಿನ್ನ ಹಾಗೆ ಪ್ರೀತಿಯಲಿ ಸೋತವನು
ಹರಿಸುತ್ತಿದ್ದೇನೆ ಈಗಲೂ ನನ್ನ ಕಣ್ಣೀರನ್ನು"
by ಹರೀಶ್ ಶೆಟ್ಟಿ, ಶಿರ್ವ

Monday, September 26, 2011

ಶಾಂತಿ

ನಾನು ಕೇಳಿದೆ ಶಾಂತಿಗೆ
" ಎಲ್ಲಿ ಹೋದರು ನಿನ್ನ ವಾಸ ಕಾಣುದಿಲ್ಲ
ನಿನ್ನನ್ನು ಹುಡುಕಲು ಹಲವರು ಅಲ್ಲಿ ಇಲ್ಲಿ ಅಲೆದರು
ನಿನಗಾಗಿ ತಪ್ಪಸ್ಸು ಮಾಡಿ ಸೋತರು
ನಿನ್ನ ನೆಲೆ ಎಲ್ಲಿ?
ಶಾಂತಿ ಹೇಳಿತು ನಕ್ಕು
"ನನ್ನ ನೆಲೆ ನಿನ್ನಲ್ಲಿಯೇ
ನಿನ್ನ  ಹೃದಯದಲ್ಲಿ
ನಿನ್ನ ಅಹಂ ಅಳಿಸಿದರೆ 
ನಿನ್ನ ಆಸೆ ನಿಲ್ಲಿಸಿದರೆ
ನಿನ್ನ ಹೃದಯದಲಿ ಪ್ರೀತಿಯನ್ನು ನೆಲೆಸಿದರೆ
ನಿನ್ನ ಆತ್ಮದಲಿ ಸಂತೋಷ ತುಂಬಿಸಿದರೆ
ನನ್ನನ್ನು ನೀನು ನಿನ್ನಲ್ಲಿಯೇ ಕಾಣುವೆ
ನಿನ್ನ ಮನೆಯಲ್ಲಿಯೇ ನಾ ನೆಲೆಸುವೆ"
by ಹರೀಶ್ ಶೆಟ್ಟಿ, ಶಿರ್ವ

Saturday, September 10, 2011

ಪೋಸ್ಟ್ ಮ್ಯಾನ್

ಕೇಳಿದೆ ನಾ ಪೋಸ್ಟ್ ಮ್ಯಾನ್ ನಿಗೆ
"ನಿನ್ನ ಉಪಕಾರ ಯಾರೂ ಮರೆಯಲಾರರು
ನಿನ್ನ ಕೆಲಸ ಯಾರೂ ಮಾಡಲಾರರು
ನಿನಗಾಗಿ ಜನರೆಲ್ಲಾ  ಕಾಯುತ್ತಿದ್ದರು
ನಿನ್ನನ್ನು ಮನೆಯ ಸದಸ್ಯನಂತೆ ಕಾಣುತ್ತಿದ್ದರು
ನೀನು ತಂದ ಪತ್ರವನ್ನು ಓದಿ ನಗುತ್ತಿದ್ದರು, ಅಳುತ್ತಿದ್ದರು
ಓದಲು ಬರದವರು ನಿನ್ನಿಂದ ಓದಿಸುತ್ತಿದ್ದರು 
ಸುಖ ದುಃಖವನ್ನು ಹಂಚುವ ನೀನು ಎಲ್ಲಿ ಕಣ್ಮರೆಯಾಗಿದೆ
ಈಗ ನಿನ್ನನ್ನು ಕಾಣುವುದೇ ಅಪರೂಪ ಆಗಿದೆ
ಏನು ಕಾರಣ ಇದರ ಹಿಂದೆ"

ಪೋಸ್ಟ್ ಮ್ಯಾನ್ ಹೇಳಿದ ನಕ್ಕು
"ಪ್ರಪಂಚದ ಗತಿ ವೇಗವಾಗಿದೆ
ನನ್ನ ಕಣ್ಮರೆಯಾಗುವುದಕ್ಕೆ ಇದೆ ಕಾರಣವಾಗಿದೆ
ಹೋಗಲಿ ಬಿಡು ಇದನೆಲ್ಲ
ಇದರಿಂದ ಕಲಿಯಲಿದೆ ಶಿಕ್ಷಣೆ ನಮಗೆಲ್ಲ
ಜೀವನದಲ್ಲಿ ಬದಲಾವಣೆ ಆಗುವುದು ಸಹಜ
ಕಾಲ ಬದಲಾದಂತೆ ಬದಲಾಗುತ್ತಾನೆ ಮನುಜ
ಆ ಸಮಯದ ಜನರಿಗೆ ಪತ್ರವೇ ಮಜಾ
ಈಗಿನ ಮಕ್ಕಳಿಗೆ ಪತ್ರ ಬರೆಯುದೆಂದರೆ ಆಗಿದೆ ಸಜಾ
ಸಮಯ ಬದಲಾಗಿದೆ
ಜನರಲ್ಲಿ ಸಮಯ ಇಲ್ಲದಾಗಿದೆ
ಮೊಬೈಲ್ , ಎಸ್ ಎಂ ಎಸ್ ಗಳ ಚಲನವಾಗಿದೆ
ಇಂಟರ್ನೆಟ್, ಇಮೇಲ್ ಗಳ ರಾಜ್ಯವಾಗಿದೆ
ಜನರು ಪತ್ರ ಬರೆಯುವುದೇ ಅಪರೂಪವಾಗಿದೆ"
by ಹರೀಶ್ ಶೆಟ್ಟಿ, ಶಿರ್ವ 

Friday, September 9, 2011

ವಾರ್ತಾ ದಿನ ಪತ್ರಿಕೆಯ ಜ್ಞಾನ

ಕೇಳಿದೆ ನಾ ವಾರ್ತಾ ದಿನ ಪತ್ರಿಕೆಗೆ
"ದಿನಾಲೂ ಮುಂಜಾನೆ ಜನರು ನಿನ್ನನ್ನು ಕಾಯುತ್ತಾರೆ
ನಿನ್ನನ್ನು ಓದಿ ದೇಶ ವಿದೇಶದ ಸುದ್ದಿಯನ್ನು ತಿಳಿಯುತ್ತಾರೆ 
ಆದರೆ ಸಂಜೆ ಆದಾಗಲೇ ನಿನ್ನನ್ನು ಅಲ್ಲಿ ಇಲ್ಲಿ ಬಿಸಾಕಿ ಬಿಡುತ್ತಾರೆ 
ನಂತರ ನಿನ್ನನ್ನು ಗುಜರಿ ಅಂಗಡಿಯಲ್ಲಿ ಮಾರಿ ಬಿಡುತ್ತಾರೆ
ನಿನಗಿಲ್ಲವೇ ಬೇಸರ ?
ಏನು ನಿನ್ನ ಅಪೇಕ್ಷೆ ?
ಏಕೆ ನಿನಗೆ ಈ ಶಿಕ್ಷೆ ?

ವಾರ್ತಾ ದಿನ ಪತ್ರಿಕೆ ಹೇಳಿತು ನಕ್ಕು
"ನನಗಿಲ್ಲ ಏನೂ ಅಪೇಕ್ಷೆ,
ಇದರಲ್ಲಿ ಎಂಥ ಶಿಕ್ಷೆ
ಯಾರೂ ಅಳಿಸಲಾರರು ನನ್ನಲ್ಲಿ ಮುದ್ರಿಸಿದ ಅಕ್ಷರವನ್ನ
ಯಾರೂ ಕೊಡಲಾರರು ನಾ ಕೊಡುವ ಜ್ಞಾನವನ್ನ
ಜನರು ಗುಜರಿ ಅಂಗಡಿಗೆ ಸೇರಿಸಿ ಬಿಡುತ್ತಾರೆ ನನ್ನನ್ನ
ಇದರಿಂದ ತಿಳಿದುಕೋ ನೀ ಒಂದು ಜ್ಞಾನದ ಮಾತನ್ನ
ಏನು ಮಾಡುವಿ ಪಡೆದು ರೂಪ ರಂಗ ಸೌಂದರ್ಯವನ್ನ
ಸೌಂದರ್ಯ ಯೌವನ ರಚಿಸದು ನಿನ್ನ ಜೀವನವನ್ನ   
ಈಗಲೇ ಕಾಪಾಡಿಕೋ ನಿನ್ನ ಅಂತ್ಯ ಸಮಯವನ್ನ
ನನ್ನಂತೆ ಮಾಡಿಕೋ ಸರಳ ನಿನ್ನ ಮನಸ್ಸನ್ನ
ಸುಖ ದುಃಖ ಜ್ಞಾನವನ್ನು ಹಂಚಿ ಪಡೆ ಸಂತೋಷವನ್ನ
ಮಾಡು ಸಾರ್ಥಕ ನಿನ್ನ ಜೀವನವನ್ನ"  
by ಹರೀಶ್ ಶೆಟ್ಟಿ, ಶಿರ್ವ

Thursday, September 1, 2011

ಗಣೇಶ್ ಚತುರ್ಥಿ


ಕೇಳಿದೆ ನಾ ದೇವ ಶ್ರೀ ಗಣೇಶನಿಗೆ
" ನೀನು ನಮ್ಮ ಬಾಳಿನ ದೇವ
೩೬೫ ದಿವಸ ನಾವು ಕೊಡುತ್ತೇವೆ ನಿನಗೆ ಸೇವಾ
ಆದರೂ ಕಾಯುತ್ತೇವೆ ಪ್ರತಿ ವರ್ಷ ನಿನ್ನ ಹಬ್ಬ ಗಣೇಶ್ ಚತುರ್ಥಿಕ್ಕಾಗಿ
ಮನೆಗೆ ನಿನ್ನನು ಕರೆಮಾಡಿ ಪೂಜಿಸುತ್ತೇವೆ ತಲೆಬಾಗಿ
ವಿಶೇಷವಾಗಿ ಆಚಾರಿಸುತ್ತೇವೆ ವರುಷಕ್ಕೊಮ್ಮೆ ನಿನ್ನ ಹಬ್ಬವನ್ನು
ಏಕೆ ನೀ ನಮ್ಮ ಮನೆಯಲ್ಲಿ ೩೬೫ ದಿನ ಇದ್ದು ಕಾಪಾಡ ಬಾರದು ನಮ್ಮನ್ನು"

ದೇವ ಶ್ರೀ ಗಣೇಶ ಹೇಳಿದ ನಕ್ಕು
"ಭಾದ್ರಪದ ಶುಕ್ಲದ ಚೌತಿಯಂದು ನನ್ನ ಆಗಮನ
ಆತ್ಮ ವಿಶ್ವಾಸ, ಸಂಯಮ,ಭಕ್ತಿ, ಧೈರ್ಯ ಮತ್ತು ಸಂಕಲ್ಪ
ಇದನ್ನೆಲ್ಲಾ ಕಳೆದು ಕೊಳ್ಳುತ್ತಿದ್ದರು ಪ್ರತಿ ಜನ
ಸರ್ವೊಚ್ಚ ಸತ್ಯವಾಗಿ ಆಗಮಿಸಿ ನಾನು ಕೊಡುವೆ ನಿಮೆಗೆಲ್ಲ ವರದಾನ
ಸಜೀವ ಹಾಗು ನಿರ್ಜೀವದಲ್ಲಿ ಇದೆ ವಾಸ ನನ್ನ 
ಅಹಂ , ಕೋಪ , ಅಸೂಯೆ ಎಲ್ಲ ಮರೆತು
ಜನರು ತರುವರು ಮನೆಗೆ ನನ್ನ ಮೂರ್ತಿಯನ್ನ
ಎಲ್ಲರು ಒಟ್ಟು ಕೂಡಿ ಪೂಜಿಸುವರು ನನ್ನನ್ನ
ಕಾಣುವಿರಿ ಈ ಸಮಯ ಎಲ್ಲ ಕಡೆ ನೀವು ನನ್ನದೇ  ಮೂರ್ತಿಯನ್ನ"
by ಹರೀಶ್ ಶೆಟ್ಟಿ, ಶಿರ್ವ 

 

Tuesday, August 30, 2011

ಗುಲಾಬಿ ಹೂವಿನ ಮುಳ್ಳು

ಕೇಳಿದೆ ನಾ ಗುಲಾಬಿ ಹೂವಿನ ಮುಳ್ಳಿಗೆ
"ಎಷ್ಟು ಸುಂದರ ಈ ಸುಹಾಸಿತ ಗುಲಾಬಿ ಹೂವು
ಆದರೆ ನೀ ಕೊಡುವಿ ಎಲ್ಲರಿಗೆ ನೋವು   
ಏನು ಗುಲಾಬಿ ಹೂವು ಹಾಗು ನಿನ್ನ ಸಂಬಂದ
ಏಕೆ ನಿನಗಿಲ್ಲ ಗುಲಾಬಿ ಹೂವಿನ ಅಂದ ಚೆಂದ
ಏನು ನಿನ್ನ ಈ ಆಟ
ಯಾಕೆ ನಿನ್ನ ಈ ಕಾಟ
ನಿನ್ನಿಂದ ಕಷ್ಟ ಮಾತ್ರ  
ಇಲ್ಲಿ ಏನು ನಿನ್ನ ಪಾತ್ರ"
  
ಗುಲಾಬಿ ಹೂವಿನ ಮುಳ್ಳು ಹೇಳಿತು ನಕ್ಕು
"ನನಗೆ ಬೇಡ ಅಂದ ಚೆಂದ
ಆದರೆ ನಿಮಗೆ ಒಂದು ಜ್ಞಾನ ನನ್ನಿಂದ
ನನ್ನ ಇಲ್ಲಿ ಮುಖ್ಯ ಪಾತ್ರ
ಹಲವು ಪ್ರಮಾಣ  ನನ್ನತ್ರ
ಗುಲಾಬಿ ಹೂವು ಇಲ್ಲದೆ ನಾನಿಲ್ಲ
ನಾನಿಲ್ಲದೆ ಗುಲಾಬಿ ಹೂವು ಇಲ್ಲ 
ಜೀವನ ಸುಖ ದುಃಖದ ಸಂಗಮ
ಕೂಡಿ ಬಾಳುವುದೇ ಉತ್ತಮ
ಜೀವನದಲ್ಲಿ ಬೇಕು ನೋವಿನ ಅನುಭವ
ಆಗಲೇ ಜೀವನವನ್ನು ಗೆಲ್ಲಲು ಸಂಭವ" 
by ಹರೀಶ್ ಶೆಟ್ಟಿ, ಶಿರ್ವ

Monday, August 15, 2011

ಧ್ವಜದ ದುರ್ದೆಸೆ

ಕೇಳಿದೆ ನಾ ತ್ರಿವರ್ಣ ಧ್ವಜವನ್ನು
"ನಿನ್ನನ್ನು ಏರಿಸುತ್ತಾರೆ ಎತ್ತರ
೨೬ ಜನವರಿ ಹಾಗು ೧೫ ಆಗಸ್ಟ್ ರಂದು
ಗೌರವಿಸುತ್ತಾರೆ  ಅಭಿಮಾನದಿಂದ
ಬೇರೆ ಸಮಯ ಅವರಿಗೆ ನೀನೊಂದು ಪ್ರದರ್ಶನದ ವಸ್ತು
ಅಲ್ಲದೆ ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕು"
ಬೇಸರವಿಲ್ಲವೇ  ನಿನಗೆ ?
ಭಾರತ ದೇಶದ ಧ್ವಜ ವಾಗಿ
ಭಾರತದಲ್ಲೇ ನಿನ್ನ ಗತಿ ಈಗೆ ಯಾಕೆ?
ವರ್ಷದ ಈ ಎರಡು ದಿವಸದ ಗೌರವ ನಿನಗೆ ಬೇಕೇ?

ತ್ರಿವರ್ಣ ಧ್ವಜ ಹೇಳಿತು ದುಃಖದಿಂದ
"ನಿಮ್ಮ ಮನದಲ್ಲಿ ನನಗೆ ಸದಾ ಗೌರವ ಇದೆ
ಆದರೆ ಬಡತನ, ಭ್ರಷ್ಟಾಚಾರದಿಂದ
ನಿಮಗೆ  ಮನಶಾಂತಿ ಇಲ್ಲದಾಗಿದೆ
ನನಗೆ ಈ ಗೌರವ ೩೬೫ ದಿವಸ ಬೇಕಾಗಿದೆ
ಆದರೆ ಈಗ ದೇಶದ ಸ್ಥಿತಿ ಗಂಭೀರವಾಗಿದೆ
ನನ್ನ ಮರ್ಯಾದೆ ಬೀದಿ ಪಾಲಾಗಿದೆ,
ದೇಶದ ಅಭಿಮಾನವಾದ ನನಗೆ
ನನ್ನದೇ ಅವಸ್ಥೆ  ದಯನೀಯವಾಗಿದೆ
ರಾಜಕಾರಣಿಗಳ ದುರಾಶೆಯಿಂದ
ನನ್ನ ಬಾಳೆ ಅಪಾಯಕಾರಿಯಾಗಿದೆ "
ನನ್ನ ತಲೆ ತಗ್ಗಿಸ ಬೇಡ ಮಾನವ
ದೇಶ ಪ್ರೇಮದ ಚಿಹ್ನೆಯಾದ ನನಗೆ
ಒಂದು ಪ್ರದರ್ಶನದ ವಸ್ತು ಹಾಗು
ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕಾಗಿ
ಅಗೌರವ ತೋರಿಸ ಬೇಡ ಮಾನವ"
by ಹರೀಶ್ ಶೆಟ್ಟಿ, ಶಿರ್ವ

Sunday, August 14, 2011

ಬಾತುಕೋಳಿಯ ಕತೆ

ಸರೋವರದಲ್ಲಿ ಕುಳಿತ
ಬಾತುಕೋಳಿಯನ್ನು  ಕೇಳಿದೆ  ನಾ
"ನಿನ್ನ ಮುಖ ಎಷ್ಟು ಸುಂದರ ಶಾಂತ
ಕಾಣುವಿ ನೀ ತುಂಬಾ ಪ್ರಶಾಂತ
ನಯವಾದ  ಕೋಮಲ ನಿನ್ನ ರೂಪ
ನನಗೂ ಬೇಕು ನಿನ್ನ ಜೀವನದ ಸ್ವರೂಪ "
ಬಾತುಕೋಳಿ ಹೇಳಿತು ನಕ್ಕು
"ಕೇಳು ನೀನು ನನ್ನ ಕತೆ 
ನಾನೂ ಪಡುತ್ತೇನೆ ವ್ಯತೆ
ಕಳೆಯುತ್ತೇನೆ ಜೀವನವನ್ನು ಶಾಂತಿಯಿಂದ
ಇದರ ಕಾರಣ ನೀರಿನ ಅಡಿಯಲ್ಲಿ ನನ್ನ ಕಾಲುಗಳು
ಸತತ ನಡೆಸುತ್ತಿರುವ ಜೀವನದ ಹೋರಾಟದಿಂದ "
"ನೀನೂ ನಡೆ ನನ್ನ ಮಾರ್ಗ 
ಜೀವನದಲ್ಲಿ ಸತತ ಶ್ರಮಿಸಿ ದುಡಿದು
ನೀ ಜೀವನವನ್ನು ಮಾಡಿಕೋ ಸ್ವರ್ಗ"
by ಹರೀಶ್ ಶೆಟ್ಟಿ, ಶಿರ್ವ

Saturday, August 13, 2011

ಸಮುದ್ರದ ವಿಚಾರ

ಕೇಳಿದೆ ನಾ ಸಮುದ್ರಕ್ಕೆ
"ನೀನು ಇಷ್ಟು ವಿಶಾಲ 
ನಿನ್ನಲ್ಲಿ ತುಂಬಿದೆ
ಧನ ಸಂಪತ್ತು ಅಪಾರ,
ಆದರೂ ಕೆಲವು ಜನರು 
ನಿನ್ನಿಂದ ಪಡೆಯುತ್ತಾರೆ ಮುತ್ತುಗಳನ್ನು  ,
ಕೆಲವರು ಪಡೆಯುತ್ತಾರೆ ಮೀನುಗಳನ್ನು  
ಹಾಗು ಕೆಲವರು ಖಾಲಿ ಕೈ
ಒದ್ದೆ ಮಾಡಿ ಬರುತ್ತಾರೆ ಕಾಲನ್ನು,
ಏನು ನಿನ್ನ ವಿಚಾರ"
ಸಮುದ್ರ ಹೇಳಿತು ನಕ್ಕು
"ಹೌದು ನಾನು ಮಹಾ ಸಾಗರ
ಕೇಳು ನನ್ನ ವಿಚಾರ
"ನನ್ನಲ್ಲಿ ಹುಡುಕುತ್ತಾರೋ
ಯಾರು ಯಾವ ವಸ್ತು
ಕಷ್ಟಪಟ್ಟು ಪ್ರಯತ್ನಿಸುತ್ತಾರೋ
ಪಡೆಯುತ್ತಾರೆ ಅವರು ಅದೇ ವಸ್ತು"
ಜೀವನದಲ್ಲಿ ನೀ ಮಾಡು ನಿರ್ಧಾರ
ಹೋಗು ಮನಸ್ಸಿನ ದ್ವಾರ 
ಕಷ್ಟಪಟ್ಟು  ಪ್ರಯತ್ನಿಸಿ ಗಳಿಸು 
ವಸ್ತು ಮನ ಪ್ರಕಾರ"
by ಹರೀಶ್ ಶೆಟ್ಟಿ ,ಶಿರ್ವ 

Thursday, August 11, 2011

ಜಲಪಾತಗಳ ತಾಳ್ಮೆ

ಜಲಪಾತಗಳ ನೋಡಿ ಕೇಳಿದೆ ನಾ
"ಎಷ್ಟು ಸುಂದರ ಹಾಗೂ
ಆಕರ್ಷಕವಾದ  ರೀತಿಯಲ್ಲಿ
ನೀ ಜರಿಯುವಿ,
ಎಷ್ಟು ಸುಲಭವಾಗಿ, ಎಷ್ಟು ತಾಳ್ಮೆಯಿಂದ
ನೀ ಸತತವಾಗಿ ಜರಿಯುವಿ
ಏನು ಇದರ ರಹಸ್ಯ
ಜಲಪಾತ ಹೇಳಿತು ನಕ್ಕು
ಜರಿಯುತ್ತಿದ್ದೇನೆ ನಾ ರಾತ್ರಿ ಹಗಲು
ನಾನು ಹುಟ್ಟಿದ್ದು ಹೀಗೆಯೇ ಪತನವಾಗಲು
"ನನ್ನಿಂದ ನೀವು ಪಾಠ ಒಂದು ಕಲಿಯಬೇಕು
 ನಾನು ಜರಿಯುವ ಹಾಗೆ
ನೀವು ಸಹ ಸೋಲು,
ನಷ್ಟ, ಅವಮಾನ,ಪ್ರತಿಕೂಲ
ಸುಲಲಿತವಾಗಿ ಸ್ವೀಕರಿಸಬೇಕು,
ಮನುಷ್ಯನಲ್ಲಿ ಎಲ್ಲವನ್ನು ಸಹಿಸುವಷ್ಟು
ತಾಳ್ಮೆ ಇರಬೇಕು"
by ಹರೀಶ್ ಶೆಟ್ಟಿ, ಶಿರ್ವ

Tuesday, August 9, 2011

ಪಾತರಗಿತ್ತಿಯ ಜೀವನ

ಕೇಳಿದೆ ನಾ ಪಾತರಗಿತ್ತಿಯ
"ನೀ ಕೇವಲ ಹದಿನಾಲ್ಕು ದಿವಸ
ಬದುಕುವಿ ಆದರು ಸಂತೋಷದಿಂದ,
ಉಲ್ಲಾಸದಿಂದ ಜೀವನ ಕಳೆದು
ಅನೇಕ ಹೃದಯ ಗೆಲ್ಲುವಿ,
ನಿನ್ನ ಜೀವನ ಸಣ್ಣ
ಆದರೆ ನಿನ್ನ ಜೀವನದಲ್ಲಿ ಅನೇಕ ಬಣ್ಣ"

ಪಾತರಗಿತ್ತಿ ಹೇಳಿತು ನಕ್ಕು
"ಹೌದು ನನ್ನ ಜೀವನ ಚಿಕ್ಕದು
ಆದರೆ ನನ್ನ ಮನಸ್ಸು ದೊಡ್ಡದು
ಸುಂದರ ಜೀವನ ನನಗೆ ಮೆಚ್ಚಿದ್ದು".
"ಮಾತು ಒಂದು ಕೇಳಿ ನನ್ನ
ಜೀವನದ ಪ್ರತಿ ಕ್ಷಣವು ಚೆನ್ನ
ಉತ್ಸಾಹ, ಉಲ್ಲಾಸ, ಚೈತನ್ಯ
ಆನಂದದಿಂದ ಜೀವನ ಕಳೆದರೆ
ಸುಖ ಇರುವುದು ನಿಮ್ಮ ಬೆನ್ನ
ನಿಮ್ಮ ಜೀವನ ಆಗುವುದು ಚಿನ್ನ"
by ಹರೀಶ್ ಶೆಟ್ಟಿ, ಶಿರ್ವ

Monday, August 8, 2011

ಕೊಳಲಿನ ಮಧುರ ಸ್ವರ

ಕೇಳಿದೆ  ನಾ ಕೊಳಲಿಗೆ
"ನಿನ್ನ ಮೈಯಲ್ಲಿ  ಎಷ್ಟು ತೂತುಗಳು ,
ಒಳಗಿನಿಂದ  ನೀ  ಖಾಲಿ
ಆದರೆ ನಿನ್ನನ್ನು ಊದಿದರೆ
ನೀ ಮಧುರ ಸ್ವರ ನುಡಿಯುವಿ
ಇದು ಹೇಗೆ ಕೊಳಲು"
ಕೊಳಲು ಹೇಳಿತು ನಕ್ಕು
"ನನ್ನ ಶರೀರದ ತೂತು 
ನನ್ನ ಜೀವನದ  ಗುರುತು
ಒಳಗಿನ ಖಾಲಿತನದಲ್ಲಿ
ಅಡಗಿದೆ ಒಂದು ಮಾತು
"ನಿಮ್ಮ ಒಳಗೆ ನಿಮಗೆ
ಕಾಣದ ಗುಣಗಳು ತುಂಬಿದೆ,  
ನಿರಾಶೆಯ ತೂತುಗಳನ್ನು
ಹಾಗು ಖಾಲಿತನವನ್ನು 
ದೈರ್ಯದಿಂದ ಹಾಗು
ಎಚ್ಚರಿಕೆಯಿಂದ ಮುಚ್ಚಿದರೆ,
ನಿಮ್ಮ ಎಲ್ಲ ಗುಣಗಳನ್ನು
ನನ್ನ ಮಧುರ ಸ್ವರಗಳಂತೆ
ಹೊರ ತರಬಹುದು"
by ಹರೀಶ್ ಶೆಟ್ಟಿ, ಶಿರ್ವ

Sunday, August 7, 2011

ಕೊಡೆಯ ಮಾಯೆ

ಕೇಳಿದೆ ನಾ ಕೊಡೆಯ
"ನೀನು ಇಷ್ಟು ಚಿಕ್ಕ
ಕೀರ್ತಿ ನಿನ್ನ ದೊಡ್ಡದು
ಮಳೆಯಿಂದ ರಕ್ಷಿಸುವೆ
ಬಿಸಿಲಲ್ಲಿ ನೀಡುವೆ ಛಾಯೆ
ಎಂಥ ನಿನ್ನ ಮಾಯೆ "
ಕೊಡೆ ಹೇಳಿತು ನಕ್ಕು
"ನನ್ನದಿಲ್ಲ ಏನು ಮಾಯೆ
ನನ್ನನ್ನು ಮಾಡಿದವ ಜಾಣ
ನಿಮಗೆ ಒಂದು ಜ್ಞಾನ
ಕಷ್ಟ ಇರಲಿ ಎಷ್ಟೇ ದೊಡ್ಡ
ಸಿಕ್ಕ ಚಿಕ್ಕ ಸಹಾಯವೇ  ಮುಖ್ಯ,
ದೊಡ್ಡ ಕಷ್ಟವನ್ನು 
ಪಾರು ಮಾಡುವುದು
ಚಿಕ್ಕ ಸಹಾಯದಿಂದಲೂ ಶಕ್ಯ" 
ಹರೀಶ್ ಶೆಟ್ಟಿ, ಶಿರ್ವ

Saturday, August 6, 2011

ದೀಪದ ಸಂದೇಶ

ಕೇಳಿದೆ ನಾ ದೀಪವ
"ಸ್ವತಃ ಕತ್ತಲೆ ಆವರಿಸಿ,
ತನ್ನನ್ನು ಉರಿಸಿ,
ಬೇರೆಯವರಿಗೆ ಬೆಳಕು ನೀಡುತಿ,
ಏಕೆ ನಿನಗೆ ಈ ಕಷ್ಟ ?"
ದೀಪ ಹೇಳಿತು ನಕ್ಕು
" ನನಗಿಲ್ಲ ಏನೂ ಕಷ್ಟ
ನನಗೆ ಇದೇ ಇಷ್ಟ
ನನ್ನಿಂದ ಸಂದೇಶ ಸ್ಪಷ್ಟ
ನೀವೂ ನನ್ನಂತೆ ಜೀವನ ಸಾಗಿಸಿ 
ನನ್ನಂತೆ  ಉರಿದು ಬೇರೆಯವರ ಬಾಳನ್ನು ಬೆಳಗಿಸಿ "
by ಹರೀಶ್ ಶೆಟ್ಟಿ, ಶಿರ್ವ

Friday, August 5, 2011

ಬಡವನ ಸಮಸ್ಯೆ

ಬಡವನಿಗೆ ಕೇಳಿದೆ ನಾ
"ಏನು ನಿನ್ನ ಸಮಸ್ಯೆ
ಏಕೆ ನೀ ಹೀಗೆ ?"

ಬಡವ ಹೇಳಿದ ನಕ್ಕು
"ನನ್ನದೇನು ಸಮಸ್ಯೆ
ನಾನೇ ಒಂದು ಸಮಸ್ಯೆ
ನಾನು ಹೇಳಿದು ಆಗುವುದು
ಅರ್ಥ ಅಲ್ಪ
ಬೇಕಾಗಿದ್ದದ್ದು ಮಾತ್ರ
ಅನ್ನ ಸ್ವಲ್ಪ"
by ಹರೀಶ್ ಶೆಟ್ಟಿ, ಶಿರ್ವ

Thursday, August 4, 2011

ಕೋಗಿಲೆಯ ರೂಪ

ಕೇಳಿದೆ ನಾ ಕೋಗಿಲೆಯ
"ಎಂಥ ಸುಮಧುರ ಕಂಠ ನಿನಗೆ
ಆದರೆ ನಿನ್ನ ರೂಪ ಏಕೆ ಹೀಗೆ?
ಕೋಗಿಲೆ ಹೇಳಿತು ನಕ್ಕು ..
"ನನ್ನ ಕಂಠ ದೇವರು ನೀಡಿದ ವರದಾನ
ಕೇಳಿ ಈ ನನ್ನ ಮಧುರ ಗಾನ
ಅರಿಯುವಿ ನೀ ಜೀವನ ಜ್ಞಾನ
ಸೌಂದರ್ಯ,ರೂಪಕ್ಕೆ ಇಲ್ಲ ಮಾನ
ಗುಣ ನಡತೆಯೇ ಮಹಾನ"
by ಹರೀಶ್ ಶೆಟ್ಟಿ, ಶಿರ್ವ

Wednesday, August 3, 2011

ತಾವರೆಯ ಗುಣ

ಕೇಳಿದೆ ನಾ  ತಾವರೆಯ  ಹೂವಿಗೆ ,
"ಎಂಥ ನಿನ್ನ ಅಂದ ,
ಎಂಥ ನಿನ್ನ ಚೆಂದ ,
ಆದರೆ ಇರುವುದು
ಏಕೆ ನೀ ಈ ಕೆಸರಲ್ಲಿ
ಏಕೆ  ನಿನಗೆ ಇದು ಅನುಬಂಧ ?"
ತಾವರೆ ಹೂ ಹೇಳಿತು ನಕ್ಕು
" ನನ್ನ ಅಂದ ಚೆಂದ
ಅಲ್ಲ ನನ್ನ ಗುಣ,
ಕೆಸರಿನಲ್ಲಿದ್ದರು
ನನ್ನಲ್ಲಿ ಇಲ್ಲ ಅವಗುಣ
ಬಾಳುವೆ ನಾ ಇಲ್ಲಿ ಸುಖದಿಂದ
"ಕಷ್ಟದಲ್ಲೂ ಸುಖದಿಂದ ಇರಬಹುದು
ಕೊಳಕಲ್ಲೂ  ಸೌಂದರ್ಯ ಹುಟ್ಟಬಹುದು"
ಇದೇ ಸಂದೇಶ ನಿಮೆಗೆಲ್ಲರಿಗೂ ನನ್ನಿಂದ .
by ಹರೀಶ್ ಶೆಟ್ಟಿ, ಶಿರ್ವ

Tuesday, August 2, 2011

ನದಿಯ ಉದ್ದೇಶ

ಕೇಳಿದೆ ಹರಿಯುವ ನದಿಗೆ 
"ಸದಾ ಹರಿಯುವ ನೀನು,
ಕಲ್ಲನ್ನೂ ತುಂಡು ಮಾಡುವಿ
ಎಂಥ ನಿನ್ನ ಶಕ್ತಿ, 
ಏನು ನಿನ್ನ ಉದ್ದೇಶ "
ನದಿ ಹೇಳಿತು ನಕ್ಕು
"ಹರಿಯ ಬಿಡು ನನ್ನನ್ನು,
ಇದೇ ನನ್ನ  ಶಕ್ತಿ, 
ಇದೇ ನನ್ನ ಸ್ಥಿರತೆ,
ನನ್ನದೊಂದೇ ಉದ್ದೇಶ
ಪ್ರಯತ್ನಿಸುವುದನ್ನು ಬಿಡಬಾರದು 
ಬಿಡಬಾರದು ಯಾವಾಗಲು ಆಸೆ"
by ಹರೀಶ್ ಶೆಟ್ಟಿ ,ಶಿರ್ವ

Monday, August 1, 2011

ನಿಸ್ವಾರ್ಥ ಸೇವೆ

ಕೇಳಿದೆ ಜೇನು ನೊಣಕ್ಕೆ
ಒಂದು ದಿನ
"ಅ ಹೂವಿಂದ ಈ ಹೂವಿಂದ
ಮಾಡುವೆ ನೀ ಸಿಹಿ ಒಟ್ಟು
ಜನರು ಅದನ್ನು ತಿನ್ನುವರು ಕದ್ದು
ಏಕೆ ನಿನಗೆ ಈ ಎಲ್ಲ ಕಷ್ಟ ,
ಹೋಗುದಿಲ್ಲವೇ ನೀ ಸೋತು"
ಜೇನು ನೊಣ ಹೇಳಿತು ನಕ್ಕು
"ಕಷ್ಟ ಪಟ್ಟರೆ ಇಷ್ಟ ಸಿಗುವುದು,
ಸಿಹಿ ಹಂಚಿದರೂ ಸಿಹಿ ಮುಗಿಯದು
ನನ್ನಿಂದಾಗಲಿ ಎಲ್ಲರ  ಸಿಹಿ ಬಾಯಿಯ
ನನ್ನಿಂದ ಕಲಿಯಲಿ ಪಾಠ ನಿಸ್ವಾರ್ಥ ಸೇವೆಯ "
ಹರೀಶ್ ಶೆಟ್ಟಿ ,ಶಿರ್ವ

Sunday, July 31, 2011

ಹೂವಿನ ಬಾಳು

ಹೀಗೆಯೇ ಒಂದು ದಿನ
ನಾ ಕೇಳಿದೆ ಹೂಗಳ
"ಏಕೆ ನೀ ಪರಿಮಳ ಹರಡುವಿ"
ಹೂಗಳು ನಕ್ಕು ಹೇಳಿತು
"ಸೊತ್ತು ಇದು ನನ್ನ ಸಣ್ಣ ಬಾಳಿನ,
ನನ್ನಿಂದ ಪರಿಮಳಿಸಲಿ ಬೇರೆಯವರ ಜೀವನ
ಉಳಿಯದು ಈ ಅಂದ ಚೆಂದ
ಬಾಡುವ ಮುನ್ನ ಹರಡಲಿ ನನ್ನ ಸುಗಂಧ"
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ