Showing posts with label ನುಡಿ ಮುತ್ತು. Show all posts
Showing posts with label ನುಡಿ ಮುತ್ತು. Show all posts

Saturday, December 5, 2020

ಮನ ಶುದ್ಧ


Photo: google


ಮನ ಶುದ್ಧ, 

ಆತ್ಮ ಶುದ್ಧ, 


ಆತ್ಮ ಶುದ್ಧ, 

ವಿಚಾರ ಶುದ್ಧ, 


ವಿಚಾರ ಶುದ್ಧ, 

ಆಚಾರ ಶುದ್ಧ, 


ಆಚಾರ ಶುದ್ಧ,

ಸಂಕಲ್ಪ ಶುದ್ಧ, 


ಸಂಕಲ್ಪ ಶುದ್ಧ, 

ಕರ್ಮ ಶುದ್ಧ, 


ಕರ್ಮ ಶುದ್ಧ, 

ನಿರ್ಣಯ ಶುದ್ಧ, 


ನಿರ್ಣಯ ಶುದ್ಧ, 

ಕಾರ್ಯ ಶುದ್ಧ, 


ಕಾರ್ಯ ಶುದ್ಧ,

ವ್ಯವಹಾರ ಶುದ್ಧ, 


ವ್ಯವಹಾರ ಶುದ್ಧ, 

ಫಲ ಶುದ್ಧ,


ಫಲ ಶುದ್ಧ, 

ಜೀವನ ಪರಿಶುದ್ಧ 


by ಹರೀಶ್ ಶೆಟ್ಟಿ, ಶಿರ್ವ

Tuesday, October 6, 2020

ಬದುಕು ಬಣ್ಣ

 


ಬದುಕಿನಲ್ಲಿ 
ಎಷ್ಟೊಂದು ಬಣ್ಣಗಳು,

ಪ್ರತಿಯೊಂದು ಬಣ್ಣದ 

ಅದರದ್ದೇ ವಿಶಿಷ್ಟತೆ,

ಪ್ರತಿಯೊಂದು ಬಣ್ಣದ 

ವಿವಿಧ ಮಹತ್ವ,

ಒಂದೊಂದಂತೆ 

ಎಲ್ಲಾ ಬಣ್ಣಗಳು ನಮ್ಮ

ಜೀವನದಲ್ಲಿ ಬರುತ್ತವೆ,

ಆದರೆ ಮುಖ್ಯವಾಗಿ 

ಎರಡು ಬಣ್ಣದ 

ನಮ್ಮ ಜೀವನದಲ್ಲಿ 

ವಿಶಿಷ್ಟ ಮಹತ್ವ ಇದೆ,

ಒಂದು ಸುಖದ ಬಣ್ಣ,

ಇನ್ನೊಂದು ದುಃಖದ ಬಣ್ಣ,

ಈ ಎರಡು ಬಣ್ಣಗಳು 

ನಮ್ಮ ಜೀವನದಲ್ಲಿ  

ಒಟ್ಟೊಟ್ಟಿಗೇ ಸಾಗುತ್ತವೆ,

ಸುಖದ ಬಣ್ಣ ಬಂದಂತೆ 

ನಾವು ಸಂತೋಷದ 

ಕಡಲಲ್ಲಿ ತೇಲುತ್ತೇವೆ,

ಆದರೆ ದುಃಖದ ಬಣ್ಣ ಬಂದಾಗ

ನಾವು ಕಣ್ಣೀರ ಸಾಗರದಲ್ಲಿ ಮುಳುಗುತ್ತೇವೆ.

ಸುಖದ ಬಣ್ಣ ಬದುಕಲ್ಲಿ 

ನಮಗೆ ವಿವಿಧ  ಸೌಲಭ್ಯ 

ನೀಡುತ್ತದೆ,

ಸುಖದ ಬಣ್ಣದ 

ಎಲ್ಲಾ ಕೊಡುಗೆ 

ನಮಗೆ ಆನಂದ ನೀಡುತ್ತದೆ,

ದುಃಖದ ಬಣ್ಣ 

ನಮ್ಮನ್ನು ಪೀಡಿಸುತ್ತದೆ, 

ನಮಗೆ ತುಂಬಾ ವ್ಯಥೆ ನೀಡುತ್ತದೆ, 

ಆದರೆ ಈ ಬಣ್ಣ ನಮಗೆ 

ಸತ್ಯದ ಅರಿವು ನೀಡಿ ಹೋಗುತ್ತದೆ, 

ನಮ್ಮನ್ನು ಗಟ್ಟಿಗನಾಗಿ ಮಾಡುತ್ತದೆ,

ನಮ್ಮ ಶಕ್ತಿ ಪ್ರಭಲ ಮಾಡುತ್ತದೆ, 

ಪ್ರತಿಯೊಂದು ಬಣ್ಣ 

ನಮಗೆ ಒಂದು 

ಹೊಸ ಪಾಠ 

ಕಲಿಸಿ ಹೋಗುತ್ತದೆ, 

ಹೊಸ ಪ್ರೇರಣೆ 

ನೀಡಿ ಹೋಗುತ್ತದೆ.

ನಾವು ಬದುಕಲ್ಲಿ 

ಎಲ್ಲಾ ಬಣ್ಣದ ಸ್ವಾಗತ 

ಆಧಾರ ಸತ್ಕಾರ, 

ಧೈರ್ಯದಿಂದ ಮಾಡಿದರೆ, 

ನಮ್ಮ ಜೀವನ 

ವಿವಿಧ ಸುಂದರ ಬಣ್ಣದಿಂದ 

ವರ್ಣಮಯವಾಗಬಹುದು.


by ಹರೀಶ್ ಶೆಟ್ಟಿ, ಶಿರ್ವ

Wednesday, December 12, 2012

ಕಾವ್ಯ ಸೃಷ್ಟಿ

ಕಪಟ ಭಾವನೆ 
ಕವಿ ಹೃದಯದಲ್ಲಿರದು 
ಪರ ನಿಂದನೆ
ಕವನವಾಗದು 
ಕಾವ್ಯ ಸೃಷ್ಟಿಕಾರರು ಸಾವಿರಾರು ಇಲ್ಲಿ 
ಪ್ರತಿಯೊಬ್ಬರಿಗೆ ಅವರವರ ಓದುಗಾರರು ಸಿಗದೇ ಇರದು 
ಕಾಗದದ ಹಾಳೆಯಲ್ಲಿ ಸುಂದರ ಭಾವ ಚೆಲ್ಲುವಾಗ ಕವನವಾಗುವುದು 
ಕಾಗದದ ಹಾಳೆಯಲ್ಲಿ ಅಸೂಯೆಯ ಭಾವ ಚೆಲ್ಲಿದರೆ ಕಸವಾಗುವುದು 
by ಹರೀಶ್ ಶೆಟ್ಟಿ, ಶಿರ್ವ

Monday, December 12, 2011

ನುಡಿ ಮುತ್ತು

ಜನರು ಸ್ವತಃ ಬೇರೆಯವರ ಪ್ರತಿ ತನ್ನದೇ ಆದ ತಪ್ಪು ಧಾರಣೆ ಮಾಡಿಕೊಳ್ಳುತ್ತಾರೆ ಹಾಗು ಅವರನ್ನು ನಿರ್ಲಕ್ಷಿಸಿ ಒಬ್ಬ ಒಳ್ಳೆಯ ವ್ಯಕ್ತಿಯ ಮೈತ್ರಿಯನ್ನು ಕಳೆದು ಕೊಳ್ಳುತ್ತಾರೆ......
by ಹರೀಶ್ ಶೆಟ್ಟಿ , ಶಿರ್ವ
____________________
ಭಾಷಾ ರಾಜನೀತಿ ಮಾಡಿ ಈ ಅಖಂಡ ಭಾರತವನ್ನು ವಿಭಾಗಿಸಲು ಪ್ರಯತ್ನಿಸುವುದು ಸರಿಯಲ್ಲ ........ಭಾಷಾ ಅಭಿಮಾನ ಇರಲಿ .........ಆದರೆ ಬೇರೆ ಭಾಷೆಯ ಪ್ರತಿ ಗೌರವವು ಇರಲಿ ....
by ಹರೀಶ್ ಶೆಟ್ಟಿ , ಶಿರ್ವ 

Saturday, July 23, 2011

ವಿಚಾರವಂತರು

ವಿಚಾರವಂತರು ಬೇರೆಯವರ ಸುಲಭ ಪದದಲ್ಲಿ ಬರೆದ ವಿಚಾರವನ್ನು ಮೆಚ್ಚುವುದಿಲ್ಲ.....
ಕಠಿಣ ಪದದಲ್ಲಿ ಬರೆದ ವಿಚಾರದ ಗುಟ್ಟನ್ನು ಅರ್ಥ ಮಾಡುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ............
by ಹರೀಶ್ ಶೆಟ್ಟಿ, ಶಿರ್ವ

ಸಿದ್ಧಿದಾತ್ರಿ