Saturday, October 30, 2021

ಅಯ್ಯೋ,ಇಷ್ಟೇನಾ ಜೀವನ???



ಬೆಟ್ಟದ ಹೂವು,

ದೇವರ ಮುಡಿಗೇ,

ನಶ್ವರ ಜೀವ,

ಕಾಣದ ಕಡಲಿಗೆ,

ಕಾಣದಂತೆ ಮಾಯವಾದನವನು,

ಬಿಟ್ಟು ಹೋದ ಕಣ್ಣೀರ ಸಾಗರದಲಿ ನಮ್ಮನ್ನು,

ಹೆಸರಂತೆ ನಡೆ ನುಡಿ ಇತ್ತು ಅವನ,

ಪುನೀತ ಪಾವನ,

ಎಂಥ ವಿಧಿಯ ಆಟ,

ಅಯ್ಯೋ,ಇಷ್ಟೇನಾ ಜೀವನ???


by ಹರೀಶ್ ಶೆಟ್ಟಿ, ಶಿರ್ವ

Friday, October 15, 2021

ಸತ್ಯಕ್ಕೆ ಜೈ ಎನ್ನುವ

 

ವಿಜಯದಶಮಿಯ ಈ ಪಾವನ ದಿವಸ,

ಮನೆಮನೆಯಲ್ಲಿ ಹರ್ಷೋಲ್ಲಾಸ,

ಸತ್ಯದ ಗೆಲುವಿನ ಹರ್ಷ,

ಸುಳ್ಳಿನ ಆಗಿದೆ ಭಸ್ಮ,

ಜಯ ಜಯ ಎನ್ನುವ,

ಸತ್ಯಕ್ಕೆ ಜೈ ಎನ್ನುವ,


ರಾವಣನ ದರ್ಪಕ್ಕೆ ಸೋಲು,

ರಾಮನ ದಿಟತನಕ್ಕೆ ಗೆಲುವು,

ಸತ್ಯದ ಜಯ ಎಂದೆಂದಿಗೂ,

ಸುಳ್ಳಿನ ಪರಾಜಯ ಯಾವಾಗಲೂ,

ಜಯ ಜಯ ಎನ್ನುವ,

ಸತ್ಯಕ್ಕೆ ಜೈ ಎನ್ನುವ,


ಬನ್ನಿ, ಸತ್ಯದ ಪತಾಕೆ ಹಾರಿಸುವ,

ಸುಳ್ಳಿನ ಪ್ರತಿಮೆ ಸುಟ್ಟುಹಾಕುವ,

ಮನಸ್ಸಿನ ಕಲ್ಮಶವನ್ನು ಕೊಲ್ಲುವ,

ನಿರ್ಮಲ ಮನಸ್ಸಿನಿಂದ ಸಾಗುವ,

ಜಯ ಜಯ ಎನ್ನುವ,

ಸತ್ಯಕ್ಕೆ ಜೈ ಎನ್ನುವ,


ಬನ್ನಿ, ವಿಜಯೋತ್ಸವ ಆಚರಿಸುವ,

ದೀಪಗಳನ್ನು ಹಚ್ಚುವ,

ನಕ್ಕು ನಲಿದು ಕುಣಿಯುವ,

ಅನ್ನ ಪ್ರಸಾದ ಹಂಚುವ,

ಜಯ ಜಯ ಎನ್ನುವ,

ಸತ್ಯಕ್ಕೆ ಜೈ ಎನ್ನುವ,


by ಹರೀಶ್ ಶೆಟ್ಟಿ, ಶಿರ್ವ

Thursday, October 14, 2021

ಅಮ್ಮ ನೀನು ನೆಲೆಸು ನನ್ನ ಮನದಲಿ,

 



ಅಮ್ಮ ನೀನು ನೆಲೆಸು ನನ್ನ ಮನದಲಿ,

ಇರಲಿ ನಿನ್ನ ವಾಸ ನನ್ನ ಮನೆಯಲಿ,

-

ಬೆನ್ನ ಹಿಂದೆ ನೀನು ನಿಂತಿರು ನನ್ನ ಕಷ್ಟದಲಿ,

ಹೃದಯದಲ್ಲಿರು ನೀನು ನನ್ನ ಆನಂದದಲಿ,

ಸದಾ ನಿನ್ನ ಸ್ಮರಣೆ ಇರಲಿ ನನ್ನ ಬದುಕಲಿ,

ಅಮ್ಮ ನೀನು ನೆಲೆಸು ನನ್ನ ಮನದಲಿ....

-

ನವರಾತ್ರಿಯ ನವದುರ್ಗೆ ಅವತಾರದ ನಿನ್ನ ಗುಣಗಳು,

ನಿನ್ನ ಶಕ್ತಿ ಸಾಹಸದ ಅನೇಕ ಕಥೆಗಳು,

ಸದಾ ನನ್ನಲಿದ್ದು ನನ್ನನ್ನು ಪ್ರೇರಿಸಲಿ,

ಅಮ್ಮ ನೀನು ನೆಲೆಸು ನನ್ನ ಮನದಲಿ....

-

ಕೋಟಿ ಕೋಟಿ ಜನರಿಗೆ ನೀನು ಸ್ಫೂರ್ತಿ,

ದಿನ ನಿತ್ಯ ಮಾಡುವರು ನಿನ್ನ ಬಕುತಿ,

ಸದಾ ಭಕ್ತರಲ್ಲಿ ನಿನ್ನ ಅನುಗ್ರಹ ಇರಲಿ,

ಅಮ್ಮ ನೀನು ನೆಲೆಸು ನನ್ನ ಮನದಲಿ....

-

 by ಹರೀಶ್ ಶೆಟ್ಟಿ, ಶಿರ್ವ

Wednesday, October 13, 2021

ಆಟ ಎಲ್ಲಾ ನಿನ್ನದೇ ಓ ಅಮ್ಮ

 

ಕರ್ಮ ಎಲ್ಲ ನಿನ್ನ ಕೃಪೆಯಿಂದಲೇ,

ಭಾಗ್ಯ ಎಲ್ಲ ನಿನ್ನ ಕೃಪೆಯಿಂದಲೇ,

ಮಹಿಮೆ ಎಲ್ಲಾ ನಿನ್ನದೇ ಓ ಅಮ್ಮ,

ನಾವೆಲ್ಲಾ ನಿನ್ನ ಕೈಗೊಂಬೆ,

ಆಟ ಎಲ್ಲಾ ನಿನ್ನದೇ ಓ ಅಮ್ಮ....

-

ಬ್ರಹ್ಮ, ವಿಷ್ಣು, ಸದಾಶಿವ,

ಎಲ್ಲರಲ್ಲಿ ನಿನ್ನ ಸತ್ವ, 

ನಿನ್ನದೇ ಶಕ್ತಿ ಓ ಅಮ್ಮ, 

ಆಟ ಎಲ್ಲಾ ನಿನ್ನದೇ ಓ ಅಮ್ಮ....

-

ಗೌರಿ, ಕಾಳಿ, ಜಗದಂಬೆ, 

ನೂರಾರು ರೂಪ ನಿನ್ನ,

ನಿನ್ನದೇ ಅವತಾರ ಓ ಅಮ್ಮ,

ಆಟ ಎಲ್ಲಾ ನಿನ್ನದೇ ಓ ಅಮ್ಮ....

-

ಸೂರ್ಯ, ಚಂದ್ರ, ತಾರೆಗಳು,

ಎಲ್ಲವೂ ನಿನ್ನದೇ ಸೃಷ್ಟಿ, 

ಕಣ ಕಣದಲ್ಲಿ ನಿನ್ನ ವಾಸ ಓ ಅಮ್ಮ,

ಆಟ ಎಲ್ಲಾ ನಿನ್ನದೇ ಓ ಅಮ್ಮ....

-

by ಹರೀಶ್ ಶೆಟ್ಟಿ, ಶಿರ್ವ

Tuesday, October 12, 2021

ಧನ್ಯನಾದೆ ನಾನು ಧನ್ಯನಾದೆ

 

ಧನ್ಯನಾದೆ ನಾನು ಧನ್ಯನಾದೆ, 

ಅಮ್ಮ ನಿನ್ನ ದರ್ಶನದಿಂದ ನಾನು ಧನ್ಯನಾದೆ, 

ಹೇಳಲಾರದ ನೆಮ್ಮದಿ ನಾನು ಪಡೆದೆ, 

ದಿವ್ಯಾನಂದ ಎನಗೆ ಇಂದು ಸಿಕ್ಕಿದೆ,

ಧನ್ಯನಾದೆ ನಾನು ಧನ್ಯನಾದೆ.....

-

ನನ್ನ ಕಲ್ಪನೆಯ ದೇವಿ ನೀನು,

ಹೃದಯದಲಿ ಸ್ಥಾಪಿಸಿದ ಪ್ರತಿಮೆ ನೀನು, 

ಆಹಾ ಎಂತಹ ಸಂಯೋಗ ಒದಗಿ ಬಂದಿದೆ, 

ಕಲ್ಪಿಸಿದ ಮೂರ್ತಿಯ ದರ್ಶನ ಪಡೆದೆ,

ಧನ್ಯನಾದೆ ನಾನು ಧನ್ಯನಾದೆ.....

-

ಬಾಲ್ಯದಿಂದಲೇ ನಿನ್ನನ್ನು ಆರಾಧಿಸುತ್ತ ಬಂದಿದೆ,

ಸಮಯ ಸಮಯ ಎಲ್ಲವೂ ಕೊಟ್ಟೆ ನೀನು ಕೇಳದೆ,

ಇನ್ನು ಕೇಳಲು ಬಯಕೆ ನನ್ನಲ್ಲಿ ಎಲ್ಲಿದೆ,

ನಿನ್ನ ರೂಪ ನೋಡಿಯೇ ಮೆಚ್ಚಿ ಹೋದೆ,

ಧನ್ಯನಾದೆ ನಾನು ಧನ್ಯನಾದೆ.....

-

ಯಾವ ಜನ್ಮದ ಪುಣ್ಯವೋ ಇದು, 

ಕಣ್ತುಂಬಾ ಅಮ್ಮ ನಿನ್ನನ್ನು ನೋಡುವ ಭಾಗ್ಯ ನನ್ನದು,

ಅಮೃತ ಸಮಾನ ತೀರ್ಥ ಪ್ರಸಾದ ಪಡೆದೆ, 

ಮನತುಂಬಾ ಸಂತೃಪ್ರಿ ನನಗೆ ಸಿಕ್ಕಿದೆ,

ಧನ್ಯನಾದೆ ನಾನು ಧನ್ಯನಾದೆ.....


by ಹರೀಶ್ ಶೆಟ್ಟಿ, ಶಿರ್ವ

Monday, October 11, 2021

ದಯಪಾಲಿಸೋ ಅಮ್ಮ

 

ದಯಪಾಲಿಸೋ ಅಮ್ಮ,
ಮುಖ ತೋರಿಸೋ ಅಮ್ಮ, 
-
ಸಂಕಟದಲ್ಲಿ ಇಂದು ನಾನಿರುವೆ,
ಕಲ್ಲು ಮುಳ್ಳು ಎನ್ನದೆ ನಡೆದುಕೊಂಡು ನಿನ್ನ ದ್ವಾರಕ್ಕೆ ಬಂದಿರುವೆ,
ನಾನಿನ್ನು ನಿನ್ನ ಸುಪರ್ದು ಅಮ್ಮ,
ದಯಪಾಲಿಸೋ ಅಮ್ಮ....
-
ಧನ ಸಂಪತ್ತು ಬೇಡ ನನಗೆ,
ಕೇವಲ ನಿನ್ನ ಸಾನ್ನಿಧ್ಯ ಬೇಕು ಎನಗೆ,
ನಿನ್ನ ಚರಣದಲ್ಲಿ ಬಿದ್ದಿರುವೆ ಅಮ್ಮ,
ದಯಪಾಲಿಸೋ ಅಮ್ಮ....
-
ಜಗದ ದ್ವೇಷ ಹೇಗೂ ಸಹಿಸುವೆ ನಾನಿಲ್ಲಿ, 
ಆದರೆ ನಿನ್ನ ಮುನಿಸು ನಾನೇಗೆ ಸಹಿಸಲಿ, 
ನನ್ನ ಶಿರ ನಿನ್ನ ಪಾದಕ್ಕೆ ಅರ್ಪಿಸುವೆ ಅಮ್ಮ,
ದಯಪಾಲಿಸೋ ಅಮ್ಮ....
-
ಅಮ್ಮ ಅಮ್ಮ ಶರಣು ಶರಣು ಅಮ್ಮ, 
ನಿನ್ನ ಸ್ವಾಧೀನ ನಾನಮ್ಮ, 
ನಿನ್ನ ಕೃಪೆ ಬೇಡುವೆ ನಾನಮ್ಮ,
ದಯಪಾಲಿಸೋ ಅಮ್ಮ....
-
by ಹರೀಶ್ ಶೆಟ್ಟಿ, ಶಿರ್ವ

Sunday, October 10, 2021

ದೀಪ ಬೆಳಗಿದೆ ಮನೆ ಮನೆಯಲಿ


ದೀಪ ಬೆಳಗಿದೆ ಮನೆ ಮನೆಯಲಿ,

ಅಮ್ಮ ನಿನ್ನ ಸ್ವಾಗತದಲಿ

ಹರ್ಷೋಲ್ಲಾಸ ಎಲ್ಲಾ ಮಂದಿರದಲಿ,

ಅಮ್ಮ ಈ ನವರಾತ್ರಿಯಲ್ಲಿ, 

-

ಆಹಾ ಎಷ್ಟು ಸುಂದರ ಅಮ್ಮನ ಮುಖದ ಅಂದ, ನೋಡಲು ಅಮ್ಮನನು ಎಷ್ಟು ಚಂದ, 

ಭಕ್ತರ ಹೃದಯ ಮನಸ್ಸಲ್ಲಿ ತುಂಬಿದೆ ಆನಂದ, 

ಹಾಡುತ ನಲಿಯುತ್ತಿದ್ದಾರೆ ಉತ್ಸಾಹದಲ್ಲಿ,

ದೀಪ ಬೆಳಗಿದೆ.....

-

ಮಲ್ಲಿಗೆ ಮೆರೆಯುತ್ತಿದೆ ಹರ್ಷದಲಿ,

ಅದು ಅಲಂಕಾರವಾಗಿದೆ ಅಮ್ಮನ ಕೊರಳಲಿ,

ಭಕ್ತರ ಉಲ್ಲಾಸ ಉತ್ತುಂಗದಲಿ, 

ಆಹಾ ಅದೆಂಥ ಪರಿಮಳ ಹರಡಿದೆ ಈ ವಾತಾವರಣದಲ್ಲಿ,

ದೀಪ ಬೆಳಗಿದೆ.....

-

ಕೋಗಿಲೆ ಹಾಡುತ್ತಿದೆ ಅಮ್ಮನ ಭಕ್ತಿಯ ಗಾನ, 

ಹಕ್ಕಿಗಳ ಚಿಲಿಪಿಲಿಯ ಸುಂದರ ತಾನ, 

ಅಂಬಾ ಅಂಬಾ ಎಂಬ ದನಗಳ ಕೂಗಾನ, 

ಆಹಾ ಅದೆಂಥ ಅಮಲೇರಿದೆ ಈ ಪರಿಸರದಲಿ,

ದೀಪ ಬೆಳಗಿದೆ.....

-

by ಹರೀಶ್ ಶೆಟ್ಟಿ, ಶಿರ್ವ

Saturday, October 9, 2021

ನಾನು ಆರತಿ ಮಾಡುವೆ ಅಮ್ಮ

 


ನಾನು ಆರತಿ ಮಾಡುವೆ ಅಮ್ಮ, 

ಅಂಬೆ ಜಗದಂಬೆ,

-

ನಿನ್ನ ಮಹಿಮೆ ತುಂಬಾ ಅದ್ಭುತ,

ನಿನ್ನ ಕೃಪೆಯಿಂದ ವಿಷವೂ ಆಗುವುದು ಅಮೃತ,

ಸದಾ ನಿನ್ನ ಅನುಗ್ರಹ ಇರಲಿ ಅಮ್ಮ, 

ಅಂಬೆ ಜಗದಂಬೆ,

-

ದುರ್ಬಲರಿಗೆ ಶಕ್ತಿಯ ನೀನು ರೂಪ,

ದುಷ್ಟರಿಗೆ ನೀನೊಂದು ವಿಕೋಪ,

ಸದಾ ಪಾಪಕೃತ್ಯದಿಂದ ಕಾಪಾಡು ಅಮ್ಮ, 

ಅಂಬೆ ಜಗದಂಬೆ,

-

ಸಗುಣ ಅಡಗಿದೆ ನಿನ್ನ ಕೋಪದಲಿ,

ಕೇವಲ ಮಮತೆ ನಿನ್ನ ಹೃದಯದಲ್ಲಿ,

ಕರುಣಾಮಯಿ ನೀನು ಅಮ್ಮ,

ಅಂಬೆ ಜಗದಂಬೆ

-

ಕ್ಷಮೆಯೇ ನಿನ್ನ ಆಭರಣ,

ಬೇಡಿದ್ದನ್ನು ನೀಡುವೆ ಕ್ಷಣ ಕ್ಷಣ,

ನಿನ್ನ ಉಪಕಾರ ಮರೆಯಲಾರೆ ಅಮ್ಮ, 

ಅಂಬೆ ಜಗದಂಬೆ.

-

by ಹರೀಶ್ ಶೆಟ್ಟಿ, ಶಿರ್ವ

Friday, October 8, 2021

ಕರುಣಿಸೋ ಅಮ್ಮ



 


ಕರುಣಿಸೋ ಅಮ್ಮ,

ಭಕ್ತಿಯಿಂದ ಪೂಜಿಸುವೆ ನಿನ್ನ, 

ಕರುಣಿಸೋ ಅಮ್ಮ,

ಭಕ್ತಿಯಿಂದ ಪೂಜಿಸುವೆ ನಿನ್ನ,


ನಿನ್ನಾರಾಧನೆಯ ಈ ನವರಾತ್ರಿಯ ದಿವಸ, 

ಮನೆ ಮನೆಯಲ್ಲಿ ತರುತ್ತದೆ ಹರುಷ, 

ದಯಪಾಲಿಸೋ ಅಮ್ಮ,

ಮನಸ್ಸ ಇಚ್ಛೆ ಪೂರೈಸು ಅಮ್ಮ,

ಕರುಣಿಸೋ ಅಮ್ಮ.....


ನಿನ್ನಲಾಂಕರ ನೋಡಲು ಎನಗೆ, 

ನೂರು ಕಣ್ಣುಗಳು ಸಾಲದು ನನಗೆ, 

ನಿನ್ನ ರೂಪ ಎಷ್ಟು ಚೆನ್ನ,

ಮನಮಂದಿರದಲ್ಲಿ ನೆಲೆಸುವೆ ನಿನ್ನ,

ಕರುಣಿಸೋ ಅಮ್ಮ.....


ಕಷ್ಟ ಸುಖಗಳು ಎಲ್ಲವೂ  ನಿನ್ನ,

ನಿನ್ನ ವಿನಃ ಏನಿದೆ ಇಲ್ಲಿ ನನ್ನ,

ನಿನ್ನ ದಯೆಯಿಂದಲೇ ಸಾಗಿದೆ ಜೀವನ,

ಹೀಗೆಯೇ ದಯೆ ಇರಲಿ ನಿನ್ನ,

ಕರುಣಿಸೋ ಅಮ್ಮ.....


by ಹರೀಶ್ ಶೆಟ್ಟಿ, ಶಿರ್ವ

Monday, June 21, 2021

ज़रूरी है

 ज़िन्दगी गुजारने के लिए, 

थोड़ा पागलपन ज़रूरी हैl


आपस में खुशियाँ बाटने के लिए,

थोड़ी मस्ती ज़रूरी हैl 


पास हो या दूर,

अपनापन जताना जरूरी हैl


माना ये ज़िंदगी की डगर आसान नहीं, 

मिलकर साथ चले तो रास्ते मुश्किल नहींl


बड़ी बड़ी बातों को छोड़ो, 

आपस की छोटी छोटी बातें समझना जरूरी हैl


बहुत मिलेंगे संगी साथी इस सफर में, 

हर एक के दिल में अपनी एक खुशनुमा छाप छोड़ना ज़रूरी हैl


थोड़ा मजाक, थोड़ी मस्ती, थोड़ा पागलपन, साथ में थोड़ा भरोसा और सम्मान, 

हर एक में इस मिश्रण का होना ज़रूरी हैl


रोज़ रोज़ आपस में बात हो न हो,

एक दुसरे को याद करना ज़रूरी हैl


पास नहीं दूर ही सही, 

दिल में प्यार का दीपक जलते रहना ज़रूरी हैl


by हरीश शेट्टी, शिरवा

Monday, April 26, 2021

ಕಠಿಣ ಸಮಯ

 


ಎಂಥ ಕಠಿಣ ಸಮಯ, 

ನೀರವ ಮೌನ, 

ರಸ್ತೆ ಖಾಲಿ ಖಾಲಿ, 

ಆಸ್ಪತ್ರೆಯಲ್ಲಿ ಹೋರಾಟ,

ಮುರಿಯುತ್ತಿರುವ ಉಸಿರಾಟ, 

ಸ್ಮಶಾನಗಳಲ್ಲಿ ಸಾಲು ಸಾಲು,

ಆಪ್ತರ ರೋಧನೆ,

ಯಾವುದೇ ಅಂತ್ಯಕ್ರಿಯೆಯ ವಿಧಿ ಇಲ್ಲ, 

ಹೆಣದ ಬಾಯಿಗೆ ಒಂದು ತೊಟ್ಟು ನೀರು ಸಹ ಕೊಡಲು ಅನುಮತಿ ಇಲ್ಲ, 

ಅಯ್ಯೋ ಎಂತಹ ಸ್ಥಿತಿ, 

ಗಂಭೀರ ಪರಿಸ್ಥಿತಿ,

ಮಾನವ ಈಗಾದರೂ ಕಲಿ, 

ನಿನ್ನ ಸಂರಕ್ಷಣೆ ನಿನ್ನದೇ ಕೈಯಲ್ಲಿ....


by ಹರೀಶ್ ಶೆಟ್ಟಿ, ಶಿರ್ವ

Sunday, April 11, 2021

ಮನಸ್ಸು

ಕಲ್ಲು ಕರಗುವುದೇ? 

ಇಲ್ಲ, 

ಆದರೆ ಮನಸ್ಸು ಕರಗಬಹುದು!!! 

ನಿರೀಕ್ಷಿಸು..... 

by ಹರೀಶ್ ಶೆಟ್ಟಿ, ಶಿರ್ವ

Friday, April 9, 2021

ಜೀವನ ಪಯಣ

ಹೆಚ್ಚು ಸಾಮಾನು ಹೊತ್ತು ತಿರುಗದಿರು ಮನುಜ, 

ರಸ್ತೆ ಯಾವುದು ಗೊತ್ತಿಲ್ಲ, ತಾಣದ ಅರಿವಿಲ್ಲ, 

ಎಷ್ಟು ಹಗುರವಾಗಿರುವೆಯೋ ಅಷ್ಟೇ ಪ್ರವಾಸ ಸುಗಮ.... 


by ಹರೀಶ್ ಶೆಟ್ಟಿ, ಶಿರ್ವ

Thursday, April 8, 2021

ನೆನಪಿನ ಕಟ್ಟು

ನೆನಪಿನ ಕಟ್ಟು ಅಟ್ಟಕ್ಕೆ ಎಸೆದು ಬಿಟ್ಟಿದ್ದೆ, 

ಧೂಳು ಒರೆಸಲೆಂದು ಅಟ್ಟಕ್ಕೆ ಹೋದಾಗ, 

ಪುಸ್ತಕದ ಕಟ್ಟು ತೆರೆಯದೇ ಹಳೆ ಸ್ಮೃತಿಗಳೆಲ್ಲ ಓದಿಸಿ ಬಿಟ್ಟವು......


by ಹರೀಶ್ ಶೆಟ್ಟಿ,ಶಿರ್ವ

Wednesday, April 7, 2021

ಸಂಸಾರದ ಪಯಣ

ಇಂದೂ ನಿನ್ನ ಜೊತೆ ಜೊತೆಯಲ್ಲಿಯೇ ಸಾಗುತ್ತಿದೆ ಸಂಸಾರದ ಪಯಣ, 

ಆದರೂ ಈ ಪಯಣ ಅಪರಿಚಿತ!!! 


by ಹರೀಶ್ ಶೆಟ್ಟಿ, ಶಿರ್ವ 

Tuesday, April 6, 2021

ಅಪರಿಚಿತ

ಎಷ್ಟೇ ದೂರ ತನಕ ಜತೆ ಜತೆಯಾಗಿ ಬಂದೆವೂ ನಾವು, 


ಆದರೆ ಯಾಕೆ ಈಗಲೂ ನೀನು ನನಗೆ ಅಪರಿಚಿತ!!! 


by ಹರೀಶ್ ಶೆಟ್ಟಿ,ಶಿರ್ವ

Monday, April 5, 2021

ನಿನ್ನ ಗಾಯನ

ಮಧುರ ಮಧುರ ನಿನ್ನ ಸ್ವರ, 

ಮುಂಜಾನೆ ಎಚ್ಚರವಾದಾಗ ಕೇಳಿದರೆ ನಿನ್ನ ಗಾಯನ,

 ಸಂತೋಷ ಇಡೀ ದಿನ.....


by ಹರೀಶ್ ಶೆಟ್ಟಿ,ಶಿರ್ವ

Wednesday, March 31, 2021

मुरझाए फूल



मैं एक मुरझायी हुयी फूल हूँ, 

कोई मुझ पर ध्यान दे, 

वो क्यों भला|


वैसे मेरे ज़िन्दगी का सफ़र कुछ बुरा नहीं था,

एक भले आदमी ने मुझे अपनों से जुदा कर देवता के चरण में चढ़ा दिया था, 

भगवन का सनिध्या पा कर मैं खुश थी|


लेकिन मेरे मुरझाते ही पुजारीजी ने मुझे उठाकर कूड़े में डाल दिया, 

कूड़े से पहुची मैं एक मुरझाए फूलों के एक ढेर में|


वहां मेरे और भी कुछ सहेलियां आखरी सांस ले रहे थे, 

बातचीत हुईं उनसे,

चमेली बोली तू बहुत भाग्यशाली थी जो तुझे भगवन के चरणों के दर्शन हुए,

मुझे देख मैं एक कोठेवाली नचैनियां के बालों की शोभा बनी थी, 

कुछ ही पल बीते थे एक ग्राहक ने आकर उसके साथ साथ मुझे भी बिस्तर में रौंद दिया|


सहेली चमेली की बात सुनकर मैं हैरान रह गयी, 

सोचा वाकई मैं भाग्यशाली थी!!


एक और सहेली गुलाब ने अपनी दास्तां सुनाई, 

मैं एक प्रेमिका को भेंट में मिली थी, 

बहुत खुश हुई थी वो मुझे पाकर, 

मैं भी कम खुश नहीं थी, 

सोचा चलो,

ये मुझे जतन से रखेगी, 

लेकिन अभी हम अपनी ख़ुशी समेट भी नहीं पाए थे कि लड़की के पिता ने उसे प्यार से मुझे चूमते हुए सहलाते हुए मुझसे बातें करते देख लिया, 

गुस्से में आकर उनोन्हे मुझे उससे छीन कर अपनी मुट्ठी में मसल कर फ़ेंक दिया और मैं यहाँ पहुँची|


और एक सहेली ने बताया कि मैं देखने में तुम लोगो जैसी सुन्दर नहीं थी, 

न ही मुझ में सुगंध था, 

इसलिए मुझे किसी ने तोडा नहीं, 

लेकिन मेरे अपने सब मुझसे बिछड़ गए,

बस इसी ग़म से मैं वहीँ पड़ी पड़ी सूख गयी, 

बस फिर क्या था माली ने तोड़कर फेंक दिया और मैं इधर पहुंची|


कुछ बहुत से फूल खून से लथपथ पड़े थे, 

उनमें से एक ने आंसू बहाते हुए कहा, 

अब हमारी कहानी क्या सुनाऊ आप लोगो को, 

बहुत दर्द है इसमें,

त्योहारों का माहौल था, 

बहुत सुन्दर तरीके से हमे हर तरफ सजाया गया था, 

जश्न हो रही थी, 

हर मजहब के लोग उत्साह में थे, 

लेकिन अचानक किसी बात को लेकर दो मजहब के लोगों में कहासुनी हुई, 

बाद में यहीं बात बढ़कर उसने दंगों का शक्ल ले लिया, 

खून की नदियां बही, 

हम सब बेक़सूर भी खून में डूब गए, 

अगले दिन सफाई कर्मचारियों ने हमें यहाँ लाकर डाल दिया|


उनकी बात सुनकर मैं दंग रह गयी!!!! 

सोचती हूँ क्या मैं वाकई भाग्यशाली थी? 


by हरीश शेट्टी, शीर्वा


Monday, March 29, 2021

दूरी

 


अब तो बस कारोबारी रिश्ता है उसके और मेरे बीच, 

कुछ उसे चाहिए तो वो मुझसे माँग लेती है,

कुछ मुझे चाहिए तो मैं उससे पूछ लेता हूँ|


प्यार तो जैसे हवा है!!!

अब तो जब मुझे दर्द होता है तो वो मुँह सिकोड़ लेती है, 

उसे दर्द होता है तो मैं भी अनदेखा करता हूँ|


ज्यादातर ख़ामोशी छाई रहती है घर में, 

गूंजती है तो कभी उसकी कर्कश आवाज़, 

कभी कभी मेरा ऊँचा बोलना|


आजकल शाम को अँधेरा होने पर भी सुध नहीं रहती, 

ज़िद रहती है दोनों में की अगला ऊठे और बत्ती जलाये, 

कभी कभी तो अँधेरे में ही बैठे रहते है दोनों|


स्वादिष्ट खाना खाए तो जैसे ज़माना हो गया, 

बस जो उसने पकया जैसे तैसे खा लिया, 

हां विदेश में रह रहे हमारे बेटे के जन्म दिन में खीर ज़रूर बनता है|


त्योहारों के कोई मायने नहीं अब, 

हा बेटे का फ़ोन ज़रूर आता है, 

लेकिन ज्यादातर वो ही बातें करती है उससे, 

मुझसे तो बस मुश्किल से एक दो बातें...|


अब तो आदत सी हो गयी है इस ख़ामोशी की, 

मन तो करता है की दिल खोल कर बातें कर लूँ, 

लेकिन ये दूरी है कि कम ही नहीं होती |


by हरीश शेट्टी, शीर्वा

Sunday, February 21, 2021

ಮೆಲ್ಲ ಮೆಲ್ಲನೆ ಸಾಗು ಜೀವನ

 


Photo :Google

ಮೆಲ್ಲ ಮೆಲ್ಲನೆ ಸಾಗು ಜೀವನ, 

ಕೆಲವು ಋಣ ತೀರಿಸಲಿದೆ ಬಾಕಿ,

-

ಕೆಲವು ನೋವನ್ನು ಅಳಿಸಲಿದೆ, 

ಕೆಲವು ಕರ್ತವ್ಯ ನಿಭಾಯಸಲಿದೆ,

-

ನಿನ್ನ ಈ ವೇಗದ ನಡೆಯಿಂದ 

ಕೆಲವರು ಮುನಿಸಿಕೊಂಡರು, 

ಕೆಲವರು ದೂರವಾದರು,

-

ಮುನಿಸಿದವರನ್ನು ನಗಿಸಲಿದೆ ಬಾಕಿ, 

ಅಳುವವರನ್ನು ಸಂತೈಸಲಿದೆ ಬಾಕಿ,

-

ಕೆಲವು ಅಪೇಕ್ಷೆ ಅಪೂರ್ಣವಾಗಿದೆ, 

ಕೆಲವು ಕೆಲಸ ಈಗ ಇನ್ನು ಮಹತ್ವಪೂರ್ಣವಾಗಿದೆ,

-

ಹೃದಯದಲ್ಲಿಯೇ ಮಡಿದ ಬಯಕೆಗಳು, 

ಅದನ್ನೆಲ್ಲ ಹೂಳುವುದಿದೆ ಬಾಕಿ,

-

ಕೆಲವು ಸಂಬಂಧ ಕೂಡಿ ಮುರಿಯಿತು, 

ಕೆಲವು ಸಂಬಂಧ ಕೂಡುವ ಮೊದಲೇ ಬಿಟ್ಟೋಯಿತು, 

ಆ ಮುರಿದೋದ, ಬಿಟ್ಟೋದ ಸಂಬಂಧದ ಗಾಯಗಳನ್ನು ಅಳಿಸಲಿದೆ ಬಾಕಿ,

-

ನೀನು ಮುಂದೆ ಸಾಗು, 

ನಾನು ಬರುತ್ತೇನೆ, 

ನಿನ್ನನ್ನು ಬಿಟ್ಟು ಬದುಕಿಕೊಳ್ಳುವೆನೇ?

-

ಈ ಉಸಿರಲಿ ಯಾರ ಹಕ್ಕು ಇದೆಯೋ, 

ಅವರಿಗೆ ವ್ಯಕ್ತಪಡಿಸಲಿದೆ ಬಾಕಿ,

-

ಮೆಲ್ಲ ಮೆಲ್ಲನೆ ಸಾಗು ಜೀವನ, 

ಕೆಲವು ಋಣ ತೀರಿಸಲಿದೆ ಬಾಕಿ!!


ಮೂಲ : ಗುಲ್ಜಾರ್ 

ಅನುವಾದ : ಹರೀಶ್ ಶೆಟ್ಟಿ, ಶಿರ್ವ

Saturday, February 6, 2021

ಬಳೆಗಾರ


Photo: Google


ಬಳೆಗಾರ!

ತೋರಿಸು ನನಗೆ ನವೀನ ನವೀನ ಬಳೆಗಳನ್ನು, 

ತೊಡಿಸು ನನಗೆ ಈ ಸುಂದರ ಸುಂದರ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು,

-

ಕನಸು ಕಟ್ಟುವೆ ನಾನು ಈ ರಂಗು ರಂಗಿನ ಬಳೆಗಳಂತೆ,

 ಮುರಿಯದಿರಲಿ ಇದು ಮಾಮೂಲಿ ಗಾಜಿನಂತೆ, 

ಹೊಸ ಬಾಳು ಶುರುವಾಗಲಿದೆ ಇನ್ನು,

ತೊಡಿಸು ನನಗೆ ಗಟ್ಟಿಮುಟ್ಟಾದ ಬಳೆಗಳನ್ನು,

-

ಆಡುತ್ತಾ ಓಡಾಡುತ್ತಿದ್ದ ಈ ಊರು ಅಪರಿಚಿತ ಆಗಲಿದೆ ಇನ್ನು, 

ಹೊಸ ಊರಲ್ಲಿ ದೊಡ್ಡ ಮನೆಯಲ್ಲಿ ಇರುವೆ ನಾನಿನ್ನು,

ಬಳೆಗಾರ ನಂತರ ಬಾ ನನ್ನ ಹೊಸ ಊರಿಗೆ ನೀನು, 

ಬಂದು ಕೊಡುತ್ತಿರು ನನಗೆ ನನ್ನ ತವರಿನ ಸುದ್ಧಿಯನ್ನು,

-

ಆದರೆ ಬಳೆಗಾರ!! 

ಹೇಗೆ ಮರೆಯಲಿ ನನ್ನ ಹುಟ್ಟೂರನ್ನು, 

ನನ್ನನ್ನು ಕೊಂಡಾಡಿ ಬೆಳೆಸಿದ ಈ ಮಣ್ಣನ್ನು, 

ಹೇಗೆ ಮರೆಯಲಿ ಉಸಿರಲ್ಲಿ ನೆಲೆಸಿದ ಇಲ್ಲಿಯ ಮಲ್ಲಿಗೆಯ ಕಂಪನ್ನು,

ಮರೆಯಲಾರೆ ನಾನು ನನಗೆ ವೇದನೆ ನೀಡಿದ ಇಲ್ಲಿಯ ಕಲ್ಲು ಮುಳ್ಳುಗಳನ್ನೂ,

-

ಬಳೆಗಾರ!! 

ಪರ ಊರಲ್ಲಿ ನೋವಾಗಿ ಅತ್ತರೆ ಸಿಗದು ಅಮ್ಮನ ಸೆರಗು ನನಗೆ, 

ಸೋತು ಹೋದಾಗ ಸಿಗದು ಮಲಗಲು ಅಮ್ಮನ ಮಡಿಲು ನನಗೆ, 

ಕೋಪ ಬಂದಾಗ ನನ್ನ ಕೋಪ ತಣಿಸಲು ಸಿಗದು ಅಪ್ಪನ ವಾತ್ಸಲ್ಯಪೂರ್ಣ ಬಾಹುಗಳ ಆಲಿಂಗನ ನನಗೆ, 

ಅಲ್ಲಿ ಹೇಗೆ ಸಂತೈಸಲಿ ನಾನು ನನ್ನ ಹೃದಯವನ್ನು,

-

ಬಳೆಗಾರ!! 

ಮದುವೆ ಆಗಲೇ ಬೇಕೇನು? 

ಗಂಡನ ಮನೆಗೆ ಹೋಗಲೇಬೇಕೇನು? 

ಅವರ್ಯಾಕೆ ಇಲ್ಲಿ ನನ್ನ ಮನೆಗೆ ಬಂದು ಇರಬಾರದು? 

ಯಾಕೆ ಹೆಣ್ಣು ಮಕ್ಕಳೇ ಈ ನೋವು ಶಿಕ್ಷೆ ಸಹಿಸಬೇಕು?

-

ಬಳೆಗಾರ! 

ನಿನ್ನ ಗಾಜಿನ ಬಳೆ ಮುರಿಯದಿರಲಿ, 

ಈ ಬಳೆಯಲಿ ಸದಾ ನನ್ನ ತವರೂರ ನೆನಪಿರಲಿ, 

ಬಳೆಗಾರ ತೊಡಿಸು ನನಗೆ ಬಳೆಗಳನ್ನು, 

ಮದುವೆ ಆಗಲಿದೆ ಬೇಗನೆ ನನ್ನ ಇನ್ನು!!!


by ಹರೀಶ್ ಶೆಟ್ಟಿ, ಶಿರ್ವ

Thursday, February 4, 2021

ಇಂದು ಹೋಗುವ ಹಠ ಮಾಡದಿರು



ಇಂದು ಹೋಗುವ ಹಠ ಮಾಡದಿರು, 

ಹೀಗೆಯೇ ಸನಿಹ ಕೂತುಕೊಂಡಿರು,

ಹೀಗೆಯೇ ಸನಿಹ ಕೂತುಕೊಂಡಿರು,

ಇಂದು ಹೋಗುವ ಹಠ ಮಾಡದಿರು, 

-

ಅಯ್ಯೋ ಸತ್ತು ಹೋಗುವೆ, 

ನಾನಂತೂ ಮರೆಯಾಗುವೆ, 

ಇಂತಹ ಮಾತನ್ನು ನುಡಿಯದಿರು, 

ಇಂದು....

-

ನೀನೆ ಯೋಚಿಸು ಸ್ವಲ್ಪ, 

ಯಾಕೆ ನಿನಗೆ ತಡೆಯಬಾರದೆಂದು, 

ಪ್ರಾಣ ಹೋಗುತ್ತದೆ, 

ನೀನೆದ್ದು ಹೋಗುವಾಗ

ಪ್ರಾಣ ಹೋಗುತ್ತದೆ, 

ನೀನೆದ್ದು ಹೋಗುವಾಗ, 

ನಿನಗೆ ನಿನ್ನಾಣೆ ಇನಿಯ, 

ನನ್ನ ಮಾತು ಒಪ್ಪಿಕೊಳ್ಳು, 

ಇಂದು....

-

ಸಮಯದ ಬಂಧನದಲಿ ಜೀವನವಿದೆ ಆದರೆ, 

ಕೆಲವು ಕ್ಷಣಗಳು ಇರುವುದಿದೆ ಬಿಡುವಿನ, 

ಕೆಲವು ಕ್ಷಣಗಳು ಇರುವುದಿದೆ ಬಿಡುವಿನ,

ಇದನ್ನು ಕಳೆದು ನನ್ನ ಇನಿಯ, 

ಜೀವನಪರ್ಯಂತ ಹಾತೊರೆಯದಿರು, 

ಇಂದು....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: : ಫಯ್ಯಾಜ್ ಹಾಶ್ಮಿ

-आज जाने की ज़िद ना करो

यूँ ही पहलु में बैठे रहो

यूँ ही पहलु में बैठे रहो

आज जाने की ज़िद ना कर

हाय मर जाएंगे

हम तो लुट जाएंगे

ऐसी बातें किया ना करो

आज जाने की ज़िद ना करो

तुम ही सोचो ज़रा

क्यूँ ना रोकें तुम्हें

जान जाती है जब

उठ के जाते हो तुम

जान जाती है जब

उठ के जाते हो तुम

तुमको अपनी क़सम जानेजां

बात इतनी मेरी मान लो

आज जाने की ज़िद ना करो

वक़्त की कैद में ज़िन्दगी है मगर

चंद घड़ियां यही हैं जो आज़ाद है

चंद घड़ियां यही हैं जो आज़ाद है

इनको खो कर मेरी जानेजाँ

उम्र भर ना तरसते रहो

आज जाने की ज़िद ना करो

ಏಕಾಂಗಿ ನಾನು

 

Photo:Google

https://youtu.be/IkrLvHqMv4A


ಏಕಾಂಗಿ ನಾನು, ಬಾ ನೀನು,ನೀನೆಲ್ಲಿರುವೆ , 

ಎಲ್ಲಿ ಕೂಗಿ ಕರೆಯಲಿ ನಿನಗೆ, ಎಲ್ಲಿರುವೆ,

-

ನಿನ್ನನ್ನು ನಾ ಹುಡುಕುತ್ತಿರುವೆ, 

ನನ್ನನ್ನು ಹೃದಯ ಹುಡುಕುತ್ತಿದೆ, 

ಈಗ ಯಾವುದೇ ತಾಣವಿಲ್ಲ, 

ಯಾವುದೇ ದಾರಿಯಿಲ್ಲ, 

ಏಕಾಂಗಿ..

-

ಈ ಏಕಾಂತದ ಕ್ಷಣಗಳು, 

ಅದರ ಮೇಲೆ ನಿನ್ನ ಅಳಲು, 

ಬದುಕು ಕಷ್ಟ ಇನ್ನು, 

ಹೇಳು ಏನು ಮಾಡಲಿ ನಾನು, 

ಏಕಾಂಗಿ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಶಮೀಮ್ ಜೈಪುರಿ, 

ಸಂಗೀತ: ಕಲ್ಯಾಣಜಿ ಆನಂದ್ ಜಿ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ : ರಾಜ್

-

अकेले हैं चले आओ जहाँ हो -2
कहाँ आवाज़ दें तुमको कहाँ हो
अकेले हैं चले आओ …

तुम्हें हम ढूँढते हैं हमें दिल ढूँढता है -2
न अब मंज़िल है कोई न कोई रास्ता है
अकेले हैं चले आओ …

ये तन्हाई का आलम और उस पर आपका ग़म -2
न जीते हैं न मरते बताओ क्‌या करें हम
अकेले हैं चले आओ …

Wednesday, February 3, 2021

ನನ್ನೊಲವೆ ಈ ಜಗ ಮುಗಿಯಬಹುದು



Photo: google

ಹಾಡಿನ ಕೊಂಡಿ: https://youtu.be/AnC2Nx9gQWU

ನನ್ನೊಲವೆ ಈ ಜಗ ಮುಗಿಯಬಹುದು, 

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನ ದೃಷ್ಟಿಯಂತೂ ಮೊರೆ ನೀಡುತ್ತಿದೆ,

ನಿನ್ನ ಹೃದಯವೂ ಪ್ರಿಯೇ ನಿನ್ನನ್ನು ದೂರುತ್ತಿರಬಹುದು,

ನನ್ನೊಲವೆ....

-

ನಿನ್ನ ದ್ವಾರಕ್ಕೆ ನಾನು ಬರಬೇಕಿತ್ತು ಪ್ರಿಯೆ, 

ಪ್ರೀತಿಯ ಹಾಡನ್ನು ಹಾಡಬೇಕಿತ್ತು ಪ್ರಿಯೆ, 

ಮುನಿಸಿ ನೀನು ಕೇಳದೆ ಇರುತ್ತಿದ್ದಿ ಪ್ರಿಯೆ,

ಮತ್ತೆ ಬಂದಿರುವೆ ಇಲ್ಲಿಗೆ 

ಹೇಳಲು ನಿನಗೆ  ನಾನು ಮರುಳು ಪ್ರೇಮಿ,

ಇಂದು ಈ ಹುಚ್ಚು ವ್ಯಾಮೋಹ ಮುಗಿಯಬಹುದು, 

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....


ನನ್ನ ಹಾಗೆ ನೀನೂ ದುಃಖಿಸಲಿ, 

ನೀನೂ ಯಾರಿಗೂ ಪ್ರೀತಿಸಲಿ, 

ಹಾಗು ಅವನು ನಿನ್ನನ್ನು ತಿರಸ್ಕರಿಸಲಿ,

ನೀನು ಪ್ರಿಯೇ ಸತಾಯಿಸಿದೆ ನನಗೆ, 

ಇದು ಎಂದೂ ಮರೆಯಬೇಡ, 

ನಿನ್ನ ಮೇಲೂ ಸೌಭಾಗ್ಯ ಒದಗದು,

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....


ನನ್ನೊಲವೆ.... 

ಹೆಸರು ನನ್ನ ಕರೆಯುವೆ ನಿನ್ನ ಈ ತುಟಿಯಿಂದ, 

ಪ್ರಾಣ ಈ ಮುರಿದ ಹೃದಯದಿಂದ ಹೊರಟುಹೋಗುವಾಗ, 

ನನ್ನೊಲವೆ...


ನನ್ನ ಪ್ರಿಯೆಯ ದ್ವಾರದಿಂದ, 

ನಾಳೆಗೆ ನೀನು ಸಾಗುತ್ತಿದ್ದರೆ ಅಲ್ಲಿಂದ, 

ಹೇಳು ಅವಳಿಗೆ ನನ್ನ ವತಿಯಿಂದ, 

ಹೆಸರು ನಿನ್ನ ಕರೆದ, ಬದುಕಿರುವ ತನಕ, 

ಓ ದೀಪವೇ ನಿನ್ನ ಪತಂಗೆ,

ನಿನಗೆ ಅವನಿಂದ ಈಗಲೂ ದ್ವೇಷ ಇರಬಹುದು,

ಇಂದು ನಿನ್ನ ದ್ವಾರದಲಿ ಪ್ರೀತಿ ಅಪಕೀರ್ತಿಗೆ ಒಳಗಾಗಬಹುದು, 

ನನ್ನೊಲವೆ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ : ಆನಂದ್ ಬಕ್ಷಿ 

ಹಾಡಿದವರು: ಕಿಶೋರ್ ಕುಮಾರ್ 

ಸಂಗೀತ: ಲಕ್ಷ್ಮಿಕಾಂತ್ ಪ್ಯಾರೆಲಾಲ 

ಚಿತ್ರ: ಮಿಸ್ಟರ್ ಎಕ್ಷ ಇನ್ ಬಾಂಬೆ

-

मेरे महबूब क़यामत होगी

आज रुसवा तेरी गलियों में मोहब्बत होगी

मेरी नज़रें तो गिला करती हैं

तेरे दिल को भी सनम तुझसे शिकायत होगी


तेरी गली मैं आता सनम

नगमा वफ़ा का गाता सनम

तुझसे सुना ना जाता सनम

फिर आज इधर आया हूँ मगर

ये कहने मैं दीवाना

ख़त्म बस आज ये वहशत होगी

आज रुसवा...


मेरी तरह तू आहें भरे

तू भी किसी से प्यार करे

और रहे वो तुझसे परे

तूने ओ सनम ढायें हैं सितम

तो ये तू भूल न जाना

के ना तुझपे भी इनायत होगी

आज रुसवा...


II

मेरे महबूब...

नाम निकलेगा तेरा ही लब से

जान जब इस दिल-ए-नाकाम से रुखसत होगी

मेरे महबूब...


मेरे सनम के दर से अगर

बाद-ए-सबा हो तेरा गुज़र

कहना सितमगर कुछ है खबर

तेरा नाम लिया जब तक भी जिया

ऐ शमा तेरा परवाना

जिससे अब तक तुझे नफरत होगी

आज रुसवा...


Thursday, January 28, 2021

ನಿರೀಕ್ಷೆ

 


Photo:Google


ಹೇಳಿಬಿಡಲೇ, 

ಮನಸ್ಸಿನ ಭಾರ ಇಳಿಸಿಬಿಡಲೇ, 

ಶಿಶಿರದ ಒಣ ಬಿಸಿಲಿನಂತೆ ಸುಡುತ್ತಿದೆ ಈ ಹೃದಯ,

 ತಿಳಿಸಿಬಿಡಲೇ, 

ನನ್ನ ನೋವನ್ನು, 

ಇರಲಿ!! 

ವಸಂತದ ಆಗಮನ ಆಗಲಿದೆ ಇನ್ನು!!!

-

ಪ್ರತಿ ಕ್ಷಣ ಅವನ ಹೆಜ್ಜೆಯ ಧ್ವನಿ ಕೇಳುತ್ತದೆ, 

ಬೀಸುವ ಗಾಳಿಯಲ್ಲಿ ಅವನ ಮೈಯ ಕಂಪು ಬರುತ್ತದೆ,

ಎಲ್ಲಿಂದಲೋ ಹಾರಿಬಂದ ಒಣ ಎಳೆಯ ಸ್ಪರ್ಶದಲಿ ಅವನ ಸ್ಪರ್ಶದ ಅನುಭವ ಆಗುತ್ತದೆ, 

ಹೇಳಿಬಿಡಲೇ, 

ನನ್ನ ಭಾವನೆಗಳನ್ನು, 

ಇರಲಿ!! 

ಅವನ ಆಗಮನ ಆಗಲಿದೆ ಇನ್ನು!!!

-

ಮುಂಜಾನೆ ಬೀಸುವ ಗಾಳಿಯ ಸಂಗೀತದಿಂದ ನನ್ನ ಚಡಪಡಿಕೆ ಹೆಚ್ಚಾಗುತ್ತಿದೆ, 

ದಿನ ಮಾತಾಡಿ ಸಾಂತ್ವನ ನೀಡುವ ಪಾರಿವಾಳ ಇಂದು ನನ್ನ ಕೀಟಲೆ ಮಾಡುತ್ತಿದೆ,

ಕನ್ನಡಿ ನನ್ನ ಸಿಂಗಾರ ನೋಡಿ ಮಂದಹಾಸ ಬೀರುತ್ತಿದೆ,

ಹೇಳಿಬಿಡಲೇ, 

ನನ್ನ ಆತುರತೆಯನ್ನು, 

ಇರಲಿ!! 

ನೋಡ ಬೇಕು ನನಗೆ ಅವನ ಉತ್ಸಾಹವನ್ನೂ!!!

-

ನಿರೀಕ್ಷೆ ಮುಗಿಯಿತು ಇನ್ನು, 

ಮೊರೆ ಕೊಡುವೆ ಅವನಲ್ಲಿ ನಾನು, 

ಎಲ್ಲಾ ವ್ಯಥೆಯನ್ನು ಅವನ ಪ್ರೀತಿಯಿಂದ ಮಾಯಗೊಳಿಸುವೆ ನಾನು, 

ಹೇಳಿಬಿಡುವೆ ಎಲ್ಲವನ್ನೂ, 

ಬರಲಿ ಅವನು!! 

ಬದುಕಲಿ ಹೊಸ ಚೈತನ್ಯ ತುಂಬಲಿದೆ ಇನ್ನು!!!

-

by ಹರೀಶ್ ಶೆಟ್ಟಿ, ಶಿರ್ವ

Wednesday, January 27, 2021

ಕೇಳಬೇಡ


Photo :Google



ಕೇಳಬೇಡ ಯಾಕೆ ಅವಳನ್ನು ಇನ್ನೂ ಸ್ಮೃತಿಯಲ್ಲಿ ಇರುಸುವೆ ಎಂದು, 

ಕೇಳಬೇಡ ಅವಳನ್ನು ನೆನೆದು ಯಾಕೆ ಮೌನದಲಿ ಅಳುವೆಯೆಂದು,

ಕೇಳಬೇಡ ಬಂಜರು ಭೂಮಿಯಂತಹ ಈ ಹೃದಯ ಉದ್ಯಾನದಲ್ಲಿ ಯಾಕೆ ಬಯಕೆಯ ಹೂ ಅರಳಿಸಲು ಪ್ರಯತ್ನಿಸುವೆ ಎಂದು!!!

-

ಕೇಳಬೇಡ ಯಾಕೆ ಹಾಗು ಹೇಗೆ ನಾನು ಕವಿಯಾದೆ ಎಂದು, 

ಕೇಳಬೇಡ ಅಪ್ಪಳಿಸಿ ಮುರಿದ ಈ ಎದೆಯಿಂದ ರಕ್ತದ ಬದಲು ಹೇಗೆ ಪದಗಳು ಹುಟ್ಟಿತೆಂದು,

ಕೇಳಬೇಡ ಈ ಪದಗಳು ಹೇಗೆ ಕವಿತೆಯಾಗಿ ಮೂಡಿತೆಂದು!!!

-

ಕೇಳಬೇಡ ಯಾಕೆ ನಾನು ಸಂಧ್ಯಾ ಸೂರ್ಯನನ್ನು ನೋಡುತ್ತಿರುತ್ತೇನೆ ಎಂದು, 

ಕೇಳಬೇಡ ಯಾಕೆ ನಾನು ಸಾಗರದ ಬಂಡೆಯ ಮೇಲೆ ಅವಳ ಹೆಸರು ಕೆತ್ತುತ್ತಿರುತ್ತೇನೆ ಎಂದು,

ಕೇಳಬೇಡ ಯಾಕೆ ಮರಳ ಮನೆ ಮಾಡಿ ಅದನ್ನು ಸಾಗರದ ಅಲೆಗಳು ಕೊಚ್ಚಿ ಹೋಗುವುದನ್ನು ನೋಡಿ ಕಣ್ಣೀರು ಹಾಕುತ್ತೇನೆ ಎಂದು!!!

-

ಕೇಳಬೇಡ ಇರುಳಲ್ಲಿ ಏಕಾಂತ ಕೂತು ಯಾಕೆ ಆ ಚಂದ್ರ ತಾರೆಗಳನ್ನು ನೋಡುತ್ತಿರುತ್ತೇನೆ ಎಂದು, 

ಕೇಳಬೇಡ ನಿದ್ದೆ ಇಲ್ಲದೆ ಯಾಕೆ ಹಾಸಿಗೆಯಲಿ ಹೊರಳಾಡುತ್ತಿರುತ್ತೇನೆ ಎಂದು,

ಕೇಳಬೇಡ ಮುಂಜಾನೆ ಒದ್ದೆ ಒದ್ದೆ ತಲೆದಿಂಬು ಹೇಗೆ ನನ್ನ ಕಥೆ ನುಡಿಯುತ್ತದೆ ಎಂದು!!!

-

by ಹರೀಶ್ ಶೆಟ್ಟಿ, ಶಿರ್ವ

Tuesday, January 26, 2021

ಅಷ್ಟು ಸುಲಭ ಅಲ್ಲ ಬದುಕು,

ಅಷ್ಟು ಸುಲಭ ಅಲ್ಲ ಬದುಕು, 

ಹೌದು, 

ಅನಂತ ಕಠಿಣ ತಿರುವುಗಳು, 

ಆದರೆ ಹೆದರಿಕೆ ಯಾಕೆ ಬೇಕಿತ್ತು, 

ಚರ್ಚಿಸಬೇಕಿತ್ತು, 

ಹೇಳಿ ಬಿಡಬೇಕಿತ್ತು ಮನಸ್ಸಲ್ಲಿದ್ದುದನ್ನು,

ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಗಬಹುದಿತ್ತು, 

ಇನ್ನೆಷ್ಟೋ ಪರೀಕ್ಷೆ ಇತ್ತು ಬಾಕಿ!!

-

ಈಗ ತಾನೇ ಬುದ್ಧಿ ಬೆಳೆದಿತ್ತು, 

ಈಗ ತಾನೇ ಸ್ವಲ್ಪ ಸ್ವಲ್ಪ ಬದುಕು ತಿಳಿಯುತ್ತಿತ್ತು, 

ಆದರೆ ಕಲಿತದ್ದು ಪೂರ್ಣ ಪಾಠ ಅಲ್ಲ,

ಬದುಕೆಂಬ ಗುರುವಿನ ಜ್ಞಾನ ತುಂಬಾ ಮಹತ್ವವಾದದ್ದು,

ಇನ್ನೆಷ್ಟೋ ಜೀವನದ ಪಾಠ ಕಲಿಯಲಿತ್ತು ಬಾಕಿ!!

-

ಜೀವನ ಅಂದರೆ ನೂರಾರು ಸವಾಲುಗಳು, 

ಧೈರ್ಯವಾಗಿ ಎದುರಿಸಬೇಕಿತ್ತು, 

ಬದುಕಿನ ಆಟದಲ್ಲಿ ಸೋಲು ಗೆಲುವು, 

ಅದಕ್ಕೇನು, 

ಇಂದಲ್ಲ ನಾಳೆ, 

ಸತತ ಪ್ರಯತ್ನಿಸಬೇಕಿತ್ತು,

ಇನ್ನೆಷ್ಟೋ ಅವಕಾಶ ಸಿಗಲ್ಲಿತ್ತು ಬಾಕಿ!!

-

ಹೋರಾಡಬೇಕಿತ್ತು ಪ್ರತಿಯೊಂದು ಕಷ್ಟದಿಂದ, 

ತೇಲಿ ಬರಬೇಕಿತ್ತು ಈ ಸಾಗರದ ಬಿರುಗಾಳಿಯಿಂದ, 

ಅಸಂಭವ ಕಾಣುತ್ತದೆ ಅಷ್ಟೇ, 

ಆದರೆ ಅಸಂಭವ ಏನಿಲ್ಲ ಈ ಜಗತ್ತಲ್ಲಿ,

ಅದೆಷ್ಟೋ ಕಾರ್ಯ ಸಂಭವವಾಗಲಿಕ್ಕಿತ್ತು ಬಾಕಿ!!

-

ತುಂಬಾ ಶಕ್ತಿ ಇರುತ್ತದೆ ಪಾಲಕರ ಪ್ರೀತಿಯಲಿ, 

ನಂಬಿಕೆ ಇಡಬೇಕಿತ್ತು, 

ಮನಸ್ಸು ಬಿಚ್ಚಿ ಬಿಡಬೇಕಿತ್ತು, 

ಸ್ವಲ್ಪ ತಾಳ್ಮೆ ಇಡುತ್ತಿದ್ದರೆ, 

ಈ ಧರೆ ಅಂಬರ ಎಲ್ಲ ನಿನ್ನದಾಗುತ್ತಿತ್ತು,

ಇನ್ನು ಸ್ವಚ್ಚಂದ ಆಕಾಶದಲ್ಲಿ ಹಾರಲಿಕ್ಕಿತ್ತು ಬಾಕಿ!!

-

by ಹರೀಶ್ ಶೆಟ್ಟಿ ಶಿರ್ವ

Monday, January 25, 2021

ಸಮಯ

ಸಮಯ ಬದಲಾಗುತ್ತಾ ಇರುತ್ತದೆ, 

ಇಂದಿನ ಸಮಯ ನಾಳೆಗಿರುವುದಿಲ್ಲ, 

ನಾಳೆಯ ಸಮಯದಲಿ ಇಂದಿನ ಕೇವಲ ನೆನಪು, ಸಂತಸ ಅಥವಾ ಪಶ್ಚಾತಾಪ ಅಷ್ಟೇ,

ನಾಳೆಯ ಸಮಯ ತನ್ನ ಹೊಸ ಹೂವು ಅರಳಿಸುತ್ತದೆ, 

ಆ ಕಂಪನ್ನು ತನ್ನೊಳಗೆ ಸುಹಾಸಿಸಿ ಮುಂದೆ ಸಾಗುವುದೇ ಜೀವನ!!


by ಹರೀಶ್ ಶೆಟ್ಟಿ, ಶಿರ್ವ

Thursday, January 21, 2021

ಆಟಿಕೆಯೆಂದು ತಿಳಿದು


Photo :Google

ಹಾಡಿನ ಕೊಂಡಿ: https://youtu.be/xFUYO0CI6xc

ಆಟಿಕೆಯೆಂದು ತಿಳಿದು ನೀನು ನನ್ನ ಹೃದಯ ಮುರಿದು ಹೋಗುತ್ತಿರುವೆ, 

ನನ್ನನ್ನು ಈ ಸ್ಥಿತಿಯಲ್ಲಿ ಯಾರ ಆಸರೆಯಲಿ ಬಿಟ್ಟು ಹೋಗುತ್ತಿರುವೆ, 

ಆಟಿಕೆಯೆಂದು.....


ನನ್ನ ಹೃದಯವನ್ನು ದ್ವೇಷಿಸದಿರು, ಲೋಕದ ಕೇಳಿ ಮಾತನ್ನು, 

ನಿಲ್ಲು ನೀನು, ನಾನಾಗಿದ್ದೇನೆ ಅತಿಥಿ ಕೆಲವೇ ರಾತ್ರಿಯ ಇನ್ನು, 

ಹೋಗಬೇಕೆಂದರೆ ಹೋಗು ನೀನು, ಈಗಿಂದಲೇ ಯಾಕೆ ಮುಖ ತಿರುಗಿಸಿ ಬಿಟ್ಟು ಹೋಗುತ್ತಿರುವೆ,

ಆಟಿಕೆಯೆಂದು....


ಬೇಸರ ಏನಿಲ್ಲ ನಿನ್ನಿಂದ, ಆದರೆ ವಿಷಾದ ಸ್ವಲ್ಪವೇ, 

ಅಂದರೆ ಯಾವ ದುಃಖ ತುಂಬಾ ಕಷ್ಟದಿಂದ ನನ್ನ ಬೆನ್ನು ಬಿಟ್ಟುಹೋಗಿವೆ, 

ಅದೇ ದುಃಖದೊಂದಿಗೆ ನೀನು ನನ್ನ ಸಂಬಂಧ ಜೋಡಿಸಿ ಹೋಗುತ್ತಿರುವೆ,

ಆಟಿಕೆಯೆಂದು....


ದೇವರಾಣೆ ಕೊಟ್ಟು ಮನವೊಲಿಸುವೆ, ಆದರೆ ದೂರ ನಾನಿರುವೆ, 

ನಿನ್ನ ದಾರಿ ತಡೆಯುವೆ, ಆದರೆ ಅಸಹಾಯಕ ನಾನಾಗಿರುವೆ,

ಅಂದರೆ ನಾನು ನಡೆಯಲು ಅಸಮರ್ಥ, ನೀನಂತೂ ಓಡಿಹೋಗುತ್ತಿರುವೆ,

ಆಟಿಕೆಯೆಂದು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ : ಖಿಲೋನಾ

हो ...

खिलौना, जानकर तुम तो, मेरा दिल तोड़ जाते हो 

मुझे इस, हाल में किसके सहारे छोड़ जाते हो 

खिलौना ...


मेरे दिल से ना लो बदला ज़माने भर की बातों का 

ठहर जाओ सुनो मेहमान हूँ मैं चँद रातों का 

चले जाना अभी से किस लिये मुह मोड़ जाते हो 

खिलौना ...


गिला तुमसे नहीं कोई, मगर अफ़सोस थोड़ा है 

के जिस ग़म ने मेरा दामन बड़ी मुश्किल से छोड़ा है 

उसी ग़म से मेरा फिर आज रिश्ता जोड़ जाते हो 

खिलौना ...


खुदा का वास्ता देकर मनालूँ दूर हूँ लेकिन 

तुम्हारा रास्ता मैं रोक लूँ मजबूर हूँ लेकिन 

के मैं चल भी नहीं सकता हूँ और तुम दौड़ जाते हो 

हो, खिलौना ...

ಖುಷಿಯಲ್ಲಿರು ನೀನೆಂದಿಗೂ


Photo :Google

ಹಾಡಿದ ಕೊಂಡಿ: https://youtu.be/ayGc5A6X9Go

(ನಿನ್ನ ಮದುವೆಗೆ ಏನು  ಉಡುಗೊರೆ ನೀಡಲಿ ನಾನು, ಪ್ರಸ್ತುತಿಸುವೆ ಈ ನನ್ನ ಮುರಿದ ಹೃದಯವನ್ನು)


ಖುಷಿಯಲ್ಲಿರು ನೀನೆಂದಿಗೂ 

ಇದು ಬೇಡಿಕೆ ನನ್ನ, 

ನಿಷ್ಠೆ ಮುರಿದರೇನು, 

ಹೃದಯರಾಣಿ ನೀನು ನನ್ನ, ಖುಷಿಯಲ್ಲಿರು....


ಹೋಗು ನಾನು ಏಕಾಂಗಿಯಾಗಿರುವೆ, 

ನಿನಗೆ ಜೊತೆ ಸಿಗಲಿ, 

ಮುಳುಗುವೆ ನಾನು ನಿನಗೆ ಕಿನಾರೆ ಸಿಗಲಿ, 

ಇಂದು ಇಚ್ಛೆ ಇದೇ, 

ಕೇಳು ನಾವಿಕನೇ ನನ್ನ, ಖುಷಿಯಲ್ಲಿರು....


ಜೀವನಪರ್ಯಂತ ನನ್ನ ಹೃದಯಕ್ಕೆ 

ಇದು ನೋವು ನೀಡುವುದು, 

ಈ ವೇದನೆ ಈಗಂತೂ ನನ್ನೊಟ್ಟಿಗೇನೇ ಹೋಗುವುದು, 

ಮರಣವೇ ಕೇವಲ ಮದ್ದಾಗಿದೆ ನನ್ನ, 

ಖುಷಿಯಲ್ಲಿರು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ : ಖಿಲೋನಾ


तेरी शादी पे दूँ तुझको तोहफ़ा मैं क्या

पेश करता हूँ दिल एक टूटा हुआ


खुश रहे तू सदा, ये दुआ है मेरी

बेवफ़ा ही सही, दिलरुबा है मेरी

खुश रहे ...


जा मैं तनहा रहूँ, तुझको महफ़िल मिले

डूबने दे मुझे, तुझको साहिल मिले

आज मरज़ी यही, नाख़ुदा है मेरी


उम्र भर ये मेरे दिल को तड़पाएगा

दर्द-ए-दिल अब मेरे साथ ही जाएग

मौत ही आख़िरी बस दवा है मेरी

Wednesday, January 20, 2021

ಒಂದು ಸ್ವಲ್ಪ ನನಗೆ ಬದುಕಲು ಕೊಡಿ

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ, 

ನೀರಸ ಜೀವನದಲಿ ಸ್ವಲ್ಪ ಉಲ್ಲಾಸ ತರಲು ಬಿಡಿ, 


ಏಕಾಂಗಿ ಬಿಟ್ಟು ಹೋದಳು ಅವಳು ನಡು ದಾರಿಯಲಿ, 

ಒಂಟಿ ಜೀವನದ ಕಷ್ಟ ಹೇಗೆ ತಿಳಿಸಲಿ, 

ಹರಿ ಬರುವ ಕಣ್ಣೀರು ಕುಡಿಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಐಷಾರಾಮಿಯ ಸುಖ ಈಗ ಹಿತ ನೀಡದು,

ಯಾವುದೇ ಸುಖ ಸೌಲಭ್ಯ ಈಗ ನೆಮ್ಮದಿ ಕೊಡದು,

ಮುಷ್ಠಿ ಅನ್ನ ತಿಂದು ನನಗೆ ತೃಪ್ತಿ ಪಡೆಯಲು ಕೊಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ


ನ್ಯಾಯ ಅನ್ಯಾಯ ಬಯಸುವುದು ಯಾರಿಂದ, 

ಇನ್ನು ಯಾವುದೇ ನಿರೀಕ್ಷೆ ಉಳಿಯಲಿಲ್ಲ ಆ ದೇವರಿಂದ, 

ನನಗೆ ನನ್ನದೇ ಸ್ಥಿತಿಯಲ್ಲಿ ಇರಲು ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


ಈ ಶರಾಬಿನಿಂದ ಸ್ಮೃತಿ ಅಳಿಸಲಾಗದು, 

ಹಾದು ಹೋದ ಸಮಯ ಹಿಂತಿರುಗಿ ಬರದು, 

ಸುಂಸುಮ್ಮನೆಯ ಸಾಂತ್ವನೆ ಬೇಡ ಬಿಡಿ,

ಒಂದು ಸ್ವಲ್ಪ ನನಗೆ ಬದುಕಲು  ಕೊಡಿ,


by ಹರೀಶ್ ಶೆಟ್ಟಿ, ಶಿರ್ವ

Sunday, January 17, 2021

ಈ ಕೆಂಪು ಬಣ್ಣ

Photo: Google
ಹಾಡಿನ ಕೊಂಡಿ: https://youtu.be/SfDyM5G-Ue0


ಈ ಕೆಂಪು ಬಣ್ಣ, 

ಯಾವಾಗ ನನಗೆ ಬಿಡುವುದೋ, 

ನನ್ನ ದುಃಖ ಯಾವಾಗ ತನಕ, 

ನನ್ನ ಹೃದಯ ಮುರಿಯುವುದೋ,

ಈ ಕೆಂಪು ಬಣ್ಣ...


ಯಾರದ್ದೋ ಹೆಸರು ನೆನೆದರೆ, 

ನೆನಪಾದೆ ನೀನೆ ನೀನು, 

ಇದು ಗ್ಲಾಸ್ಸು ಮದ್ಯದ, 

ಆಯಿತು ರಕ್ತ ಇದು, 

ಈ ಕೆಂಪು ಬಣ್ಣ....


ಕುಡಿಯಬೇಡ ಎಂದು ಆಣೆ ಮಾಡಿಸಿದೆ, 

ಕುಡಿಯುವೆ ಹೇಗೆ ನಾನು, 

ಇದನ್ನು ಯೋಚಿಸಲೇ ಇಲ್ಲ, 

ಬದುಕುವೆ ಹೇಗೆ ನಾನು,

ಈ ಕೆಂಪು ಬಣ್ಣ....


ಹೊರಟುಹೋಗುವೆ ಎಲ್ಲೋ ಬಿಟ್ಟು, 

ನಾನು ನಿನ್ನ ಈ ಶಹರು, 

ಇಲ್ಲಿ ಅಮೃತವೂ ಸಿಗದು, 

ಅಲ್ಲವೇ ಸಿಗದು ವಿಷವೂ,

ಈ ಕೆಂಪು ಬಣ್ಣ....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ:ಆನಂದ್ ಬಕ್ಷಿ 

ಸಂಗೀತ: ಎಸ ಡಿ ಬರ್ಮನ್ 

ಹಾಡಿದವರು: ಕಿಶೋರ್ ಕುಮಾರ್ 

ಚಿತ್ರ:ಪ್ರೇಮ ನಗರ್


ये लाल रंग कब मुझे छोड़ेगा 

मेरा ग़म, कब तलक़, मेरा दिल तोड़ेगा 

ये लाल रँग ...


किसी का भी लिया नाम तो, आई याद, तू ही तू 

ये तो प्याला शराब का, बन गया, ये लहू

ये लाल रँग ...


पीने कि क़सम डाल दी, पीयूँगा किस तरह 

ये ना सोचा तूने यार मैं, जीयूँगा किस तरह 

ये लाल रँग ... 


चला जाऊँ कहीं छोड़ कर, मैं तेरा ये शहर 

यहाँ तो ना अमृत मिले, पीने को, ना ज़हर

हाय, ये लाल रँग ...

ಕಣ್ಣೀರು ಇರುವುದಲ್ಲ ತೋರಿಸಲಿಕ್ಕೆ


Photo: Google


ಕಣ್ಣೀರು ಇರುವುದಲ್ಲ ತೋರಿಸಲಿಕ್ಕೆ, 

ಇದು ಇರುವುದು ಮನಸ್ಸ ಭಾರ ಅಳಿಸಲಿಕ್ಕೆ,


ನೋವಿನ ಮಿತಿ ಯಾರಿಗೆ ತಿಳಿದದ್ದು, 

ನೋವನ್ನು ಅನುಭವಿಸುವವನಿಗೆ ಕೇಳಿ ನೋಡು, 

ಬೆಚ್ಚನೆಯ ನೀರು ಕಣ್ಣಿಂದ ಸುರಿದಾಗ, 

ವೇದನೆ ಕಡಿಮೆಯಾಗುತ್ತದೆ ಕ್ಷಣಕ್ಕೆ, 

ಕಣ್ಣೀರು....


ನಿಷ್ಠೆ ಮುರಿದು ಮನಸ್ಸು ಬೇಸರಿಸಿದಾಗ, 

ಕನಸು ಹಠಾತ್ತನೆ ಮುರಿದಾಗ, 

ಕಣ್ಣು ಅತ್ತು ಹೃದಯಕ್ಕೇ ಸಾಂತ್ವನೆ ನೀಡುವಾಗ, 

ಸಹಿಸಲಾಗುತ್ತದೆ ಯಾವುದೇ ಅಸಹನೀಯ ಧಕ್ಕೆ, 

ಕಣ್ಣೀರು....


ಮಾತು ಬೆಳೆದು ಸ್ಥೈರ್ಯ ಕಳೆದಾಗ, 

ಅನ್ಯರ ಕೋಪಕ್ಕೆ ಬಲಿಪಶು ಆದಾಗ, 

ನೋವು ಅತಿ ಮಿತಿ ಮೀರಿ ಕಣ್ಣಿಂದ ಭಾಷ್ಪ ಉಕ್ಕಿ ಬಂದಾಗ, 

ಕೊಂಚ ವಿರಾಮ ಸಿಗುವುದು ಈ ಹೃದಯಕ್ಕೇ, 

ಕಣ್ಣೀರು..


by ಹರೀಶ್ ಶೆಟ್ಟಿ, ಶಿರ್ವ

Friday, January 15, 2021

ಈ ಗೆಳೆತನ

 


Photo: google

ಹಾಡಿನ ಕೊಂಡಿ: https://youtu.be/3469V_nFxls

ಈ ಗೆಳೆತನ 

ನಾವೆಂದೂ ಮುರಿಯಲಾರೆವು, 

ಪ್ರಾಣ ಹೋದರೂ, 

ಬಿಡಲಾರೆ ಈ ಜೊತೆಯನು,

ಈ ಗೆಳೆತನ...


ನನ್ನ ಗೆಲುವು, ನಿನ್ನ ಗೆಲುವು, 

ನಿನ್ನ ಸೊಲು ನನ್ನ ಸೋಲು, 

ಗೆಳಯ ನನ್ನ ಕೇಳು, 

ನಿನ್ನ ದುಖ, ನನ್ನ ದುಃಖ, 

ನನ್ನ ಜೀವ, ನಿನ್ನ ಜೀವ, 

ಅಂತಹ ನಮ್ಮ ಈ ಒಲವು,

ಜೀವಕ್ಕೆ ಜೀವ ಕೊಡುವೆ, 

ನಿನಗೋಸ್ಕರ ತೆಗೆದುಕೊಳ್ಳುವೆ, 

ಎಲ್ಲರಿಂದ ಹಗೆತನ, 

ಈ ಗೆಳೆತನ...


ಜನರು ನೋಡಿದರೆ ನಾವೆರಡು, 

ಆದರೆ ನೋಡಿ ನಾವೆರಡಲ್ಲ, 

ನಿನ್ನಿಂದ ಬೇಸರ, 

ನಿನ್ನಿಂದ ವಿರಹ, 

ಹಾಗೆ ಎಂದೂ ಆಗದಿರಲಿ,

ಹರಸು, ಓ ಅಲ್ಲಾಹ,

ಊಟ ನಲಿವು ಒಟ್ಟಿಗೆ, 

ಬದುಕು ಸಾವು ಒಟ್ಟಿಗೆ, 

ಎಲ್ಲಾ ಜೀವನ,

ಈ ಗೆಳೆತನ...

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಹಾಡಿದವರು: ಕಿಶೋರ್ ಕುಮಾರ್, ಮನ್ನಾ ಡೇ 

ಸಂಗೀತ : ಆರ್ ಡಿ ಬರ್ಮನ್ 

ಚಿತ್ರ: ಶೋಲೆ 

-

हा हा हा हा हे हे हे हू हू हू हू

ए ए क क क क

ये दोस्ती हम नहीं तोड़ेंगे

तोड़ेंगे दम मगर तेरा साथ ना छोडेंगे

ये दोस्ती हम नहीं तोड़ेंगे

तोड़ेंगे दम मगर तेरा साथ ना छोडेंगे


अरे मेरी जीत तेरी जीत तेरी हार मेरी हार

सुन ऐ मेरे यार

तेरा ग़म मेरा ग़म मेरी जान तेरी जान

ऐसा अपना प्यार

ज़ान पर भी खेलेंगे तेरे लिये ले लेंगे

ज़ान पर भी खेलेंगे तेरे लिये ले लेंगे

सबसे दुश्मनी

ये दोस्ती हम नहीं तोड़ेंगे

तोड़ेंगे दम मगर तेरा साथ ना छोडेंगे


हे हे हे बाजू बाजू

अरे हे हे हे बाजू बाजू

लोगों को आते हैं दो नज़र हम मगर

देखो दो नहीं

अरे हों जुदा या ख़फ़ा ऐ खुदा दे दुआ

ऐसा हो नहीं

खाना पीना साथ है

मरना जीना साथ है

खाना पीना साथ है

मरना जीना साथ है

सारी ज़िन्दगी

ये दोस्ती हम नहीं तोड़ेंगे

तोड़ेंगे दम मगर

तेरा साथ ना छोडेंगे

ये दोस्ती हम नहीं तोड़ेंगे

तोड़ेंगे दम मगर

तेरा साथ ना छोडेंगे


Thursday, January 14, 2021

ಹಾರಿದೆ ಹಾರಿದೆ ಪತಂಗ


Photo: Google

ಹಾಡಿನ ಕೊಂಡಿ: https://youtu.be/q5N0OctY9HE


ಹಾರಿದೆ ಹಾರಿದೆ ಪತಂಗ ನನ್ನ ಹಾರಿದೆ-2, 

ಹಾರಿದೆ ಮೋಡದ ಹತ್ತಿರ, 

ದಾರದ ದ್ವಾರಾ, 

ಇದನ್ನು ನೋಡಿ ಎಲ್ಲಾ ಜಗತ್ತು ಅಸೂಯೆಪಟ್ಟಿದೆ, 

ಹಾರಿದೆ....

-

ಹೀಗೆ ತರಂಗಿಸಿತು ಅದು ಪವನದಲಿ, 

ಗಾಳಿತೇರ ಹಾರುವಂತೆ ಆಕಾಶದಲ್ಲಿ, 

ಕೊಂಡು ಬಯಕೆ ಮನಸಲಿ, 

ವಧು ದಿಬ್ಬಣದಲಿ ಹೊರಡುವಂತೆ ವರನ ಮನೆಗೆ, 

ಹಾರಿದೆ...

-

ಬಣ್ಣ ನನ್ನ ಪತಂಗದ ಹಚ್ಚನೆಯ, 

ಇದರ ಗತ್ತು ನೀಲ ಅಂಬರದ ರಾಣಿಯ, 

ಹೊಸ ಹೊಸ ಉತ್ಥಾನ, 

ತುಂಬು ತುಂಬು ಯೌವನ, 

ತೆಳ್ಳನೆಯ ಸೊಂಟ ಕಾಣುತ್ತಿದೆ ತುಂಬಾ ಸುಂದರವೇ,

ಹಾರಿದೆ...

-

ಮುಟ್ಟಬೇಡ ನೋಡು ನೀನು ದೂರದಿ, 

ಒಟ್ಟಿಗೆ ಇದೆ ದಾರ ಓ ನನ್ನ ಗೆಳತಿ, 

ಇದು ವಿದ್ಯುತ್ತಿನ ಸರಿಗೆ, 

ಬರಬೇಡ ನೀನು ಬಳಿಗೆ, 

ಹುಡುಗಿ, ತುಂಬಾ ತುಂಬಾ ಇದು ಹರಿತಾಗಿದೆ,

ಹಾರಿದೆ...

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ರಾಜೇಂದ್ರ ಕೃಷಣ್ 

ಸಂಗೀತ: ಚಿತ್ರಗುಪ್ತ್ 

ಹಾಡಿದವರು : ಮುಹಮ್ಮದ್ ರಫಿ, ಲತಾ ಮಂಗೇಶ್ಕರ್

ಚಿತ್ರ:ಭಾಬಿ

-

चली-चली रे पतंग मेरी चली रे

चली बादलों के पार, हो के डोर पे सवार

सारी दुनिया ये देख-देख जली रे

चली-चली रे पतंग...


यूँ मस्त हवा में लहराए

जैसे उड़न खटोला उड़ा जाए

ले के मन में लगन, जैसे कोई दुल्हन

चली जाए रे सांवरिया की गली रे

चली-चली रे पतंग...


रंग मेरी पतंग का धानी

है ये नील गगन की रानी

बांकी-बांकी है उठान, है उमर भी जवान

लागे पतली कमर बड़ी भली रे

चली-चली रे पतंग...


छूना मत देख अकेली

है साथ में डोर सहेली

है ये बिजली की तार, बड़ी तेज़ है कतार

देगी काट के रख, दिलजली रे

चली-चली रे पतंग...



Monday, January 11, 2021

ಈ ಹೃದಯ ಮರುಳು


Photo: google

ಹಾಡಿನ ಕೊಂಡಿ: https://youtu.be/ap9UZoeUHW8


ಈ ಹೃದಯ ಮರುಳು, 

ಹೃದಯ ಮರುಳು ಈ, 

ಮರುಳು ಹೃದಯ ಈ, 

ಹೃದಯ ಮರುಳು,

-

ಎಷ್ಟು ನಿಷ್ಠುರ, ಆಶಯ ಅದರ, 

ಯೌವನ ಇರೋ ತನಕ, ಸಮಯ ಇರುತ್ತದೆ ಮೋಹಕ, 

ಕಂಗಳು ಪ್ರತ್ಯೇಕವಾಗದಿರಲಿ, ಬಯಕೆ ಮುನಿಸದಿರಲಿ, 

ಮಧುರ ವಸಂತದಲ್ಲಿ, ಗುಟ್ಟಾಗಿ ವನದಲ್ಲಿ,

ಹೀಗೆಯೇ ನಾನು ನೀನು, ಕುಳಿತುಕೊಂಡು ಮೌನದಲಿ, 

ನಿಷ್ಠಾವಂತರಲ್ಲ  ಅವರು ಹೋಗುವೆಯೆಂದು ಹೇಳುವವರು, 

ಈ ಹೃದಯ

ಈ ಹೃದಯ.....

-

ಕಳವಳದಲ್ಲಿರುವುದು, ಮೆಲ್ಲನೆ ನುಡಿಯುವುದು, 

ನನಗೆ ಮಿಡಿಯಲು ಕೊಡಿಯೆಂದು, ಜ್ವಾಲೆ ಧಗಧಗಿಸಲಿ ಎಂದು, 

ಮುಳ್ಳಳ್ಳಿ ಹೂಗಳಲ್ಲಿ, ಪ್ರೇಮಿಯ ಗಲ್ಲಿಯಲ್ಲಿ, 

ಸುತ್ತಾಡಲು ಬಿಡು, ಹೋಗಲಿ ಬಿಟ್ಟು ಬಿಡು, 

ಮರೆಯಾಗುವೆನೋ ಏನು, ಹಿಂತಿರುಗಿ ಬರುವೆ ನಾನು, 

ನೋಡಿದೆ, ಕೇಳಿದೆ, ಅರ್ಥಿಸಿದೆ, ಒಳ್ಳೆ ನೆಪ ಇದು, ಈ ಹೃದಯ

ಈ ಹೃದಯ.....

-

ಮಳೆಗಾಲ ಬಂದಾಗ, ಮೋಡ ಹಬ್ಬಿದಾಗ, 

ಹೂವಿನ ಋತುವಿನಲ್ಲಿ, ಹೂವಿನ ಋತುವಿನಲ್ಲಿ, 

ಹೂಗಾಳಿ ಬೀಸಿದಾಗ, ಏಕಾಂತ ಸಿಕ್ಕಿದಾಗ, 

ಸಿಲುಕಿಸಿ ಮಾತಲ್ಲಿ, ಹೇಳುತ್ತದೆ ರಾತ್ರಿಯಲ್ಲಿ, 

ನೆನಪಲ್ಲಿ ಮರೆಯಾಗುವೆ, ಬೇಗನೆ ಮಲಗುವೆ, 

ಏಕೆಂದರೆ ಕನಸಲ್ಲಿ ಇನಿಯನಿಗೆ ಬರಲಿದೆ ಇಂದು, ಈ ಹೃದಯ

ಈ ಹೃದಯ...

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಆನಂದ್ ಬಕ್ಷಿ 

ಸಂಗೀತ: ಎಸ್. ಡಿ. ಬರ್ಮನ್ 

ಹಾಡಿದವರು: ಲತಾ ಮಂಗೇಶ್ಕರ್, ಮುಹಮ್ಮದ್ ರಫಿ 

ಚಿತ್ರ: ಇಷ್ಕ್ ಪರ್ ಜೋರ್ ನಹೀ

-

ये दिल दीवाना है, दिल तो दीवाना है

दीवाना दिल है ये दिल दीवाना

-

कैसा बेदर्दी है, इसकी तो मर्ज़ी है

जब तक जवानी है, ये रुत सुहानी है

नज़रें जुदा ना हों, अरमां खफ़ा ना हों

दिलकश बहारों में, छुपके चनारों में

यूं ही सदा हम तुम, बैठे रहें गुमसुम

वो बेवफ़ा जो कहे हमको जाना है ये दिल, 

ये दिल दिवाना है ...

-

बेचैन रहता है, चुपके से कहता है

मुझको धड़कने दो, शोला भड़कने दो

काँटों में कलियों में, साजन की गलियों में

फ़ेरा लगाने दो, छोड़ो भी जाने दो

खो तो न जाऊंगा, मैं लौट आऊंगा

देखा सुने समझे अच्छा बहाना है ये दिल, 

ये दिल दिवाना है ...

-

सावन के आते ही, बादल के छाते ही

फूलों के मौसम में, फूलों के मौसम में

चलते ही पुरवाई, मिलते ही तन्हाई

उलझाके बातों में, कहता है रातों में

यादों में खो जाऊं, जल्दी से सो जाऊं

क्योंके साँवरिया को सपनों में आना है ये दिल, 

ये दिल दिवाना है ...

Friday, January 8, 2021

ಬನ್ನಿ ಯಜಮಾನರೇ

photo: Google

https://youtu.be/x11QNC9aA70

ಬನ್ನಿ ಯಜಮಾನರೇ ನಿಮ್ಮನ್ನು ತಾರೆಗೆ ಕೊಂಡೋಗುವೆ, 

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, 

ಬನ್ನಿ ಯಜಮಾನರೇ ಬನ್ನಿ,

-

ನಮ್ಮ ಗೌಪ್ಯ, ವಿಚಾರ ಒಂದೆಯಾದರೆ, ಅಭಿಪ್ರಾಯ ಒಂದೆಯಾಗಲಿ, 

ಬಾಳ ಪ್ರಯಾಣ ನಿಶ್ಚಿತವಾದರೆ, ನಮ್ಮ ಯಾತ್ರೆ ಒಂದೆಯಾಗಲಿ, 

ಆ ಆ ಆ ಆ ಆ ಆ ಆ ಓ ಓ ಓ ಓ ಓ.....

ಪ್ರೇಮದ ಪ್ರಕಾಶಮಯ ಪರಿಸರಕ್ಕೆ ಕೊಂಡೋಗುವೆ,

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, 

ಬನ್ನಿ ಯಜಮಾನರೇ ಬನ್ನಿ,

-

ಬರೆಯಿರಿ....ಅಯ್ಯೋ... 

ಬರೆಯಿರಿ ಹೃದಯದ ಪುಸ್ತಕ ಹೃದಯದಲಿ, ಅಂತಹದೊಂದು ಕಥೆಯು, 

ಅದರ ಉದಾಹರಣೆ ನೀಡಲಾರದು, ಏಳು ಲೋಕವು,

ಆ ಆ ಆ ಆ ಆ ಆ ಆ ಓ ಓ ಓ ಓ ಓ.....

ಬಾಹುಗಳಲ್ಲಿ ಅಪ್ಪಿಕೊಂಡು ಸಾವಿರಾರು ಜನರ ಮಧ್ಯೆ ಕೊಂಡೋಗುವೆ,

ಹೃದಯ ನಲಿಯುವಂತಹ ವಸಂತಕ್ಕೆ ಕೊಂಡೋಗುವೆ, ಬನ್ನಿ ಯಜಮಾನರೇ ಬನ್ನಿ,

-

ಅನುವಾದ - ಹರೀಶ್ ಶೆಟ್ಟಿ, ಶಿರ್ವ 

ಮೂಲ: ನೂರ್ ದೇವಾಸಿ 

ಸಂಗೀತ : ಓ ಪಿ ನಯ್ಯರ್ 

ಹಾಡಿದವರು ಆಶಾ ಭೋಸ್ಲೆ 

ಚಿತ್ರ: ಕಿಸ್ಮತ್-

[आओ हुज़ूर तुमको, सितारों में ले चलूँ 

दिल झूम जाए ऐसी, बहारों में ले चलूँ]x २ 

आओ हुज़ूर आओ


[हमराज़ हमख़याल तो हो, हमनज़र बनो 

तय होगा ज़िंदगी का सफ़र, हमसफ़र बनो]x २ आ हा आ.. 

चाहत के उजले-उजले नज़ारों में ले चलूँ 

दिल झूम जाए ऐसी, बहारों में ले चलूँ 

आओ हुज़ूर आओ 


लिख दो अह.. 

[लिख दो किताब-ए-दिल पे कोई, ऐसी दास्तां 

जिसकी मिसाल दे न सकें, सातों आसमां]x २ 

आ हा आ.. 

बाहों में बाहें डाले, हज़ारों में ले चलूँ 

हाय दिल झूम जाए ऐसी, 

बहारों में ले चलूँ आओ हुज़ूर तुमको, 

सितारों में ले चलूँ दिल झूम जाए ऐसी, बहारों में ले चलूँ 

आओ हुज़ूर आओ





Thursday, January 7, 2021

ಈ ಜಗತ್ತಲ್ಲಿ ಬದುಕಬೇಕೆಂದರೆ


Photo: Google

ಹಾಡಿನ ಕೊಂಡಿ: https://youtu.be/pZox7N7uCAc

ಈ ಜಗತ್ತಲ್ಲಿ ಬದುಕಬೇಕೆಂದರೆ ಕೇಳಿ ನನ್ನ ಮಾತನ್ನು, 

ದುಃಖ ಮರೆತು ಮಾಡಿ ಮೋಜನ್ನು, 

ಮತ್ತೆ ಒಪ್ಪಿಕೊಳ್ಳಿ ನಾನೇಳಿದನ್ನು,

ಈ ಜಗತ್ತಲ್ಲಿ

-

ಬದುಕು ಸುಂದರ ಅವರ ನಕ್ಕು ನಲಿದು ಬದುಕುವವರು, 

ಕೇಶರಾಶಿಯ ಮುಗಿಲ ಮಧ್ಯೆ ಕಂಗಳ ರಸ ಹೀರಿದವರು, 

ಮೋಜಿನ ಜನರೇ ಮೋಜು ಮಾಡಿ, 

ತೊರೆಯಿರಿ ಈ ಮೌನವನ್ನು,

ಬಂದಿದೆ ವರ್ಣಮಯ ವಸಂತ, ತಂದಿದೆ ವರ್ಣರಂಜಿತ ದಿವಸವನ್ನು, 

ಈ ಜಗತ್ತಲ್ಲಿ....

-

ನಾನು ಸುಂದರ ಅಪ್ಸರೆಯೊಂದು ನಲಿಯುವೆ ತರಂಗುತ್ತಿರುವೆ, 

ಎಲ್ಲೆಡೆ ಹೂವು ಅರಳಿಸುವೆ ಹಾಗು ಹರ್ಷ ಸುರಿಸುತ್ತಿರುವೆ, 

ಲೋಕದವರೇ ನಿಮಗೇನು ಗೊತ್ತು ಬದುಕುವ ಈ ಮಾತು,

ಬನ್ನಿ ನನ್ನ ದ್ವಾರಕ್ಕೆ, ತಿಳಿಸುವೆ ಈ ಎರಡು ಮಾತನ್ನು, 

ಈ ಜಗತ್ತಲ್ಲಿ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ ಸಂಗೀತ: ಶಂಕರ್ ಜೈ ಕಿಷನ್ ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ: ಗುಂನಾಮ್

-

इस दुनिया में जीना हो तो सुन लो मेरी बात

ग़म छोड़ के मना लो रंग रेली

और मान लो जो कहे किट्टी केली

-

जीना उसक जीना है जो हँसते गाते जीले

ज़ुल्फ़ों की घनघोर घटा में नैन के बादल पीले

ऐश के बंदों ऐश करों तुम छोड़ो ये ख़ामोशी

आई हैं रंगीन बहारें लेकर दिन रंगीले

-

मैं अलबेली चिंगारी हूँ नाचूँ और लहराऊँ

दामन दामन फूल खिलाऊँ और ख़ुशियाँ बरसाऊँ

दुनिया वालों तुम क्या जानो जीने की ये बातें

आओ मेरी महफ़िल में मैं ये दो बातें समझाऊँ

-

Wednesday, January 6, 2021

ಏನೂ ಬೇಡ ಅನಿಸುತ್ತದೆ

ಕೆಲವೊಮ್ಮೆ ಅಳಬೇಕನಿಸುತ್ತದೆ, 

ಲೋಕದ ತರಹ ತರಹದ ಹೇಳಿಕೆ ಕೇಳಿ, 

ಏನೂ ಬೇಡ ಅನಿಸುತ್ತದೆ!


ಈ ಬದುಕಿನ ಹೋರಾಟ ಕಷ್ಟವೇನಲ್ಲ, 

ಪ್ರೀತಿ ವಿಶ್ವಾಸ ಪರಸ್ಪರ ಇದ್ದರೆ, 

ಆದರೆ ಭಾವನೆ ಮುರಿದ ಪೀಡೆಯಿಂದ ತಾಕತ್ತು ಮುಗಿದು ಹೋರಾಟ ಕಷ್ಟವಾಗುತ್ತದೆ, 

ಏನೂ ಬೇಡ ಅನಿಸುತ್ತದೆ!


ಬೆಸೆದು ಜೀವನ ಸಾಗಿಸುವುದು ಒಳ್ಳೆಯದ್ದು, 

ಹೌದು, 

ಆದರೆ ಭಿನ್ನ ಮತ ದಿಂದ ಅಡಚಣೆ ಉಂಟಾಗುವುದೂ ಸ್ವಾಭಾವಿಕ, 

ಮಾತಿನಿಂದ ಮಾತು ಬೆಳೆದು ಕಲಹ ಉಂಟಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ವಂಶ ಬೆಳೆದು ಸಂಸಾರ ವ್ಯಾಪಕ, 

ಭಿನ್ನ ಭಿನ್ನ ವಿಚಾರಗಳಿಗಿಲ್ಲ ಮಾಪಕ, 

ಪ್ರತ್ಯಕ್ಷ ಅಪ್ರತ್ಯಕ್ಷ ವಾದದಿಂದ ಸಂಬಂಧ ಹಾಳಾಗುತ್ತದೆ,

ಏನೂ ಬೇಡ ಅನಿಸುತ್ತದೆ!


ಐದು ಬೆರಳಿಗೆ ಎಲ್ಲಿದೆ ಸಮಾನತೆ, 

ಅಳೆದು ಮಾತಾಡುವ ಪೀಳಿಗೆ ಮುಗಿದಿದೆ, 

ಇಂದಿನ ಪೀಳಿಗೆ ಹಿರಿಯರ ಮಾತಲ್ಲಿ ಆಸಕ್ತಿ ಇಲ್ಲದಂತಾಗಿದೆ, 

ಸುಮ್ಮನೆ ಕೂತುಕೊಳ್ಳುವುದು ಒಳ್ಳೆ ಅನಿಸುತ್ತದೆ,

ಏನೂ ಬೇಡ ಅನಿಸುತ್ತದೆ!


by ಹರೀಶ್ ಶೆಟ್ಟಿ, ಶಿರ್ವ

ನನಗೆ ಪ್ರೀತಿ ನಿನ್ನಿಂದಲೇ


Photo-google

ಹಾಡಿನ ಕೊಂಡಿ: https://youtu.be/bwzvL_fDSbI


ನನಗೆ ಪ್ರೀತಿ ನಿನ್ನಿಂದಲೇ, 

ಓ ಪ್ರಾಣ ಪ್ರೇಯಸಿಯೇ, 

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

ನನಗೆ ಪ್ರೀತಿ ನಿನ್ನಿಂದಲೇ....

-

ನನ್ನ ಜೀವನದಲಿ ನೀನಿರುವೆ, 

ನನ್ನಲೇನಿದೆ ಕೊರತೆ, 

ಶಿಶಿರದ ದುಃಖ ಬರದಂತ, 

ವಸಂತ ನೀ ನೀಡಿರುವೆ,

ನನ್ನ ಮೇಲೆ ನಿನ್ನ, 

ವಿಶೇಷ ಇದೆ ಸೌಮ್ಯತೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ನಿನ್ನ ರೂಪ ತೋರಿಸಿದೆ, 

ನನಗೆ ತಿಳಿಗೇಡಿತನದ ದಾರಿಯು, 

ಈ ಮೋಹಕ ತುಟಿ ಅಮಲೇರಿಸುವ, 

ಈ ತಗ್ಗಿದ ನಯನದ ಕಾಂತಿಯು, 

ನಿನ್ನ ಕೇಶರಾಶಿಯಿಂದ ಹುಟ್ಟಿದೆ, 

ಈ ಮುಗಿಲ ತಾರುಣ್ಯತೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ನನಗೆ ದುಃಖವಿಲ್ಲ ಭಾಗ್ಯದ, 

ನನಗೆ ದುಃಖವಿಲ್ಲ ಪ್ರಪಂಚದ, 

ನಿನ್ನ ಕೃಪೆಯಿಂದಲೇ ಸುರಕ್ಷಿತ, 

ನನ್ನ ನೆಲೆ ಹೃದಯದ,

ಬಾಳಲ್ಲಿ ನನ್ನ ಮಾತಲ್ಲಿರಲಿ,

ನಿನ್ನ ಒಲವಿನದ್ದೇ ಕಥೆ,

ನಿನ್ನಲ್ಲಿದ್ದ ನನ್ನ ಹೃದಯ, 

ನನ್ನ ಪ್ರೀತಿಯ ಗುರುತೇ,

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಶಕೀಲ್ ಬದಾಯುನಿ 

ಸಂಗೀತ: ರವಿ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ: ಉಮ್ಮೀದ್-

-

मुझे इश्क है तुझी से

मेरी जान-ए-ज़िन्दगानी

तेरे पास मेरा दिल है

मेरे प्यार की निशानी

मुझे इश्क है तुझी से...


मेरी ज़िन्दगी में तू है

मेरे पास क्या कमी है

जिसे ग़म नहीं खिज़ा का

वो बहार तूने दी है

मेरे हाल पर हुई है

तेरी ख़ास महरबानी

तेरे पास मेरा दिल...


तेरे हुस्न ने दिखाई

मुझे बेखुदी की राहें

ये हसीन लब नशीले

ये झुकी झुकी निगाहें

तेरी ज़ुल्फ़ से उठी है

ये घटाओं की जवानी

तेरे पास मेरा दिल...


न मुझे गम-ए-मुकद्दर

न मुझे गम-ए-ज़माना

तेरे दम से है सलामत

मेरे दिल का आशियाना

रहे उम्र भर जुबां पर

तेरे प्यार की कहानी

तेरे पास मेरा दिल...


Tuesday, January 5, 2021

ನಿನ್ನ ನಗುವ ಅಂದ

 

Photo: Google

ಹಾಡಿನ ಕೊಂಡಿ:

https://youtu.be/jjlFiCD1Vgc

....ನಿನ್ನ ನಗುವ ಅಂದ, 

ನನ್ನನ್ನು ನೋಡಿ ನಿನ್ನ ನಗುವ ಅಂದ, 

ಒಲವಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು....

-

ನನಗೆ ನೀನು ಅಪರಿಚಿತ ಕರೆ ಅಲ್ಲದೆ ಕರೆ ಮರುಳು, 

ಆದರೆ ಈ ಮರುಳನಿಗೆ ತಿಳಿದಿದೆ ಹೃದಯದ ಕಥೆಗಳು, 

ಸುಂಸುಮ್ಮನೆ ಅಡಗಿಸುವುದು ಹೃದಯದ ಮಾತನ್ನು,

ಒಲವಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು...

-

ಯೋಚನೆಯಲಿ ಮುಳುಗಿರುವೆ ನೀನು ಹೀಗೆ, 

ಚಿತ್ರಕಾರನ ನಡೆದಾಡುವ ಚಿತ್ರದ ಹಾಗೆ, 

ನಟನೆ ಪ್ರೇಮದ ಕಾವ್ಯಾತ್ಮಕ ನಿನ್ನ,

ಒಲವಲ್ಲದೆ ಅಲ್ಲದೆ ಮತ್ತೆ ಬೇರೆ ಏನು, 

ಓ...ನನ್ನನ್ನು....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ರಾಜ ಮೆಹದಿ ಅಲಿ ಖಾನ್, 

ಸಂಗೀತ: ಓ ಪಿ ನಯ್ಯರ್ 

ಹಾಡಿದವರು : ಮುಹಮ್ಮದ್ ರಫಿ 

ಚಿತ್ರ: ಏಕ್ ಮುಸಾಫಿರ್ ಏಕ್ ಹಸೀನಾ

-

... आपका मुस्कराना

मुझे देख कर आपका मुस्कराना

मुहब्बत नहीं है तो फिर और क्या है

हो ... मुझे देख कर आपका मुस्कराना


ओ हो हो ...

मुझे तुम बेगाना कह लो या के दीवाना

मगर ये दीवाना जाने दिल का फ़साना

बनावट में दिल की हक़ीक़त चुपाना

मुहब्बत नहीं है तो फिर और क्या है

हो ... मुझे देख कर आपका मुस्कराना


ओ हो हो ...

खयालों में खोयी खोयी रहती हो ऐसे

मुसव्विर की चलती फिरती तसवीर जैसे

अदा आशिक़ी की नज़र शायराना

मुहब्बत नहीं है तो फिर और क्या है

हो ... मुझे देख कर आपका मुस्कराना


Friday, January 1, 2021

ಈ ಹೃದಯ ನಿನ್ನ ಹೊರತು


Photo: google

ಹಾಡಿನ ಕೊಂಡಿ: 

https://youtu.be/UbrJ0QmAxiQ


 ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

ನಾನೇನು ಮಾಡಲಿ, 

ಕಲ್ಪನೆಯಲ್ಲಿ ಯಾರೂ ನೆಲೆಸುವುದಿಲ್ಲ,

ನಾನೇನು ಮಾಡಲಿ, 

ನೀನೆ ಹೇಳು, ಈಗ ಓ ನನ್ನ ಇನಿಯ, ನಾನೇನು ಮಾಡಲಿ,


ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

ನೀನೆ ಹೇಳು, ಓ ನನ್ನ ಪ್ರೀಯೆ, ನಾನೇನು ಮಾಡಲಿ,

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

-

ಲತಾ:

ಯಾರದ್ದೋ ಹೃದಯದಲಿ ನೆಲೆಸಿ ಹೃದಯವನ್ನು ಪೀಡಿಸುವುದು ಒಳ್ಳೆಯದಲ್ಲ, 

ಪದೇಪದೇ ಕಣ್ಣಿಂದ ಕಣ್ಣು ಸೇರಿಸಿ ಅಡಗುವುದು ಒಳ್ಳೆಯದಲ್ಲ,

ಬಯಕೆಯ ಅರಳಿದ ಭಾಗೀಚೆಯನ್ನು ಸುಡುವುದು ಒಳ್ಳೆಯದಲ್ಲ, 

ನನಗೆ ನಿನ್ನ ಹೊರತು ಯಾರೂ ಇಷ್ಟವಾಗುವುದಿಲ್ಲ, ನಾನೇನು ಮಾಡಲಿ,

ನೀನೆ ಹೇಳು, ಓ ನನ್ನ ಇನಿಯ, ನಾನೇನು ಮಾಡಲಿ,

ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

-

ರಫಿ:

ಪ್ರೀತಿ ಮಾಡಬಹುದು ಆದರೆ  ರುಚಿಸಬೇಕಲ್ಲವೇ ಅದು,

ಹೃದಯಕ್ಕೇ ಭಾರವಾಗುವುದು  ನೆರಳೂ ಕೇಶರಾಶಿಯದ್ದು,

ಸಾವಿರಾರೂ ದುಃಖಗಳಿವೆ ಪ್ರಪಂಚದಲ್ಲಿ, ನಮ್ಮದ್ದು ಅನ್ಯರದ್ದು, 

ಪ್ರೀತಿಯ ದುಃಖವೇ ಕೇವಲ ಒಂದಲ್ಲ,, ನಾನೇನು ಮಾಡಲಿ, 

ನೀನೆ ಹೇಳು, ಈಗ , ಓ ನನ್ನ ಪ್ರೀಯೆ, ನಾನೇನು ಮಾಡಲಿ,

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

-

ಲತಾ:

ತಣಿಸು ಹೃದಯದ ಜ್ವಾಲೆಯನು, 

ಅಲ್ಲದೆ ಇದಕ್ಕೆ ನಿರಾಳವಾಗಿ ಗಾಳಿ ನೀಡು, 

ಯಾರು ಇದರ ಮೌಲ್ಯ ಅರಿಯುವರೋ, ಅವರಿಗೆ ತನ್ನ ನಿಷ್ಠೆ ನೀಡು, 

ನಿನ್ನ ಮನಸ್ಸಲ್ಲೇನಿದೆ ಕೇವಲ ಇಷ್ಟೇ ಹೇಳಿ ಬಿಡು, 

ಈ ಬದುಕಿನ್ನು ಏಕಾಂಗಿ ಸಾಗುವುದಿಲ್ಲ, ನಾನೇನು ಮಾಡಲಿ,

ರಫಿ:

ನಶಿಸಿ ಹೋದ ಹೃದಯದಲ್ಲಿ ಯಾವುದೇ ದೀಪ ಬೆಳಗುವುದಿಲ್ಲ, 

ನಾನೇನು ಮಾಡಲಿ, 

ಲತಾ :

ಈ ಹೃದಯ ನಿನ್ನ ಹೊರತು ಎಲ್ಲಿಯೂ ಹಿತ ಪಡೆಯುವುದಿಲ್ಲ, 

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಸಾಹಿರ್ ಲುಧಿಯಾನ್ವಿ, 

ಸಂಗೀತ: ಲಕ್ಷ್ಮಿಕಾಂತ್ ಪ್ಯಾರೇಲಾಲ್

ಹಾಡಿದವರು : ಲತಾ ಮಂಗೇಶ್ಕರ್, ಮುಹಮ್ಮದ್ ರಫಿ 

ಚಿತ್ರ: ಈಜ್ಜತ್


लता:: ये दिल तुम बिन, कहीं लगता नहीं, हम क्या करें

ये दिल तुम बिन, कहीं लगता नहीं, हम क्या करें

तसव्वुर में कोई बसता नहीं, हम क्या करें

तुम्ही कह दो, अब ऐ जानेवफ़ा, हम क्या क


रफ़ी: लुटे दिल में दिया जलता नहीं, हम क्या करें

तुम्ही कह दो, अब ऐ जाने-अदा, हम क्या क


लता: ये दिल तुम बिन, कहीं लगता नहीं, हम क्या करें


किसी के दिल में बस के दिल को, तड़पाना नहीं अच्छा

निगाहों को छलकते देख के छुप जाना नहीं अच्छा

उम्मीदों के खिले गुलशन को, झुलसाना नहीं अच्छा

हमें तुम बिन, कोई जंचता नहीं, हम क्या करें

तुम्ही कह दो, अब ऐ जानेवफ़ा, हम क्या करें


रफ़ी: लुटे दिल में दिया जलता नहीं, हम क्या 


मुहब्बत कर तो लें लेकिन, मुहब्बत रास आये भी -

दिलों को बोझ लगते हैं, कभी ज़ुल्फ़ों के साये भी

हज़ारों ग़म हैं इस दुनिया में, अपने भी पराये 

मुहब्बत ही का ग़म तन्हा नहीं, हम क्या करें

तुम्ही कह दो, अब ऐ जाने-अदा, हम क्या करें


लता: ये दिल तुम बिन, कहीं लगता नहीं, हम क्या 


बुझा दो आग दिल की, या इसे खुल कर हवा दे दो -

रफ़ी: जो इसका मोल दे पाये, उसे अपनी वफ़ा दे दो

लता: तुम्हारे दिल में क्या है बस, हमें इतना पता दे दो

के अब तन्हा सफ़र कटता नहीं, हम क्या करें

रफ़ी: लुटे दिल में दिया जलता नहीं, हम क्या क

लता: ये दिल तुम बिन, कहीं लगता नहीं, हम क्या करेंरें, २करेंभी २करें,, - २रेंरें





ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...