Sunday, March 29, 2020

ಓ ನನ್ನೊಲವೆ, ಓ ನನ್ನೊಲವೆ

ಓ ನನ್ನೊಲವೆ, ಓ ನನ್ನೊಲವೆ

ನನ್ನೊಲವೆ ನನ್ನನ್ನು ಬಿಟ್ಟು ಹೋಗದಿರು
ನಿನ್ನ ವಿನಃ ಮನಸ್ಸಿಲ್ಲ ಯಾವುದರಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನನ್ನ ವಿನಃ ನೀನು ಬದುಕಲಾರೆ
ನಿನ್ನ ವಿನಃ ನಾನು ಬದುಕಲಾರೆ
ಬೇರೆ ಯಾವುದೇ ಭರವಸೆ ನಾನು ಕೇಳುವುದಿಲ್ಲ
ನಿನ್ನ ವಿನಃ ನನ್ನ ಅಸ್ತಿತ್ವ ಏನಿಲ್ಲ

ನಿನ್ನಂತಹ ಪ್ರೀತಿ
ನನಗೆ ಸಿಗದು ಬೇರೆ ಎಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನಿನ್ನ ಹೃದಯದಲ್ಲಿಡು ನೀನು ನನ್ನನ್ನು
ಮಾತಾಡುವ ನಾವು ಕಣ್ಣಿಂದ ಕಣ್ಣಿನಿಂದಲೂ
ಮಿಡಿತ ಹೃದಯದ ಗುರುತಿಸುವುದು ನಿನ್ನನ್ನು
ನೀನು ನನ್ನ ನಾನು ನಿನ್ನಯೆಂದು ತಿಳಿದಿದೆ ದೇವರಿಗೂ

ಒಬ್ಬರನೊಬ್ಬರು ಅಗಲಿ ನಮಗೆ ಬದುಕಲಾಗದು
ನಿನ್ನ ವಿನಃ ನಾನು ಯಾರನ್ನೂ ನೋಡುವುದಿಲ್ಲ
ನಿನ್ನ ವಿನಃ ನನ್ನ ಅಸ್ತಿತ್ವ ಏನಿಲ್ಲ

ನಿನ್ನ ಬಣ್ಣದಲ್ಲಿ ಮುಳುಗಿದೆ ನಂತರ,
ಹಿಡಿಯಲ್ಲ ಇನ್ನು ಬೇರೆ ಯಾವ ಬಣ್ಣವೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ನನ್ನೊಲವೆ ನನ್ನನ್ನು ಬಿಟ್ಟು ಹೋಗದಿರು
ನಿನ್ನ ವಿನಃ ಮನಸ್ಸಿಲ್ಲ ಯಾವುದರಲ್ಲೂ
ಎಲ್ಲಿ ನೀನು ಹೋಗುವೆಯೋ
ನಾ ನಡೆಯುವೆ ನಿನ್ನ ಹಿಂದೆ ಹಿಂದೆಯಲ್ಲೂ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ/ಸಂಗೀತ  : ತನಿಷ್ಕ್ ಬಾಗಚಿ
ಹಾಡಿದವರು : ಅರಿಜಿತ್ ಸಿಂಗ್, ಆಸೀಸ್ ಕೌರ್
ಚಿತ್ರ : ಕೇಸರಿ

ओ माहि वे, ओ माहि वे
माहि मेनू छडयो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना
तू जी सकती नहीं
मैं जी सकता नहीं
कोई दूसरी मैं सरता रखता नहीं
क्या तेरे बाजो मेरा

सचियाँ मोहब्बत वे
ओ माहि किथे और नैयो मिलना
और नैयो मिलना
जिथे वे तू चलिया हाँ
माहि मैं तेरे पीछे पीछे चलना
पीछे पीछे चलना

ओ माहि वे, ओ माहि वे

दिल विच तेरे यारा मेनू रहने दे
आँखों से ये आँखों वाली गल कहने दे
दिल विच तेरे यारा मेनू रहने दे
आँखों से ये आँखों वाली गल कहने दे

धड़कन दिल दी ऐ तैनू पहचाने
तू मेरा है मैं हूँ तेरे रब भी ये जाने

तू रह सकती नहीं
मैं रह सकता नहीं
तेरे बिन यारा और किथे तकदा नहीं
क्या तेरे बाजो मेरा

रंग तेरा छड्या वे
के हुण कोई रंग नैयो चड़ना
रंग नैयो चड़ना
जिथे वे तू चलना हाँ
माहि मैं तेरे पीछे पीछे चलना
पीछे पीछे चलना

माहि मेनू छड़ियो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना

माहि मेनू छड़ियो ना
के तेरे बिन दिल नैयो लगना
जिथे वे तू चलना ऐ
माहि मैं तेरे पीछे पीछे चलना

Thursday, March 26, 2020

ಓ ನನ್ನ ಭೂಮಿ

ಖಡ್ಗಕ್ಕೆ  ಈ ಶಿರವನ್ನು ಮಾಡಿ ಅರ್ಪಣ
ಜ್ವಾಲೆಯಲ್ಲಿ ದಹಿಸಿ ಈ ದೇಹವನ್ನ
ಅದರ ನಂತರವೇ ನಮ್ಮ ತಲೆಯ ಮೇಲೆ
ಅಲಂಕಾರವಾಯಿತು ಈ ಕೇಸರಿ ಬಣ್ಣ

ಓ ನನ್ನ ಭೂಮಿ, ವಿಷಾದವಿಲ್ಲ
ನಿನಗಾಗಿ ನೂರು ನೋವು  ಸಹಿಸಿದಕ್ಕೆ
ಎಂದಿಗೂ ನಿನ್ನ ಪ್ರತಿಷ್ಠೆ ಸುರಕ್ಷಿತವಾಗಿರಲಿ
ನನ್ನ ಪ್ರಾಣ ಉಳಿಯಲಿ ಉಳಿಯದಿರಲಿ

ಓ ನನ್ನ ಭೂಮಿ, ಪ್ರಿಯತಮೆ ನನ್ನ
ನನ್ನ ಧಮನಿ-ಧಮನಿಯಲಿ ನಿನ್ನ ಪ್ರೀತಿ ತುಂಬಿರಲಿ
"ಎಂದಿಗೂ ಮಸುಕಾಗದಿರಲಿ ನಿನ್ನ ಬಣ್ಣ"
ದೇಹದಿಂದ ಹೊರಬಂದು ಈ ನೆತ್ತರು ಹೇಳಲಿ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ನಿನ್ನ ನದಿಯಲ್ಲಿ ತೇಲಲಿ
ನಿನ್ನ ಹೊಲದಲ್ಲಿ ಬೆಳೆಯಲಿ
ಕೇವಲ ಇಷ್ಟೇ ಹೃದಯದ ಬಯಕೆ

ಸಾಸಿವೆ ತುಂಬಿದ ನನ್ನ ಗದ್ದೆಗಳು
ಅಲ್ಲಿ ಸಂತಸದಿಂದ ಕುಣಿಯಲಾಗಲಿಲ್ಲ
ಎಂದಿಗೂ ನನ್ನ ಆ ಊರು ಸಮೃದ್ಧವಾಗಿರಲಿ 
ಅಲ್ಲಿ ಹಿಂತಿರುಗಿ ನನಗೆ ಹೋಗಲಾಗಲಿಲ್ಲ

ಓ ಮಾತೃಭೂಮಿಯೇ, ಓ ಮಾತೃಭೂಮಿಯೇ
ನಿನ್ನ ನನ್ನ ಪ್ರೀತಿ ಅದ್ವಿತೀಯವಾಗಿತ್ತು 
ಅರ್ಪಿಸಿದೆ ನನ್ನನ್ನು ನಿನ್ನ ಸೇವೆಯಲಿ 
ಅದೃಷ್ಟವಂತನಾಗಿದೆ ನಾನೆಷ್ಟು

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಕೇಸರಿ

ಓ ನಲ್ಲೆ ನನ್ನ, ನೀ ನಗುತಿರು
ಕ್ಷಣಕ್ಕೂ ನಿನ್ನ ಕಣ್ಣಲ್ಲಿ ಕಣ್ಣೀರು ಬರದಿರಲಿ
ನಾನಾರಾಧಿಸಿದ ಆ ಮುಖದ 
ತೇಜಸ್ಸು ಎಂದಿಗೂ ಕಡಿಮೆಯಾಗದಿರಲಿ 

ಓ ಅಮ್ಮ ನನ್ನ, ನಿನಗೆ ವ್ಯಥೆ ಏಕೆ?
ಯಾಕೆ ಕಣ್ಣಿಂದ ಸಾಗರ ಹರಿಯುತ್ತಿದೆ
ನೀನು ಹೇಳುತ್ತಿದೆ ನಿನ್ನ ಚಂದಿರ ನಾನು
ಮತ್ತೆ ಚಂದಿರ ಎಂದಿಗೂ ಇರುತ್ತದೆ

ನಿನ್ನ ಮಣ್ಣಲ್ಲಿ ಮಣ್ಣಾಗಲಿ
ಹೂವಾಗಿ ಅರಳಲಿ
ಕೇವಲ ಇಷ್ಟೇ ಹೃದಯದ ಬಯಕೆ

ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಮೂಲ : ಮನೋಜ್ ಮುಂತಶೀರ್ 
ಹಾಡಿದವರು :ಬಿ ಫ್ರಾಕ್ 
ಸಂಗೀತ :ಅರ್ಕೊ  ಪ್ರಾವೋ  ಮುಖರ್ಜಿ 
ಚಿತ್ರ : ಕೇಸರಿ  

Talvaron pe sar vaar diye
Angaaron mein jism jalaya hai
Tab jaake ke kahin humne sar pe
Yeh kesari rang sajaaya hai

Aye meri zameen afsoss nahi
Jo tere liye sau dard sahe
Mehfooz rahe teri aan sada
Chaahe jaan meri yeh rahe na rahe

Aye meri zameen mehboob meri
Meri nass nass mein tera ishq bahe
Pheeka na pade kabhi rang tera
Jismon se nikal ke khoon kahe

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

Wo o…

Sarson se bhare khalihaan mere
Jahaan jhoom ke bhagra paa na saka
Aabad rahe woh gaaon mera
Jahaan laut ke wapas jaa na saka

Ho watna ve, mere watna ve
Tera mera pyar nirala tha
Kurbaan hua teri asmat pe
Main kitna naseebon wala tha

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

O Heer meri tu hansti rahe
Teri aankh ghadi bhar nam na ho
Main marta tha jis mukhde pe
Kabhi uska ujaala kam na ho

O maai meri kya fiqr tujhe
Kyun aankh se dariya behta hai
Tu kehti thi tera chaand hoon main
Aur chaand hamesha rehta hai

Teri mitti mein mill jawaan
Gul banke main khill jawaan
Itni si hai dil ki aarzoo
Teri nadiyon mein beh jawaan
Teri kheton mein lehrawaan
Itni si hai dil ki aarzoo

Wednesday, March 25, 2020

ಯುಗಾದಿ ಹಬ್ಬದ ಶುಭಾಶಯಗಳು


ನೀವು ನಿಮ್ಮ ಮನೆಯಲಿ
ನಾವು ನಮ್ಮ ಮನೆಯಲಿ
ಪ್ರೀತಿ ಇರಲಿ

ನೀವು ನಮ್ಮ ಮನದಲಿ
ನಾವು ನಿಮ್ಮ ಮನದಲಿ
ಪ್ರೀತಿ ಇರಲಿ

ಈ ಆಪತ್ತು ಸಮಯದಲಿ
ಸಾಮಾಜಿಕ ಅಂತರವಿರಲಿ
ಪ್ರೀತಿ ಇರಲಿ

ಈ ಯುಗಾದಿ ಹಬ್ಬದಲಿ
ಹಾರೈಸಿ ದೂರದಿಂದಲಿ
ಪ್ರೀತಿ ಇರಲಿ

by ಹರೀಶ್ ಶೆಟ್ಟಿ, ಶಿರ್ವ

Tuesday, March 24, 2020

ಬೆರಳನ್ನು ಹಿಡಿದು ನೀನು

ಈ ಕುಟುಂಬದ ನಾ ಪ್ರೀತಿಯ ಮಗಳು
ಅಣ್ಣ ಪ್ರಯತ್ನಿಸು ನನಗೆ ವಿದಾಯ ನೀಡಲು
ಈ ಕುಟುಂಬದ ನಾ ಪ್ರೀತಿಯ ಮಗಳು

ಬೆರಳನ್ನು ಹಿಡಿದು ನೀನು
ನಡೆಯಲು ಕಲಿಸಿದೆಯಲ್ಲ 
ಹೊಸ್ತಿಲು ಎತ್ತರವಾಗಿದೆ, ಇದನ್ನು ದಾಟಿಸು
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ಒಮ್ಮೆ ಕೊಯ್ದ ಪೈರು
ಪುನಃ ಬೆಳೆಯುವುದಿಲ್ಲ
ಮಗಳು ಮದುವೆಯಾದ ನಂತರ
ಪುನಃ ಹಿಂತಿರುಗುವುದಿಲ್ಲ

ಇಂತಹ ವಿದಾಯ ಇದ್ದರೆ
ದೀರ್ಘ ಅಗಲಿಕೆ ಇದ್ದರೆ
ಹೊಸ್ತಿಲು ಈ ನೋವಿನ ಸಹ ದಾಟಿಸು
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ನನ್ನ ಪ್ರೀಯರೆ...

ಹಿಮ ಕರಗುವುದು ಪುನಃ
ನನ್ನ ಪ್ರೀಯರೆ
ಬೆಳೆ ಮಾಗಿಯುವುದು ಪುನಃ
ನಿಮ್ಮ ಪಾದದಡಿಯಲಿ
ನನ್ನ ಪ್ರಾರ್ಥನೆ ನಡೆಯಲಿ
ಪ್ರಾರ್ಥನೆ ನನ್ನ ನಡೆಯಲಿ

ಬೆರಳನ್ನು ಹಿಡಿದು ನೀನು
ನಡೆಯಲು ಕಲಿಸಿದೆಯಲ್ಲ 
ಹೊಸ್ತಿಲು ಎತ್ತರವಾಗಿದೆ, ಇದನ್ನು ದಾಟಿಸು 
ಅಪ್ಪ ನಾನು ರಾಜಕುಮಾರಿ ನಿನ್ನ
ಹೃದಯದ ತುಂಡು ನಿನ್ನ
ಇನ್ನೊಂದು ಬಾರಿ ನನಗೆ ಹೊಸ್ತಿಲು ದಾಟಿಸು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ....

ಈ ಕುಟುಂಬದ ನಾ ಪ್ರೀತಿಯ ಮಗಳು
ಅಣ್ಣ ಪ್ರಯತ್ನಿಸು ನನಗೆ ವಿದಾಯ ನೀಡಲು 
ಈ ಕುಟುಂಬದ ನಾ ಪ್ರೀತಿಯ ಮಗಳು

ಹಿಂತಿರುಗಿ ನೋಡಬೇಡಿ, ಪ್ರೀಯರೆ..... ಪ್ರೀಯರೆ
ಹಿಂತಿರುಗಿ ನೋಡಬೇಡಿ, ಪ್ರೀಯರೆ...

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಸಂಗೀತ : ಶಂಕರ್ ಎಹಸಾನ್ ಲೊಯ್
ಹಾಡಿದವರು : ಶಂಕರ್ ಮಹಾದೇವನ್, ಹರ್ಷದೀಪ್ ಕೌರ್  , ವಿಭಾ ಸರಾಫ್
ಚಿತ್ರ : ರಾಜಿ

ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर

उंगली पकड़ के तूने
चलना सिखाया था ना
दहलीज़ ऊँची है ये पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो
मुड़ के ना देखो दिलबरो दिलबरो
मुड़ के ना देखो दिलबरो

फसलें जो काटी जायें
उगती नहीं हैं
बेटियाँ जो ब्याही जाएँ
मुड़ती नहीं हैं

फसलें जो काटी जायें
उगती नहीं हैं
बेटियाँ जो ब्याही जाएँ
मुड़ती नहीं हैं

ऐसी बिदाई हो तो
लंबी जुदाई हो तो
दहलीज़ दर्द की भी पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो दिलबरो
मुड़ के ना देखो दिलबरो दिलबरो
मुड़ के ना देखो दिलबरो

मेरे दिलबरो

बर्फें गलेंगी फिर से
मेरे दिलबरो
फसलें पकेंगी फिर से
तेरे पाँव के तले
मेरी दुआ चले
दुआ मेरी चले

उंगली पकड़ के तूने
चलना सिखाया था ना
दहलीज़ ऊँची है ये पार करा दे
बाबा मैं तेरी मलिका
टुकड़ा हूँ तेरे दिल का
इक बार फिर से दहलीज़
पार करा दे

मुड़ के ना देखो दिलबरो दिलबरो
मुड़ के ना देखो दिलबरो
मुड़ के ना देखो दिलबरो दिलबरो
मुड़ के ना देखो दिलबरो

ब छसे ख़ानमूज कूर
द्यु म रुखसात म्यान बोय जानो
ब छसे ख़ानमूज कूर
मुड़ के ना देखो दिलबरो दिलबरो
मुड़ के ना देखो दिलबरो
ಚಿತ್ರ ಕೃಪೆ : ಗೂಗಲ್ 

Monday, March 23, 2020

ಓ ದೇಶ, ದೇಶ ನನ್ನ

ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ
ಜೀವನ ದೀಪವಾಗಿ ಬೆಳಕಲಿ ದೇವರೇ ನನ್ನ 
ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ

ಓ ದೇಶ, ದೇಶ ನನ್ನ, ನೀನು ಅಮರವಾಗಿರು
ಓ ದೇಶ, ದೇಶ ನನ್ನ, ನೀನು ಅಮರವಾಗಿರು
ನಾನೆಲ್ಲಿಯೂ ಇರಲಿ, ನನ್ನ ಸ್ಮೃತಿಯಲ್ಲಿರು

ಓ ದೇಶ, ದೇಶ ನನ್ನ...

ನೀನೆ ನನ್ನ ಗೌರವ, ನಿನ್ನಿಂದಲೇ ನನ್ನ ಗುರುತು
ನೀನೆ ನನ್ನ ಗೌರವ, ನಿನ್ನಿಂದಲೇ ನನ್ನ ಗುರುತು
ನಾನೆಲ್ಲಿಯೂ ಹೋದರು, ನನ್ನ ಆಧಾರವಾಗಿರು

ಓ ದೇಶ, ದೇಶ ನನ್ನ...

ಬಿಡಲಾರೆ ನಾನು ನಿನಗೆ, ಯಾವುದೇ ದುಃಖ ತಾಪ ಬರಲು
ಬಿಡಲಾರೆ ನಾನು ನಿನಗೆ, ಯಾವುದೇ ದುಃಖ ತಾಪ ಬರಲು
ತ್ಯಜಿಸುವೆ ನನ್ನ ಜೀವ ನಿನಗಾಗಿ, ನೀನು ಶಾಶ್ವತವಾಗಿರು

ಓ ದೇಶ, ದೇಶ ನನ್ನ...

ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ
ಜೀವನ ದೀಪವಾಗಿ ಬೆಳಕಲಿ ದೇವರೇ ನನ್ನ 
ತುಟಿಗೆ ಪ್ರಾಥನೆಯಾಗಿ ಬರುತ್ತದೆ ಬಯಕೆ ನನ್ನ

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಹಾಡಿದವರು : ಸುನಿಧಿ ಚೌಹಾನ್, ಅರಿಜಿತ್ ಸಿಂಗ್
ಸಂಗೀತ : ಶಂಕರ್ ಎಹಸಾನ್ ಲೊಯ್
ಚಿತ್ರ : ರಾಜಿ

लब पे आती है दुआ बन के तमन्ना मेरी
ज़िंदगी शम्मा की सूरत हो खुदाया मेरी
लब पे आती है दुआ बन के तमन्ना मेरी

ऐ वतन, वतन मेरे आबाद रहे तू
ऐ वतन, वतन मेरे आबाद रहे तू
(ऐ वतन, वतन मेरे आबाद रहे तू)
मैं जहाँ रहूँ जहाँ में, याद रहे तू
(मैं जहाँ रहूँ जहाँ में, याद रहे तू)

ऐ वतन, मेरे वतन
(ऐ वतन, मेरे वतन)

तू ही मेरी मंज़िल है, पहचान तुझी से
(तू ही मेरी मंज़िल है, पहचान तुझी से)
पहुँचूँ मैं जहाँ भी, मेरी बुनियाद रहे तू
(पहुँचूँ मैं जहाँ भी, मेरी बुनियाद रहे तू)

ऐ वतन, मेरे वतन
(ऐ वतन, मेरे वतन)

तुझ पे कोई ग़म की आँच आने नहीं दूँ
(तुझ पे कोई ग़म की आँच आने नहीं दूँ)
कुरबान मेरी जान तुझ पे, शाद रहे तू
(कुरबान मेरी जान तुझ पे, शाद रहे तू)

लब पे आती है दुआ बन के तमन्ना मेरी
ज़िंदगी शम्मा की सूरत हो खुदाया मेरी
ज़िंदगी शम्मा की सूरत हो खुदाया मेरी

Sunday, March 22, 2020

ಕವಿತೆ ದಿನ


ಇಂದು ಕವಿತೆ ದಿನ ಎಂದು ನೆನಪಾಯಿತು, 
ತನ್ನಿಂತಾನೆ ಕೈ ಲೇಖನಿ ಕಡೆ ಹೋಯಿತು, 
ಎಲ್ಲಿಂದಲೋ ಮಲ್ಲಿಗೆಯ ಸುವಾಸನೆ ಬರಲಾರಂಭಿಸಿತು. 
ಹರೀಶ್ ಶೆಟ್ಟಿ, ಶಿರ್ವ


ಚಿತ್ರ ಕೃಪೆ : ಗೂಗಲ್ 

Thursday, March 19, 2020

ಕಣ್ಣ ಮುಂದೆ ಹೃದಯದ ಸನಿಹ

ಕಣ್ಣ ಮುಂದೆ
ಹೃದಯದ ಸನಿಹ
ಯಾರೋ ಇರುತ್ತಾರೆ,
ಅದು ನೀನು ..ನೀನು  ನೀನು
ಕಣ್ಣ ಮುಂದೆ.....

ನಿರಾಶೆ ಅಂದರೇನು
ಕೇಳು ನನ್ನ ಹೃದಯದಿಂದ
ಏಕಾಂಗಿ ಹಿಂತಿರುಗಿದೆ
ನಾನು ತುಂಬು ಸಭೆಯಿಂದ
ಸತ್ತೋಗುವೇನೋ ನಾನು .....
ಸತ್ತೋಗುವೇನೋ ನಾನು, ಅಗಲಿ ನಿನ್ನಿಂದ
ಕಣ್ಣ ಮುಂದೆ.....

ನೆಮ್ಮದಿ ಇಲ್ಲ ಮನ್ನಸ್ಸಿಗೆ,
ಏಕಾಂತ ಕಾಡುತ್ತದೆ
ನಿನ್ನನ್ನು ನೋಡದಿದ್ದರೆ,
ಹೃದಯ ಹೆದರುತ್ತದೆ
ಈಗ ನನ್ನನ್ನು ಬಿಟ್ಟು.....
ಈಗ ನನ್ನನ್ನು ಬಿಟ್ಟು, ದೂರ ಹೋಗದಿರು
ಕಣ್ಣ ಮುಂದೆ.....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು, ಅನುರಾಧ ಪೌಡವಾಲ್
ಚಿತ್ರ : ಆಶಿಕಿ



नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
बेताबी क्या होती है पुछो मेरे दिल से
बेताबी क्या होती है पुछो मेरे दिल से
तन्हा-तन्हा लौटा हूँ मैं तो भरी महफ़िल से
मरना जाऊं कहीं
मरना जाऊं कहीं होके तुमसे जुदा

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
तन्हाई जीने ना दे बैचैनी तडपाये
तन्हाई जीने ना दे बैचैनी तडपाये
तुमको मैं ना देखूं तो दिल मेरा घबराए
अब मुझे छोड़ के
अब मुझे छोड़ के दूर जाना नहीं

नज़र के सामने जिगर के पास
नज़र के सामने जिगर के पास
कोई रहता है वो हो तुम

नज़र के सामने जिगर के पास
नज़र के सामने जिगर के पास
कोई रहता है वो हो तुम

ಚಿತ್ರ ಕೃಪೆ : ಗೂಗಲ್ 

Wednesday, March 18, 2020

ಈಗ ನಿನ್ನ ವಿನಃ ಬದುಕುವೆ ನಾನು

ಈಗ ನಿನ್ನ ವಿನಃ ಬದುಕುವೆ ನಾನು
ವಿಷ ಜೀವನದ ಕುಡಿಯುವೆ ನಾನು
ಏನಾಯಿತು ಒಂದು ಹೃದಯ ಮುರಿದೋದರೆ
ಈಗ ನಿನ್ನ ವಿನಃ....

ನಿನ್ನ ಒಲವು ಎಂತಹ ತಿರುವು ನೀಡಿದೆ
ನಿಷ್ಠೆ ನಾನಿಟ್ಟೆ, ನೀನು ದ್ರೋಹ ಬಗೆದೆ
ನನ್ನದೇ ತಪ್ಪಿತ್ತು, ನಾನೀದೇನು ಆಶಿಸಿದೆ
ವಿಶ್ವಾಸದ್ರೋಹಿಯಿಂದ, ವಿಶ್ವಾಸ ಬಯಸಿದೆ
ನಿನಗೇನು ಗೊತ್ತು ಚಡಪಡಿಕೆ, ನೋವು ಯಾತನೆಯ
ಹೋಗು ನಿರ್ದಯಿ ಚೆಲುವೆ
ನೋಡಿದೆ ನಿನ್ನ ನಾಟಕ ಪ್ರೀತಿಯ
ಈಗ  ಅರಿತೆ ನಿಷ್ಕರುಣಿ ನಿನ್ನನ್ನು
ಈಗ ನಿನ್ನ ವಿನಃ....

ಪ್ರಿಯೆ  ಮುರಿಯುತಿದ್ದೆ ವಚನ ಪ್ರೀತಿಯ
ಒಂದು ವೇಳೆ ಗೊತ್ತಾಗುತ್ತಿದ್ದರೆ, ನಿನ್ನ ಆಶಯ
ಯಾರನ್ನು ಪ್ರೀತಿಸಿದೆ, ಎಲ್ಲಿ ಹೃದಯ ನೀಡಿದೆ ನಾನು
ಮರುಳು ನಾನು, ತಿಳಿಯಲಿಲ್ಲ ಏನೂ
ನನ್ನ ಕಣ್ಣೀರ ಮುತ್ತು,
ಕಣ್ಣಿನಿಂದ ಹರಿಯುವ ನೀರು
ನನ್ನ ತುಂಡು ಹೃದಯ,
ನಿನ್ನ ಗುರುತು ಪ್ರೀತಿಯ
ಹೇಗೆ ಮರೆಯಲಿ ನಿನ್ನ ಅನ್ಯಾಯವನ್ನು
ಈಗ ನಿನ್ನ ವಿನಃ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು
ಚಿತ್ರ : ಆಶಿಕಿ



अब तेरे बिन जी लेंगे हम

ज़हर ज़िन्दगी का पी लेंगे हम
अब तेरे बिन जी लेंगे हम
ज़हर ज़िन्दगी का पी लेंगे हम
क्या हुआ जो एक दिल टूट गया
क्या हुआ जो एक दिल टूट गया

अब तेरे बिन जी लेंगे हम
ज़हर ज़िन्दगी का पी लेंगे हम

तेरी आशिक़ी भी ये क्या रंग लायी
वफ़ा मैंने की तूने की बेवफ़ाई
मेरी भूल थी मैं ये क्या चाहता था
किसी बेवफ़ा से वफ़ा चाहता था
तू जाने क्या बेकरारी बेदर्द बेमुरवत
जा संगदिल हसीना
देखी तेरी मुहब्बत
अब मैंने जाना तुझको बेरहम

अब तेरे बिन जी लेंगे हम
ज़हर ज़िन्दगी का पी लेंगे हम

सनम तोड़ देता मुहब्बत के वादे
अगर जान जाता मैं तेरे इरादे
किसे मैंने चाहा कहाँ दिल लगाया
मैं नादान था कुछ समझ ही न पाया
मेरे आंसुओं के मोती
आँखों में बहता पानी
मेरे टूटे दिल के टुकड़े
तेरे प्यार की निशानी
कैसे मैं भूलूंगा तेरे सितम

अब तेरे बिन जी लेंगे हम
ज़हर ज़िन्दगी का पी लेंगे हम
ज़हर ज़िन्दगी का पी लेंगे हम
क्या हुआ जो एक दिल टूट गया
क्या हुआ जो एक दिल टूट गया

अब तेरे बिन जी लेंगे हम
ज़हर ज़िन्दगी का पी लेंगे हम

जी लेंगे हम.. जी लेंगे हम..
जी लेंगे हम.. जी लेंगे हम.

Tuesday, March 17, 2020

ಉಸಿರಿನ ಅಗತ್ಯವಿದೆಯೋ ಹೇಗೆ

ಉಸಿರಿನ ಅಗತ್ಯವಿದೆಯೋ ಹೇಗೆ ...
ಉಸಿರಿನ ಅಗತ್ಯವಿದೆಯೋ ಹೇಗೆ... ಜೀವನಕ್ಕಾಗಿ
ಮಾತ್ರ ಒಂದು  ಸಂಗಾತಿ ಬೇಕು....  ಪ್ರಣಯಕ್ಕಾಗಿ
ಮದ್ಯದ ಅಗತ್ಯವಿದೆಯೋ ಹೇಗೆ .....
ಮದ್ಯದ ಅಗತ್ಯವಿದೆಯೋ ಹೇಗೆ .... ಅಮಲೇರಲ್ಲಿಕ್ಕಾಗಿ
ಮಾತ್ರ ಒಂದು  ಸಂಗಾತಿ.....

ಸಮಯದ ಕೈಯಲ್ಲಿ ಎಲ್ಲರ ಭಾಗ್ಯವಿದೆ
ದರ್ಪಣ ಸುಳ್ಳಾಗಿದೆ ಸತ್ಯ ಚಿತ್ರಗಳಾಗಿದೆ
ನೋವು ಇದ್ದಲ್ಲಿಯೇ ಗೀತೆಯೂ ಇದೆ
ದಾಹ ಇದ್ದಲ್ಲಿಯೇ ಜತೆಯೂ ಇದೆ
ಯಾರಿಗೂ ತಿಳಿದಿಲ್ಲ..... ಆದರೆ
ಜೀವನದ ಇದೇ ರೀತಿಯಾಗಿದೆ
ವಾದ್ಯದ  ಅಗತ್ಯವಿದೆಯೋ ಹೇಗೆ . ......
ವಾದ್ಯದ ಅಗತ್ಯವಿದೆಯೋ ಹೇಗೆ......... ಸಂಗೀತಕ್ಕಾಗಿ
ಮಾತ್ರ ಒಂದು ಸಂಗಾತಿ.....

ತಾಣ ಸಿಕ್ಕಿದೆ ಆದರೆ ಒಂದು ಅಂತರವಿದೆ
ಸಂಗಾತಿ ಇಲ್ಲದೆ ಜೀವನ ಅಪೂರ್ಣವಾಗಿದೆ
ಎಲ್ಲಿಯೋ ಸಿಗಲಿದೆ  ಪ್ರೀತಿ ಒಲವಿನ
ಒಂಟಿಯಾಗಿ  ಹೇಗೆ  ಸಾಗಲಿದೆ ಈ ಪಯಣ
ನನ್ನ ಕನಸಿದ್ದಲ್ಲಿ ಹುಡುಕುವೆ ಅಂತಹ ನಯನ
ಚಂದ್ರನ ಅಗತ್ಯವಿದೆಯೋ ಹೇಗೆ .......
ಚಂದ್ರನ ಅಗತ್ಯವಿದೆಯೋ ಹೇಗೆ .......ಕಿರಣಕ್ಕಾಗಿ 
ಮಾತ್ರ ಒಂದು  ಸಂಗಾತಿ.....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು
ಚಿತ್ರ : ಆಶಿಕಿ



हो हो हो..

साँसों की ज़रूरत है जैसे
साँसों की ज़रूरत है जैसे ज़िन्दगी के लिए
बस एक सनम चाहिए.. आशिक़ी के लिए

जाम की ज़रूरत है जैसे
जाम की ज़रूरत है जैसे बेखुदी के लिए
हाँ एक सनम चाहिए आशिकी के लिए
बस एक सनम चाहिए आशिक़ी के लिए

वक़्त के हाथों में सबकी तकदीरें हैं
वक़्त के हाथों में सबकी तकदीरें हैं
आइना झूठा है सच्ची तस्वीरें हैं

जहाँ दर्द है वहीँ गीत है
जहाँ प्यास है वहीँ मीत है
कोई ना जाने मगर जीने की यही रीत है

साज़ की जरुरत है जैसे
साज़ की जरुरत है जैसे मोसिक़ी के लिए
बस एक सनम चाहिए आशिक़ी के लिए
हाँ एक सनम चाहिए आशिक़ी के लिए

हो हो हो..
मंजिलें हासिल हैं फिर भी एक दुरी है
मंजिलें हासिल हैं फिर भी एक दुरी है
बिना हमराही के ज़िन्दगी अधूरी है
मिलेगी कहीं कोई रहगुजर
तन्हा कटेगा कैसे ये सफ़र
मेरे सपने हो जहाँ
ढून्ढूँ मैं ऐसी नज़र
चाँद की जरुरत है जैसे
चाँद की जरुरत है जैसे चांदनी के लिए
बस एक सनम चाहिए आशिक़ी के लिए

साँसों की ज़रूरत है जैसे
साँसों की ज़रूरत है जैसे ज़िन्दगी के लिए
बस एक सनम चाहिए.. आशिक़ी के लिए
बस एक सनम चाहिए.. आशिक़ी के लिए
आशिक़ी के लिए.. आशिक़ी के लिए..
आशिक़ी के लिए..

ಚಿತ್ರ ಕೃಪೆ :ಗೂಗಲ್ 

Monday, March 16, 2020

ನಾನು ಪ್ರಪಂಚ ಮರೆತೋಗುವೆ

ನಾನು ಪ್ರಪಂಚ ಮರೆತೋಗುವೆ
ನಿನ್ನ ಪ್ರೀತಿಯಲಿ
ಈ  ಜಗ ವೈರಿಯಾದರೂ
ನನ್ನನ್ನು ಮರೆಯದಿರು
ನಾನು ನನ್ನನ್ನೇ ಮುಗಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ

ನಾನು ಪ್ರಪಂಚ ಮರೆತೋಗುವೆ
ನಿನ್ನ ಪ್ರೀತಿಯಲಿ
ನಿನ್ನ ಜತೆ ಬಿಟ್ಟೋಯಿತಂದರೆ
ಭರವಸೆ ಮುರಿದೋಯಿತಂದರೆ
ನಾನು ನನ್ನನ್ನೇ ಮುಗಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ

ನಾನು ಪ್ರಪಂಚ ಮರೆತೋಗುವೆ ....

ನನ್ನ ಉಸಿರು, ಸುಗಂಧ ನಿನ್ನ
ನನ್ನ ಹೃದಯದಲಿ ಮಿಡಿತ ನಿನ್ನ
ನನ್ನ ಸಭೆ  ಮಾತು ನಿನ್ನ
ನನ್ನ ಕಂಗಳು ಕನ್ನಡಿ ನಿನ್ನ
ನಿನ್ನ ವಿನಃ ನಾನೇನಿಲ್ಲ

ನಾನೆಲ್ಲ ದುಃಖ ಸಹಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ
ನಿನ್ನ ಜತೆ ಬಿಟ್ಟೋಯಿತಂದರೆ
ಭರವಸೆ ಮುರಿದೋಯಿತಂದರೆ
ನಾನು ನನ್ನನ್ನೇ ಮುಗಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ

ನಾನು ಪ್ರಪಂಚ ಮರೆತೋಗುವೆ ....

ಬಾ ಅಪ್ಪಿಕೊಳ್ಳು ನನ್ನನ್ನು
ನನಗಿದೆ ನಿನ್ನಿಂದ ಮೋಹ
ನಿನ್ನಿಂದ ಸಿಗಲು ನನ್ನನ್ನು
ನಿಲ್ಲಿಸಬಲ್ಲ ಈ  ಲೋಕ

ಬಿಡಲಾರೆ ನಿನ್ನ ಜತೆಯನ್ನು
ಬಿಡಲಾರೆ ನಿನ್ನ ಜತೆಯನ್ನು
ನಾನೆಲ್ಲವನ್ನು ತ್ಯಜಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ

ಈ  ಜಗ ವೈರಿಯಾದರೂ
ನನ್ನನ್ನು ಮರೆಯದಿರು
ನಾನು ನನ್ನನ್ನೇ ಮುಗಿಸಿಕೊಳ್ಳುವೆ
ನಿನ್ನ ಪ್ರೀತಿಯಲಿ

ನಾನು ಪ್ರಪಂಚ ಮರೆತೋಗುವೆ ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮೂಲ : ಸಮೀರ್
ಸಂಗೀತ : ನದೀಮ್ ಶ್ರವಣ್
ಹಾಡಿದವರು : ಕುಮಾರ್ ಸಾನು, ಅನುರಾಧ ಪೌಡವಾಲ್
ಚಿತ್ರ : ಆಶಿಕಿ

मैं दुनिया भुला दूंगा तेरी चाहत में
मैं दुनिया भुला दूंगा तेरी चाहत में
ओ दुश्मन ज़माना मुझे ना भुलाना
मैं ख़ुद को मिटा दूंगा तेरी चाहत में

मैं दुनिया भुला दूंगी तेरी चाहत में
मैं दुनिया भुला दूंगी तेरी चाहत में
तेरा साथ छुटा ये वादा जो टुटा
मैं खुद को मिटा दूंगी तेरी चाहत में

मैं दुनिया भुला दूंगा तेरी चाहत में..
मेरी साँसे, तेरी खुशबु
मेरे दिल में तेरी धड़कन
मेरी महफ़िल, तेरी बातें
मेरी आँखें, तेरा दर्पण
बिन तेरे कुछ भी नहीं मैं
बिन तेरे कुछ भी नहीं मैं

मैं हर गम उठा लुंगी तेरी चाहत में
तेरा साथ छुटा ये वादा जो टुटा
मैं खुद को मिटा दूंगी तेरी चाहत में

मैं दुनिया भुला दूंगा तेरी चाहत में
सीने से लगजा तू
मैं हूँ तेरा दीवाना
मुझे तुझसे मिलने से
रोकेगा क्या ज़माना

छोडूंगा ना साथ तेरा
छोडूंगा ना साथ तेरा
मैं सब कुछ लुटा दूंगा तेरी चाहत में

ओ दुश्मन ज़माना मुझे ना भुलाना
मैं ख़ुद को मिटा दूंगा, तेरी चाहत में

मैं दुनिया भुला दूंगी तेरी चाहत में
तेरा साथ छुटा ये वादा जो टुटा
मैं खुद को मिटा दूंगी तेरी चाहत में

मैं दुनिया भुला दूंगा तेरी चाहत में
तेरी चाहत में
हाँ तेरी चाहत में
ಚಿತ್ರ ಕೃಪೆ : ಗೂಗಲ್ 

Sunday, March 15, 2020

ವೃದ್ಧಾಶ್ರಮ ೨೫


ರಜೆಯಲ್ಲಿ ಅಲ್ಲಿ ಇಲ್ಲಿ ಅಂತ ರಮೇಶನವರ ರಜೆ ಮುಗಿಯುತ್ತ ಬಂತು, ಅಮ್ಮನ ಆರೋಗ್ಯ ಅವಸ್ಥೆ ಈಗಲೂ ಹಾಗೆಯೇ ಇತ್ತು, ಹೇಚ್ಛೆನು ಬದಲಾವಣೆ ಕಂಡು ಬರಲಿಲ್ಲ, ಕೇವಲ ಹೇಳಿದರೆ  ಸ್ವಲ್ಪ ಸ್ವಲ್ಪ ನಡೆಯುತ್ತಿದ್ದರು, ಇಲ್ಲಾದರೆ ಉದಾಸೀನದಿಂದ ಹಾಸಿಗೆಯಿಂದ ಏಳುತ್ತಿರಲಿಲ್ಲ, ಯಾವುದೇ ಹೋಮ್ ನರ್ಸ್ ಸಹ ಹೆಚ್ಚು ದಿನ ಇರುತ್ತಿರಲಿಲ್ಲ, ಒಂದೆರಡು ತಿಂಗಳು ಇದ್ದು ಹೋದ ನಂತರ ಬರುತ್ತಿರಲಿಲ್ಲ, ಆಗ ಮನೆಯ ಕೆಲಸದ ಮಧ್ಯೆ ವಿಜಯ ಮಾಮ ಹಾಗು ಅಮ್ಮನ ಕೆಲಸ ಮಾಡಲು ಚಿಕ್ಕಮನವರಿಗೆ ತುಂಬಾ ಕಷ್ಟವಾಗುತ್ತಿತ್ತು, ಸ್ವಾಭಾವಿಕವಾಗಿ ಅವರ ತಾಳ್ಮೆ ಕುಸಿದು ಅವರು ಕಿರಿಕಿರಿ ಮಾಡುತ್ತಿದ್ದರು, ಇದರ ಬಗ್ಗೆ ಅವರು ರಮೇಶನಿಗೆ ಏನಾದರೂ ಅಮ್ಮನ ಕಾಯಂ ವ್ಯವಸ್ಥೆ ಮಾಡಲು ಹೇಳುತ್ತಿದ್ದರು, ರಮೇಶನಿಗೆ ಇದೆಲ್ಲ ಸಹಜ ಅನಿಸಿದರೂ ಏನು ಮಾಡುವುದು ಎಂದು ಅರ್ಥವಾಗುತ್ತಿರಲಿಲ್ಲ.

ಹೇಗೋ ರಮೇಶನ ರಜೆ ಮುಗಿದು ವಿದೇಶ ಹೋಗುವ ಸಮಯ ಬಂತು, ಚಿಕ್ಕಮನವರು ಆಗ ಸಹ ರಮೇಶನಿಗೆ ಏನಾದರೂ ಅಮ್ಮನ ವ್ಯವಸ್ಥೆ ಮಾಡಲು ಹೇಳಿದರು, ಕಡೆಗೆ ರಮೇಶ ಸುಮಾ ಜೊತೆ ಚರ್ಚೆ ಮಾಡಿ ಅಮ್ಮನನ್ನು ಸ್ವಲ್ಪ ದಿವಸದ ನಂತರ ವಿದೇಶ ಕರೆದು ಕೊಂಡು ಹೋಗುವ ನಿರ್ಣಯ ಮಾಡಿದ, ಅದಕ್ಕೆ ರಮೇಶ ದಿರೇಶನಿಗೆ ಹಣ ಕೊಟ್ಟು ಅಮ್ಮನ ಬೇಗನೆ ಪಾಸ್ ಪೋರ್ಟ್ ಮಾಡಲು ಹೇಳಿದ ಹಾಗು ಪಾಸ್ ಪೋರ್ಟ್ ಮಾಡಿದ ನಂತರ ತಿಳಿಸಲಿಕ್ಕೆ ಹೇಳಿದ, ರಮೇಶ ಚಿಕ್ಕಮ್ಮನವರಿಗೆ ಸಹ ಈ ಬಗ್ಗೆ ತಿಳಿಸಿ ಸ್ವಲ್ಪ ಸಮಯ ಅಮ್ಮನನ್ನು ನೋಡಲು ಹಾಗು ಧೈರ್ಯ ಇಡಲು ಹೇಳಿದ.

ರಜೆ ಮುಗಿಯುತ್ತಲೇ ರಮೇಶ, ಸುಮಾ ಆತೀಶನ ಜೊತೆ ವಿದೇಶ ಹಿಂತಿರುಗಿದರು ಹಾಗು ರಮೇಶ ತನ್ನ ಕೆಲಸ ಕಾರ್ಯದಲ್ಲಿ ಹಾಗು ಸುಮಾ ತನ್ನ ಗೃಹಸ್ಥಿಯಲ್ಲಿ ಮುಳುಗಿದಳು. 

ಸ್ವಲ್ಪ ದಿವಸದ ನಂತರ ರಮೇಶ ಊರಿಗೆ ಫೋನ್ ಮಾಡಿದಾಗ ಆಶಾ ಚಿಕ್ಕಮ ಅಮ್ಮನನ್ನು ನೋಡಲು ಕೆಲವು ದಿವಸದಿಂದ ಹೋಮ್ ನರ್ಸ್ ಇಲ್ಲವೆಂದು  ಹಾಗು ಅವರಿಗೆ ತುಂಬಾ ಕಷ್ಟ ಆಗುತ್ತಿದೆ ಎಂದು ತಿಳಿಸಿದರು, ರಮೇಶ ದಿರೇಶನ ಬಗ್ಗೆ ಕೇಳಿದಾಗ ಅವರು ದಿರೇಶನನ್ನು ದೂರಿ "ಅವನೆಲ್ಲಿ ಬರುತ್ತಾನೆ, ಕೆಲವು ದಿನದಿಂದ ಅವನ ಸುದ್ದಿಯೇ  ಇಲ್ಲ" ಎಂದು  ಅವನ ಬಗ್ಗೆ ಕೆಲವು ದೂರು ನೀಡಿದ್ದರು. 

ರಮೇಶ ಕೂಡಲೇ ದಿರೇಶನಿಗೆ ಫೋನ್ ಮಾಡಿದ "ಏನು ಏನಾಯಿತು ಅಮ್ಮನ ಪಾಸ್ ಪೋರ್ಟ್"?

ದಿರೇಶ  "ಏಜೆಂಟನಿಗೆ ಪೇಪರ್ ಎಲ್ಲ ಕೊಟ್ಟಿದ್ದೇನೆ, ಇನ್ನು ಕೆಲವು ದಾಖಲೆ ಮಾಡಿಸ ಬೇಕಂತ ಹೇಳಿದ್ದಾನೆ, ನೋಡುವ ನಾನು ಅವನ ಹಿಂದೆ ಬಿದ್ದಿದ್ದೇನೆ".

ರಮೇಶ "ನೀನೇನು ಮನೆಗೆ ಹೋಗಲೇ ಇಲ್ಲವ ಅಮ್ಮನನ್ನು ನೋಡಲು"?

ದಿರೇಶ "ಕಳೆದ ತಿಂಗಳು ಹೋಗಿದ್ದೆ, ಏನು ಏನಾಯಿತು"?

ರಮೇಶ "ಅಲ್ಲ ಚಿಕ್ಕಮ್ಮ ಹೋಮ್ ನರ್ಸ್ ಇಲ್ಲ ಅಂತ ಕಿರಿಕಿರಿ ಮಾಡುತ್ತಿದ್ದರು, ನೀನು ಪ್ರತಿ ವಾರ ಹೋಗಿ ಸ್ವಲ್ಪ ನೋಡಲ್ಲ, ಇಲ್ಲಾದರೆ ಹೋಮ್ ವ್ಯವಸ್ಥೆಯಾದರೂ  ಮಾಡು".

ದಿರೇಶ ಸಿಡುಕಿನಿಂದ "ಪ್ರತಿ ವಾರ ಹೋಗಲು ಇಲ್ಲಿ ಕೆಲಸದಲ್ಲಿ ನನಗೆ ರಜೆ ಯಾರು ಕೊಡುತ್ತಾರೆ ಮತ್ತೆ ಹೋಮ್ ನರ್ಸ್ ಸಿಕ್ಕಿದರು ಅವರಿಗೆ  ಹೆಚ್ಚು ದಿವಸ ನಮ್ಮ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಅಲ್ಲಿ ಅಮ್ಮನ ಕೆಲಸದಿಂದ ಹೆಚ್ಚು ಚಿಕ್ಕಮನವರು ಮನೆ ಕೆಲಸ ಹೆಚ್ಚು ಮಾಡಿಸುತ್ತಾರೆ, ಯಾರು ಮಾಡುತ್ತಾರೆ ಕೆಲಸ ಹಾಗೆ, ಅದಕ್ಕೆ ಓಡಿ ಹೋಗುತ್ತಾರೆ".

ರಮೇಶ "ಹಾಗಾದರೆ ಹೀಗೆ ಮಾಡು ಇನ್ನು ಸ್ವಲ್ಪ ದಿವಸ ತಾನೇ, ಹೇಗೂ ನಾನು ಅಮ್ಮನನ್ನು ವಿದೇಶ ಕರೆದು ಕೊಂಡು ಹೋಗುತ್ತಿದ್ದೇನೆ, ನಿನಗೆ ಸಹ ಅವರ ಪಾಸ್ ಪೋರ್ಟ್ ಮಾಡಲು ಕೆಲಸ ಇದೆ, ನೀನು ಸ್ವಲ್ಪ ದಿವಸ ಕೆಲಸಕ್ಕೆ  ರಜೆ ಮಾಡಿ  ಅಮ್ಮನನ್ನು ನೋಡು, ಹೋಮ್ ನರ್ಸಿಗೆ ಕೊಡುವ ಸಂಬಳ ನೀನು ತೆಗೆದುಕೊಳ್ಳು, ಇಲ್ಲಿ ಸಹ ನಿನಗೆ ಎಷ್ಟು ಸಂಬಳ,  ಅಷ್ಟೇ ತಾನೇ ಸಿಗುವುದು".

ದಿರೇಶ ಸ್ವಲ್ಪ ಯೋಚಿಸಿ "ಹಾಗೆ ಹೇಳುತ್ತೀಯಾ".

ರಮೇಶ "ನೋಡು, ಇದರ ನಂತರ  ಚಿಕ್ಕಮ್ಮನವರ ಕಿರಿಕಿರಿ ಸಹ ಇರುವುದಿಲ್ಲ".

ದಿರೇಶ "ಓ ಕೆ ಹಾಗಾದರೆ, ನಾನು ಇವತ್ತು ಸೇಠ್ ಬಂದ ನಂತರ ಅವರತ್ತಿರ ರಜೆ ಕೇಳಿ ಮನೆಗೆ ಹೋಗುತ್ತೇನೆ, ಆದರೆ ನೀನು ಆಶಾ ಚಿಕ್ಕಮನಿಗೆ ಹೇಳು ಹೋಮ್ ನರ್ಸಿನ ಹಣ ನನಗೆ ಕೊಡುಬೇಕಾಂತ".

ರಮೇಶ "ಅದು ಹೇಳುತ್ತೇನೆ, ನೀನು ಆದಷ್ಟು ಬೇಗ  ಹೋಗು". 

ದಿರೇಶ : ಓ ಕೆ "ಎಂದು ಫೋನ್ ಇಟ್ಟ.

ಅಮ್ಮನ ಪಾಸ್ ಪೋರ್ಟ್ ಮಾಡಲು  ದಿರೇಶ ತುಂಬಾ ಓಡಾಡಿದ, ಆದರೆ ಆ ಪೇಪರ್ ಈ ದಾಖಲೆ ಎಂದು ತುಂಬಾ ಸಮಯ ಕಳೆದೋಯ್ತು, ಮೇಲಿಂದ ಈ ಮಧ್ಯೆ ವಿಕ್ರಮ ಮಾಮ ಹಾಗು ದಿನಕರ ಮಾಮ ಊರಿನ ಮನೆ ದುರಸ್ತಿ ಮಾಡುವ ನಿರ್ಣಯ ತೆಗೆದುಕೊಂಡರು ಹಾಗು ಕುಟುಂಬದ ಎಲ್ಲ ಸದಸ್ಯರಿಂದ ಹಣ ಒಟ್ಟು ಮಾಡಿ ದುರಸ್ತಿ ಕಾರ್ಯ ಶುರು ಮಾಡಿದರು, ರಮೇಶ ಸಹ ಈ ಕಾರ್ಯಕ್ಕೆ ತನ್ನ ಕೊಡುಗೆ ನೀಡಿ ಸಹಕರಿಸಿದ, ದುರಸ್ತಿ ಕಾರ್ಯ ನಡೆಯುವಾಗ ಅಮ್ಮನಿಗೆ ಹಾಗು ವಿಕ್ರಮ ಮಾಮನವರಿಗೆ ತುಂಬಾ ಕಷ್ಟ ಎದುರಿಸ ಬೇಕಾಯಿತು, ಅವರ ಕೋಣೆ ದುರಸ್ತಿ ಆಗುವ ತನಕ ಅವರ ಮಂಚ ಅಂಗಳದಲ್ಲಿ ಹಾಕಲಾಯಿತು, ಈಗ ಅಮ್ಮನನ್ನು ನೋಡಲು ಹೋಮ್ ನರ್ಸ್ ಇರಲಿಲ್ಲ, ದಿರೇಶ ಅವರ ಚಾಕರಿ ಮಾಡುತ್ತಿದ್ದ, ಆದರೆ ಕೇವಲ ಹೆಸರಿಗೆ ಮಾತ್ರ,  ಹೆಚ್ಚು ಕೆಲಸ ಚಿಕ್ಕಮ್ಮನವರಿಗೆ ಆಗುತ್ತಿತ್ತು ಹಾಗು ಈ ಬಗ್ಗೆ ಚಿಕ್ಕಮ್ಮನವರು ರಮೇಶನತ್ತಿರ ದಿರೇಶನ ದೂರು ಮಾಡುತ್ತಲೇ ಇದ್ದರು. 

ಸಮಯ ತನ್ನದೇ ವೇಗದಿಂದ ಓಡುತ್ತಿತ್ತು, ಸಮಯ  ದೊಡ್ಡ ವ್ಯಾಪಾರಿ, ಇದು ಪ್ರತಿ ಕ್ಷಣ ನಮ್ಮ ಜೀವನದೊಂದಿಗೆ ಆಡುತ್ತಿರುತ್ತದೆ, ಸಮಯ ಸಮಯದಲ್ಲಿ ನಮಗೆ ಸಿಗುವ ಮೋಸದಿಂದಲೇ ಹಾಗು ನಮ್ಮನ್ನು ಮುಗ್ಗರಿಸಿ ಬೀಳಿಸುವುದರಿಂದಲೇ  ಯಾರು ನಮ್ಮವರು, ಯಾರು ಬೇರಯವರು, ಯಾರು ಒಳ್ಳೆಯವರು, ಯಾರು ಕೆಟ್ಟವರೆಂದು  ತಿಳಿಯುತ್ತದೆ, ಸಮಯ ನಮಗೆ ಕಾಣುವುದಿಲ್ಲ ಆದರೆ ನಮಗೆ ಬಹಳಷ್ಟು ತೋರಿಸಿ ಕೊಡುತ್ತದೆ.  

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ 

ಚಿತ್ರ ಕೃಪೆ : ಗೂಗಲ್ 

Saturday, March 14, 2020

ವೃದ್ಧಾಶ್ರಮ ೨೪

ದಿರೇಶ ಅಮ್ಮನಿಗೆ ಸಿಕ್ಕಿದ ಹಣದ ಪಾಲಿಗಾಗಿ ರಮೇಶನ ಹಿಂದೆ ಬಿದ್ದಿದ್ದ, ರಮೇಶ ಅವನಿಗೆ ನೇಮ ಪೂಜೆ ಆಗುವ ತನಕ ಸ್ವಲ್ಪ ತಾಳ್ಮೆ ಇಡಲು ಹೇಳಿದ.

ಮನೆಯಲ್ಲಿ ನೇಮ ಪೂಜೆ ಮುಗಿದ ನಂತರ ಕ್ರಮೇಣ ಪರಿವಾರದ ಹೆಚ್ಚಿನಂಶ ಜನ ಹಿಂತಿರುಗಿದರು. 

ಮೋನು ಅಮ್ಮನಿಂದ ಒಂದೂವರೆ ಲಕ್ಷ ತೆಗೊಂಡ ವಿಷಯ ರಮೇಶನಿಗೆ ಈಗಲೂ ಪೀಡಿಸುತ್ತಿತ್ತು, ಅವನಿಂದ ಕೇಳಿಯೇ ಬಿಡೋಣಯೆಂದು ರಮೇಶ ಮೋನುನಿಗೆ ಕರೆದು "ಮೋನು ನೀನು ಅಮ್ಮನಿಂದ ಹಣ ತೆಗೊಂಡಿದ್ದೀಯ"? ಎಂದು ಕೇಳಿದ

ಮೋನು "ಹೌದು".

ರಮೇಶ "ನಿನಗೆ ತಿಳಿದಿದೆಯಲ್ಲ ಅವರಿಗೆ ಸೌಖ್ಯವಿಲ್ಲ ಅಂತ, ಅವರಿಂದ ಹಣ ತೆಗೊಂಡದ್ದು ಸರಿಯ"?

ಮೋನು "ಸರಿ ತಪ್ಪು ನನಗೆ ತಿಳಿದಿಲ್ಲ, ಅವರತ್ತಿರ ಹಣ ಇತ್ತು,  ನನಗೆ ಅರ್ಜೆಂಟ್ ಹಣ ಬೇಕಿತ್ತು, ನಾನು ತೆಗೊಂಡೆ".

ರಮೇಶ "ಆದರೆ ನೀನೊಂದು ಸಲ ನನ್ನತ್ರ ಕೇಳಬೇಕಿತ್ತೇ".  

ಮೋನು "ಇದರಲ್ಲಿ ನಿಮ್ಮತ್ತಿರ ಏನು ಕೇಳುವುದು, ನಾನು ನನ್ನ ದೊಡ್ಡಮ್ಮನಿಂದ ಅವರ  ಹಣ ತೆಗೊಂಡದ್ದು, ನಿಮ್ಮಿಂದ ನಿಮ್ಮ ಹಣ ತೆಗೊಂಡದ್ದು ಅಲ್ಲ, ಮತ್ತೆ ಹೇಗೆ ತೆಗೊಂಡಿದ್ದೆನೋ ಹಾಗೆಯೇ ಅವರಿಗೆ  ವಾಪಾಸ್ ಕೊಡುವೆ" ಎಂದು ಕೋಪದಿಂದ ಉತ್ತರಿಸಿ ಅಲ್ಲಿಂದ ಹೊರಟುಹೋದ.

ಇದಕ್ಕೆ ರಮೇಶ ಏನು ಉತ್ತರಿಸಲಿಲ್ಲ, ಮೋನುನ ಕುಪಿತ ಸ್ವಭಾವ ಅರಿತ  ರಮೇಶ  ಇನ್ನು ಇವನಿಗೆ ಏನು ಕೇಳಿ ಪ್ರಯೋಜನವಿಲ್ಲವೆಂದು ತಿಳಿದು ಮೌನ ಧರಿಸಿದ, ಅಲ್ಲೇ ಇದ್ದ ಉಷಾ ಚಿಕ್ಕಮ್ಮ "ಅವನು ಹಿಂತಿರುಗಿ ಕೊಡುತ್ತಾನೆ ರಮೇಶ, ನೀನು ಚಿಂತಿಸ ಬೇಡ"ಎಂದು ಹೇಳಿದರು.   

ರಮೇಶ ಅವರನ್ನು ನೋಡಿ ನಿಟ್ಟುಸಿರು ಎಳೆದ, ಅವನಿಗೆ ಮೋನು ಸೌಖ್ಯವಿಲ್ಲದ ಅಮ್ಮನಿಂದ ಹಣ ತೆಗೊಂಡದ್ದು ಸರಿ ಅನಿಸಲಿಲ್ಲ, ಆದರೆ ಮಾತನ್ನು ಬೆಳೆಸಿ ಏನು ಪ್ರಯೋಜನ ಎಂದು ಸುಮ್ಮನಾಗಿದ್ದ. 

ರಮೇಶನಿಗೆ ಹಣ ಅಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತು ಸುಳ್ಳಲ್ಲ ಎಂದು ಅನಿಸಿತು, ಈ ಜಗತ್ತಿನಲ್ಲಿ ಎಲ್ಲದರಲ್ಲೂ ಪ್ರಕೃತಿಯ ಸಮತೋಲನವಿದೆ, ರಾತ್ರಿಯ ನಂತರ ಹಗಲು, ಬೇಸಿಗೆಯ ನಂತರ ಶೀತ, ಸೂರ್ಯನ ನೆರಳು, ಮರದ ಸಸ್ಯಗಳು, ನದಿ ಕೊಳಗಳು, ಪ್ರಾಣಿ,  ಪರ್ವತಗಳು, ಎಲ್ಲದರಲ್ಲೂ ಪ್ರಕೃತಿ ತನ್ನ ಸಮತೋಲನವನ್ನು ಉಳಿಸಿಕೊಳ್ಳುತ್ತದೆ, ಆದರೆ  ಮನುಷ್ಯ ಮಾತ್ರ ಎಲ್ಲವನ್ನೂ ಹಣದ ಆಧಾರದ ಮೇಲೆ ಪಡೆಯಲು ಬಯಸುತ್ತಾನೆ, ಅದನ್ನು ಹೇಗೆ ಪಡೆಯಬೇಕು, ಎಲ್ಲಿಂದ ಪಡೆಯಬೇಕು, ಯಾರಿಂದ ಪಡೆಯಬೇಕು ಎಂಬ ಗೋಚರ ಅವನಿಗೆ ಇರುವುದಿಲ್ಲ, ಒಟ್ಟಾರೆ ಅವನ ಕೆಲಸ ಆಗಬೇಕು, ಆದರೆ  ಹಣದಿಂದ ನಾವು ನಮಗೆ ಬೇಕಾದುದನ್ನೆಲ್ಲ ಖರೀದಿಸಬಹುದು, ಆದರೆ ಈ ಹಣದಿಂದ ನಾವು ಎಂದಿಗೂ ಮನಸ್ಸಿನ ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಮಾತು ಸಹ ಸತ್ಯವೆಂದು ಮರೆಯಬಾರದು.  

ಮಾರನೇ ದಿನ ಬೆಳಿಗ್ಗೆ ದಿರೇಶನಿಗೆ ಅವನ ಪಾಲಿನ ಹಣ ತೆಗೆಯಲು ರಮೇಶ ಮತ್ತು ದಿರೇಶ ಅಮ್ಮನ ಬ್ಯಾಂಕ್ ಪಾಸ್ ಬುಕ್ ಹಾಗು ಚೆಕ್ಕು ಬುಕ್ ತೆಗೆದು  ಚೇಕಲ್ಲಿ ಅಮ್ಮನಿಗೆ ಸಹಿ ಮಾಡಲು ಆಗದ ಕಾರಣ ಅಮ್ಮನ ಹೆಬ್ಬೆಟ್ಟು ಹಾಕಿಸಿ ಬ್ಯಾಂಕಿಂಗೆ ಹೋದರು ಆದರೆ ಅಲ್ಲಿ ಅಕೌಂಟಲ್ಲಿ ಅವರ ಸಹಿ ಇದ್ದ ಕಾರಣ ಬ್ಯಾಂಕಲ್ಲಿ ಆ ಚೆಕ್ಕು ಸ್ವೀಕರಿಸಲು ಅವರು ನಿರಾಕರಿಸಿದರು, ಅವರಿಂದ ಸಹಿ ಮಾಡಲು ಸಾಧ್ಯವಿಲ್ಲ ಅದಕ್ಕೆ ಹೆಬ್ಬೆಟ್ಟು ತೆಗೊಂಡದ್ದು ಎಂದು ರಮೇಶ ಮತ್ತು ದಿರೇಶ ಎಷ್ಟು ಹೇಳಿದರೂ ಅವರು ಕೇಳಲಿಲ್ಲ, ಕೊನೆಗೆ ಅಮ್ಮ ಬ್ಯಾಂಕಿಗೆ ಬಂದು ಅವರ ಎದುರು ಹೆಬ್ಬೆಟ್ಟು ಹಾಕಿದರೆ ಸ್ವೀಕರಿಸುತ್ತೇವೆ ಮತ್ತು ಡಾಕ್ಟರ್ ರಿಪೋರ್ಟ್ ಕಾಪಿ ಸಹ ಕೊಡ ಬೇಕೆಂದು  ಹೇಳಿದರು.  

ಬ್ಯಾಂಕಿಂದ ಹೊರಗೆ ಬಂದು ರಮೇಶ ದಿರೇಶನನ್ನು ಮನೆಗೆ ಹೋಗಿ ಅಮ್ಮನನ್ನು ರಿಕ್ಷಾದಲ್ಲಿ ಕರೆದುಕೊಂಡು ಬರಲು ಹಾಗು ಡಾಕ್ಟರ್ ರಿಪೋರ್ಟ್ ಸಹ ತರಲು ಹೇಳಿದ, ಸ್ವಲ್ಪ ಹೊತ್ತು ನಂತರ ದಿರೇಶ ಅಮ್ಮನನ್ನು ರಿಕ್ಷಾದಲ್ಲಿ ಬ್ಯಾಂಕಿಂಗೆ ಕರೆದು ಕೊಂಡು ಬಂದ, ಆದರೆ ಬ್ಯಾಂಕ್ ಮೆಟ್ಟಿಲು ಹತ್ತಲು ಅಮ್ಮನಿಂದ ಸಾಧ್ಯವಾಗದ ಕಾರಣ ರಮೇಶ ಬ್ಯಾಂಕ್  ಮ್ಯಾನೇಜರಿಗೆ ವಿನಂತಿ ಮಾಡಿ ಬ್ಯಾಂಕ್ ಆಫೀಸರ್ ಜೊತೆ ಹೊರಗೆ ರಿಕ್ಷಾದಲ್ಲಿಗೆ ಬಂದು ಅವರ ಹೆಬ್ಬೆಟ್ಟು ತೆಗೊಂಡರು ಹಾಗು ಡಾಕ್ಟರ್ ರಿಪೋರ್ಟ್ ಕಾಪಿ ಮಾಡಿ ತರಲು ಹೇಳಿದರು, ದಿರೇಶ ಜೆರಾಕ್ಸ್ ಅಂಗಡಿ ಹೋಗಿ ಡಾಕ್ಟರ್ ರಿಪೋರ್ಟ್ ಕಾಪಿ  ತಂದು ಕೊಟ್ಟ ನಂತರ ಅವರಿಗೆ ಹಣ ಸಿಕ್ಕಿತು.  

ಹಣ ಸಿಕ್ಕಿದ ನಂತರ ರಮೇಶ ಮ್ಯಾನೇಜರ್ ಕ್ಯಾಬಿನಿಗೆ ಹೋಗಿ ಅವರಿಗೆ ಧನ್ಯವಾದ ಸಲ್ಲಿಸಿದ, ಅಮ್ಮನ ಕಷ್ಟ ಅರಿತ ಮ್ಯಾನೇಜರ್ ಇನ್ನು ಮುಂದೆ ಸಹ ನಿಮಗೆ ಬ್ಯಾಂಕ್ ವ್ಯವಹಾರ ಮಾಡಲು ಅಮ್ಮನಿಗೆ ಕರೆದುಕೊಂಡು ಬರುವುದುದಕ್ಕೆ ಕಷ್ಟ ಆಗಬಹುದು ಅದಕ್ಕೆ ಮುಂದೆ ವ್ಯವಹಾರ ಮಾಡಲು ಈ ಖಾತೆಯಲ್ಲಿ ನೀವು ನಿಮ್ಮ ಹೆಸರು ನೋಂದಿಸಿಕೊಳ್ಳಿ ಹಾಗು ನಿಮ್ಮ ಡಾಕ್ಯುಮೆಂಟ್ಸ್ ಕೊಡಿ ಎಂದು ಒಂದು ಫಾರಂ ತೆಗೆದು ಕೊಟ್ಟರು, ರಮೇಶ ಅದಕ್ಕೆ ಒಪ್ಪಿಗೆ ನೀಡಿ ಫಾರಂ ತುಂಬಿಸಿ ಅದರಲ್ಲಿ ತನ್ನ ಫೋಟೋ ಅಂಟಿಸಿ  ಸಹಿ ಮಾಡಿ ಕೊಟ್ಟ, ಬ್ಯಾಂಕ್ ಮ್ಯಾನೇಜರ್ ಆಫೀಸರನ್ನು ಕರೆದು ಆ ಫಾರಂ ಕೊಟ್ಟು ಅದರಲ್ಲಿ  ಅಮ್ಮನ ಹೆಬ್ಬೆಟ್ಟು ಹಾಕಿ ತರಲು ಹೇಳಿದರು, ಆಫೀಸರ್ ದಿರೇಶನೊಟ್ಟಿಗೆ ರಿಕ್ಷಾದಲ್ಲಿದ್ದ ಅಮ್ಮನಲ್ಲಿಗೆ ಹೋಗಿ ಹೆಬ್ಬೆಟ್ಟು ಹಾಕಿ ತಂದರು, ರಮೇಶ ದಿರೇಶನಿಗೆ ಅವನ ಪಾನ್ ಕಾರ್ಡ ಕಾಪಿ ತರಲು ಹೇಳಿದ, ಎಲ್ಲ ಕಾರ್ಯ ವಿಧಾನ ಮುಗಿದ ನಂತರ ಅವರು ಇನ್ನೊಂದು ಸಲ ಮ್ಯಾನೇಜರಿಗೆ  ಧನ್ಯವಾದ ಸಲ್ಲಿಸಿ ಅಲ್ಲಿಂದ ತೆರಳಿದರು. 

ಹಿಂತಿರುಗಿ ಮನೆಗೆ ಬಂದು ತೆಗೆದ ಹಣದಿಂದ  ರಮೇಶ ಅದರಿಂದ ೭೫ ಸಾವಿರ ದಿರೇಶನಿಗೆ ಕೊಟ್ಟು ಮಿಕ್ಕಿದ ೭೫ ಸಾವಿರ ಸುನೀತಾಳಿಗೆ ಕೊಡಲು ಹೋದ,  ಸುನೀತಾ  ಅವಳಿಗೆ ಅವಳ ಪಾಲು ಬೇಡ ಅದನ್ನು ಅಮ್ಮನ ಚಿಕಿತ್ಸೆಗೆ ಉಪಯೋಗಿಸು ಎಂದು ರಮೇಶನಿಗೆ ಹೇಳಿದಳು, ರಮೇಶ ಮರು ಮಾತನಾಡದೆ ಅದನ್ನು ಇಟ್ಟುಕೊಂಡ.

ಪ್ರತಿ ತಿಂಗಳು ಸಾವಿರಾರು ರೂಪಾಯಿ ಅಮ್ಮಗೋಸ್ಕರ ಊರಿಗೆ ಕಳುಹಿಸುವ ರಮೇಶನಿಗೆ ಹಣದ ಅಗತ್ಯವಿತ್ತು, ಜೀವನದಲ್ಲಿ ಕೇವಲ ಹಣವೇ ಎಲ್ಲ ಅಲ್ಲವೆಂದು ಅವನಿಗೆ ಗೊತ್ತಿತ್ತು, ಆದರೆ ಹಣವಿಲ್ಲದೆ ಏನೂ ಆಗುವುದಿಲ್ಲ ಎಂದೂ ರಮೇಶನಿಗೆ ತಿಳಿದಿತ್ತು, ಅಮ್ಮನ ಕಾಯಿಲೆಯಿಂದ  ಮುಂದೆ ಸಹ ಎಷ್ಟೋ ಅಡಚಣೆ ವಿಪ್ಪತ್ತುಗಳು ಬರಬಹುದು ಹಾಗು ಆ ಸಮಯ ಹಣ ಬೇಕಾಗಬಹುದೆಂಬ ಚಿಂತೆ ಅವನನ್ನು ಸದಾ ಕಾಡುತ್ತಿತ್ತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

ಚಿತ್ರ ಕೃಪೆ : ಗೂಗಲ್ 

Sunday, March 8, 2020

ನನ್ನ ಹೃದಯ ಎಷ್ಟು ಮರುಳಾಗಿದೆ

ನನ್ನ ಹೃದಯ ಎಷ್ಟು ಮರುಳಾಗಿದೆ
ಇದು ನಿನ್ನನ್ನೇ ಪ್ರೀತಿಸಿಕೊಂಡಿದೆ
ನನ್ನ ಹೃದಯ....
ಆದರೆ ನೀ ಸನಿಹ ಬಂದಾಗ
ಏನೂ ಹೇಳಲು ಹೆದರುತ್ತದೆ
ಒಹ್ ನನ್ನ ಪ್ರೀತಿಯೇ
ಒಹ್ ನನ್ನ ಪ್ರೀತಿಯೇ
ಪ್ರೀತಿ ಪ್ರೀತಿಯೇ , ನನ್ನ ಪ್ರೀತಿಯೇ
ನನ್ನ ಹೃದಯ....

ಇದಕ್ಕೆಷ್ಟು ನಾನು ಚೇತರಿಸುವೆ
ಇದಕ್ಕೆಷ್ಟು ನಾನು  ಸಂತೈಸುವೆ
ಇದಕ್ಕೆ ಅರ್ಥವಾಗುವುದಿಲ್ಲ, ಮುಗ್ಧವಾಗಿದೆ
ದಿನ ರಾತ್ರಿ ನರಳುತ್ತಿರುತ್ತದೆ
ನನ್ನ ಹೃದಯ....

ಪ್ರತಿಕ್ಷಣ ನನ್ನನ್ನು ಹಂಬಲಿಸುತ್ತದೆ
ನನ್ನನ್ನು ರಾತ್ರಿಯೆಲ್ಲ ಎಚ್ಚರವಾಗಿರುಸುತ್ತದೆ
ಈ ಮಾತಿನ ನಿನಗೆ ಅರಿವಿಲ್ಲ
ಇದು ಕೇವಲ ನಿನ್ನನ್ನೇ ಮೋಹಿಸುತ್ತಿರುತ್ತದೆ
ನನ್ನ ಹೃದಯ....

ಅನುವಾದ : by  ಹರೀಶ್ ಶೆಟ್ಟಿ, ಶಿರ್ವ

ಮೂಲ : ಸಮೀರ್
ಹಾಡಿದವರು : ಕುಮಾರ್ ಸಾನು,ಅಲ್ಕಾ ಯಾಗ್ನಿಕ್ 
ಸಂಗೀತ : ನದೀಮ್ ಶ್ರವಣ್ 
ಚಿತ್ರ : ಸಾಜನ್


मेरा दिल भी कितना पागल है
ये प्यार तो तुम से करता है
मेरा दिल भी कितना पागल है
ये प्यार तो तुम से करता है
पर सामने जब तुम आते हो
पर सामने जब तुम आते हो
कुछ भी कहने से डरता है
ओ मेरे साजन, ओ मेरे साजन
साजन, साजन, मेरे साजन
मेरा दिल भी कितना पागल है
ये प्यार तो तुम से करता है
मेरा दिल भी कितना पागल है
ये प्यार तो तुम से करता है
कितना इसको समझता हूँ
कितना इसको बहलाता हूँ
कितना इसको समझता हूँ
कितना इसको बहलाता हूँ
नादान है कुछ ना समझता है
दिन रात ये आहें भरता है
मेरा दिल भी कितना पागल है
ये प्यार तो तुम से करता है
मेरा दिल भी कितना पागल है
ये प्यार तो तुम से करता है
पर सामने जब तुम आते हो
पर सामने जब तुम आते हो
कुछ भी कहने से डरता है
ए मेरे साजन, ओ मेरे साजन
साजन, साजन, मेरे साजन
मेरा दिल भी कितना पागल है
ये प्यार तो तुम से करता है
मेरा दिल भी कितना पागल है
ये प्यार तो तुम से करता है
हर पल मुझको तड़पाता है
मुझे सारी रात जगाता है
हर पल मुझको तड़पाता है
मुझे सारी रात जगाता है
इस बात की तुमको खबर नही
ये सिर्फ़ तुम्हीं पे मरता है
मेरा दिल भी कितना पागल है
ये प्यार तो तुम से करता है
मेरा दिल भी कितना पागल है
ये प्यार तो तुम से करता है
पर सामने जब तुम आते हो
पर सामने जब तुम आते हो
कुछ भी कहने से डरता है
ओ मेरे साजन, ओ मेरे साजन
साजन, साजन, मेरे साजन
साजन, साजन
साजन, साजन
साजन, साजन
साजन, साजन

ನೋಡಿದೆ ಮೊದಲ ಸರ್ತಿ

ನೋಡಿದೆ  ಮೊದಲ ಸರ್ತಿ
ಇನಿಯನ ಕಣ್ಣಲ್ಲಿ ಪ್ರೀತಿ
ಈಗ ಹೋಗಿ ಸಿಕ್ಕಿದೆ  ನನ್ನ
ಅಶಾಂತ ಮನಸ್ಸಿಗೆ ತೃಪ್ತಿ

ಪ್ರಿಯತಮೆ ನಿನಗೆ ಸಿಗಲೆಂದು
ನಾನಿದ್ದೆ ಹಂಬಲದಲಿ ಅತಿ
ಈಗ ಹೋಗಿ ಸಿಕ್ಕಿದೆ  ನನ್ನ
ಅಶಾಂತ ಮನಸ್ಸಿಗೆ ತೃಪ್ತಿ

ಕಣ್ರೆಪ್ಪೆ ಮುಚ್ಚುವೆ
ಹೃದಯದಲ್ಲಿರಿಸುವೆ ನಿನಗೆ
ಈಗ ನಿನ್ನ ವಿನಃ ಎಲ್ಲಿಯೂ
ನೆಮ್ಮದಿ ಸಿಗದು ನನಗೆ
ನೀನನ್ನ ಹೃದಯ
ನೀನನ್ನ ಭಾವನೆ
ನೀನನ್ನ ಬಯಕೆ
ನೀನನ್ನ  ಸಂಗಾತಿ
ನೋಡಿದೆ ಮೊದಲ ಸರ್ತಿ....

ನನ್ನ ಈ ರೂಪ
ನನ್ನ ಈ ಯೌವನ
ನಿನಗಾಗಿಯೇ ಕೇವಲ
ಈ  ನನ್ನ ಜೀವನ
ನೀನನ್ನ ಗೀತೆ
ನೀನನ್ನ ರಾಗ
ಬಾ ನಿನ್ನ ಮಿಡಿಯುವ  ಹೃದಯದಲಿ
ಬರೆಯುವೆ ಮನಸ್ಸ ಕಥೆಯನ್ನ
ನೋಡಿದೆ ಮೊದಲ ಸರ್ತಿ....


ಅನುವಾದ : by  ಹರೀಶ್ ಶೆಟ್ಟಿ, ಶಿರ್ವ

ಮೂಲ : ಸಮೀರ್
ಹಾಡಿದವರು : ಎಸ್ ಪಿ ಬಾಲಸುಬ್ರಮಣ್ಯಂ, ಅಲ್ಕಾ ಯಾಗ್ನಿಕ್ 
ಸಂಗೀತ : ನದೀಮ್ ಶ್ರವಣ್
ಚಿತ್ರ : ಸಾಜನ್

देखा है पहली बार
साजन की आँखों में प्यार
देखा है पहली बार
साजन की आँखों में प्यार
अब जा के आया मेरे
बेचैन दिल को करार
दिलबर तुझे मिलने को
कब से था मैं बेकरार
अब जा के आया मेरे
बेचैन दिल को करार
देखा है पहली बार
साजन की आँखों में प्यार
अब जा के आया मेरे
बेचैन दिल को करार
पलकें झुकाऊँ, तुझे दिल में बसाऊँ
अब बिन तेरे मैं तो, कहीं चैन ना पाऊं
पलकें झुकाऊँ तुझे दिल में बसाऊँ
अब बिन तेरे मैं तो कहीं चैन ना पाऊं
तू मेरा ज़िगर है
तू मेरी नज़र है
तू मेरी आरजू
तू मेरा हमसफ़र है
देखा है पहली बार
साजन की आँखों में प्यार
अब जा के आया मेरे
बेचैन दिल को करार
मेरी अदाएं, ये मेरी जवानी
बस तेरे लिए है, ये मेरी जिंदगानी
मेरी अदाएं, ये मेरी जवानी
बस तेरे लिए है, ये मेरी जिंदगानी
तू मेरी ग़ज़ल है
तू मेरा तराना
आ तेरी धडकनों पे
लिख दूँ दिल का फ़साना
देखा है पहली बार
साजन की आँखों में प्यार
देखा है पहली बार
जानम की आँखों में प्यार
अब जा के आया मेरे
बेचैन दिल को करार
दिलबर तुझे मिलने को
कब से थी मैं बेक़रार
अब जा के आया मेरे
बेचैन दिल को करार
देखा है पहली बार
साजन की आँखों में प्यार
ಚಿತ್ರ ಕೃಪೆ :ಗೂಗಲ್ 

Saturday, March 7, 2020

ತುಂಬಾ ಪ್ರೀತಿಸುವೆ ನಾನು

ತುಂಬಾ ಪ್ರೀತಿಸುವೆ ನಾನು
ಇನಿಯ ನಿನಗೆ
ಆಣೆ ಬೇಕಾದರೆ ಹಾಕುವೆ
ದೇವರಾಣೆಗೆ
ಆಣೆ ಬೇಕಾದರೆ ಹಾಕುವೆ....
ತುಂಬಾ ಪ್ರೀತಿಸುವೆ....

ನನ್ನ ಈ ಗೀತೆಯಲಿ
ಪರಿಕಲ್ಪನೆ  ನಿನ್ನದೇ
ನಿನ್ನ ವಿನಃ ಬದುಕಲು
ನನಗಿಲ್ಲ ಸಾಧ್ಯವೇ
ಹೀಗೆಯೇ  ಪ್ರೀತಿಸುತ್ತಿರುವೆ 
ಹೀಗೆಯೇ  ಪ್ರೀತಿಸುತ್ತಿರುವೆ 
ಉಸಿರಿರುವ ತನಕ ನಿನಗೆ
ತುಂಬಾ ಪ್ರೀತಿಸುವೆ....

ಸಾಗರದ ತೋಳಿನಲ್ಲಿ
ಅಲೆಗಳಿದ್ದಷ್ಟು
ನಿನ್ನಿಂದ ಪ್ರೇಮವಿದೆ
ನನಗೂ ಅಷ್ಟು
ಈ ಚಡಪಡಿಕೆ
ಈ ಚಡಪಡಿಕೆ
ಕಡಿಮೆಯಾಗಲ್ಲ ಈಗಂತೂ
ತುಂಬಾ ಪ್ರೀತಿಸುವೆ....

ಅನುವಾದ : by  ಹರೀಶ್ ಶೆಟ್ಟಿ, ಶಿರ್ವ

ಮೂಲ : ಸಮೀರ್
ಹಾಡಿದವರು : ಎಸ್ ಪಿ ಬಾಲಸುಬ್ರಮಣ್ಯಂ, ಅನುರಾಧ ಪೌಡ್ವಾಲ್
ಸಂಗೀತ : ನದೀಮ್ ಶ್ರವಣ್
ಚಿತ್ರ : ಸಾಜನ್

बहुत प्यार करते हैं तुमको सनम
बहुत प्यार करते हैं तुमको सनम
कसम चाहे ले लो
कसम चाहे ले लो ख़ुदा की कसम
बहुत प्यार करते हैं तुमको सनम
बहुत प्यार करते हैं तुमको सनम
हमारी ग़ज़ल है तसव्वुर तुम्हारा
हमारी ग़ज़ल है तसव्वुर तुम्हारा
तुम्हारे बिना अब न जीना गवारा
तुम्हें यूँ ही चाहेंगे
तुम्हें यूँ ही चाहेंगे जब तक है दम
बहुत प्यार करते हैं तुमको सनम
बहुत प्यार करते हैं तुमको सनम
सागर की बाँहों में मौजें हैं जितनी
सागर की बाँहों में मौजें हैं जितनी
हमको भी तुमसे मोहब्बत है उतनी
के ये बेकरारी
के ये बेकरारी ना अब होगी कम
बहुत प्यार करते हैं तुमको सनम
बहुत प्यार करते हैं तुमको सनम
कसम चाहे ले लो
कसम चाहे ले लो ख़ुदा की कसम
बहुत प्यार करते हैं तुमको सनम
बहुत प्यार करते हैं तुमको सनम

Thursday, March 5, 2020

ವೃದ್ಧಾಶ್ರಮ ೨೩

ರಮೇಶ ತನ್ನ ಕಚೇರಿಯಿಂದ ಸಾಲ ಪಡೆದು ದಿರೇಶ ಹೇಳಿದ ಹಾಗೆ ಆಶಾ ಚಿಕ್ಕಮ್ಮನ ಬ್ಯಾಂಕ್ ಅಕೌಂಟಿಗೆ ೫೦ ಸಾವಿರ ಕಳುಹಿಸಿದ ಹಾಗು ಫೋನ್ ಮಾಡಿ ದಿರೇಶನಿಗೆ ತಿಳಿಸಿದ. 

ಅಮ್ಮ ಆಸ್ಪತ್ರೆಯಿಂದ ಮನೆಗೆ ಬಂದಾಯಿತು, ದಿರೇಶ ಹೋಮ್ ನರ್ಸನ ವ್ಯವಸ್ಥೆ ಮಾಡಿದ್ದ, ಹೇಗೋ ಸಮಯ ಕಳೆಯುತ್ತಾ ಹೋಯಿತು, ದಿವಸ ತಿಂಗಳಲ್ಲಿ ಹಾಗು ತಿಂಗಳು ವರ್ಷದಲ್ಲಿ, ರಮೇಶ ಪ್ರತಿ ತಿಂಗಳು ಹೋಮ್ ನರ್ಸಿನ ಸಂಬಳ ಹಾಗು ಮನೆ ಖರ್ಚಿಗೆ ನಿಯಮಿತವಾಗಿ ಆಶಾ ಚಿಕ್ಕಮನ ಅಕೌಂಟಿಗೆ ಹಣ ಕಳುಹಿಸುತ್ತಿದ್ದ, ಈ ಮಧ್ಯೆ ಹಲವು ಸರಿ ಹೋಮ್  ನರ್ಸ್ ಬದಲಾದರು, ಕೆಲವು ಸಮಯ ಹೋಮ್ ನರ್ಸ್ ಇಲ್ಲದೆ ಸಹ ಚಿಕ್ಕಮ್ಮನವರಿಗೆ ಅಮ್ಮನನ್ನು ನೋಡಬೇಕಾಯಿತು, ಅದಕ್ಕೆ ರಮೇಶನಿಗೆ ಚಿಕ್ಕಮ್ಮನವರ  ತುಂಬಾ ಮಾತು ಸಹ ಕೇಳಬೇಕಾಯಿತು, ರಮೇಶನ ಆ ಸಮಯ   ಚಡಪಡಿಕೆ ಹಾಗು ಒತ್ತಡದಲ್ಲಿ ಕಳೆಯಿತು, ರಮೇಶನಿಗೆ ದಿರೇಶನಿಗೆ ಫೋನ್ ಮಾಡಿ  ಹೋಮ್ ನರ್ಸ್ ಹುಡುಕಲು ಬೇಡಬೇಕಾಯಿತು ಮತ್ತು ದಿರೇಶನ ಬೇಡಿಕೆಯಂತೆ ಅವನ ಖರ್ಚಿಗೂ ಹಣ ಕಳುಹಿಸಬೇಕಾಯಿತು, ಅಮ್ಮಗೋಸ್ಕರ ಎಲ್ಲರ ಅಪಮಾನ, ಹಿಯ್ಯಾಳಿಕೆ ಸಹಿಸಿ ರಮೇಶನಿಗೆ ಹೇಗೋ ಚಿಕ್ಕಮನವರೊಟ್ಟಿಗೆ ಹಾಗು ದಿರೇಶನೊಟ್ಟಿಗೆ  ಹೊಂದಿಸಿಕೊಂಡು ಹೋಗಬೇಕಾಯಿತು.     

ನೋಡ್ತಾ ನೋಡ್ತಾ ೨ ವರ್ಷ ಕಳೆದೋಯಿತು, ರಮೇಶ ಪರಿವಾರ ಜತೆ ರಜೆಯಲ್ಲಿ ಭಾರತ ಬಂದ,  ಮುಂಬೈಯಲ್ಲಿ ಮನೆ ಇಲ್ಲದ ಕಾರಣ ಅವರು ಸುಮಾಳ ತಂಗಿಯ ಮನೆಯಲ್ಲಿ ಬಂದು ತಂಗಿದರು, ಎರಡು ದಿನ ಅಲ್ಲಿದ್ದು ರೈಲುಗಾಡಿಯಲ್ಲಿ ಊರಿಗೆ ಬಂದರು. 

ಊರಿನ ಮನೆಯಲ್ಲಿ ಪುನಃ ಕೋಲ ಇತ್ತು, ಈ ಕೋಲ  ರಮೇಶನ ನಾಲ್ಕು ವರುಷ ಮುಂಚೆ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾದ ಸೌಮ್ಯ ಚಿಕ್ಕಮ್ಮನವರ ಗಂಡ ಹಾಗು ಅವರ ಮಕ್ಕಳ ಪರವಾಗಿತ್ತು, ಮನೆಯಲ್ಲಿ ಕುಟುಂಬದ ಹೆಚ್ಚಾಗಿ ಎಲ್ಲ ಸದಸ್ಯರು ಬಂದಿದ್ದರು, ರಮೇಶನ ತಂಗಿ ಸುನೀತಾ ಸಹ ಬಂದಿದ್ದಳು, ರಮೇಶ ಬಂದು ಅಮ್ಮನಿಗೆ ಸಿಕ್ಕಿದಾಗ, ಅಮ್ಮ ಸ್ವಾಭಾವಿಕವಾಗಿ ರಮೇಶನನ್ನು ನೋಡಿ ಅತ್ತರು, ಈಗ ಒಂದು ಹೋಮ್ ನರ್ಸ್ ಇದ್ದಳು ಅಮ್ಮನ ಚಾಕರಿ ಮಾಡಲಿಕ್ಕೆ,ಅಮ್ಮ ಈಗಲೂ ಮಾತಾಡುವಾಗ ತೊದಲುತ್ತಿದ್ದರು.  

ಊರಿನ ಸ್ವಲ್ಪ ಜಮೀನು ಮಾರಿದ ಕಾರಣ ಎಲ್ಲರ ಪಾಲಿಗೆ ಮೂರು ಮೂರು ಲಕ್ಷ ರೂಪಾಯಿ ಬಂದಿತ್ತು, ಅಮ್ಮನ ಪಾಲಿಗೆ ಸಹ ಮೂರು ಲಕ್ಷ ರೂಪಾಯಿ ಬಂದಿತ್ತು, ಆದರೆ ಈ ವಿಷಯ ದಿನಕರ ಮಾಮನಿಂದ ರಮೇಶನಿಗೆ ತಿಳಿಯಿತು,ವಿಕ್ರಮ ಮಾವನವರು ಅಮ್ಮನ ಪಾಲು ಅವರ ಅಕೌಂಟಿಗೆ ಹಾಕಿದ್ದರು, ಇದರ ಬಗ್ಗೆ ಯಾಕೋ ಅಮ್ಮ ರಮೇಶನಿಗೆ ಹೇಳಿರಲಿಲ್ಲ, ರಮೇಶನಿಗೆ ಸ್ವಲ್ಪ ಬೇಜಾರವೂ ಆಯಿತು, ಆದರೆ ಅಮ್ಮನಿಗೆ ಸ್ವತಹದ್ದು ಸಹ ಗೋಚಾರವಿರುವುದಿಲ್ಲ, ಇದರ ಎಲ್ಲಿ ಅವರಿಗೆ ನೆನಪಿರಬಹುದೆಂದು ಎನಿಸಿ ಅವನು ಹೆಚ್ಚು ಯೋಚಿಸಲಿಕ್ಕೆ ಹೋಗಲಿಲ್ಲ, ಆದರೆ ಇದರ ಬಗ್ಗೆ ಅವನು ಅಮ್ಮನಿಗೆ ಕೇಳಿದಾಗ ಅಮ್ಮ "ಹೌದು ಬ್ಯಾಂಕಿಗೆ ಹಾಕಿದ್ದಾರೆ, ಅದರಲ್ಲಿ ಒಂದೂವರೆ ಲಕ್ಷ ನಾನು ಮೋನುನಿಗೆ (ಉಷಾ ಚಿಕ್ಕಮ್ಮನ ಮಗ ) ಕೊಟ್ಟಿದ್ದೇನೆ". 

ರಮೇಶ ಆಶ್ಚರ್ಯದಿಂದ "ಯಾಕೆ"?

ಅಮ್ಮ "ಅವನು ಕೇಳಿದ ನಾನೇಗೆ ಇಲ್ಲ ಹೇಳಲಿ, ಅವನಿಗೆ ಅರ್ಜೆಂಟ್ ಬೇಕಿತ್ತು, ವಾಪಾಸ್ ಕೊಡುತ್ತಾನೆ"

ರಮೇಶನಿಗೆ ಅಮ್ಮನಿಗೆ ಏನು ಹೇಳಬೇಕಂತ ಅರ್ಥವಾಗಲಿಲ್ಲ. 

ಅಮ್ಮ ತೊದಲುತ್ತ "ದಿರೇಶ ಸಹ ಹಣ ಕೇಳುತ್ತಿದ್ದ,ಅವನಿಗೆ ಅವನ ಪಾಲು ಕೊಡು, ಸುನೀತಾನ  ಪಾಲೂ ಕೊಟ್ಟು ಬಿಡು, ಮೋನು ಹಣ ವಾಪಾಸ್ ಕೊಟ್ಟ ನಂತರ ನೀನು ನೋಡು ಏನು ಮಾಡಬೇಕಂತ, ನೀನು ವಿದೇಶದಲ್ಲಿದ್ದಿ ನಿನಗೇನೂ ಅಷ್ಟು ಹಣದ ಅಗತ್ಯವಿರಲಿಕ್ಕಿಲ್ಲ, ಅರ್ಜುನನನ್ನು ನೀನೆ ನೋಡಬೇಕಲ್ಲ ಅದಕ್ಕೆ ಅವನ ಯೋಚಿಸು". 

ರಮೇಶ ಅಮ್ಮನನ್ನು ನೋಡುತ್ತಾ ಯೋಚಿಸಿದ "ವಿದೇಶ ಅಂದರೆ ಜನರು ಏನು ಅನಿಸುತ್ತಾರೋ ಏನೋ?  ಅಲ್ಲಿ ಹಣ ಮರದಲ್ಲಿ ಸಿಗುತ್ತದೆ ಎಂದು ಅನಿಸುತ್ತಾರೋ ಏನೋ? ಈಗ ಅಮ್ಮನನ್ನೆ ನೋಡಿ ಅವರಿಗೆ ಎಲ್ಲರ ಚಿಂತೆ ಇದೆ, ಕೇವಲ ನನ್ನದ್ದೇ ಚಿಂತೆಯಿಲ್ಲ, ವಿದೇಶದಲ್ಲಿ ನಾವು ಯಾವ ಪರಿಸ್ಥಿತಿಯಲ್ಲಿ ಇರುತ್ತೇವೆ ಅವರಿಗೇನು ತಿಳಿದಿದೆ, ತನ್ನ ದೇಶದಿಂದ ದೂರ ಅಲ್ಲಿ ದುಡಿದು ಬದುಕುವುದು ಎಷ್ಟು ಕಷ್ಟ ಎಂದು ಅವರಿಗೇನು ಗೊತ್ತು,  ನಾನೆಷ್ಟು ಕಷ್ಟಪಟ್ಟು ಇಲ್ಲಿ ಹಣ ಕಳುಹಿಸುತ್ತೇನೆಂದು ಅವರಿಗೇನು ಗೊತ್ತು, ಸುಲಭವಾಗಿ ಸಿಗುವ ಹಣಕ್ಕೆ ಎಲ್ಲಿ ಮೌಲ್ಯವಿದೆ, ಆದರೆ ಇದ್ದಕ್ಕೆಲ್ಲ ಅಮ್ಮನಿಗೆ ದೂರುವ ಹಾಗೆ ಇರಲಿಲ್ಲ, ಅವರ ಯೋಚಿಸುವ ಶಕ್ತಿ ಸೀಮಿತವಾಗಿತ್ತು, ಅವರಲ್ಲಿ  ಅಷ್ಟೆಲ್ಲ ಯೋಚನೆ ಮಾಡುವ ಶಕ್ತಿ ಉಳಿದಿರಲಿಲ್ಲ".  

ಇನ್ನು ಮೋನು ಹಣ ವಾಪಸ್ ಯಾವಾಗ ಕೊಡುತ್ತಾನೋ? ಇಷ್ಟು ದೊಡ್ಡ ಮೊತ್ತ ತೆಗೊಂಡವರು ಅಷ್ಟು ಬೇಗ ಹಿಂತಿರುಗಿಸುವುದು ಕಷ್ಟನೇ ಎಂದು ರಮೇಶನಿಗೆ ಅನಿಸಿತು. 

ರಮೇಶ "ಮೋನು ಯಾವಾಗ ಹಣ ವಾಪಸ ಕೊಡುತ್ತಾನೆ"?

ಅಮ್ಮ "ಕೊಡುತ್ತಾನೆ, ಬೇಗ ಕೊಡುತ್ತಾನೆ". 

ರಮೇಶ ಆಶ್ಚರ್ಯದಿಂದ ಅಮ್ಮನನ್ನು ನೋಡುತ್ತಿದ್ದ, ಅಮ್ಮನಿಂದ ನಡೆದ ಈ ಕರಾಮತ್ತು ಅವನಿಗೆ ಅರ್ಥವಾಗಲಿಲ್ಲ, ಇದಕ್ಕೆ ನಗಬೇಕೋ ಅಳಬೇಕೋ  ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. 



(ಮುಂದುವರಿಯುತ್ತದೆ )


by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

ದಂಗೆ ಗಲಭೆ

ಈ ಕ್ಷಣವೂ ಕಳೆದೋಗುವುದು
ಈ ಘಟನೆಯನ್ನು ಮರೆಯಲಾಗುವುದು
ಹಿಂದೂ ಹಿಂದೂಯಾಗಿ ಉಳಿಯುವನು
ಮುಸ್ಲಿಮ  ಮುಸ್ಲಿಮನಾಗಿ ಉಳಿಯುವನು
ಕೇವಲ ಮನುಷ್ಯ ಪ್ರತಿ ಕ್ಷಣವೂ ಸಾಯುತ್ತಲೇ ಇರುವನು

by ಹರೀಶ್ ಶೆಟ್ಟಿ, ಶಿರ್ವ

ये पल भी बीत जायेंगे।
ये घटना भी भूला दिया जायेगा। 
हिन्दू हिन्दू रहेगा।
मुसलमान  मुसलमान रहेगा।
बस इंसान पल पल मरता रहेगा।

by हरीश शेट्टी, शिर्वा 

Tuesday, March 3, 2020

ವೃದ್ಧಾಶ್ರಮ ೨೨

ಎರಡು ದಿವಸ ಬಿಟ್ಟು ರಮೇಶನಿಗೆ ದಿರೇಶನ ಮಿಸ್ ಕಾಲ್ ಬಂತು, ರಮೇಶ ಕೂಡಲೇ ದಿರೇಶನಿಗೆ ಕಾಲ್ ಮಾಡಿದ. 

ದಿರೇಶ "ಕೇಳು, ಒಂದು ಹುಡುಗಿ ಸಿಕ್ಕಿದ್ದಾಳೆ, ಆದರೆ ಅವಳು ಹನ್ನೆರಡು ಸಾವಿರ ಸಂಬಳ ಕೇಳುತ್ತಿದ್ದಾಳೆ ಮತ್ತು ತಿಂಗಳಿಗೆ ೩ ದಿವಸ ರಜೆ ಸಹ ಬೇಕಂತೆ ಅವಳ ಮನೆಗೆ ಹೋಗಿ ಬರಲಿಕ್ಕೆ, ಘಟ್ಟದಾಚೆಯವಳು, ಏನು ಹೇಳುವೆ". 

ರಮೇಶ "ಹನ್ನೆರಡು ಸಾವಿರ ತುಂಬಾ ಹೆಚ್ಚಲ್ಲ"???

ದಿರೇಶ "ಹೆಚ್ಚು ಹೌದು, ಆದರೆ ಏನು ಮಾಡುವುದು, ಇಲ್ಲಿ ಬೇರೆ ಯಾರೂ ಅಷ್ಟು ದೂರ ಮನೆಗೆ ಬರಲಿಕ್ಕೆ ರೆಡಿ ಇಲ್ಲ". 

ರಮೇಶ "ಹ್ಮ್ಮ್"

ದಿರೇಶ "ಮತ್ತೆ ಆಸ್ಪತ್ರೆಯ ಬಿಲ್ ನಿನ್ನೆ ತನಕ ಇಪ್ಪತೇಳು ಸಾವಿರ ಆಗಿತ್ತು". 

ರಮೇಶ "ಅಷ್ಟು ಹೇಗೆ !!!"?

ದಿರೇಶ "ಅಷ್ಟು ಹೇಗೆಂದರೆ  ...... ಆಸ್ಪತ್ರೆ ಚಾರ್ಜ್, ಡಾಕ್ಟರ್ ಚಾರ್ಜ್, ಮದ್ದಿನ , ಹೋಮ್  ನರ್ಸ್ ಎಲ್ಲ ಸೇರಿಸಿ". 

ರಮೇಶ "ಹ್ಮ್ಮ್.... ". 

ರಮೇಶನಿಗೆ ಈಗ ಹಣದ ಚಿಂತೆ ಶುರುವಾಯಿತು, ಅವನ ಹತ್ತಿರ ಅಷ್ಟೇನೂ ಉಳಿತಾಯ ಇರಲಿಲ್ಲ, ವಿದೇಶದಿಂದ ಪ್ರತಿ ತಿಂಗಳು ಸುಮಾಳ ಖರ್ಚಿಗೆ  ಮತ್ತು ಅಮ್ಮನ ಖರ್ಚಿಗೆ ತಂಗಿ ಸುನೀತಾಳಿಗೆ ಹಣ ಕಳಿಹಿಸುತ್ತಿದ್ದ, ಮಿಕ್ಕಿದ್ದು ಅವನ ಖರ್ಚು ತೆಗೆದು ಅಷ್ಟೇನೂ ಉಳಿತಾಯ ಆಗುತ್ತಿರಲಿಲ್ಲ,  ಇದ್ದದೆಲ್ಲ ಈಗ ಊರಿಗೆ ಹೋಗಿ ಬರುವಾಗ ಮುಗಿದೋಗಿತ್ತು, ಅವನ ಲೆಕ್ಕಾಚಾರದ ಪ್ರಕಾರ ಈ ತಿಂಗಳು ಒಂದು ಅದಿನೈದು ಸಾವಿರ ಬಿಲ್ ಬರಬಹುದೆಂದಿತ್ತು ಹಾಗು ಅದು ದಿರೇಶನಿಗೆ ಕೊಟ್ಟು ಬಂದ  ಮೂವತ್ತು ಸಾವಿರದಲ್ಲಿ  ಸರಿಹೊಂದಿಸಿ ಹೋಗಬಹುದೆಂದು ತಿಳಿದಿದ್ದ, ಆದರೆ  ಆ ಮೂವತ್ತು ಸಾವಿರದಲ್ಲಿ ಏನು ಉಳಿದಿರಲಿಲ್ಲ ಎಂದು ದಿರೇಶನಿಂದ ತಿಳಿದ ನಂತರ ಮತ್ತು ಆಸ್ಪತ್ರೆಯ ಇಪ್ಪತೇಳು ಸಾವಿರದ  ಬಿಲ್  ಕೇಳಿ ಇನ್ನೇನು ಮಾಡುವುದು ಎಂಬ  ಚಿಂತೆ ಅವನಲ್ಲಿ ಆವಾರಿಸಿತು.   

ರಮೇಶ ಮೌನ ಇರುವುದನ್ನು ನೋಡಿ  ದಿರೇಶ "ಏನು ಮಾಡುವುದು ಈಗ"?

ರಮೇಶ "ಓ ಕೆ, ಬೇರೆ ದಾರಿ ಇಲ್ಲ ಆ ಹುಡುಗಿಗೆ ಫೈನಲ್ ಮಾಡು ಮತ್ತು ಎರಡು ಮೂರು ದಿವಸ ನಂತರ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಆಸ್ಪತ್ರೆಯಲ್ಲಿ ಹೇಳಿಡು". 

"ಓ ಕೆ , ಹಣ ಸ್ವಲ್ಪ ಹೆಚ್ಚಿಯೇ ಕಳುಹಿಸು, ಎರಡು ಮೂರು ದಿವಸದಲ್ಲಿ ಬಿಲ್ ಇನ್ನು ಹೆಚ್ಚಾಗಬಹುದು ಮತ್ತು ಬೇರೆ ಸಹ ಖರ್ಚು ಇದೆಯಲ್ಲ" ಎಂದು ದಿರೇಶ ಹೇಳಿದ. 

ರಮೇಶ "ಬೇರೇನು ಖರ್ಚು"?

ದಿರೇಶ ಆವೇಶದಿಂದ " ಬೇರೆ ಖರ್ಚು ಇಲ್ಲವ, ಅಮ್ಮನನ್ನು ಕರೆದುಕೊಂಡು ಹೋಗುವಾಗ ಕಾರ್ ಮಾಡಬೇಕು, ಹೋಗಲಿಕ್ಕೆ ಬರಲಿಕ್ಕೆ, ಮತ್ತೆ ನೀನು ಕೊಟ್ಟು ಹೋದ ಹಣ ಮುಗಿದು ಈಗ ನಾನು ಸಾಲ ಮಾಡಿ ಖರ್ಚು ಮಾಡುತ್ತಿದ್ದೇನೆ". 

ರಮೇಶ "ಆಯಿತಾಯಿತು, ನಾನು ಹಣದ ಬಂದೋಬಸ್ತ್ ಮಾಡಿ ಕಳುಹಿಸುತ್ತೇನೆ"

ದಿರೇಶ "ಚಿಕ್ಕಮ್ಮನ ಅಕೌಂಟಿಗೆ ಕಳುಹಿಸು, ಅವರು ಬ್ಯಾಂಕಿನಿಂದ ತೆಗೆದು ನನಗೆ ಕೊಡುತ್ತಾರೆ". 

ರಮೇಶ "ಓ ಕೆ" ಎಂದು ಮಾತು ಮುಗಿಸಿ ಮುಂದಿನ ಚಿಂತೆಯಲ್ಲಿ ಮುಳುಗಿದ. 

ರಮೇಶನ ಜೀವನ ಬಹುತೇಕ ಹೀಗೆ ಕಷ್ಟವನ್ನು ಎದುರಿಸುವುದರಲ್ಲೇ ಕಳೆದಿತ್ತು, ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅವನು ಹಿಂಜರಿಯಲಿಲ್ಲ, ತುಂಬಾ ಕಷ್ಟ ಎದುರಿಸಿದ ನಂತರ ಈಗ ತಾನೇ ಅವನ ಜೀವನದಲ್ಲಿ ಸ್ವಲ್ಪ ಸುಖದ ಸೂರ್ಯ ಪ್ರಭೆ ಬಿದ್ದಿತ್ತು, ಆದರೆ ಕಷ್ಟದ ಕಾರ್ಮೋಡ  ಈಗಲೂ ಪದೇ ಪದೇ ಅವನ ಜೀವನದಲ್ಲಿ ಹಬ್ಬುತಿತ್ತು, ಅಂತಹ ಯಾವುದೇ ಪರಿಸ್ಥಿಯಲ್ಲಿ ರಮೇಶನ ದೇವರ ಪ್ರತಿ ಭಕ್ತಿ ಶ್ರದ್ಧೆಕಡಿಮೆಯಾಗಿಲ್ಲ, ಅವನು  ಯಾವುದಕ್ಕೂ ಮೊದಲು ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದ, ಶಾಂತವಾಗಿರುತ್ತಿದ್ದ, ಒಂದು ನಿಟ್ಟುಸಿರು ಎಳೆಯುತ್ತಿದ್ದ ಹಾಗು ಧನಾತ್ಮಕವಾಗಿ  ಮುಂದೆ ಸಾಗುತ್ತಿದ್ದ


(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

Monday, March 2, 2020

ವೃದ್ಧಾಶ್ರಮ ೨೧

ಊರಿಗೆ ಬಂದವರೆಲ್ಲ ಒಬ್ಬೊಬ್ಬರಾಗಿ ಹಿಂತಿರುಗಿದ ನಂತರ ಮನೆ ಪುನಃ ಖಾಲಿ ಖಾಲಿಯಾಯಿತು, ರಮೇಶ ಸಹ ಅಮ್ಮನನ್ನು ಆಸ್ಪತ್ರೆ ಸೇರಿಸಿ ದಿರೇಶನಿಗೆ ಅಮ್ಮನ ಜವಾಬ್ದಾರಿ ನೀಡಿ, ಅವನ ಖರ್ಚಿಗಾಗಿ, ಅಮ್ಮನ ಆಸ್ಪತ್ರೆ ಖರ್ಚಿಗಾಗಿ ಹಾಗು  ಹುಡುಗಿಯ ಸಂಬಳ ಇದಕ್ಕೆಲ್ಲ ೩೦ ಸಾವಿರ ರೂಪಾಯಿ  ಕೊಟ್ಟು  ಮುಂಬೈ  ಬಂದು ಸಹ ಪರಿವಾರ ವಿದೇಶ ತೆರಳಿದ, ಊರಿಂದ ಬರುವ ಮುಂಚೆ ಅಮ್ಮನಿಗೆ ಸಿಕ್ಕಿದಾಗ ಅಮ್ಮ ಗೊಳೋ ಎಂದು ಅತ್ತರು, ಅವರಿಗೆ ಸಮಾಧಾನ ಹೇಳಿ ಹೇಗೋ ಆಸ್ಪತೆಯಿಂದ ಬಂದಿದ್ದ, ಮನೆಗೆ ಬಂದು ಚಿಕ್ಕಮ್ಮನವರಿಗೆ ಅಮ್ಮನ ಸ್ವಲ್ಪ ಧ್ಯಾನ ಇಡಬೇಕೆಂದು ಬೇಡಿ ಹಾಗು ಮನೆ ಮತ್ತು ಅಮ್ಮನ ಖರ್ಚಿಗೆ ಪ್ರತಿ ತಿಂಗಳು ಹಣ ಚಿಕ್ಕಮನ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡುತ್ತೇನೆಂದು ಸಹ ಹೇಳಿ ಬಂದಿದ್ದ.

ವಿದೇಶ ಬಂದು ರಮೇಶ ಪುನಃ ಅಲ್ಲಿಯ ಕೆಲಸ ಕಾರ್ಯದಲ್ಲಿ ನಿರತನಾದ, ಆದರೆ ಎರಡು ದಿನಕ್ಕೆ ಒಂದು ಸಾಲ ಫೋನ್ ಮಾಡಿ ಅಮ್ಮನ ಬಗ್ಗೆ ವಿಚಾರಿಸುತ್ತಿರುತ್ತಿದ್ದ. 

ಅಮ್ಮನಿಗೆ ಆಸ್ಪತ್ರೆ ಸೇರಿಸಿ ೨೦ ದಿವಸ ಆಗಿತ್ತು, ಆದರೆ ಅಷ್ಟೇನೂ ಸುಧಾರಣೆ ಕಂಡು ಬರುವುದಿಲ್ಲ, ಅದರ ಕಾರಣ  ಅಮ್ಮ ಆಸ್ಪತ್ರೆಯಲ್ಲಿ ಸ್ವಲ್ಪ ಸಹ ಸಹಯೋಗ ಮಾಡುವುದಿಲ್ಲ, ಏನೂ ಹೇಳಿದರೂ  ಕೇಳುವುದಿಲ್ಲ, ಎಲ್ಲದಕ್ಕೂ ಅವರಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ  ಎಂದು ದಿರೇಶ ತಿಳಿಸಿದ. 

ದಿರೇಶನಿಂದ ಕೆಲಸದ ಹುಡುಗಿ ಸುಮ್ಮಿಯ ಕಥೆ ಕೇಳಿ  ರಮೇಶ ಇನ್ನು ಚಿಂತಿತನಾದ, ಅವಳು ಇಡೀ ದಿನ ಮೊಬೈಲಲ್ಲಿ ಬಾಯ್ಫ್ರೆಂಡ್ ಜೊತೆ ಮಾತನಾಡುತ್ತಿದ್ದಳು ಅಂತೇ, ಅಮ್ಮನ ಚಾಕರಿ ಸಹ ಸರಿ ಮಾಡುತ್ತಿರಲಿಲ್ಲ, ಅದಕ್ಕೆ ದಿರೇಶ ಅವಳಿಗೆ ಬೈದಕ್ಕೆ ಅಮ್ಮನನ್ನು ಬಿಟ್ಟು ಹೇಳದೆ ಕೇಳದೆ ಆಸ್ಪತ್ರೆಯಿಂದ ಹೋಗಿದ್ದಳು, ಅವಳ ತಂದೆ ಮೊದಲೇ ದಿರೇಶನಿಂದ  ಸಂಬಳದಿಂದ ಹೆಚ್ಚು ಹಣ ತೆಗೆದುಕೊಂಡು ಹೋಗಿದ್ದ, ಇನ್ನು ಅವಳು ಬರುವ ಹಾಗೇನು ಇರಲಿಲ್ಲ,  ಆಸ್ಪತ್ರೆಯಿಂದ ದಿರೇಶನಿಗೆ ಫೋನ್ ಬಂದು ಅವಳು ಇಲ್ಲವೆಂಬ ವಿಷಯ  ತಿಳಿದ ನಂತರ ದಿರೇಶ ಬಂದು ಆಸ್ಪತ್ರೆಯ ಹೋಮ್ ನರ್ಸ್ ಇಟ್ಟಿದ್ದ. 

ದಿರೇಶನಿಗೂ ಕೆಲಸದಿಂದ ದಿನ ಆಸ್ಪತ್ರೆ ಬರಲು ಸಾದ್ಯವಿರಲಿಲ್ಲ ಅದಕ್ಕೆ ಇಲ್ಲಿಂದ ಡಿಸ್ಚಾರ್ಜ್ ಮಾಡುವುದೇ ಒಳ್ಳೆಯದೆಂದು ಹೇಳಿದ, ಆದರೆ ರಮೇಶನಿಗೆ ಮನೆಯಲ್ಲಿ ಇನ್ನು ಯಾರೂ ನೋಡುವುದು ಎಂಬ ಚಿಂತೆ ಶುರುವಾಯಿತು.

ರಮೇಶ ದಿರೇಶನಿಗೆ ಫೋನ್ ಮಾಡಿ ಕೇಳಿದ "ಏನು ಡಿಸ್ಚಾರ್ಜ್ ಮಾಡುತ್ತೀಯಾ"?

ದಿರೇಶ "ಅದೇ ಒಳ್ಳೆಯದು, ಇಲ್ಲಿ ಸುಮ್ಮನೆ......  ಏನೂ ಪ್ರಯೋಜನ ಕಾಣುವುದಿಲ್ಲ".

ರಮೇಶ "ಹಾಗಾದರೆ ಇನ್ನು ಅಮ್ಮನ ಚಾಕರಿಗೆ ಯಾರೂ"?

ದಿರೇಶ "ಈಗ ಇದ್ದ ಹೋಮ್ ನರ್ಸನಿಗೆ ಕೇಳಿದೆ, ಅವಳು ಜನ ಸಿಗಬಹುದು ಆದರೆ ಮನೆಗೆ ಬರಬೇಕೆಂದರೆ ತುಂಬಾ  ಹಣ ಕೇಳಬಹುದೆಂದು ಹೇಳಿದ್ದಳು"

ರಮೇಶ "ಅವಳೇ ಬರುವುದಿಲ್ಲವ"?

ದಿರೇಶ "ಇಲ್ಲ,  ಅವಳಿಗೆ ಕೇಳಿದೆ, ಅವಳು ಆಗುವುದಿಲ್ಲ ಹೇಳಿದಳು, ಇಲ್ಲೇ ಸಮೀಪ ಅವಳ ಮನೆ, ಒಂಬತ್ತು ಸಾವಿರ ಸಂಬಳ, ಅವಳ್ಯಾಕೆ ಬರುತ್ತಾಳೆ ".  

ರಮೇಶ "ಹ್ಮ್ಮ್.... ಹೋಮ್ ನರ್ಸ್ ಇಲ್ಲದೆ ಮನೆಗೆ ಕರೆದುಕೊಂಡು ಹೋಗುವ ಹಾಗೆ ಇಲ್ಲ, ಮೊದಲು ಹೋಮ್ ನರ್ಸ್ ಹುಡುಕು" ಎಂದು ಹೇಳಿದ.

ದಿರೇಶ "ಹ್ಮ್ಮ್, ಮತ್ತೆ ನೀನು ಕೊಟ್ಟ ಹಣಯೆಲ್ಲ ಮುಗಿದಿದೆ"

ರಮೇಶ ಆಶ್ಚರ್ಯದಿಂದ "ಏನು!! ೩೦ ಸಾವಿರ ಮುಗಿಯಿತಾ"?

ದಿರೇಶ ಸ್ವಲ್ಪ ಆವೇಶದಿಂದ "ಮತ್ತೇನು ಇಲ್ಲಿ ಖರ್ಚು ಎಷ್ಟಿದೆ ಗೊತ್ತುಂಟಾ ನಿನಗೆ? ಆರು ಸಾವಿರ ಸುಮ್ಮಿಯ ತಂದೆಗೆ ಕೊಟ್ಟಿದ್ದೆ, ಹತ್ತು ಸಾವಿರ ನೀನು ನನಗೆಂದು ಕೊಟ್ಟದ್ದು ಅದು ನಾನು ಹೆಂಡತಿ ಮಕ್ಕಳಿಗೆ ಕಳಿಸಿದೆ, ಬೇರೆ ಹದಿನಾಲ್ಕು ಸಾವಿರದಲ್ಲಿ ಅಮ್ಮನ ಊಟ, ಉಪಹಾರ ಬೇರೆಲ್ಲ ಖರ್ಚು".

ಇದನ್ನು ಕೇಳಿ ರಮೇಶ  ನಿಟ್ಟುಸಿರೆಳೆದ, ಅವನಿಗೆ ಗೊತ್ತಿತ್ತು ಈಗ ಹೆಚ್ಚೇನು ದಿರೇಶನಿಗೆ ಹೇಳಿದರೆ, ಹಾಗಾದರೆ ನೀನೆ ಬಂದು ಮಾಡೆಂದು ಹೇಳಬಹುದು, ಅದಕ್ಕೆ ಅವನು ಶಾಂತಿಯಿಂದ "ಓ ಕೆ, ನೀನು ಹೋಮ್ ನರ್ಸ್ ಹುಡುಕು ನಂತರ ಆಸ್ಪತ್ರೆ ಬಿಲ್ ಎಷ್ಟು ಆಗುತ್ತದೆ ನೋಡಿ ಹೇಳು"

ದಿರೇಶ "ಓ ಕೆ, ಬಿಲ್ ತುಂಬಾ ಆಗಬಹುದು, ಹುಡುಗಿ ಸಿಕ್ಕಿದ ನಂತರ ಫೋನ್ ಮಾಡುತ್ತೇನೆ"ಎಂದು ಹೇಳಿ ಫೋನ್ ಇಟ್ಟ.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ 
ಚಿತ್ರ ಕೃಪೆ :ಗೂಗಲ್ 

Sunday, March 1, 2020

ವೃದ್ಧಾಶ್ರಮ ೨೦

ರಾತ್ರಿ ತಂಬಿಲದ ಔತಣಕೂಟ ಗೌಜಿಯಿಂದ ನಡೆಯಿತು ಹಾಗು ಮನೆಯಲ್ಲಿ ಎಲ್ಲರು ಸೋತು ಹೋದ ಕಾರಣ ಊಟದ ನಂತರ ಎಲ್ಲರು ಬೇಗ ಮಲಗಿದರು.  

ಮಾರನೇ ದಿನ ಬೆಳ್ಳಿಗೆ ರಮೇಶ ಮತ್ತು ದಿರೇಶ ಸುಮ್ಮಿಯೊಟ್ಟಿಗೆ ಅಮ್ಮನನ್ನು ಕರೆದುಕೊಂಡು ಊರಿನ ಸಮೀಪ ಇದ್ದ ಪ್ರಸಿದ್ಧ ಆಯುರ್ವೇದಿಕ್  ಆಸ್ಪತ್ರೆಗೆ ಹೋದರು,  ಅಲ್ಲಿ ಡಾಕ್ಟರಿಗೆ ತೋರಿಸಿದ ನಂತರ ಡಾಕ್ಟರ್ "ನೋಡಿ ಇವರನ್ನು ಸ್ವಲ್ಪ ಸಮಯ ಇಲ್ಲಿ ಅಡ್ಮಿಟ್ ಮಾಡಿ, ಇಲ್ಲಿ ಇದ್ದರೆ ನಮ್ಮ ಚಿಕೆತ್ಸೆಯ ನಂತರ  ಇವರಲ್ಲಿ ಬದಲಾವಣೆ ಕಂಡು ಬರಬಹುದು, ಯಾಕೆಂದರೆ ನಾವು ಇಂತಹ ರೋಗಿಗೆ ವ್ಯಾಯಾಮ ಎಲ್ಲ ಮಾಡಿಸಿ ಮತ್ತೆ ಆ ಪ್ರಕಾರ ಕೆಲವು ಆಯುರ್ವೇದಿಕ್ ಮದ್ದು ಕೊಟ್ಟು ಅವರ ಚಿಕೆತ್ಸೆ ಮಾಡುತ್ತೇವೆ, ಎಷ್ಟೋ ಜನರಿಗೆ  ಇದರಿಂದ ತುಂಬಾ ಲಾಭ ಆಗಿದೆ, ಅವರಲ್ಲಿ ಸುಧಾರಣೆ ಕಂಡು ಬಂದಿದೆ, ನೀವು ಸಹ ಒಂದೆರಡು ತಿಂಗಳು ಇಟ್ಟು ನೋಡಿ" ಎಂದು ಹೇಳಿದರು.

ರಮೇಶ "ಡಾಕ್ಟ್ರೇ, ನಿಮಗೇನನಿಸುತ್ತದೆ ಅಮ್ಮನಿಗೆ ಸರಿ ನಡೆಯಲು ಆಗಬಹುದ"?

ಡಾಕ್ಟರ್ "ನೋಡಿ, ಇದರಲ್ಲಿ ನಮಗೆ ಅವರ ಸಹಯೋಗ ಎಷ್ಟು ಸಿಗುತ್ತದೆ ಅದರ ಮೇಲೆ ಇದು ಅವಲಂಭಿಸುತ್ತಿರುತ್ತದೆ, ಕೆಲವು ರೋಗಿಗಳು ಸ್ವತಃ ತುಂಬಾ ಸಹಯೋಗ ಮಾಡುತ್ತಾರೆ, ಪ್ರಯತ್ನ ಮಾಡುತ್ತಾರೆ ಆದ್ದರಿಂದ ಅವರಲ್ಲಿ ತುಂಬಾ ಸುಧಾರಣೆ ಕಂಡು ಬರುತ್ತದೆ ಆದರೆ ಕೆಲವು ರೋಗಿಗಳು ಸ್ವಲ್ಪ ಸಹ ಪ್ರಯತ್ನ ಮಾಡಲು ಸಿದ್ಧ ಇರುವುದಿಲ್ಲ, ಇವರು ಸಹಯೋಗಿಸಿದರೆ  ಖಂಡಿತ ಸ್ವಲ್ಪಾದರೂ ಸುಧಾರಣೆ ಕಂಡು ಬರಬಹುದು, ನೋಡಿ ನೀವು ವಿಚಾರ ಮಾಡಿ ತಿಳಿಸಿ, ಒಪ್ಪಿಗೆ ಆದರೆ ಕೌಂಟರಿಗೆ ಹೋಗಿ ಈ ಚೀಟಿ ತೋರಿಸಿ ಹಣ ತುಂಬಿಸಿ ಅವರನ್ನು ಅಡ್ಮಿಟ್ ಮಾಡಿ" ಎಂದು ಹೇಳಿ ಚೀಟಿ ಬರೆದು ಕೊಟ್ಟರು.

ಆದರೆ ರಮೇಶನಿಗೆ ಚಿಂತೆಯಂದರೆ ಅವನು ಕೇವಲ ಇನ್ನು ಮೂರು ದಿವಸ ಇಲ್ಲಿ ಊರಲ್ಲಿದ್ದ ನಂತರ ಅವರಿಗೆ ಮುಂಬೈ ಹೋಗಿ ವಿದೇಶ ಹೋಗಲಿಕ್ಕಿತ್ತು, ಆದರೆ ದಿರೇಶ ಅವನಿಗೆ "ನೀನು  ಚಿಂತೆ ಮಾಡಬೇಡ ನಾನು ವಾರಕ್ಕೆ ಎರಡು ಸಲ ಬಂದು ಅಮ್ಮನನ್ನು ನೋಡುತ್ತೇನೆ ಹಾಗು ಡಿಸ್ಚಾರ್ಜ್ ಆದ ನಂತರ ಸಹ ಮನೆಗೆ ಹೋಗಿ ನೋಡುತ್ತಾ ಇರುತ್ತೇನೆ, ನೀನು ಕೇವಲ ಹಣದ ವ್ಯವಸ್ಥೆ ಮಾಡು"  ಎಂದು ಹೇಳಿದ,  ಸುಮ್ಮಿಗೆ ಸಹ ಕೇಳಲಾಯಿತು, ಅವಳು ಅಮ್ಮನೊಟ್ಟಿಗೆ ಆಸ್ಪತ್ರೆಯಲ್ಲಿ  ಇರಲು ಸಾಧ್ಯನಾ ಎಂದು,  ಸುಮ್ಮಿ ಅವರೊಟ್ಟಿಗೆ ಅಲ್ಲಿಯೇ ಇದ್ದು ಕೆಲಸ ಮಾಡಲು  ಸಿದ್ಧವಾದಳು, ರಮೇಶ ದಿರೇಶನೊಟ್ಟಿಗೆ ತುಂಬಾ ವಿಚಾರ ವಿಮರ್ಶೆ ಮಾಡಿ ನಂತರ ಅಮ್ಮನನ್ನು ಸ್ವಲ್ಪ ದಿವಸ ಅಲ್ಲಿ ಅಡ್ಮಿಟ್ ಮಾಡುವ ನಿರ್ಧಾರ ತೆಗೆದುಕೊಂಡ.

ರಮೇಶ ಕೌಂಟರಿಗೆ ಹೋಗಿ ಡಾಕ್ಟರ್ ಕೊಟ್ಟ ಚೀಟಿ ತೋರಿಸಿದ, ಕೌಂಟರಲ್ಲಿ ಕುಳಿತ ಹುಡುಗಿ "ಯಾರು ನಿಮ್ಮ ಅಮ್ಮನ ಪೇಷಂಟ್? ನಿಮಗೆ ಹೋಮ್ ನರ್ಸ್ ಸಹ ಬೇಕೇ"? ಎಂದು ಕೇಳಿದಳು. 

ರಮೇಶ " ಹೌದು ನನ್ನಮ್ಮ, ನಾವು ಒಂದು ಹುಡುಗಿಗೆ ಮೊದಲೇ ಇಟ್ಟಿದ್ದೇವೆ, ಅದಕ್ಕೆ ಸದ್ಯ ಹೋಮ್  ನರ್ಸ್ ಬೇಡ " ಎಂದ.

ಅದಕ್ಕೆ ಅವಳು " ಓ ಕೆ, ಹಾಗಾದರೆ ನೀವು ೧೫೦೦೦ ಡೆಪಾಸಿಟ್ ಕೊಡಿ, ಬೆಡ್ ಚಾರ್ಜ್ ದಿನಕ್ಕೆ ಸಿಂಗಲ್ ಸಪರೇಟ್  ರೂಮ್ ಆದರೆ ೨೫೦, ಜನರಲ್ ಆದರೆ ೧೫೦ ಮತ್ತೆ ಮದ್ದಿನ ಹಾಗು  ಡಾಕ್ಟರ್ ಫೀಸ್ ಬೇರೆ ಮತ್ತೆ ಒಂದುವೇಳೆ ಹೋಂ ನರ್ಸ್ ಬೇಕಾದರೆ ಅವಳ ಚಾರ್ಜ್ ಸಹ ಬೇರೆ ಆಗುತ್ತದೆ, ಡಿಸ್ಚಾರ್ಜ್ ಮಾಡುವಾಗ ನಿಮಗೆ ಲೆಕ್ಕ ಕೊಡುತ್ತೇವೆ"

ರಮೇಶ "ಜನರಲ್ ವಾರ್ಡಲ್ಲಿ ಎಷ್ಟು ಪೇಷಂಟ್ ಇರುತ್ತಾರೆ"?

ಅವಳು " ಆರು".

"ಒಹ್!!!ಹಾಗಾದರೆ ಸಪರೇಟ್ ರೂಮ್ ಇರಲಿ" ಎಂದು  ರಮೇಶ ೧೫೦೦೦ ಕೊಟ್ಟು ರಸೀದಿ ತೆಗೊಂಡ.  
ಅವಳು ಒಂದು ವಾರ್ಡ್ ಬಾಯನ್ನು ಕರೆದು "ಇವರೊಟ್ಟಿಗೆ ಹೋಗಿ ಇವರ ಅಮ್ಮನನ್ನು ೧೦೮ ನಂಬರ್ ವಾರ್ಡಿಗೆ ಸೇರಿಸು". 

ಅಮ್ಮ ಆಸ್ಪತ್ರೆಯಲ್ಲಿ ಸೇರಿಸುವುದು ಬೇಡನೆ ಅಂದರು, ತುಂಬಾ ಹಠ ಮಾಡಿದರು ಅದಕ್ಕೆ ದಿರೇಶ ಅವರಿಗೆ ತುಂಬಾ ಬೈದ, ಆದರೆ ಅದರ ನಂತರ ಸಹ ಅವರ ಹಠಯೇನು ಕಡಿಮೆಯಾಗಲಿಲ್ಲ ಮತ್ತೆ ಹೇಗೋ  ರಮೇಶ ತುಂಬಾ ಧೈರ್ಯದಿಂದ ಅವರಿಗೆ ಸಾಂತ್ವನ ನೀಡಿ ರಾಜಿ ಮಾಡಿದ.

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...