Showing posts with label ಮನುಜ. Show all posts
Showing posts with label ಮನುಜ. Show all posts
Tuesday, September 4, 2012
Friday, August 17, 2012
Tuesday, August 7, 2012
Monday, August 6, 2012
ದುಃಖ
ಮನುಜ...
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ದುಃಖ ನೀನು ಮಾಡಿದ ತಪ್ಪಿನ ಪರಿಣಾಮ
ಇದನ್ನು ಪ್ರತಿ ಮನುಷ್ಯನಿಗೆ ಸಹಿಸ ಬೇಕಾಗುತ್ತದೆ
ನಿನ್ನ ದುಃಖ ಬೇರೆ ಯಾರು ಹಂಚಲಾರರು
ನಿನ್ನ ಆಪ್ತ ಮಿತ್ರನಾಗಲಿ ,ಸಂಭಂದಿಕರಾಗಲಿ, ಕುಟುಂಬಿಯರಾಗಲಿ
ಇವರೆಲ್ಲ ನಿನಗೆ ಸಾಂತ್ವನೆ ಕೊಡಬಲ್ಲರು
ಸಹಾಯ ಮಾಡಬಲ್ಲರು
ಆದರೆ ನಿನ್ನ ದುಃಖ ಕಸಿದು ಕೊಳ್ಳಲಾರರು
ನಿನ್ನ ದುಃಖ ಕೇವಲ ನಿನ್ನದೇ
ನಿನ್ನ ದುಃಖದ ನೀನೆ ವಾರಸುದಾರ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ಚಾರಿತ್ರ್ಯ
ಮನುಜ ....
ನಿನ್ನ ಚಾರಿತ್ರ್ಯವೆ ನಿನ್ನ ಸಂಪತ್ತು
ಮಾಡು ಅದರ ರಕ್ಷಣೆ ಎಲ್ಲ ಹೊತ್ತು
ಇದರಿಂದ ಜೀವನದಲ್ಲಿ ಬರದು ನಿನಗೆ ಆಪತ್ತು
ಹಣ ಬರುವುದು ಹೋಗುವುದು
ಹಣದಿಂದ ಕ್ಷೀಣ ಆಗುವವನು ಕ್ಷೀಣ ಅಲ್ಲ
ಆದರೆ ಶೀಲದಿಂದ ಕ್ಷೀಣ ಆಗುವವನು ನಷ್ಟ ಆಗುವನು
ಕರ್ಮದಿಂದ, ಮನದಿಂದ,ವಚನದಿಂದ ಎಲ್ಲರನ್ನು ಗೌರವಿಸುವುದು
ಪ್ರೇಮ, ದಾನ ಇದೇ ನಿನ್ನ ಚಾರಿತ್ರ್ಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ನಿನ್ನ ಚಾರಿತ್ರ್ಯವೆ ನಿನ್ನ ಸಂಪತ್ತು
ಮಾಡು ಅದರ ರಕ್ಷಣೆ ಎಲ್ಲ ಹೊತ್ತು
ಇದರಿಂದ ಜೀವನದಲ್ಲಿ ಬರದು ನಿನಗೆ ಆಪತ್ತು
ಹಣ ಬರುವುದು ಹೋಗುವುದು
ಹಣದಿಂದ ಕ್ಷೀಣ ಆಗುವವನು ಕ್ಷೀಣ ಅಲ್ಲ
ಆದರೆ ಶೀಲದಿಂದ ಕ್ಷೀಣ ಆಗುವವನು ನಷ್ಟ ಆಗುವನು
ಕರ್ಮದಿಂದ, ಮನದಿಂದ,ವಚನದಿಂದ ಎಲ್ಲರನ್ನು ಗೌರವಿಸುವುದು
ಪ್ರೇಮ, ದಾನ ಇದೇ ನಿನ್ನ ಚಾರಿತ್ರ್ಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Thursday, August 2, 2012
ವಾಣಿ
ಮನುಜ...
ನೀನು ನುಡಿಯುವ ವಾಣಿ ಸರಳ ಇರಬೇಕು
ನಿನ್ನ ಮಾತಿನಲ್ಲಿ ಯಾವಾಗಲು ನಿನ್ನ ನಿಯಂತ್ರಣ ಇರಬೇಕು
ನಿನ್ನ ಮಾತಿನಲ್ಲಿ ಇತರರ ಬಗ್ಗೆ ದ್ವೇಷ ಇರದಿರಲಿ
ನಿನ್ನ ಮಾತಿನಲ್ಲಿ ಅನ್ಯರ ಕೇವಲ ಒಳ್ಳೆ ಗುಣ ಹೊರ ಬರಲಿ
ವಾಣಿಯಲ್ಲಿ ಸಂಯಮ ಒಂದು ತಪಸ್ಸು
ಇದು ಯಾವಾಗಲೂ ನಿನ್ನ ವಶದಲ್ಲಿರಲಿ
ಕಠೋರ ಮತ್ತು ಕಹಿ ಪದಗಳನ್ನು ನುಡಿಯ ಬೇಡ
ಇದರಿಂದ ದೊಡ್ಡ ಅನರ್ಥ ಆಗುವುದು
ಸಿಹಿ ಸುಸಂಸ್ಕೃತ ಮಾತಿನಿಂದ ನೀನು ಅನೇಕ ಮಿತ್ರರನ್ನು ಗಳಿಸುವೆ
ಯಾವಾಗಲೂ ನಿನ್ನ ಮಾತಿನಿಂದ ಅನ್ಯರು ತೃಪ್ತಿ ಪಡೆಯಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ನೀನು ನುಡಿಯುವ ವಾಣಿ ಸರಳ ಇರಬೇಕು
ನಿನ್ನ ಮಾತಿನಲ್ಲಿ ಯಾವಾಗಲು ನಿನ್ನ ನಿಯಂತ್ರಣ ಇರಬೇಕು
ನಿನ್ನ ಮಾತಿನಲ್ಲಿ ಇತರರ ಬಗ್ಗೆ ದ್ವೇಷ ಇರದಿರಲಿ
ನಿನ್ನ ಮಾತಿನಲ್ಲಿ ಅನ್ಯರ ಕೇವಲ ಒಳ್ಳೆ ಗುಣ ಹೊರ ಬರಲಿ
ವಾಣಿಯಲ್ಲಿ ಸಂಯಮ ಒಂದು ತಪಸ್ಸು
ಇದು ಯಾವಾಗಲೂ ನಿನ್ನ ವಶದಲ್ಲಿರಲಿ
ಕಠೋರ ಮತ್ತು ಕಹಿ ಪದಗಳನ್ನು ನುಡಿಯ ಬೇಡ
ಇದರಿಂದ ದೊಡ್ಡ ಅನರ್ಥ ಆಗುವುದು
ಸಿಹಿ ಸುಸಂಸ್ಕೃತ ಮಾತಿನಿಂದ ನೀನು ಅನೇಕ ಮಿತ್ರರನ್ನು ಗಳಿಸುವೆ
ಯಾವಾಗಲೂ ನಿನ್ನ ಮಾತಿನಿಂದ ಅನ್ಯರು ತೃಪ್ತಿ ಪಡೆಯಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Tuesday, July 31, 2012
ದೃಡ ಸಂಕಲ್ಪ
ಮನುಜ...
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ
Monday, July 30, 2012
Sunday, July 29, 2012
ದಾನ
ಮನುಜ...
ದಾನ ಒಂದು ಉತ್ತಮ ಕಾರ್ಯ
ದಾನದ ಮಹತ್ವ ಶ್ರೇಷ್ಠ
ಸ್ನಾನ ಮಾಡಿದ ನಂತರ ಮೈ ಶುದ್ಧ ಆಗುವ ಹಾಗೆ
ದಾನ ಮಾಡಿದರೆ ಧನ ಶುದ್ಧ ಆಗುತ್ತದೆ
ಕಪಟ ಮನಸ್ಸಿಂದ ಮಾಡಿದ ದಾನ ದಾನ ಅಲ್ಲ
ನಿಷ್ಕಪಟ ಮನಸ್ಸಿಂದ ಮಾಡಿದ ದಾನವೇ ನಿಜ ದಾನ
ದಾನ ಅಂದರೆ ತ್ಯಾಗ
ದಾನ ಮನಸ್ಸು ಪವಿತ್ರ ಮಾಡುವ ಯೋಗ
ದಾನ ದೇವರ ಪೂಜೆ ಸಮಾನ
ಕೈಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ದಾನ ಒಂದು ಉತ್ತಮ ಕಾರ್ಯ
ದಾನದ ಮಹತ್ವ ಶ್ರೇಷ್ಠ
ಸ್ನಾನ ಮಾಡಿದ ನಂತರ ಮೈ ಶುದ್ಧ ಆಗುವ ಹಾಗೆ
ದಾನ ಮಾಡಿದರೆ ಧನ ಶುದ್ಧ ಆಗುತ್ತದೆ
ಕಪಟ ಮನಸ್ಸಿಂದ ಮಾಡಿದ ದಾನ ದಾನ ಅಲ್ಲ
ನಿಷ್ಕಪಟ ಮನಸ್ಸಿಂದ ಮಾಡಿದ ದಾನವೇ ನಿಜ ದಾನ
ದಾನ ಅಂದರೆ ತ್ಯಾಗ
ದಾನ ಮನಸ್ಸು ಪವಿತ್ರ ಮಾಡುವ ಯೋಗ
ದಾನ ದೇವರ ಪೂಜೆ ಸಮಾನ
ಕೈಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Saturday, July 28, 2012
ನಕಾರಾತ್ಮಕ ಸಕಾರಾತ್ಮಕ
ಮನುಜ...
ನಕಾರಾತ್ಮಕ ಚಿಂತನೆ ಅಂದರೆ
ಒಂದು ಅಂಟು ರೋಗ
ಇದರಿಂದ ದೂರವಿರು
ಸಕಾರಾತ್ಮಕ ಚಿಂತನೆ ಮಾಡು
ಆದರೆ ಸಕಾರಾತ್ಮಕ ಚಿಂತನೆಯಿಂದ
ಒಳ್ಳೆಯದೇ ಸಂಭವಿಸುವುದು ಎಂಬ ಇಡಬೇಡ ತಪ್ಪುಗ್ರಹಿಕೆ
ಏನು ಆಗುವುದೋ ಎಲ್ಲ ಒಳ್ಳೆಯದೇ ಆಗುವುದು ಎಂದು ಇಡು ನಂಬಿಕೆ
ನಕಾರಾತ್ಮಕ ಚಿಂತನೆಯಿಂದ ಒಳಗಾಗುವೆ ತೊಂದರೆಗೆ
ಸಕಾರಾತ್ಮಕ ಚಿಂತನೆಯಿಂದ ನೀನು ನಡೆ ಯಶಸ್ಸಿನ ದಾರಿಗೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ನಕಾರಾತ್ಮಕ ಚಿಂತನೆ ಅಂದರೆ
ಒಂದು ಅಂಟು ರೋಗ
ಇದರಿಂದ ದೂರವಿರು
ಸಕಾರಾತ್ಮಕ ಚಿಂತನೆ ಮಾಡು
ಆದರೆ ಸಕಾರಾತ್ಮಕ ಚಿಂತನೆಯಿಂದ
ಒಳ್ಳೆಯದೇ ಸಂಭವಿಸುವುದು ಎಂಬ ಇಡಬೇಡ ತಪ್ಪುಗ್ರಹಿಕೆ
ಏನು ಆಗುವುದೋ ಎಲ್ಲ ಒಳ್ಳೆಯದೇ ಆಗುವುದು ಎಂದು ಇಡು ನಂಬಿಕೆ
ನಕಾರಾತ್ಮಕ ಚಿಂತನೆಯಿಂದ ಒಳಗಾಗುವೆ ತೊಂದರೆಗೆ
ಸಕಾರಾತ್ಮಕ ಚಿಂತನೆಯಿಂದ ನೀನು ನಡೆ ಯಶಸ್ಸಿನ ದಾರಿಗೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Thursday, July 26, 2012
ಶರೀರ
ಮನುಜ...
ನಿನ್ನ ಶರೀರ ಒಂದು ಅಮೂಲ್ಯ ಕೊಡುಗೆ
ಇದು ಒಂದು ಕ್ರಿಯಾತ್ಮಕ ದೇವಾಲಯ
ಇದನ್ನು ಪವಿತ್ರವಾಗಿ ಇಡು
ನಿನ್ನ ಮನಸ್ಸು ನಿರ್ಮಲ ಶಾಂತವಾಗಿರಲಿ
ಮನಸ್ಸು ಉದ್ವೇಗ ಮುಕ್ತವಾಗಿದ್ದರೆ
ನಿನ್ನ ಶರೀರ ಶಕ್ತಿ ನಿರ್ಮಾಣ ಮಾಡುವ ಮನೆ ಆಗುತ್ತದೆ
ನಿನ್ನ ಆರೋಗ್ಯ ನಿನ್ನ ಕೈಯಲ್ಲಿ
ದಿನ ನಿತ್ಯ ಸ್ವಲ್ಪ ಸಮಯ ಕಳೆ ವ್ಯಾಯಾಮ ಹಾಗು ಧ್ಯಾನದಲಿ
ಶರೀರವೆ ನಿನ್ನ ಸಂಪತ್ತು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ನಿನ್ನ ಶರೀರ ಒಂದು ಅಮೂಲ್ಯ ಕೊಡುಗೆ
ಇದು ಒಂದು ಕ್ರಿಯಾತ್ಮಕ ದೇವಾಲಯ
ಇದನ್ನು ಪವಿತ್ರವಾಗಿ ಇಡು
ನಿನ್ನ ಮನಸ್ಸು ನಿರ್ಮಲ ಶಾಂತವಾಗಿರಲಿ
ಮನಸ್ಸು ಉದ್ವೇಗ ಮುಕ್ತವಾಗಿದ್ದರೆ
ನಿನ್ನ ಶರೀರ ಶಕ್ತಿ ನಿರ್ಮಾಣ ಮಾಡುವ ಮನೆ ಆಗುತ್ತದೆ
ನಿನ್ನ ಆರೋಗ್ಯ ನಿನ್ನ ಕೈಯಲ್ಲಿ
ದಿನ ನಿತ್ಯ ಸ್ವಲ್ಪ ಸಮಯ ಕಳೆ ವ್ಯಾಯಾಮ ಹಾಗು ಧ್ಯಾನದಲಿ
ಶರೀರವೆ ನಿನ್ನ ಸಂಪತ್ತು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Wednesday, July 25, 2012
ಸಮಯ ಬಂದಾಗ
ಮನುಜ...
ಇಷ್ಟು ಅವಸರ ಯಾಕೆ?
ಮನಸ್ಸು ಓಡುತ್ತಿದೆಯೇ
ಮನಸ್ಸನ್ನು ಹತೋಟಿಯಲ್ಲಿ ಇಡು
ಎಲ್ಲ ಕಾರ್ಯ ಸಮಯ ಬಂದಾಗಲೇ ಆಗುವುದು
ಸಮಯ ಬರದೆ ಯಾವುದೇ ಕೆಲಸ ಆಗದು
ಉಪಯುಕ್ತ ಸಮಯ ಬಂದಾಗಲೇ ನಿನಗೆ ಬೇಕಾದ ವಸ್ತು ಸಿಗುವುದು
ರೈತ ದುಡಿಯುವನು ದಿನ ರಾತ್ರಿ ಹೊಲದಲ್ಲಿ
ಆದರೆ ಋತು ಬಂದಾಗಲೇ ಬೆಳೆ ಆಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
(ಸಂತ ಕಬೀರ್ ಅವರ ಒಂದು ದೋಹದ ಆದಾರಿತ )
ಇಷ್ಟು ಅವಸರ ಯಾಕೆ?
ಮನಸ್ಸು ಓಡುತ್ತಿದೆಯೇ
ಮನಸ್ಸನ್ನು ಹತೋಟಿಯಲ್ಲಿ ಇಡು
ಎಲ್ಲ ಕಾರ್ಯ ಸಮಯ ಬಂದಾಗಲೇ ಆಗುವುದು
ಸಮಯ ಬರದೆ ಯಾವುದೇ ಕೆಲಸ ಆಗದು
ಉಪಯುಕ್ತ ಸಮಯ ಬಂದಾಗಲೇ ನಿನಗೆ ಬೇಕಾದ ವಸ್ತು ಸಿಗುವುದು
ರೈತ ದುಡಿಯುವನು ದಿನ ರಾತ್ರಿ ಹೊಲದಲ್ಲಿ
ಆದರೆ ಋತು ಬಂದಾಗಲೇ ಬೆಳೆ ಆಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
(ಸಂತ ಕಬೀರ್ ಅವರ ಒಂದು ದೋಹದ ಆದಾರಿತ )
Tuesday, July 24, 2012
ಜೀವನದ ಶರತ್ಕಾಲ
ಮನುಜ..
ಕಷ್ಟದಿಂದ ಹೆದರುವೆ ಯಾಕೆ ?
ಕಷ್ಟ ಬರದೆ ಇಷ್ಟ ಸಿಗುವುದೇ ?
ನಿನ್ನ ಈ ಕಷ್ಟ ತಾತ್ಕಾಲಿಕ
ನಿನಗೆ ಒದಗಿದ ಈ ಹಾಳು ಸಮಯ ಒಂದು ಪರೀಕ್ಷೆ
ನೀನು ಈ ಪರೀಕ್ಷೆಯಲ್ಲಿ ಉತ್ತಿರ್ಣನಾಗು
ನಿನ್ನ ಸಹ ಒಳ್ಳೆ ಸಮಯ ಬರುವುದು
ಜೀವನದ ಶರತ್ಕಾಲ ಮುಗಿದು
ನಿನ್ನ ಒಣಗಿದ ಈ ಬದುಕು ಶಾಖೆಗಳಲ್ಲಿ ಹೊಸ ಮೊಗ್ಗುಗಳು ಬರುವುದು
ಪುನಃ ನಿನ್ನ ಜೀವನದಲಿ ಖುಷಿಯ ಹೂವು ಅರಳುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ಕಷ್ಟದಿಂದ ಹೆದರುವೆ ಯಾಕೆ ?
ಕಷ್ಟ ಬರದೆ ಇಷ್ಟ ಸಿಗುವುದೇ ?
ನಿನ್ನ ಈ ಕಷ್ಟ ತಾತ್ಕಾಲಿಕ
ನಿನಗೆ ಒದಗಿದ ಈ ಹಾಳು ಸಮಯ ಒಂದು ಪರೀಕ್ಷೆ
ನೀನು ಈ ಪರೀಕ್ಷೆಯಲ್ಲಿ ಉತ್ತಿರ್ಣನಾಗು
ನಿನ್ನ ಸಹ ಒಳ್ಳೆ ಸಮಯ ಬರುವುದು
ಜೀವನದ ಶರತ್ಕಾಲ ಮುಗಿದು
ನಿನ್ನ ಒಣಗಿದ ಈ ಬದುಕು ಶಾಖೆಗಳಲ್ಲಿ ಹೊಸ ಮೊಗ್ಗುಗಳು ಬರುವುದು
ಪುನಃ ನಿನ್ನ ಜೀವನದಲಿ ಖುಷಿಯ ಹೂವು ಅರಳುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Monday, July 23, 2012
ಉಡುಪು
ಮನುಜ...
ಕಲ್ಮಶ ತುಂಬಿದ ಈ ದೇಹದ ಮೇಲೆ
ನವ ನವೀನ ಉಡುಪು ಧರಿಸುವೆ
ಧರಿಸಿದ ಬಟ್ಟೆಗಳಲ್ಲಿ ಇಲ್ಲ ನಿನ್ನ ಸಂಸ್ಕೃತಿ
ನೀನು ಮಾಡುವ ಆಡಂಬರದಿಂದ ಸಿಗದು ನಿನಗೆ ಉನ್ನತಿ
ನಿನ್ನ ವ್ಯವಹಾರದಲ್ಲಿ ನಿನ್ನ ಯೋಗ್ಯತೆ ಕಂಡು ಬರಲಿ
ನಿನ್ನ ಒಳ್ಳೆ ಕಾರ್ಯದಿಂದ ಜನರು ನಿನ್ನನ್ನು ಗುರುತಿಸಲಿ
ನಿನ್ನ ಮನಸ್ಸು ನದಿಯ ನೀರಿನಂತೆ ನಿರ್ಮಲವಾಗಿರಲಿ
ನಿನ್ನ ಜೀವನ ದೀಪದಂತೆ ಬೆಳಕಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ಕಲ್ಮಶ ತುಂಬಿದ ಈ ದೇಹದ ಮೇಲೆ
ನವ ನವೀನ ಉಡುಪು ಧರಿಸುವೆ
ಧರಿಸಿದ ಬಟ್ಟೆಗಳಲ್ಲಿ ಇಲ್ಲ ನಿನ್ನ ಸಂಸ್ಕೃತಿ
ನೀನು ಮಾಡುವ ಆಡಂಬರದಿಂದ ಸಿಗದು ನಿನಗೆ ಉನ್ನತಿ
ನಿನ್ನ ವ್ಯವಹಾರದಲ್ಲಿ ನಿನ್ನ ಯೋಗ್ಯತೆ ಕಂಡು ಬರಲಿ
ನಿನ್ನ ಒಳ್ಳೆ ಕಾರ್ಯದಿಂದ ಜನರು ನಿನ್ನನ್ನು ಗುರುತಿಸಲಿ
ನಿನ್ನ ಮನಸ್ಸು ನದಿಯ ನೀರಿನಂತೆ ನಿರ್ಮಲವಾಗಿರಲಿ
ನಿನ್ನ ಜೀವನ ದೀಪದಂತೆ ಬೆಳಕಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Sunday, July 22, 2012
Saturday, July 21, 2012
ಕರ್ತವ್ಯ
ಮನುಜ...
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ದುಂಬಿಯು ಶೇಖರಿಸುವುದು ಜೇನು ಮೀರಿ ತನ್ನ ಎಲ್ಲ ಶಕ್ತಿ
ಕರಡಿ ಕದಿಯುವುದು ಆ ಜೇನನ್ನು ಬಳಸಿ ತನ್ನ ಯುಕ್ತಿ
ಆದರೆ ದುಂಬಿ ತನ್ನ ಕರ್ತವ್ಯವನ್ನು ಮರೆಯದು
ತನ್ನ ಕಾರ್ಯವನ್ನು ಹಾಗೆಯೇ ಮುಂದುವರಿಸುವುದು
ಮಾಡುವರು ಹಲವರು ತನ್ನ ಕಾರ್ಯ ಭಕ್ತಿಯಿಂದ
ಜೀವಿಸುವರು ಹಲವರು ಈ ಜೀವನ ಮೋಸ ಕಪಟದಿಂದ
ನಿನ್ನ ಜೀವನದ ನೀನೆ ಹೊಣೆಗಾರ
ತನ್ನ ಜೀವನದ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸು
ಮೋಸ ಕಪಟದಿಂದ ದೂರವಿರು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಬದುಕಿಲ್ಲ
ಪ್ರಾಮಾಣಿಕವಾಗಿ ನೀ ಬದುಕು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Friday, July 20, 2012
ಸ್ವಾಭಾವಿಕ ಪ್ರಕೃತಿ
ಮನುಜ...
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
ಹುಲ್ಲು ಬೆಳೆಯಲು ಪ್ರಯತ್ನಿಸುವುದಿಲ್ಲ
ಸ್ವತಃ ಬೆಳೆಯುತ್ತದೆ
ಮೀನು ಈಜಲು ಪ್ರಯತ್ನಿಸುವುದಿಲ್ಲ
ಸ್ವತಃ ಈಜುತ್ತದೆ
ಹೂವು ಅರಳಲು ಪ್ರಯತ್ನಿಸುವುದಿಲ್ಲ
ಸ್ವತಃ ಅರಳುತ್ತದೆ
ಪಕ್ಷಿಗಳು ಹಾರಲು ಪ್ರಯತ್ನಿಸುವುದಿಲ್ಲ
ಸ್ವತಃ ಹಾರುತ್ತದೆ
ಇದು ಅವರವರ ಸ್ವಾಭಾವಿಕ ಪ್ರಕೃತಿ
ಹೀಗೆಯೇ ನಿನ್ನ ಪ್ರಕೃತಿ ನೀ ಅರಿ
ತನ್ನ ಕನಸುಗಳ ಮಾರ್ಗದಲಿ ಯಾವುದೇ ಕಾಳಜಿ ಮಾಡದೆ ನಡೆ
ನಿನ್ನ ಮನಸ್ಸಲಿ ಆ ಕನಸ್ಸನ್ನು ಪೂರ್ಣ ಗೊಳಿಸುವ ದೃಡ ಸಂಕಲ್ಪ ಇದ್ದರೆ
ಯಾವುದೇ ಕಠಿಣ ಪ್ರಯಾಸ ಮಾಡದೆ ಆ ಕನಸು ನನಸಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
Thursday, July 19, 2012
Subscribe to:
Posts (Atom)
-
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...


















