ಮನುಜ
ರಾತ್ರಿ ನಿದ್ದೆಯಲಿ ಕನಸು ಕಂಡದು ಸಾಲದೆ
ಹಗಲಲ್ಲೂ ಕನಸು ಕಾಣುವೆ
ಕೇವಲ ಕನಸು ಕಂಡು
ಕನಸು ನನಸಾಗುವುದು ಎಂದು
ಹೀಗೆಯೇ ಕೈ ಕಟ್ಟಿ ಕುಳಿತುಕೊಳ್ಳ ಬೇಡ
ನಿನ್ನ ಕನಸಿನ ನೀನೆ ವಾರಸುದಾರ
ನಿನ್ನ ಕನಸನ್ನು ಸಾಕಾರ ಮಾಡಲು ಪರಿಶ್ರಮ ಪಡೆ
ನಿನ್ನ ಕನಸಿನ ಮಾರ್ಗದಲಿ ನೀ ನಡೆ
ಮನಸ್ಸು ಮಾಡಿದರೆ ಏನನ್ನು ಸಾಧಿಸ ಬಹುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment