Monday, July 16, 2012

ಜ್ಞಾನ ಗುರು

ಅವನು ಕೊಟ್ಟ ವರವಿರಬೇಕು
ನನ್ನ ಭಾವನೆಗಳು ಅಕ್ಷರ ರೂಪ ಪಡೆಯಿತು

ಅವನು ತನ್ನ ದೀಪದಿಂದ ನನ್ನ ದೀಪ ಹಚ್ಚಿರಬೇಕು
ನನ್ನ ಜ್ಞಾನ ದೀಪ ಪ್ರಕಾಶಮಯವಾಯಿತು

ಅವನು ಭೂಮಿಯಲಿ ವಾಸಿಸುವ ಸೂರ್ಯನಾಗಿರಬೇಕು
ನನ್ನ ಅಂಧಕಾರದಲ್ಲಿ ಜ್ಞಾನದ ಪ್ರಕಾಶ ಚೆಲ್ಲುತಿರುವನು

ಅವನು ಮಾತಾ ಸರಸ್ವತಿಯ ದೂತನಿರಬೇಕು
ಅವನ ಸಹವಾಸ ಮಾತ್ರದಿಂದ ನನಗೆ ಜ್ಞಾನೋದಯವಾಯಿತು

ಅವನು ಮಹಾ ದಾನಿ
ಅವನಿಂದ ದಾನ ಪಡೆದವನು ಇಂದು ಅಕ್ಷರ ಜ್ಞಾನಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...