Wednesday, September 30, 2020

ಮನೆ ಅಂದರೆ


 

ಮನೆ ಅಂದರೆ,

ನಾಲ್ಕು ಚಕ್ರದ ಮೇಲೆ ಮಾಡಿದ 

ಆಧುನಿಕ ವಠಾರ ಅಲ್ಲ,

ಮನೆ ಅಂದರೆ,

ನಾಲ್ಕು ಗೋಡೆ ಚಪ್ಪರ ಇದ್ದ ವಸತಿ ಅಲ್ಲ,

ಮನೆ ಅಂದರೆ,

ಐಷಾರಾಮಿ ಕಟ್ಟಡ ಅಲ್ಲ,

ಮನೆ ಅಂದರೆ,

ವೃದ್ಧರನ್ನು ಬಲವಂತವಾಗಿ 

ಅವರ ಅಸಹಾಯಕತೆ ನಿರ್ಲಕ್ಷಿಸಿ, 

ಅವರನ್ನು ಇಷ್ಟವಿಲ್ಲದೇ 

ಇಟ್ಟಿದ್ದ ಆಶ್ರಯ ಸ್ಥಾನ ಅಲ್ಲ,

ಮನೆ ಅಂದರೆ 

ಒಂದು ಭಾವನೆ, 

ಕುಟುಂಬದ ಮಧ್ಯೆ ಪರಸ್ಪರ ಪ್ರೀತಿ,

ತಿಳುವಳಿಕೆ, ನಂಬಿಕೆ, ತ್ಯಾಗ 

ಇದ್ದ ಆವಾಸವೇ

ನಿಜವಾದ ಮನೆ.


by ಹರೀಶ್ ಶೆಟ್ಟಿ,ಶಿರ್ವ



Tuesday, September 29, 2020

सौ सौ यादें दिल की गहराई से,




ನೂರೊಂದು ನೆನಪು' ಈ ಹಾಡನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿದ್ದೇನೆ.
सौ सौ यादें दिल की गहराई से, गीत बनके निकले आज ख़ुशी से|3 माथे की सिन्दूर मुस्कुराते रहे इसी तरह से, सदा खिलता रहे ये पावन बंधन सलामती से| सौ सौ यादें दिल की गहराई से, गीत बनके निकले आज ख़ुशी से| प्रेम की ढ़ाली से लगा वो फूल, बालों में सजे तो ख़ुशी दे, बालों से गिरे तो दे दर्द कितना| हाथों में लिए हाथ, देखा जो सपना, खेल किस्मत का, लाया जो आनंद इतना| प्यार हँसता रहे, जीवन चमकता रहे, प्यार हँसता रहे, जीवन चमकता रहे, तू रहे हमेशा ख़ुशी से| सौ सौ यादें दिल की गहराई से, गीत बनके निकले आज ख़ुशी से| होंठों पे आयी सिर्फ एक बात, दिल में दबाये कहीं हज़ारों राज़, तीन गांठ में बंधा ये जीवन के रिश्ते, मन का मिला तो कटे हँसते हँसते, तेरी हर ख़ुशी में, मेरा साँस रहे, तेरी हर ख़ुशी में, मेरा साँस रहे, मेरी शुभकामनाएँ इस गीत से| सौ सौ यादें दिल की गहराई से, गीत बनके निकले आज ख़ुशी से| गीतकार : आर एन जयगोपाल हिंदी में : हरीश शेट्टी, शीर्वा Song : noorondu nenapu ede aaLadinda Movie : Bandhana Singer : SPB Music : M.Ranga Rao Lyrics : R N Jayagopal Director : S.V. Ragendra Singh Babu Producer : S.V. Ragendra Singh Babu
ನೂರೊಂದು ನೆನಪು......,ಎದೆಯಾಳದಿಂದ..........
ಹಾಡಾಗಿ ಬಂತು........ಆನಂದದಿಂದ....... 
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ...

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ  ಈ ಹಾಡಿನಿಂದಾ

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

Wednesday, September 23, 2020

ಸಾಗರ ಪ್ರಾಣ ತಳಮಳಿಸುತ್ತಿದೆ




ಹೇ ಕರೆದುಕೊಂಡೋಗು ನನ್ನನ್ನು ಪುನಃ ನನ್ನ ಮಾತೃಭೂಮಿಗೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಭೂಮಾತೆಯ ಚರಣ ತೊಳೆಯುವುದನ್ನು 
ನಾನು ದಿನ ನಿತ್ಯ ನೋಡುತ್ತಿದ್ದೆ, 

ನೀನು ಹೇಳಿದೆ ಪರದೇಶಕ್ಕೆ ಹೋಗುವಯೆಂದು,
ಅಲ್ಲಿಯ ವಿವಿಧ ಅದ್ಭುತ ಪ್ರಕೃತಿಯ ನೋಟ ನೋಡುವಯೆಂದು, 

ನನ್ನ ತಾಯಿ ನನ್ನ ವಿರಹದಲ್ಲಿ ನೊಂದುತ್ತಿದ್ದಾಳೆ, 
ಆದರೆ ನೀನು ಅವಳಿಗೆ ಭರವಸೆ ನೀಡುರುವೆ, 

ಹೇಗೆ ನನ್ನನ್ನು ಕರೆದುಕೊಂಡೋಗುವೆಯೋ,
ಹಾಗೆಯೇ ಹಿಂತುರುಗಿ ಕರೆದುಕೊಂಡು ಬರುವೆಯೆಂದು, 

ನಾನು ನಿನ್ನ ಮಾತನ್ನು ನಂಬಿದೆ, 
ಯೋಚಿಸಿದೆ ಹಿಂತಿರುಗಿ ಬಂದು ಇಲ್ಲಿಯ ಅನುಭವ ನನ್ನ ಮಾತೃಭೂಮಿಯನ್ನು ಸದೃಢಗೊಳಿಸಲು ಉಪಯೋಗಿಸುವೆಯೆಂದು, 

ಅದಕ್ಕೆ ಅವಳಿಗೆ ಧೈರ್ಯ ನೀಡಿ, 
ನಾನು ಹಿಂತಿರುಗಿ ಬರುವೆಯೆಂದು ಹೇಳಿ ಬಂದಿದ್ದೆ,

ಸಾಗರ ಪ್ರಾಣ ತಳಮಳಿಸುತ್ತಿದೆ, 

ಭೇಟೆಗಾರನ ಕಾಣದ ಬಲೆಯಲ್ಲಿ ಜಿಂಕೆ ಸಿಕ್ಕಿಬಿದ್ದಂತೆ,
ನಾನು ನಿನ್ನ ಮಾತಿಗೆ ಮೋಸ ಹೋದೆ, 

ಹೇಗೆ ಸಹಿಸಲಿ ಈ ವಿರಹ ಮಾತೃಭೂಮಿಯ,
ಎಲ್ಲ ದಿಶೆಯಲ್ಲೂ ಕತ್ತಲೆ ಈಗ ಕಾವಿದೆ, 

ನಾನು ಜ್ಞಾನದ ಹೂಗಳನ್ನು ಹೆಕ್ಕಿದೆ, 
ಅವಳು ಅದರ ಸುವಾಸನೆಯನ್ನು ಭಾವಿಸಲೆಂದು, 

ಆದರೆ ಮಾತೃಭೂಮಿಯ ಪ್ರಗತಿಗೆ ಇದರ ಉಪಯೋಗ ಆಗದಿದ್ದರೆ, 
ಇದು ವಿದ್ಯೆಯ ವ್ಯರ್ಥ ಭಾರವೊಂದು, 

ಅವಳೊಂದು ಮಾವಿನ ಮರದ ಹಾಗೆ, 
ವಿವಿಧ ವಸ್ತುಗಳನ್ನು ನೀಡುವಳು ಬೇಕಾದವರಿಗೆ,

ಅವಳೊಂದು ನವ ಕುಸುಮದ ಹಾಗೆ, ಆದರೆ ಈ ಉಪವನವು ಈಗ ಪರಕೀಯ ನನಗಾಗಿದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಈ ಬ್ರಹ್ಮಾಂಡದಲ್ಲಿ ಅನೇಕ ನಕ್ಷತ್ರಪುಂಜಗಳು, 
ಆದರೆ ನನಗೆ ಪ್ರಿಯ ನನ್ನ ಮಾತೃಭೂಮಿಯ ತಾರೆ,

ಅದೆಷ್ಟೋ ಸುಖ ಸೌಕರ್ಯ ಇಲ್ಲಿ ಎನಗೆ, 
ಆದರೆ ಅಮ್ಮನ ಜೋಪಡಿ ಇಷ್ಟ ನನಗೆ, 

ಅವಳ ವಿನಃ ನನಗೆ ಯಾವ ರಾಜ್ಯವೂ ಬೇಡ, ವನವಾಸವೂ ಒಪ್ಪಿಗೆ ನನಗೆ ಅವಳ ಆಶ್ರಯದಲ್ಲಿ,

ಈಗ ಈ ಮೋಹಗಳೆಲ್ಲ ವ್ಯರ್ಥ ಅನಿಸುತ್ತಿದೆ, 
ನನ್ನ ಹೃದಯ ನೋವಿನಿಂದ ಅಳುತ್ತಿದೆ, 

ನಿನ್ನಲ್ಲಿ ಹರಿಯುವ ಆ ನದಿಯಿಂದ ಅಗಲಿ, 
ಕಣ್ಣೀರ ಧಾರೆಯಲ್ಲಿ ತೇಲುವಂತೆ ಆಗಿದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ನಿರ್ದಯಿಯಂತೆ ನೀ ನಗುತ್ತಿರುವೆ ಕಂಡು ನನ್ನ ವ್ಯಥೆಯನ್ನು , 
ಯಾಕೆ ಭರವಸೆ ನೀಡಿ ಮುರಿಯುವೆ ಹೀಗೆ ನೀನು, 

ಪರ ಸ್ವಾಮಿತ್ವದಲ್ಲಿ ತನ್ನನ್ನು ಶಕ್ತಿಶಾಲಿ ಎನ್ನುವವರೇ, ನಿಜದಲಿ ನೀವು ಭಯಭೀತವಾಗಿದ್ದಿರಿ ಆಂಗ್ಲರ ಆಡಳಿತದಿಂದ, 

ನನ್ನ ತಾಯಿಯನ್ನು ದುರ್ಬಲ ಎಂದು ವಂಚಿಸುವವರೇ, 
ದುರ್ಬಲ ನೀವಾಗಿದ್ದಿರಿ, 

ಆಂಗ್ಲರು ಬಂದು ಹೆದರಿಸಿದರೆ ಹೀಗೆಲ್ಲ, 
ನನ್ನ ತಾಯಿ ದುರ್ಬಲವೇನಲ್ಲ, 

ಹೇಳುವರು ಈಗ ಅಗಸ್ತ್ಯ ಮಹರ್ಷಿಯವರು ಇದನ್ನೇ, ಒಮ್ಮೆ ಅಂಗೈಯಲ್ಲಿ ಒಂದೇ ಕ್ಷಣದಲ್ಲಿ ಕುಡಿದವರು ನಿನಗೆ ಹಿಂದೆ, 

ಸಾಗರ ಪ್ರಾಣ ತಳಮಳಿಸುತ್ತಿದೆ, 

ಮೂಲ: ಈ ಮರಾಠಿ ಕವಿತೆಯನ್ನು ಸ್ವಾತಂತ್ರವೀರ ಸಾವರ್ಕರ್ ರವರು ಇಂಗ್ಲೆಂಡಿನ ಒಂದು ಸಾಗರ ತೀರದಲ್ಲಿ ಕುಳಿತು ಬರೆದಿದ್ದರು,ಕವಿತೆಯಲ್ಲಿ ಅವರು ತನ್ನನ್ನು ಪುನಃ ತನ್ನ ತಾಯಿನಾಡಿಗೆ ಹಿಂತಿರುಗಿ ಕರೆದುಕೊಂಡು ಹೋಗು ಎಂದು ಸಾಗರದಿಂದ ವಿನಂತಿಸುತ್ತಿದ್ದಾರೆ,ಕವಿತೆಯಲ್ಲಿ ಅವರು ತನ್ನ ದೇಶವನ್ನು ತನ್ನ ತಾಯಿಯೆಂದು ಉಲ್ಲೇಖಿಸಿದ್ದಾರೆ.

 ಅನುವಾದ: ಹರೀಶ್ ಶೆಟ್ಟಿ, ಶಿರ್ವ. ಈ ಮರಾಠಿ ಕವಿತೆಯನ್ನು ತನಗೆ ಅರ್ಥವಾದಷ್ಟು ಕನ್ನಡದಲ್ಲಿ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ,ನನ್ನ ಈ ಬಾಲಿಷ ಪ್ರಯತ್ನದಲ್ಲಿ ತಪ್ಪಿದ್ದರೆ ಕ್ಷಮಿಸಬೇಕು. 
ने मजसी ने परत मातृभूमीला सागरा प्राण तळमळला ॥धृ॥ 

भूमातेच्या चरणतला तुज धूता मी नित्य पाहिला होता मज वदलासी अन्य देशि चल जाऊ सृष्टिची विविधता पाहू तैं जननीहृद् विरहशंकितहि झाले परि तुवां वचन तिज दिधले मार्गज्ञ स्वये मीच पृष्ठि वाहीन त्वरित या परत आणीन विश्वसलो या तव वचनी मी जगद्नुभवयोगे बनुनी मी तव अधिक शक्ती उद्धरणी मी येईन त्वरे कथुनि सोडिले तिजला ॥ 
सागरा प्राण तळमळला 

शुक पंजरि वा हरिण शिरावा पाशी ही फसगत झाली तैशी भूविरह कसा सतत साहु या पुढती दशदिशा तमोमय होती गुणसुमने मी वेचियली या भावे की तिने सुगंधा घ्यावे जरि उद्धरणी व्यय न तिच्या हो साचा हा व्यर्थ भार विद्येचा ती आम्रवृक्षवत्सलता रे नवकुसुमयुता त्या सुलता रे तो बाल गुलाबहि आता रे फुलबाग मला हाय पारखा झाला ॥ 
सागरा प्राण तळमळला 

नभि नक्षत्रे बहुत एक परि प्यारा मज भरतभूमिचा तारा प्रासाद इथे भव्य परी मज भारी आईची झोपडी प्यारी तिजवीण नको राज्य मज प्रिया साचा वनवास तिच्या जरि वनिचा भुलविणे व्यर्थ हे आता रे बहु जिवलग गमते चित्ता रे तुज सरित्पते जी सरिता रे त्वदविरहाची शपथ घालितो तुजला ॥ 
सागरा प्राण तळमळला 

या फेनमिषें हससि निर्दया कैसा का वचन भंगिसी ऐसा त्वत्स्वामित्वा सांप्रत जी मिरवीते भिनि का आंग्लभूमीते मन्मातेला अबला म्हणुनि फसवीसी मज विवासनाते देशी तरि आंग्लभूमी भयभीता रे अबला न माझि ही माता रे कथिल हे अगस्तिस आता रे जो आचमनी एक क्षणी तुज प्याला ॥ 
सागरा प्राण तळमळला

Tuesday, September 22, 2020

ಹಿರಿಯ ಚಿತ್ರಕಾರ

 ವಯಸ್ಸು ಒಂದು ಸಂಖ್ಯೆ ಅಷ್ಟೇ,

ಕಲೆ, ಪ್ರತಿಭೆ ಮುಪ್ಪಾಗದು,

ವಸಾಹತು ಕಾಣಲಿ ಚಂದ ನನ್ನ,

ಕಾಲಾನುಕಾಲ ಉಳಿಯಲಿ ಅದರ ಅಂದ 

ಎಂದು ನೋಡಿ,

ಹಿರಿಯ ಚಿತ್ರಕಾರ


ಚಿತ್ರಿಸುತ್ತಿದ್ದಾರೆ ಮನೆ ಗೋಡೆಯನ್ನ


ಹರೀಶ್ ಶೆಟ್ಟಿ, ಶಿರ್ವ




Photos courtesy: Google

Monday, September 21, 2020

ದೇವರ ಪಾದ

 ಅರಳಿ ನಿಂತಿದೆ ಹೂವು,

ಏನೋ ಹೇಳುತ್ತಿದೆ ಹೂವು,

ದೇವರ ಪಾದ ಸಿಗಲಿ ಎನಗೆ,

ಎಂದು ಬೇಡುತ್ತಿದೆಯಾ ಹೂವು?


ಹರೀಶ್ ಶೆಟ್ಟಿ, ಶಿರ್ವ




Tuesday, September 15, 2020

ಮನಸ್ಸೇ

 ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ,

ನೀನು ಪ್ರೀತಿಸುವವನು ಭಾವಶೂನ್ಯ, 

ಅವನಿಗೆ ಭಾವನೆ ತಿಳಿದಿಲ್ಲ,

ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ


ಈ ಜೀವನದ ಏರು ಪೇರುವ ಬಿಸಿಲನ್ನು 

ಯಾರಿಗೂ ಬಂಧಿಸಲು ಸಾಧ್ಯವಿಲ್ಲ,

ವರ್ಣಕ್ಕೆ ಯಾರಿಗೂ ಪಹರೆ ನೀಡಲು ಸಾಧ್ಯವಿಲ್ಲ,

ರೂಪವನ್ನು ಯಾರಿಗೂ ಬಂಧಿಸಲು ಸಾಧ್ಯವಿಲ್ಲ,

ಯಾಕೆ  ಉಳಿಸಲು ಪ್ರಯತ್ನಿಸುತ್ತಿರುವೆ ಇಷ್ಟೆಲ್ಲಾ

ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ


ಅಷ್ಟೇ ಉಪಕಾರ ಎಂದು ತಿಳಿದುಕೋ, 

ಜೊತೆ ನೀಡಿದಷ್ಟು,

ಜನ್ಮ ಮರಣದ ಜೊತೆ ಒಂದು ಕನಸು,

ಈ ಕನಸನ್ನು ಮರೆತು ಬಿಡು,

ಯಾರೂ ಜೊತೆಯಲ್ಲಿ ಸಾಯುವುದಿಲ್ಲ

ಮನಸ್ಸೇ, ನೀನೇಕೆ ತಾಳ್ಮೆದಿಂದಿರುವುದಿಲ್ಲ


ಅನುವಾದ : ಹರೀಶ್ ಶೆಟ್ಟಿ,ಶಿರ್ವ ಮೂಲ:ಸಾಹಿರ್ ಲ್ಯೂದ್ಯ ನವಿ ಸಂಗೀತ: ರೋಷನ್ ಚಿತ್ರ :ಚಿತ್ರಲೇಖಾ

मन रे तू काहे ना धीर धरे
वो निर्मोही मोह ना जाने, जिनका मोह करे
मन रे ...

इस जीवन की चढ़ती ढलती
धूप को किसने बांधा
रंग पे किसने पहरे डाले
रुप को किसने बांधा
काहे ये जतन करे
मन रे ...

उतना ही उपकार समझ कोई
जितना साथ निभा दे
जनम मरण का मेल है सपना
ये सपना बिसरा दे
कोई न संग मरे
मन रे ...

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...