ಕೆಲವರು ಹೊಗಳಿ ಶ್ರೇಷ್ಟನಾಗಲು ಪ್ರಯತ್ನಿಸುತ್ತಾರೆ, ಕೆಲವರು ತೆಗಳಿ ಶ್ರೇಷ್ಟನಾಗಲು ಪ್ರಯತ್ನಿಸುತ್ತಾರೆ. ಒಟ್ಟಾರೆ ಬಹುತೇಕ ಜನರಲ್ಲಿ ನಾನೇ ಎಂಬ ಅಹಂ ಭಾವ. by ಹರೀಶ್ ಶೆಟ್ಟಿ, ಶಿರ್ವ
ಇಂದು ಸಾವಿರಾರು ತರಹದ ಬಿಸ್ಕೆಟ್ ಇದೆ ಮಾರ್ಕೆಟಲ್ಲಿ ಆದರೆ ಬಾಲ್ಯದಲ್ಲಿ ಅಪ್ಪ ಸಂತೆಯಿಂದ ಬರುವಾಗ ಪೇಪರಲ್ಲಿ ಮಡಚಿ ತರುವ ಆ ಎರಡು ತುಂಡು ಬಿಸ್ಕೆಟಿನ ರುಚಿ ಜಗದ ಯಾವ ಬಿಸ್ಕೆಟ್ ತಿಂದರು ಸಿಗದು by ಹರೀಶ್ ಶೆಟ್ಟಿ, ಶಿರ್ವ
ನಮಗೆ ನಾವೇ ಪ್ರೇರಣೆ ನಮ್ಮ ತಪ್ಪುಗಳೆ ನಮ್ಮ ಮಾರ್ಗದರ್ಶಕ ನಮ್ಮ ಆತ್ಮ ಸಂತುಷ್ಟಿಯೆ ನಮ್ಮ ಪ್ರಶಂಸೆ ನಮ್ಮ ಕೈಗಳೆ ನಮ್ಮ ಸೊತ್ತು ನಮ್ಮ ದೇಹವೆ ನಮ್ಮ ಸಾಮ್ರಾಜ್ಯ ನಮ್ಮ ನಾಲಗೆ ನಮ್ಮ ಶಸ್ತ್ರ ನಮ್ಮ ಹೃದಯದ ನುಡಿಯೆ ಸತ್ಯ ನುಡಿ ನಮ್ಮ ಕಣ್ಣೀರು ನಮ್ಮ ನೋವು ನಮ್ಮ ಭಯ ನಮ್ಮ ರೋಗ ನಮ್ಮ ಧೈರ್ಯವೆ ನಮ್ಮ ಔಷದಿ
ನಮ್ಮ ಛಲ ನಮ್ಮ ಗೆಲುವು ನಮ್ಮ ಆಲಸ್ಯ ನಮ್ಮ ಸೋಲು ನಮ್ಮ ಹಠ, ಕೋಪ ನಮ್ಮ ಶತ್ರು ನಮ್ಮ ತಾಳ್ಮೆ ನಮ್ಮ ಮಿತ್ರ by ಹರೀಶ್ ಶೆಟ್ಟಿ, ಶಿರ್ವ
ಕಪ್ಪೆಯ ಬೆಟ್ಟದ ತುದಿಗೆ ತಲುಪುವ ಸ್ಪರ್ಧೆ ಜರಗಿತು.
ಎಲ್ಲಾ ಕಪ್ಪೆಗಳು, ಇದು ಅಸಾಧ್ಯ ಎಂದು ಕೂಗಿದರು, ಆದರೆ ಒಂದು ಕಪ್ಪೆ ಬೆಟ್ಟದ ತುದಿಗೆ ತಲುಪಿತು.
ಹೇಗೆ?
ಅ ಕಪ್ಪೆ ಕಿವುಡ ಆಗಿತ್ತು.
*ನಕಾರಾತ್ಮಕ ಟೀಕೆ ಟೀಕೆ ಟಿಪ್ಪಣಿಗಳಿಗೆ ಕಿವುಡರಾಗಿ".
-------------------------------------------------
ಅಳಿಲು ಬೀಜವನ್ನು ಹೆಕ್ಕಿ ಮಣ್ಣಲ್ಲಿ ಮುಚ್ಚಿಟ್ಟು ನಂತರ ಮರೆತು ಹೋಗುವುದರಿಂದ ಈ ವಿಶ್ವದಲ್ಲಿ ಲಕ್ಷಾಂತರ ಮರಗಳು ಆಕಸ್ಮಿಕವಾಗಿ ಬೆಳೆಯುತ್ತದೆ,
"ಒಳ್ಳೆಯ ಕಾರ್ಯ ಮಾಡಿ ಹಾಗು ಮರೆತು ಬಿಡಿ" .
________________________________________________
ಅದು ನನ್ನ ,ಇದು ನಿನ್ನ , ನಮ್ಮದೇನೂ ಇಲ್ಲಿ ಇಲ್ಲ ಚಿನ್ನ
ಹೋದ ನಂತರ, ಉಳಿಯುವುದಿಲ್ಲ ಏನೂ ,ಎಲ್ಲವೂ ಸೇರುವುದು ಮಣ್ಣ