Monday, April 26, 2021

ಕಠಿಣ ಸಮಯ

 


ಎಂಥ ಕಠಿಣ ಸಮಯ, 

ನೀರವ ಮೌನ, 

ರಸ್ತೆ ಖಾಲಿ ಖಾಲಿ, 

ಆಸ್ಪತ್ರೆಯಲ್ಲಿ ಹೋರಾಟ,

ಮುರಿಯುತ್ತಿರುವ ಉಸಿರಾಟ, 

ಸ್ಮಶಾನಗಳಲ್ಲಿ ಸಾಲು ಸಾಲು,

ಆಪ್ತರ ರೋಧನೆ,

ಯಾವುದೇ ಅಂತ್ಯಕ್ರಿಯೆಯ ವಿಧಿ ಇಲ್ಲ, 

ಹೆಣದ ಬಾಯಿಗೆ ಒಂದು ತೊಟ್ಟು ನೀರು ಸಹ ಕೊಡಲು ಅನುಮತಿ ಇಲ್ಲ, 

ಅಯ್ಯೋ ಎಂತಹ ಸ್ಥಿತಿ, 

ಗಂಭೀರ ಪರಿಸ್ಥಿತಿ,

ಮಾನವ ಈಗಾದರೂ ಕಲಿ, 

ನಿನ್ನ ಸಂರಕ್ಷಣೆ ನಿನ್ನದೇ ಕೈಯಲ್ಲಿ....


by ಹರೀಶ್ ಶೆಟ್ಟಿ, ಶಿರ್ವ

Sunday, April 11, 2021

ಮನಸ್ಸು

ಕಲ್ಲು ಕರಗುವುದೇ? 

ಇಲ್ಲ, 

ಆದರೆ ಮನಸ್ಸು ಕರಗಬಹುದು!!! 

ನಿರೀಕ್ಷಿಸು..... 

by ಹರೀಶ್ ಶೆಟ್ಟಿ, ಶಿರ್ವ

Friday, April 9, 2021

ಜೀವನ ಪಯಣ

ಹೆಚ್ಚು ಸಾಮಾನು ಹೊತ್ತು ತಿರುಗದಿರು ಮನುಜ, 

ರಸ್ತೆ ಯಾವುದು ಗೊತ್ತಿಲ್ಲ, ತಾಣದ ಅರಿವಿಲ್ಲ, 

ಎಷ್ಟು ಹಗುರವಾಗಿರುವೆಯೋ ಅಷ್ಟೇ ಪ್ರವಾಸ ಸುಗಮ.... 


by ಹರೀಶ್ ಶೆಟ್ಟಿ, ಶಿರ್ವ

Thursday, April 8, 2021

ನೆನಪಿನ ಕಟ್ಟು

ನೆನಪಿನ ಕಟ್ಟು ಅಟ್ಟಕ್ಕೆ ಎಸೆದು ಬಿಟ್ಟಿದ್ದೆ, 

ಧೂಳು ಒರೆಸಲೆಂದು ಅಟ್ಟಕ್ಕೆ ಹೋದಾಗ, 

ಪುಸ್ತಕದ ಕಟ್ಟು ತೆರೆಯದೇ ಹಳೆ ಸ್ಮೃತಿಗಳೆಲ್ಲ ಓದಿಸಿ ಬಿಟ್ಟವು......


by ಹರೀಶ್ ಶೆಟ್ಟಿ,ಶಿರ್ವ

Wednesday, April 7, 2021

ಸಂಸಾರದ ಪಯಣ

ಇಂದೂ ನಿನ್ನ ಜೊತೆ ಜೊತೆಯಲ್ಲಿಯೇ ಸಾಗುತ್ತಿದೆ ಸಂಸಾರದ ಪಯಣ, 

ಆದರೂ ಈ ಪಯಣ ಅಪರಿಚಿತ!!! 


by ಹರೀಶ್ ಶೆಟ್ಟಿ, ಶಿರ್ವ 

Tuesday, April 6, 2021

ಅಪರಿಚಿತ

ಎಷ್ಟೇ ದೂರ ತನಕ ಜತೆ ಜತೆಯಾಗಿ ಬಂದೆವೂ ನಾವು, 


ಆದರೆ ಯಾಕೆ ಈಗಲೂ ನೀನು ನನಗೆ ಅಪರಿಚಿತ!!! 


by ಹರೀಶ್ ಶೆಟ್ಟಿ,ಶಿರ್ವ

Monday, April 5, 2021

ನಿನ್ನ ಗಾಯನ

ಮಧುರ ಮಧುರ ನಿನ್ನ ಸ್ವರ, 

ಮುಂಜಾನೆ ಎಚ್ಚರವಾದಾಗ ಕೇಳಿದರೆ ನಿನ್ನ ಗಾಯನ,

 ಸಂತೋಷ ಇಡೀ ದಿನ.....


by ಹರೀಶ್ ಶೆಟ್ಟಿ,ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...