Wednesday, December 30, 2020

ಹೃದಯ ಮತ್ತೊಮ್ಮೆ ನೆನಪಿಸಿದೆ


Photo: Google

ಹಾಡಿನ ಕೊಂಡಿ: https://youtu.be/pxuqYr9yOww

ರಫಿ:

ಹೃದಯ ಮತ್ತೊಮ್ಮೆ ನೆನಪಿಸಿದೆ, 

ಮಿಂಚು ಹೊಡೆದಂತಾಗಿದೆ, 

ಮತ್ತೊಮ್ಮೆ ನೋವು ಪ್ರೀತಿಯ ಉದ್ಭವಿಸಿದೆ, 

ಹೃದಯ.....

-

ಅದೆಂಥ ದಿನಗಳಾಗಿತ್ತು, 

ನನ್ನನ್ನು ಹೃದಯದಲ್ಲಿ ನೆಲೆಸಿದ್ದೆ ನೀನು, 

ಮತ್ತೆ ನಗು ನಗುತ ನನ್ನನ್ನು ಅಪ್ಪಿಕೊಂಡಿದ್ದೆ ನೀನು, 

ಆಟ ಆಟದಲ್ಲಿಯೇ ಯಾಕೆ ಪ್ರಾಣಕ್ಕೆ ಸಂಕಟ ಉಂಟಾಗಿದೆ, 

ಮತ್ತೊಮ್ಮೆ ನೋವು.....

-

ಸುಮನ್ ಕಲ್ಯಾಣ್ ಪುರಿ:

ಹೇಗೆ ಹೇಳಲಿ ನಿನಗೆ ನಾನು ದೀಪದ ಭಾಗ್ಯ ಏನೆಂದು, 

ಬೆಂಕಿಯ ತಾಪದಲಿ ಸುಡುವ ಹೊರತು ಪ್ರೀತಿ ಬೇರೇನಲ್ಲವೆಂದು, 

ಇದು ಎಂದೂ ವಸಂತ ಬರದ ಭಾಗೀಚೆಯಾಗಿದೆ, 

ಹೃದಯ.....

-

ಮುಕೇಶ್:

ನಾನು ಆ ಪತಂಗನಾಗಿದ್ದೇನೆ, 

ದೀಪದ ಸುತ್ತಮುತ್ತಲೇ ಇರುವೆ, 

ಸೌಂದರ್ಯದ ಬೆಂಕಿಯಲಿ ಮೌನವಾಗಿ ಸುಡುತ್ತಲೇ ಇರುವೆ, 

ನೋವಾಗಿ ಅಯ್ಯೋ ಅಂದರೂ ಅದು ಪ್ರೀತಿಯ ಅಗೌರವವಾಗಿದೆ,

ಮತ್ತೊಮ್ಮೆ ನೋವು.....


ಅನುವಾದ: ಹರೀಶ್ ಶೆಟ್ಟಿ,ಶಿರ್ವ 

ಮೂಲ : ಜಿ ಎಲ್ ರವಾಲ್ 

ಸಂಗೀತ: ಸೋನಿಕ್ ಒಮಿ 

ಹಾಡಿದವರು: ಮುಹಮ್ಮದ್ ರಫಿ, ಸುಮನ್ ಕಲ್ಯಾಣ್ ಪುರಿ, ಮುಕೇಶ್ 

ಚಿತ್ರ: ದಿಲ್ ನೇ ಫಿರ್ ಯಾದ್ ಕೀಯ

-


दिल ने फिर याद किया बर्क़ सी लहराई है

फिर कोई चोट मुहब्बत की उभर आई है

दिल ने फिर याद किया ...


वो भी क्या दिन थे हमें दिल में बिठाया था कभी

और हँस हँस के गले तुम ने लगाया था कभी

खेल ही खेल में क्यों जान पे बन आई है

फिर कोई चोट मुहब्बत की ...


क्या बतायें तुम्हें हम शम्मा की क़िसमत क्या है

आग में ग़मे के जलने के सिवा मुहब्बत क्या है

ये वो गुलशन है कि जिस में न बहार आई है

दिल ने फिर याद किया ...


हम वो परवाने हैं जो शम्मा का दम भरते हैं

हुस्न की आग में खामोश जला करते हैं

आह भी निकले तो प्यार की रुसवाई है

फिर कोई चोट मुहब्बत की ...


Saturday, December 26, 2020

ಮೊಗದಿಂದ ಸ್ವಲ್ಪ ಮುಖಪರದೆ ಸರಿಸು


Photo: Google

ಹಾಡಿನ ಕೊಂಡಿ: https://youtu.be/MTwtrF243kY


ನಿನ್ನ ಮೊಗವನ್ನು ಕಣ್ತುಂಬ ನೋಡಲು ಕೊಡು, 

ಈ ಸುಂದರ ಅಪರಾಧ ಮಾಡಲು ಕೊಡು, 

ಮುಖಪರದೆ ತೆರೆ ನನ್ನೊಲವೆ, 

ಇಂದು ಹೃದಯ ನಾಶ ಮಾಡಲು ಕೊಡು 


ಮೊಗದಿಂದ ಸ್ವಲ್ಪ ಮುಖಪರದೆ  ಸರಿಸು, 

ನನ್ನ ರಾಣಿಯೇ... 

ಸೊಗಸು ಮತ್ತೊಮ್ಮೆ ತೋರಿಸು, 

ನನ್ನ ರಾಣಿಯೇ....

-

ಈ ಅಮೃತಶಿಲೆಯಂತ ಕೈಗಳು, 

ಸುಹಾಸಿತ ದೇಹ ನಿನ್ನ, 

ಹೃದಯಕ್ಕೆ ಎದುರಾಗಿದೆ ಪ್ರೀತಿಯ ಉದ್ಯಾನ, 

ನನ್ನ ಸಹ ಹೃದಯದ ಹೂ ಅರಳಿಸು, 

ನನ್ನ ರಾಣಿಯೇ....

-

ಓ ರೂಪಸಿ ನಿನ್ನ ಪ್ರತಿಬಿಂಬ ನೋಡಿ ಈ ಕನ್ನಡಿಯಲಿ, 

ಅಮಲಲ್ಲಿದ್ದೇನೆ ನಿನ್ನ ಸೋಗಿನ ದಾರಿಯಲಿ, 

ಸಾಧ್ಯವಿದ್ದರೆ ಪ್ರಜ್ಞೆಯಲ್ಲಿ ತರಿಸು, 

ನನ್ನ ರಾಣಿಯೇ....

-

ಜೊತೆಗಾರ್ತಿಯಾಗಿ ಸಿಕ್ಕಿರುವೆ ನೀನು ನನಗೆ ಈ ಜೀವನದಲಿ, 

ಚಂದಿರ ಸಿಗುವಂತೆ ಈ ಮೌನ ರಾತ್ರಿಯಲಿ, 

ಹೋಗುವೆ ಈಗ ಎಲ್ಲಿ ಹೇಳು, 

ನನ್ನ ರಾಣಿಯೇ....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕರ್ ಜೈಕಿಶನ್ 

ಹಾಡಿದವರು: ಮುಹಮ್ಮದ್ ರಫಿ 

ಚಿತ್ರ : ಮೇರೇ ಹುಜೂರ್


अपने रुख़ पर निगाह करने दो

खूबसूरत गुनाह करने दो

रुख़ से परदा हटाओ जान-ए-ह

आज दिल को तबाह करने दो


रुख़ से ज़रा नकाब उठा दो, मेरे हु

जलवा फिर एक बार दिखा दो, मेरे हुजू


वो मरमरी से हाथ, वो महका हुआ ब

टकराया मेरे दिल से, मोहब्बत का एक चम

मेरे भी दिल का फूल खिला दो, मेरे हुजू

रुख़ से ज़रा नकाब..


हुस्न-ओ-जमाल आपका शीशे में देख

मदहोश हो चुका हूँ मैं, जलवों की राह प

गर हो सके तो होश में ला दो, मेरे हुजू

रुख़ से ज़रा नकाब..


तुम हमसफ़र मिले हो मुझे इस हयात में

मिल जाए जैसे चाँद कोई सूनी रात 

जाओगे तुम कहाँ ये बता दो, मेरे हुजू

रुख़ से ज़रा नक़ाब...रमें.ररकर.रनदनरजूरया




ಲಕ್ಷ್ಮಣ ರೇಖೆ



ಎಷ್ಟೋ ಸಮಯ ಉರುಳೊಯೀತು,

ಅದೆಷ್ಟೋ ಬದಲಾವಣೆ, 

ನೀನು ನೀನಾಗಿ ಉಳಿಯಲಿಲ್ಲ, 

ನಾನೂ ನಾನಾಗಿ ಉಳಿಯಲಿಲ್ಲ, 

ನಿನಗೆ ನಿನ್ನ ಸಂಸಾರದ ಬಂಧನ, 

ನನಗೆ ನನ್ನವರೇ ಜೀವನ,

-

ಆನಂದದಲ್ಲಿಯೇ ಇದ್ದೇವೆ ನಾವಿಬ್ಬರೂ, 

ಆದರೆ ಹಳೆ ನೆನಪಿನ ಕಾರವಾಸದಲಿ ಈಗಲೂ, 

ಮುಖಾಮುಖಿ ಅದಾಗ ಅದೇಕೋ ಸಂಕೋಚ ಇಬ್ಬರಲ್ಲಿಯೂ, 

ಆದರೆ ಇಬ್ಬರ ಕಣ್ಣಿನ ಹೊಳಪು ನುಡಿಯುತ್ತದೆ ಎಲ್ಲವೂ,

-

ಇದೇ ನಮ್ಮ ವಿಧಿಯೆಂದು ಸಾಗುತ್ತಿದೆ ಬದುಕು, 

ಆದರೆ ಅನಿಸುತ್ತದೆ ಕೆಲವೊಮ್ಮೆ, 

ಸ್ವಲ್ಪ  ಧೈರ್ಯ ಇರುತ್ತಿದ್ದರೆ ನಮ್ಮಲ್ಲಿ, 

ಇಂದು ಇರುತ್ತಿರಲಿಲ್ಲ ನಮ್ಮಲ್ಲಿ ಈ ಅಳುಕು,

-

ನಮ್ಮ ಮಿಲನದ ಕೊನೆಯ ಸಂಜೆಯಿಂದ, 

ಈ ಹೃದಯ ಎಂತೂ ಕಲ್ಲಾಗಿದೆ, 

ಇನ್ನು ಯಾವುದೇ ಒಲವ ಕಂಪನ ಇದರಲ್ಲಿ ಉಳಿದಿರಲಿಕ್ಕಿಲ್ಲ, 

ಆದರೆ ಯಾಕೆ ನನ್ನಲ್ಲಿ ಇನ್ನೂ ನಿನ್ನ ಬಗ್ಗೆ ಯೋಚನೆ ಇದೆ,

-

ಬಹುಶ ಈ ಕಲ್ಲಲ್ಲಿ ಬರೆದ ನಿನ್ನ ಹೆಸರು ಇನ್ನೂ ಅಳಿಸಿ ಹೋಗಲಿಲ್ಲ, 

ಸರಿ ಬಿಡು, 

ಇರೋಣ ನಮ್ಮ ಪಾಡಿಗೆ ನಾವು, 

ನಮ್ಮ ನಮ್ಮ ಜೀವನದಲ್ಲಿ ಸಂತೋಷವಾಗಿರೋಣ,

-

ಮೊದಲ ಪ್ರೀತಿಯ ನೆನಪನ್ನು ಸ್ಮೃತಿಯಿಂದ ಅಳಿಸುವುದು ಕಷ್ಟ ಎಂದು ತಿಳಿದಿದೆ, 

ಪ್ರೇಮ ಪ್ರಣಯದ ಆ ನೆನಪನ್ನು ನಮ್ಮಲ್ಲಿಯೇ ಜೋಪಾನವಾಗಿಡೋಣ, 

ಇನ್ನು ಮೇಲೆ ನಮ್ಮ ಮಧ್ಯೆ ಒಂದು ಲಕ್ಷ್ಮಣ ರೇಖೆ ಎಳೆಯೋಣ, 

ತನ್ನ ತನ್ನ ಹೊಸ ಸಂಸಾರದ ಜವಾಬ್ಧಾರಿ ವಹಿಸೋಣ.


by ಹರೀಶ್ ಶೆಟ್ಟಿ,ಶಿರ್ವ

Thursday, December 24, 2020

ಈ ಚಂದ್ರಕಾಂತಿಯುಳ್ಳ ಮುಖವು

photo: google

ಹಾಡಿನ ಕೊಂಡಿ:https://youtu.be/lT_oajh4ttk

ಈ ಚಂದ್ರಕಾಂತಿಯುಳ್ಳ ಮುಖವು, 
ಚಿನ್ನದಂತಹ ಕೇಶವು, 
ಈ ಸರೋವರ ಆಳದ ನೀಲಿ ಕಂಗಳು, 
ಇದರಲ್ಲಿದೇನೋ ರಹಸ್ಯವು, 
ಹೊಗಳುವುದೇಗೆ ಅವನನ್ನು, 
ನಿನ್ನನ್ನು ಸೃಷ್ಟಿಸಿದವನನ್ನು,
ಹೊಗಳುವುದೇಗೆ.....
-
ಒಂದು ವಸ್ತು ಅದ್ಭುತವಾದದ್ದು, 
ಜನರಿಂದ ಕೇಳುತ್ತಿರುತ್ತಿದ್ದೆ ಅಂದು, 
ನಿನ್ನನ್ನು ನೋಡಿದ ನಂತರ ನಾನರಿತೆ, 
ಅವರು ನಿಜ ಹೇಳುತ್ತಿದ್ದರೆಂದು-2, 
ನಡಿಗೆಯಲ್ಲಿ ನಿನ್ನ,
ಅಂತಹದೊಂದು ಜಾದೂ ಇದೆ, 
ನೂರು ಸಲ ಹೃದಯ ನಿಯಂತ್ರಿಸಿದರೂ, 
ಅದು ಮರುಳಾಗುತ್ತಿದೆ, 
ಹೊಗಳುವುದೇಗೆ.....
-
ಪ್ರತಿ ಬೆಳಗಿನ ಕಿರಣದ ಕೆಂಪು, 
ವರ್ಣ ನಿನ್ನ ಕೆನ್ನೆಯ, 
ಪ್ರತಿ ಸಂಜೆಯ ಇರುಳು,
ನೆರಳು ನಿನ್ನ ಕೇಶರಾಶಿಯ-2, 
ನೀನು ತರಂಗುವ ನದಿಯೊಂದು, 
ಪ್ರತಿ ಅಲೆಯಂತೆ ನಿನ್ನ ಮೈಯ ಲಯವು,
ಈ ಅಲೆಯಲ್ಲಿ ಮುಳುಗಿದವನು, 
ಗೆಲ್ಲುವನು ಈ ಲೋಕವೂ, 
ಹೊಗಳುವುದೇಗೆ....
-
ನಾನು ಹುಡುಕಾಟದಲಿ ಗಮ್ಯದ, 
ಆದರೆ ಗಮ್ಯ ನನ್ನ ಬಳಿಯಲ್ಲಿ, 
ಮುಖದಿಂದ ತೆಗೆ ಸೆರಗನ್ನು, 
ದೂರ ಹೋಗಲಿ ಈ ಕತ್ತಲೆ-2, 
ಒಪ್ಪುವೆ ನಿನ್ನ ಪ್ರೇಮದಾಟ,
ಮಾಡುತ್ತಿದೆ ಮರುಳು ನನ್ನನ್ನು, 
ಮನತುಂಬಿ ನಾನು ನೋಡುವೆ, 
ನಿನ್ನ ಶೈಲಿಯ ಮೋಜನ್ನು, 
ಹೊಗಳುವುದೇಗೆ....
-
ಅನುವಾದ-ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು-ಮುಹಮ್ಮದ್ ರಫಿ 
ಮೂಲ: ಎಸ್ ಎಚ್ ಬಿಹಾರಿ 
ಸಂಗೀತ : ಓ ಪಿ ನಯ್ಯರ್ 
ಚಿತ್ರ: ಕಾಶ್ಮೀರ ಕಿ ಕಲಿ
-

ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

एक चीज क़यामत भी है
लोगों से सुना करते थे
तुम्हे देख के मैंने मन
वो ठीक कहा करते थे
वो ठीक कहा करते थे
है चाल में तेरी जालिम
कुछ ाएसि बला का जादू
सौ बार संभाला दिल को
पर हो के रहा बेकाबू
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

हर सुबह किरण की लायी
हैं रंग तेरे गालों का
हर शाम की चादर काली
सया हैं तेरे बालों का
हर सुबह किरण की लायी
हैं रंग तेरे गालों का
हर शाम की चादर काली
सया हैं तेरे बालों का
सया हैं तेरे बालों का
तू बलखाती एक नदियाँ
हर मौज तेरी अंगड़ाई
जो इन मौजो में डूबा
उस ने ही दुनिया पायी
तारीफ़ करूँ क्या उस की
जिस ने तुम्हें बनाया
ये चांद सा रोशन चेहरा
ज़ुल्फ़ों का रंग सुनहरा
ये झील सी नीली आँखे कोई
राज हैं इन में गहरा
तारीफ़ करूँ क्या उस की
जिस ने तुम्हें बनाया

मैं खोज में हूँ मंज़िल की
और मंज़िल पास है मेरी
मुखड़े से हटा दो आंचल
हो जाये दूर अँधेरे
हो जाये दूर अँधेरे

मन के ये जलवे तेरे
कर देंगे मुझे दीवाना
जी भर के ज़रा में देखूं
अंदाज़ तेरा मस्ताना
तारीफ़ करूँ क्या उसकी
जिसने तुम्हे बनाया

यह चांद सा रोशन चेहरा
ज़ुल्फ़ों का रंग सुनहरा
यह झील सी नीली ऑंखें
कोई राज़ है इनमे गहरा
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया
तारीफ़ करूँ क्या उसकी
जिसने तुम्हे बनाया.

ನೋಡಿದೆ ನಿನ್ನ ಕಣ್ಣಲಿ

photo: google

ಹಾಡಿನ ಕೊಂಡಿ: https://youtu.be/aW62BlF_lPw


ನೋಡಿದೆ ನಿನ್ನ ಕಣ್ಣಲಿ, ಪ್ರೀತಿಯೇ ಪ್ರೀತಿ, 

ತುಂಬಾ ಅತಿ, 

ಕಂಡೆ ನಿನ್ನ ನುಡಿಯಲಿ ಪ್ರೀತಿಯೇ ಪ್ರೀತಿ, 

ತುಂಬಾ ಅತಿ, 

ನೋಡಿದೆ....

-

ಓ ವಸಂತದ ಚೆಲುವೆ, 

ಇದು ನನ್ನ ಭಾಗ್ಯವೇ, 

ಏನೇ ನನ್ನನ್ನು ಅರಿತೆ, 

ಅದು ನಿನ್ನ ಉಪಕಾರವೇ, 

ನೋಡಿದೆ...

-

ನನ್ನ ಒಳ್ಳೆಯೆದಿತ್ತು ವಿಧಿ, 

ನಿನ್ನಿಂದ ಭೇಟಿ ಆಯಿತು, 

ಸೌಂದರ್ಯದ ಕೃಪೆಯಾಯಿತು, 

ಅಯ್ಯೋ ಎಂಥ ಮಾತಾಯಿತು, 

ನೋಡಿದೆ...

-

ನಾನು ಯೋಚಿಸಲೇ ಇಲ್ಲ, 

ನೀನು ನನಗೆ ಸಿಗುವೆಯೆಂದು, 

ಬೆಳಕು ಉದ್ಭವಿಸುವಂತೆ, 

ಹಾಗೆ ಉದ್ಭವಿಸುವೆಯೆಂದು,

ನೋಡಿದೆ....

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕೆರ್ ಜೈ ಕಿಷನ್ 

ಹಾಡಿದವರು: ಮುಹಮ್ಮದ್ ರಫಿ

ಚಿತ್ರ: ಪ್ಯಾರ್ ಹಿ ಪ್ಯಾರ್


देखा है तेरी आँखों में प्यार ही प्यार बेशुमार (२) 

पाया है तेरी बातों में प्यार ही प्यार बेशुमार 

देखा है तेरी आँखों में 


(ए बहारों की परी

ये है तक़दीर मेरी 

जो भी समझा है मुझे 

वो इनायत है तेरी) - (२) 

देखा है ...


(मेरे अच्छे थे करम 

जो मुलाक़ात हुई 

मेहरबाँ हुस्न हुआ

क्या अजब बात हुई) - (२) 

देखा है ...


(मैं ने सोचा भी न था 

मुझको मिल जायेगी तू

जैसे लहराये सबाह 

वैसे लहरायेगी तू) - (२) 

देखा है ...

Monday, December 21, 2020

ನನಗೆ ನೀನು ಸಿಕ್ಕಿದೆ ಇನಿಯ



ನನಗೆ ನೀನು ಸಿಕ್ಕಿದೆ ಇನಿಯ, 

ಆಸರೆ ಅಂದರೆ ಹೀಗಿರಬೇಕು, 

ಎಲ್ಲಿ ನೋಡಿದರೂ ನೀನಿರುವೆ, 

ದೃಶ್ಯ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ....

-

ಯಾರದ್ದೋ ಚಂದಿರನಂತ ಮುಖವನ್ನು ಕಣ್ಣಿಂದ ಮುದ್ದಿಸುತ್ತಿರುತ್ತೇನೆ,

ಖುಷಿಯ ಪರಾಕಾಷ್ಠ ಅಂದರೆ ಅಮಲಲ್ಲಿ ತೇಲುತ್ತಿರುತ್ತೇನೆ, 

ಆಗಿದೆ ಭಾಗ್ಯವೂ ಪ್ರಕಾಶಮಯ, 

ತಾರೆ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ನನ್ನ ಕಣ್ಣಲ್ಲಿ ಕಣ್ಣೀರಿದೆ, ಆದರೆ ಈ ಕಣ್ಣೀರು ಸಂತೋಷದ, 

ಯಾರನ್ನು ಬಿಡಲಿ, ಯಾರನ್ನು ಸ್ವೀಕರಿಸಲಿ, ಈ ಸಂಬಂಧ ಜೀವನದ, 

ನನಗಂತೂ ಹೆಮ್ಮೆಯಿದೆ ನಿನ್ನ ಮೇಲೆ,

ನಮ್ಮವನು ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ಅಲ್ಲಿ ಹೃದಯವಿದೆ,ಇಲ್ಲಿ ಪ್ರಾಣವಿದೆ, ತುಂಬಾ ಕಠಿಣ ಈ ಪರಿಸ್ಥಿತಿ ಇದೆ, 

ತುಟಿ ಮೇಲೆ ನಗು ಇದೆ,ಆದರೆ ಉಸಿರಲ್ಲಿ ಅಶಾಂತಿ ಇದೆ, 

ಇದು ನನಗಿದೆ ಅರಿವು, ನಿನಗಿದೆ ಅರಿವು,

ಇಷಾರೆ ಅಂದರೆ ಹೀಗಿರಬೇಕು,

ಎಲ್ಲಿ ನೋಡಿದರೂ.....

-

ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ:ಹಸ್ರತ್ ಜೈಪುರಿ 

ಸಂಗೀತ : ಶಂಕರ್ ಜೈಕಿಶನ್ 

ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ: ಲವ್ ಇನ್ ಟೋಕಿಯೋ

-

मुझे तुम मिल गये हमदम
सहारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम
सहारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

किसी का चाँद सा चेहेरा
नज़र से चूम लेती हूँ
किसी का चाँद सा चेहेरा
नज़र से चूम लेती हूँ
ख़ुशी की इंतहा ये है
नशे में झूम लेती हूँ
नशे में झूम लेती हूँ
हुई तकदीर भी रोशन
सितारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

मेरी आँखों में आँसू है
मगर आँसू ख़ुशी के है
मेरी आँखों में आँसू है
मगर आँसू ख़ुशी के है
किसे छोड़ूँ किसे पा लूँ
ये रिश्ते ज़िन्दगी के है
ये रिश्ते ज़िन्दगी के है
हमें तो नाज़ हैं तुम पर
हमरा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

उधर दिल है इधर जान है
अजब मुश्किल का सामां है
उधर दिल है इधर जान है
अजब मुश्किल का सामां है
लबों पर मुस्कुराहट है
मगर सांसो में तूफ़ान है
मगर सांसो में तूफ़ान है
ये मैं जानू या तुम जानो
इशारा हो तो ऐसा हो
जिधर देखूं उधर तुम हो
नज़ारा हो तो ऐसा हो
मुझे तुम मिल गये हमदम

Sunday, December 20, 2020

ದೇಹಕ್ಕೆ ಧರಿಸಿ ತಾರೆಯನು

photo : Google
ಹಾಡಿನ ಕೊಂಡಿ: https://youtu.be/MkABeVCv4lw


ದೇಹಕ್ಕೆ ಧರಿಸಿ ತಾರೆಯನು, 

ಓ ಬಯಕೆಯ ರಾಣಿ ಎಲ್ಲಿಗೆ ಹೋಗುತ್ತಿರುವೆ, 

ಸ್ವಲ್ಪ ಸನಿಹ ಬಂದರೆ ನೆಮ್ಮದಿ ಸಿಗುವುದು,

ಸ್ವಲ್ಪ ಸನಿಹ ಬಂದರೆ ನೆಮ್ಮದಿ ಸಿಗುವುದು-೨

-

ನಾನೇ ಇಲ್ಲದಿದ್ದರೆ ಓ ನನ್ನೊಲವೆ,

ಯಾರಿಗೆ ನೋಡಿ ಅಯ್ಯೋ ನಾಚುವೆ ನೀ,

ನೀ ಎಂದೂ ನೋಡಲಾರೆ ಕನ್ನಡಿಯನ್ನೂ,

ನನ್ನ ವಿನಃ ದಿನ ಹೆದರುವೆ ನೀ, 

ದೇಹಕ್ಕೆ....

-

ಸೌಂದರ್ಯ ಶೃಂಗಾರದ ಅವಾಗಲೇ ಮೋಜಲ್ಲವೇ, 

ಯಾರೋ ನೋಡುವ ಪ್ರೇಮಿ ಇರಬೇಕಲ್ಲವೇ, 

ಇಲ್ಲಾದರೆ ಈ ರೂಪ ಬೆಳಕಿಲ್ಲದ ದೀಪ ತಾನೇ,

ಯಾರೋ ಪ್ರೀತಿಸುವ ಪ್ರೇಮಿ ಇರಬೇಕಲ್ಲವೇ,

ದೇಹಕ್ಕೆ....

-

ಪ್ರೀತಿಯ ಈ ಪರಾಕಾಷ್ಟವಾಯಿತು,

ಅಂದರೆ ಮೋಜಲ್ಲಿ ನಿನಗೆ ದೇವರೇ ಅಂದು ಬಿಟ್ಟೆ ನಾ, 

ಪ್ರಪಂಚ ನ್ಯಾಯ ಮಾಡುತ್ತಿರಲಿ, 

ಒಳ್ಳೆ ಹೇಳಿದ್ದೆನಾ ಕೆಟ್ಟ ಹೇಳಿದ್ದೆನಾ, 

ದೇಹಕ್ಕೆ...

-

ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ: ಶಂಕರ್ ಜೈ ಕಿಷನ್ 

ಹಾಡಿದವರು: ಮೊಹಮ್ಮದ್ ರಫಿ

 ಚಿತ್ರ: ಪ್ರಿನ್ಸ್

-

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

हमीं जब ना होंगे तो ऐ दिलरुबा

किसे देखकर हाय शरमाओगी

ना देखोगी फिर तुम कभी आइना

हमारे बिना रोज़ घबराओगी

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

है बनने संवरने का जब ही मज़ा

कोई देखने वाला आशिक़ तो हो

नहीं तो ये जलवे हैं बुझते दीये

कोई मिटने वाला इक आशिक़ तो हो

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

-

मुहब्बत कि ये इन्तेहा हो गई

के मस्ती में तुमको खुदा कह गया

ज़माना ये इंसाफ़ करता रहे

बुरा कह गया या भला कह गया

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

बदन पे सितारे लपेटे हुए

ओ जान-ए-तमन्ना किधर जा रही हो

ज़रा पास आओ तो चैन आ जाए

ज़रा पास आओ तो चैन आ जाए

Saturday, December 19, 2020

ಸಾಗಿದೆವು ಜೊತೆ ಜೊತೆಯಿಂದಲೇ



ಸಾಗಿದೆವು ಜೊತೆ ಜೊತೆಯಿಂದಲೇ,

ಸಾಗುವ ಜೊತೆಯಿಂದಲೇ, 

ನೀನು ನಿಲ್ಲಲೇ ಬೇಕು ನನ್ನ ಕರೆಯಿಂದಲೇ,


ನನ್ನ ಪ್ರಾಣ ಹಿಂಡುವುದು ನಿನ್ನ ಈ ರೂಪವೂ, 

ನನ್ನನ್ನು ಬದುಕ ಬಿಡದು ನಿನ್ನ ಈ ನಯನವೂ, 

ಅರ್ಥೈಸು ಮಾತು ನನ್ನ ನಿನಗೆ ಹರಕೆ ನನ್ನದು, 

ಸಾಗಿದೆವು.....


ತುಂಬಾ ತೃಷೆಯಲ್ಲಿದೆ ಹೃದಯ ಇದಕ್ಕೆ ಅಮಲೇರಿಸು, 

ಬುಗ್ಗೆರುತ್ತಿದೆ ಜ್ವಾಲೆ ಇದನ್ನು ಶಾಂತಗೊಳಿಸು, 

ನನ್ನ ಪ್ರಜ್ಞೆ ತೆಗೆದುಕೋ ನನ್ನನ್ನು ಪ್ರಜ್ಞಾಹೀನಗೊಳಿಸು, 

ಸಾಗಿದೆವು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಅಖ್ತರ್ ರೋಮ ನಿ 

ಸಂಗೀತ : ಕಲ್ಯಾಣ್ ಜಿ ಆನಂದ್ ಜಿ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ: ಹಸೀನಾ ಮಾನ್ ಜಾಯೆಗಿ


चले थे साथ मिल के, चलेंगे साथ मिलकर

तुम्हे रुकना पड़ेगा मेरी आवाज़ सुनकर


हमारी जान लेंगी तुम्हारी ये अदायें

हमें जीने ना देंगी तुम्हारी ये निगाहें

समझ लो बात दिल की तुम्हे देंगे दुआएं


बड़ा प्यासा है ये दिल इसे मदहोश कर दो

भड़क उठे हैं शोले इन्हें ख़ामोश कर दो

हमारा होश ले लो, हमें बेहोश कर दो



ನಿನ್ನ ಪ್ರೀತಿಯಲ್ಲಿ



ನಿನ್ನ ಪ್ರೀತಿಯಲ್ಲಿ ನಾನು ಚಡಪಡಿಸುತ್ತಲ್ಲಿದ್ದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,


ನಿನ್ನನ್ನು ಸನಿಹದಿಂದ ನೋಡಿದಂದು ಹೃದಯ ಸೋತು ಹೋದೆ, 

ನಿನ್ನ ಮೋಹಕ ಭಂಗಿಯೂ ನನ್ನನ್ನು ಮುಗಿಸಿದೆ, 

ಪ್ರತಿಯೊಂದು ಮಾತಿಗೆ ನಾನಂತೂ ಮರುಳಾಗಿ ಹೋದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,


ನಿನ್ನ ನಯನ ಪ್ರೀತಿಯ ಮಾತು ನುಡಿಯುತ್ತದೆ,

ನಿನಗೆ ನಿಜವಾಗಿ ಯಾರದ್ದೋ ಹುಡುಕಾಟವಿರುತ್ತದೆ,

ಈ ಗುಟ್ಟು ತಿಳಿದಿದೆ, ನಿನ್ನ ಗುಟ್ಟು ಮನಸ್ಸಲ್ಲಿಟ್ಟು ಹೋದೆ,

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,


ನನ್ನ ಅರಿವಿಲ್ಲ, ನನ್ನ ಸುದಿಯಿಲ್ಲ, ಎಲ್ಲಿ ನಾನಿರುವೆ, 

ಇದರದ್ದೇ ಹೆಸರು ಪ್ರೀತಿ ಓ ನನ್ನೊಲವೆ,

ನಿನ್ನ ಗಲ್ಲಿಯಿಂದ ನಾನು ಮರುಳಾಗಿ ಹೋದೆ

ಬೇಟೆ ಮಾಡಲೆಂದು ಬಂದೆ,

ಬಲೆಗೆ ಸಿಕ್ಕಿ ಹೋದೆ,


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ: ಹಸ್ರತ್ ಜೈಪುರಿ 

ಸಂಗೀತ್:ಶಂಕರ್ ಜೈಕಿಶನ್ 

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ: ಶಿಕಾರ್

Tumhaare pyaar me ham beqaraar ho ke chale

Shikaar karane ko aae shikaar ho ke chale

Tumhaare pyaar me ham beqaraar ho ke chale

Shikaar karane ko aae shikaar ho ke chale

Shikaar karane ko



Tumhe qarib se dekhaa to dil ko haar diyaa

Tumhe qarib se dekhaa to dil ko haar diyaa

Tumhaari shokh adaa ne hame to maar diyaa

Har ek baat pe ham to nisaar ho ke chale

Shikaar karane ko aae shikaar ho ke chale



Tumhaari aankh mohabbat ki baat kahati hai

Tumhaari aankh mohabbat ki baat kahati hai

Tumhe bhi kisi ki talaash rahati hai

Tumhe bhi kisi ki talaash rahati hai

Ye raaz jaan gae raazadaar ho ke chale

Shikaar karane ko aae shikaar ho ke chale



Na apanaa hosh na apani khabar kahaan hai ham

Isi kaa naam mohabbat hai ai mere hamadam

Isi kaa naam mohabbat hai ai mere hamadam

Tumhaare kuche se divaanaavaar ho ke chale

Shikaar karane ko aae shikaar ho ke chale



Tuesday, December 15, 2020

ಹೀಗೆ ಮುನಿಸಿಕೊಂಡು



ಹೀಗೆ ಮುನಿಸಿಕೊಂಡು ಎಲ್ಲಿಗೆ ಹೋಗುವಿರಿ ನೀವು, 

ಎಲ್ಲಿಗೂ ಹೋದರು ನನ್ನನ್ನು ಕಾಣುವಿರಿ ನೀವು,

ಹೀಗೆ ಮುನಿಸಿಕೊಂಡು....


ಕಣ್ಣಿಂದ ಮರೆಯಾಗಿ ತೋರಿಸಿದರೆ ನೋಡುವೆ, 

ಯೋಚನೆಯಲ್ಲಿ ನೀವು ಬರದಿದ್ದರೆ ನಂಬುವೆ, 

ಅಯ್ಯೋ ಲಕ್ಷ ಪರದೆಯ ಹಿಂದೆ ಅಡಗಿ ಕೊಂಡರೂ ನೀವು, 

ನನ್ನನ್ನು ಕಾಣುವಿರಿ ನೀವು,

ನನ್ನನ್ನು ಕಾಣುವಿರಿ ನೀವು,

ಹೀಗೆ ಮುನಿಸಿಕೊಂಡು....


ಹೃದಯದಲ್ಲಿಯ ಮಾತನ್ನು ತುಟಿಗೆ ತರುವುದೂ ಕಷ್ಟ, 

ಆದರೆ ಅದನ್ನು ಹೃದಯದಲ್ಲಿ ಬಚ್ಚಿಡುವುದೂ ಕಷ್ಟ, 

ಕಣ್ಣ ಭಾಷೆಯಿಂದ ಅರಥೈಸಿ ನೀವು,

ಅರ್ಥೈಸಿ ಸ್ವಲ್ಪ ಗಮನಿಸಿ ನೀವು,

ಹೀಗೆ ಮುನಿಸಿಕೊಂಡು....


ಇದೆಂಥ ಅಮಲು, ಇದೆಂಥ ಪ್ರಭಾವ, 

ಹತೋಟಿಯಲಿಲ್ಲ ಹೃದಯ, ನಿಯಂತ್ರಣದಲಿಲ್ಲ ನಯನ, 

ಸ್ವಲ್ಪ ಪ್ರಜ್ಞೆ ಬಂದಾಗ, ಹೋಗಿರಿ ನೀವು, 

ನಿಲ್ಲಿಕೊಂಡಿರಿ ನೀವು, 

ನಿಲ್ಲಿಕೊಂಡಿರಿ ನೀವು,

ಹೀಗೆ ಮುನಿಸಿಕೊಂಡು....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಮೂಲ : ಹಸ್ರತ್ ಜೈಪುರಿ 

ಹಾಡಿದವರು: ಲತಾ ಮಂಗೇಶ್ಕರ್ 

ಸಂಗೀತ: ಶಂಕರ್ ಜೈಕಿಶನ್ 

ಚಿತ್ರ:ಆರ್ಜೂ


लता :  अजी रूठ कर अब कहाँ जाइयेगा

(रफ़ी:  अजी हमसे बचकर कहाँ जाइयेगा

जहाँ जाइयेगा हमें पाइयेगा


निगाहों में छुपकर दिखाओ तो जा

ख़यालों में भी तुम न आओ तो जानें

अजी लाख परदे में छुप जाइये

नज़र आइयेगा नज़र आइयेगा


जो दिल में हैं होठों पे लाना भी मुश्कि

मगर उसको दिल में छुपाना भी मुश्कि

नज़र की ज़ुबाँ को समझ जाइये

समझ कर ज़रा गौर फ़रमाइये


ये कैसा नशा हैं ये कैसा असर हैं

न काबू में दिल हैं न बस में जिगर 

ज़रा होश आ ले फिर जाइयेगा

ठहर जाइयेगा ठहर जाइयेगा





Monday, December 14, 2020

ಓ ಹೂವಿನ ರಾಣಿಯೇ



ಓ ಹೂವಿನ ರಾಣಿಯೇ, 

ವಸಂತದ ಚೆಲುವೆಯೇ, 

ನಿನ್ನ ನಗುವುದು ಅದ್ಭುತವಾಗಿದೆ, 

ಹೃದಯವಿಲ್ಲ ಸ್ಥಿರದಲಿ, 

ನಾನಿಲ್ಲ ಸ್ಥಿರದಲಿ, 

ಕಣ್ಣಿಂದ ಕಣ್ಣು ಸೇರಿಸಿದ್ದು ಅದ್ಭುತವಾಗಿದೆ,

ಓ ಹೂವಿನ.....


ನಿನ್ನ ಅಧರ ಏನು, 

ಗುಲಾಬಿ ಕಮಲ, 

ಈ ಎಲೆಗಳೆರಡೂ,

ಪ್ರೀತಿಯ ಒಂದು ಕವನ, 

ಆ ಕೋಮಲ ತುಟಿಯಿಂದ ಒಲವಿನ ಮಾತು, 

ನನ್ನಿಂದ ನುಡಿಯುವುದು ಅದ್ಭುತವಾಗಿದೆ, 

ಓ ಹೂವಿನ....


ಕೆಲವೊಮ್ಮೆ ನಿರ್ಲಿಪ್ತ ಭೇಟಿ, 

ಕೆಲವೊಮ್ಮೆ ಹಿಂಜರಿಕೆ ನಿನ್ನ, 

ಕೆಲವೊಮ್ಮೆ ದಾರಿ ತಪ್ಪಿ 

ಮುನಿಸುವುದು ನಿನ್ನ, 

ಈ ನಿನ್ನ ಕಣ್ರೆಪ್ಪೆ ತೆರೆದು ಮುಚ್ಚುವುದು, 

ಮುಚ್ಚಿ ತೆರೆಯುವುದು ಅದ್ಭುತವಾಗಿದೆ, 

ಓ ಹೂವಿನ....


ಪರಿಸರದಲ್ಲಿ ತಂಪು, 

ತುಂಬಿದ ಯೌವನ, 

ನಿನ್ನ ಕೇಶದ 

ಅಯ್ಯೋ ಈ ಧಾರಾಳತನ, 

ಪ್ರತಿಯೊಂದು ಸುರಳಿಯಲ್ಲಿ ಮಾದಕತೆಯ ಸಂಚ, 

ಮತ್ತೇರಿಸುವ ನಿನ್ನ ನಡಿಕೆ ಅದ್ಭುತವಾಗಿದೆ, 

ಓ ಹೂವಿನ....


ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಹಾಡಿದವರು : ಮೊಹಮ್ಮದ್ ರಫಿ 

ಮೂಲ : ಹಸ್ರತ್ ಜೈಪುರಿ 

ಸಂಗೀತ :ಶಂಕರ್ ಜೈಕಿಶನ್ 

ಚಿತ್ರ : ಆರ್ಜುऐ फूलों की रानी बहारों की मलिका

तेरा मुस्कुराना गज़ब हो गया

न दिल होश में है न हम होश में हैं

नज़र का मिलाना गज़ब हो 


तेरे होंठ क्या हैं गुलाबी कंवल हैं

ये दो पत्तियां प्यार की इक गज़ल 

वो नाज़ुक लबों से मुहब्बत की बातें

हमीं को सुनाना गज़ब हो ग


कभी खुल के मिलना कभी खुद झिझक

कभी रास्तों पे बहकना मचलना

ये पलकों की चिलमन उठाकर गिरा

गिराकर उठाना गज़ब हो गया


फ़िज़ाओं में ठंडक घटा भर जवानी

तेरे गेसुओं की बड़ी मेहरबानी

हर इक पेंच में सैकड़ों मैकदे हैं

तेरा लड़खड़ाना गज़ब  हो गया


Sunday, December 13, 2020

ಕರೆಯುತ ನಡೆದೇ ನಾ



ಕರೆಯುತ ನಡೆದೇ ನಾ,

ವಸಂತದ ಗಲ್ಲಿ ಗಲ್ಲಿಯಲಿ,

ಕೇವಲೊಂದು ನೆರಳು ಕೇಶರಾಶಿಯ, 

ಕೇವಲೊಂದು ನೋಟ ಪ್ರೀತಿಯ, 

ಕರೆಯುತ ನಡೆದೇ ನಾ....


ಈ ಕೀಟಲೆ ಈ ಭಂಗಿ ನಮಿಸುವ, 

ಇದೇ ಮಾತು ನಡೆಯುತ್ತಿದೆ ಮುಖ್ಯದ, 

ಯಾರಾದರೂ ಹಿಂತಿರುಗಿ ನೋಡುವರು ಈ ಕಡೆ, 

ಯಾವುದೇ ನೋಟ ಇರಬಹುದು ನನ್ನ ಹೆಸರಿನ,

ಕರೆಯುತ ನಡೆದೇ ನಾ....


ಕೇಳಿದೆ ನನ್ನ ಮಾತು ಯಾವ ನಂಬಿಕೆಯಿಂದ, 

ಮೇಘ ಇಳಿದು ಬಂದಿದೆ ಈ ಧರೆಗೆ ಬಾನಿನಿಂದ, 

ಇದೇ ನಿಷ್ಠೆ ಇದ್ದರೆ ಯುವ ಹೃದಯವೇ, 

ಪ್ರಭಾವಿತಳಾಗುವಳೇ ಒಂದು ಸುಂದರಿ ನನ್ನಿಂದ,

ಕರೆಯುತ ನಡೆದೇ ನಾ....


ಅನುವಾದ: ಹರೀಶ್ ಶೆಟ್ಟಿ, ಶಿರ್ವ 

ಹಾಡಿದವರು : ಮೊಹಮ್ಮದ್ ರಫಿ 

ಮೂಲ: ಮಜರೂಹ್ ಸುಲ್ತಾನ್ ಪುರಿ 

ಸಂಗೀತ: ಓ ಪಿ ನಯ್ಯರ್ 

ಚಿತ್ರ : ಮೇರೇ ಸನಮ್Pukaartaa chalaa hoon main

Gali gali bahaar k

Bas ek chhaanv zulf k

Bas ik nigaah pyaar k

Pukaartaa chalaa hoon mai

Gali gali bahaar k

Bas ek chhaanv zulf k

Bas ik nigaah pyaar k

Pukaartaa chalaa hoon mai



Ye dillagi ye shokhiyaan salaam

Yahi to baat ho rahi hai kaam k

Koi to mud ke dekh lega is tara

Koi nazar to hogi mere naam k

Pukaartaa chalaa hoon mai

Gali gali bahaar k

Bas ek chhaanv zulf k

Bas ik nigaah pyaar k

Pukaartaa chalaa hoon mai



Suni meri sadaa to kis yaqeen

Ghataa utar ke aa gayi zameen p

Rahi yahi lagan to ai dil e javaa

Asar bhi ho rahega ik haseen p

Pukaartaa chalaa hoon mai

Gali gali bahaar k

Bas ek chhaanv zulf k

Bas ik nigaah pyaar k

Pukaartaa chalaa hoon main





ಒಂದು ವೇಳೆ ಮರೆಯದಿದ್ದರೆ ನೀನು



ಒಂದು ವೇಳೆ ಮರೆಯದಿದ್ದರೆ ನೀನು, 

ಕನಸಿದು ನನಸಾಗುವುದು ನಮ್ಮದು, 

ನಾನು ನೀನು ಅಗಲಲಾರೆವು,

ನಾನು ನೀನು ಅಗಲಲಾರೆವು,

ಒಂದು ವೇಳೆ....


ದೇವರು ತನ್ನ ಕೈಯಿಂದ ನಮ್ಮನ್ನು ಸೃಷ್ಟಿಸಿದ, 

ಹಾಕಿದ ಹೃದಯದಲಿ ಮಿಡಿತ,

ಹೃದಯದಿಂದ ಹೃದಯ ಸೇರಿಸಿದ, 

ಮತ್ತೆ ಪ್ರೀತಿಯ ದೇವದೂತನನ್ನು ಜಗತ್ತಿಗೆ ಕೊಂಡುಬಂದ,

ಒಂದು ವೇಳೆ....


ಮಾಸದಂತಹದ್ದು ಒಲವ ನಂಬಿಕೆ ನಮ್ಮದು,

ನಾಶವಾಗದು ಎಂದೂ ಅಸ್ತಿತ್ವ ನಮ್ಮದು, 

ಬಯಕೆಯ ಗಮ್ಯದಲ್ಲಿ ಕರೆಯುತ್ತದೆ ಪ್ರತಿ ಉಸಿರು ನಮ್ಮದು, 

ಒಂದು ವೇಳೆ.....


ಜೀವನದ ಪ್ರತಿ ಪ್ರಯಾಣದಲ್ಲಿ ನಾವು ಜೊತೆಯಲ್ಲಿಯೇ ಇರುವೆವು,

ಜಗತ್ತಿನ ಪ್ರತಿ ಪಥದಲಿ ನಾವು ಜೊತೆಯಲ್ಲಿಯೇ ನಡೆಯುವೆವು,

ಜೊತೆಯಲ್ಲಿಯೇ ಬದುಕುವೆವು ನಾವು, 

ಜೊತೆಯಲ್ಲಿಯೇ ಸಾಯುವೆವು ನಾವು,


ಅನುವಾದ: ಹರೀಶ್ ಶೆಟ್ಟಿ, ಶಿರ್ವ

ಮೂಲ: ಹಸ್ರತ್ ಜೈಪುರಿ

ಸಂಗೀತ:ಶಂಕರ್ ಜೈಕಿಶನ್

ಹಾಡಿದವರು: ಮೊಹಮ್ಮದ್ ರಫಿ 

ಚಿತ್ರ: ಯಾಕೀನ್गर तुम भुला न दोगे

सपने ये सच ही होंगे

हम-तुम जुदा न हों

हम-तुम जुदा न होंगे

गर तुम भुला न दोगे.


मालिक ने अपने हाथों, जिस दम हमें बना

डाली दिलों में धड़कन, और दिल से दिल मिलाया

फिर प्यार का फ़रिश्ता, दुनिया में ले के आ

गर तुम भुला न दोगे..


जीवन के हर सफ़र में, हम साथ ही रहें

दुनिया की हर डगर पर, हम साथ ही चलेंगे

हम साथ ही जीयेंगे, हम साथ ही मरें

गर तुम भुला न दोगे..


पत्थर की है लकीरें अहद-ए-वफ़ा हमा

हरगिज़ ना मिट सकेंगे, नाम-ओ-निशाँ हमारी

चाहत की मंज़िलों पर हर साँस ये पुका

गर तुम भुला न दोगे...रेरी.गेगे.याया..गे



Saturday, December 12, 2020

ಹೋಗಲೆಲ್ಲಿ ಹೇಳು ಹೃದಯ



ಹೋಗಲೆಲ್ಲಿ ಹೇಳು ಹೃದಯ,

ಪ್ರಪಂಚ ಈ ತುಂಬಾ ನಿರ್ದಯ, 

ಮನೆ ಸುಡಲೆಂದು ಬಂದಿದೆ ಹುಣ್ಣಿಮೆಯ ಚಂದಿರ, 

ಅರಿವಾಗದು ಯಾವುದೇ ಗಮ್ಯ,

ಹೋಗಲೆಲ್ಲಿ ಹೇಳು ಹೃದಯ....


ಕಟ್ಟಿ ಮುರಿದೋಗುತ್ತದೆ ಇಲ್ಲಿ ಬಯಕೆಯ ಅರಮನೆ,

ಈ ಭೂಮಿ ಅಂಬರದಲ್ಲೂ ಆಗಿದೆ ಬದಲಾವಣೆ,

ಹೇಳುತ್ತಿದೆ ಜೀವನ ಈ ಜಗದಿಂದ ಹೊರಟುಹೋಗಯ್ಯ,

ಹೋಗಲೆಲ್ಲಿ ಹೇಳು ಹೃದಯ.....


ಅಯ್ಯೋ ಈ ತೀರದಲಂತೂ ದುಃಖದ ಪಥಗಲ್ಲೆಲ್ಲ, 

ಆ ತೀರದಲಿ ಏನೋ ಯಾರಿಗೂ ತಿಳಿದಿಲ್ಲ, 

ಮುಗ್ಗರಿಸಿ ಬೀಳುತ್ತಿದೆ ಪ್ರತಿ ಹೆಜ್ಜೆಯಲ್ಲಿ ನೋಟವ,

ಹೋಗಲೆಲ್ಲಿ ಹೇಳು ಹೃದಯ.....


ಅನುವಾದ:ಹರೀಶ್ ಶೆಟ್ಟಿ, ಶಿರ್ವ 

ಚಿತ್ರ: ಚೋಟಿ ಬಹೆನ್ 

ಹಾಡಿದವರು: ಮುಕೇಶ್ 

ಮೂಲ: ಹಸ್ರತ್ ರೋಮನಿ 

ಸಂಗೀತ :ಶಂಕರ್ ಜೈಕಿಶನ್


Jaoon kahan bata ae dil

Duniya badi hai sangdil

Chaandni aayi ghar jalane

Soojhe na koi manzil

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil


Banke toote yahaan aarzoo ke mahal

Ye zameen aasmaan bhi gaye hain badal

Kahti hai zindagi is jahaan se nikal

Kahti hai zindagi is jahaan se nikal

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil


Haay is paar to aansuon ki dagar

Jaane us paar kyaa ho kise hai khabar

Thokaren kha rahi har kadam par nazar

Thokaren kha rahi har kadam par nazar

Jaoon kahan bata ae dil

Duniya badi hai sangdil

Chandni aayi ghar jalane

Soojhe na koi manzil

Jaoon kahan bata ae dil.

Friday, December 11, 2020

ನೀ ನನ್ನನ್ನು ನೋಡಿದೆ

 


ನೀ ನನ್ನನ್ನು ನೋಡಿದೆ,

ಉದಾರ ಮನಸ್ಸಿನಿಂದ, 

ಈ ಧರೆ ನಿಲ್ಲಿತು, 

ಅಂಬರ ನಿಂತೊಯೀತು,

ರೂಪಸಿಯೇ, ಪ್ರೇಯಸಿಯೇ,

ನೀ.....

-

ಎಲ್ಲಿ ವೇದನೆಯ ಮರುಭೂಮಿಯಲಿ ನಿಂತು ನಡೆಯುತ್ತಿರುತ್ತಿದ್ದೆ, 

ಈ ತುಟಿಗಳ ಹಂಬಲದಲಿ ಜ್ವಲಿಸಿ ಉರಿಯುತ್ತಿರುತ್ತಿದ್ದೆ,

ಅನುಕಂಪ ತೋರಿತು ಕೇಶದ ಮೇಘಗಳು,

ರೂಪಸಿಯೇ, ಪ್ರೇಯಸಿಯೇ, 

ನೀ.....

-

ಈ ಮೋಹಕ ಭಂಗಿಗಳೊಂದಿಗೆ ನೀ ಬಂದೆಲ್ಲಿಗೆ ತಲುಪಿದೆ,

ಕೊನೆಯಲ್ಲಿ ನನ್ನ ಹೃದಯ ತನಕ ನಿನ್ನ ಪಾದಗಳ ಚಿನ್ಹೆ ಮುಟ್ಟಿದೆ,

ಮುಗಿದಂತಾಗಿದೆ ಎಲ್ಲ ಪಥಗಳಿಲ್ಲಿ,

ರೂಪಸಿಯೇ, ಪ್ರೇಯಸಿಯೇ, 

ನೀ.....


ಅನುವಾದ :ಹರೀಶ್ ಶೆಟ್ಟಿ, ಶಿರ್ವ 

ಹಾಡಿದವರು: ಮೊಹಮ್ಮದ್ ರಫಿ

ಮೂಲ: ಮಜರೂಹ್ ಸುಲ್ತಾನ್ಪುರಿ, 

ಸಂಗೀತ : ರಾಹುಲ್ ದೇವ್ ಬರ್ಮನ್ 

ಚಿತ್ರ : ತೀಸರೀ ಮಂಝಿಲ್


तुमने मुझे देखा, हो कर मेहरबान

रुक गयी ये ज़मीं, थम गया आसमां

जाने मन, जाने जाँ

तुमने मुझे...


कहीं दर्द के सहरा में, रुकते चलते होते

इन होंठों की हसरत में, तपते जलते होते

मेहरबान हो गयी, ज़ुल्फ़ की बदलियाँ

जानेमन, जाने जाँ...


लेकर ये हसीं जलवे, तुम भी न कहाँ पहुंचे

आखिर को मेरे दिल तक, क़दमों के निशाँ पहुंचे

ख़त्म से हो गए, रास्ते सब यहाँ

जानेमन, जाने जाँ...

Monday, December 7, 2020

ಹೃದಯದಲ್ಲಿ



ಹೃದಯದಲ್ಲಿ ಯಾರದ್ದೋ ಪ್ರೀತಿಯ ಬೆಳಕುತ್ತಿರುವ ದೀಪವ, 

ಜಗದ ಬಿರುಗಾಳಿಯಿಂದ ಇದೇನು ನಂದಿಸಿ ಹೋಗುತ್ತದೆಯೇ? 

-

ಉಸಿರಿನ ತಾಪದಿಂದ ಜ್ವಲಿಸುತ್ತಿರುತ್ತದೆ ಇದು,

ಎದೆಯಲ್ಲಿ ಹೃದಯದ ಜೊತೆ ಮಿಡಿಯುತ್ತಿರುತ್ತದೆ ಇದು,

ಮಿಡಿಯುತ್ತಿರುತ್ತದೆ ಇದು...

ಅದೆಂತಹ ಅನುರಾಗ ಅಳಿಸಿದರೆ ಅಳಿಸುವಂತಹದು, 

ಅದೆಂತಹ ನೋವು ಅಡಗಿಸಿದರೆ ಅಡಗಿಸುವಂತಹದು, 

ಹೃದಯದಲ್ಲಿ.........

-

ಈ ಜೀವನ ಸಹ ಏನು? ಕೊಡುಗೆ ಅವರದ್ದೇ, 

ಈ ಕವನ ಸಹ ಏನು? ಕರುಣೆ ಅವರದ್ದೇ, 

ಕರುಣೆ ಅವರದ್ದೇ...

ಈಗ ಹರಸಲಿ ಅಲ್ಲವೇ ಪೀಡಿಸಲಿ ಇದು ಅವರ ನಿರ್ಧಾರ, 

ನಾನಂತೂ ಹೃದಯದಲ್ಲಿ ಹಚ್ಚಿದ್ದೇನೆ ಹಣತೆ ಪ್ರೀತಿಯ, 

ಹೃದಯದಲ್ಲಿ...


ಅನುವಾದ :by ಹರೀಶ್ ಶೆಟ್ಟಿ, ಶಿರ್ವ

ಮೂಲ: ಸಾಹಿರ್ ಲುಧ್ಯಾನವಿ 

ಸಂಗೀತ: ರವಿ 

ಹಾಡಿದವರು: ಲತಾ ಮಂಗೇಶ್ಕರ್ 

ಚಿತ್ರ :ಏಕ್ ಮಹಲ್ ಹೊ ಸಪನೋ ಕ


दिल में किसी के प्यार का जलता हुआ दिया

दुनिया की आँधियों से भला ये बुझेगा क्या


साँसों की आँच पा के भड़कता रहेगा

सीने में दिल के साथ धड़कता रहेगा ये

धड़कता रहेगा 

वो नक़्श क्या हुआ जो मिटाये से मिट गया

वो दर्द क्या हुआ जो दबाये से दब ग

दिल में किसी के प्यार का ..


ये ज़िंदगी भी क्या है अमानत उन्हीं की 

ये शायरी भी क्या है इनायत उन्हीं की है

इनायत उन्हीं की 

अब वो करम करें कि सितम उन का फ़ैसला

हम ने तो दिल में प्यार का शोला जला लि

दिल में किसी के प्यार का ...

Video link: https://youtu.be/Y56hu3j-Xmw









ನಿಂದನೆ ಸಹಿಸು ನೀನು



ನಿಂದನೆ ಸಹಿಸು ನೀನು, 

ನಿಂದನೆ ಸ್ವೀಕರಿಸು ನೀನು, 


ನಿರ್ಮಲ ನೀರಿಗೆ ಕಲ್ಲು ಎಸೆದರೆ, 

ಕೊಂಚ ತಳಮಳ ಉಂಟಾಗುವುದು ಸಹಜ, 

ಆದರೆ ಕ್ಷಣಕ್ಕೆ ಶಾಂತತೆ ಆವರಿಸುತ್ತದೆ,

ಇದೂ ನಿಜ,

ಕೋಪವನ್ನು ನಿಯಂತ್ರಿಸು ನೀನು, 

ತನ್ನನ್ನು ತಾನೇ ಗೆಲ್ಲು ನೀನು,

ನಿಂದನೆ ಸಹಿಸು ನೀನು....


ಅಪಮಾನ ಮಾಡುವವರು ನಿನ್ನ ಹಿತೈಷಿಗಳೆಂದು ತಿಳಿ ನೀನು, 

ತಾಳ್ಮೆಯಿಂದ ನಿಂದನೆ ನುಂಗು ನೀನು, 

ನಿನ್ನ ದೋಷವಿದ್ದಲ್ಲಿ ತಿದ್ದಿಕೊಳ್ಳು ನೀನು,

ನಗು ಮುಖ ತೋರಿ ಧನ್ಯವಾದ ಸಲ್ಲಿಸು ನೀನು,  

ನಿಂದನೆ ಸಹಿಸು ನೀನು.....


ಕುಂಬಾರನ ಹೊಡೆತಕ್ಕೆ ಮಣ್ಣು ಮೌನ ಇರುವಂತೆ, 

ಮೌನ ಇದ್ದು ನಿನ್ನ ಸಹನೆ ಶಕ್ತಿಯನ್ನು ಏರಿಸು ನೀನು, 

ಕುಂಬಾರ ಮಾಡಿದ ಸುಂದರ ಮಡಕೆಯಂತೆ ಆಕಾರ ಪಡುವೆ ನೀನು,

ನಿಂದನೆಯ ತಾಪ ಸಹಿಸಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


ನಿಂದಿಸುವವರ ಕ್ರೋಧ ಅವರ ರಕ್ತವನ್ನೇ ಹೀರುತ್ತದೆ, 

ಅನ್ಯರನ್ನು ನಿಂದಿಸುವಾಗ ಇದು ಅವರ ವ್ಯಕ್ತಿತ್ವವನ್ನೇ ದರ್ಶಿಸುತ್ತದೆ, 

ಮೌನವಿದ್ದು ನಿನ್ನ ಒಳ್ಳೆ ಗುಣ ಕಾಪಾಡು ನೀನು,

ನಿನ್ನ ಶಾಂತತೆ ಕಾಪಾಡಿಕೊಳ್ಳು ನೀನು,

ನಿಂದನೆ ಸಹಿಸು ನೀನು.....


by ಹರೀಶ್ ಶೆಟ್ಟಿ, ಶಿರ್ವ

Saturday, December 5, 2020

ಮನ ಶುದ್ಧ


Photo: google


ಮನ ಶುದ್ಧ, 

ಆತ್ಮ ಶುದ್ಧ, 


ಆತ್ಮ ಶುದ್ಧ, 

ವಿಚಾರ ಶುದ್ಧ, 


ವಿಚಾರ ಶುದ್ಧ, 

ಆಚಾರ ಶುದ್ಧ, 


ಆಚಾರ ಶುದ್ಧ,

ಸಂಕಲ್ಪ ಶುದ್ಧ, 


ಸಂಕಲ್ಪ ಶುದ್ಧ, 

ಕರ್ಮ ಶುದ್ಧ, 


ಕರ್ಮ ಶುದ್ಧ, 

ನಿರ್ಣಯ ಶುದ್ಧ, 


ನಿರ್ಣಯ ಶುದ್ಧ, 

ಕಾರ್ಯ ಶುದ್ಧ, 


ಕಾರ್ಯ ಶುದ್ಧ,

ವ್ಯವಹಾರ ಶುದ್ಧ, 


ವ್ಯವಹಾರ ಶುದ್ಧ, 

ಫಲ ಶುದ್ಧ,


ಫಲ ಶುದ್ಧ, 

ಜೀವನ ಪರಿಶುದ್ಧ 


by ಹರೀಶ್ ಶೆಟ್ಟಿ, ಶಿರ್ವ

Friday, December 4, 2020

ಏಕಾಂಗಿ ಜೀವನ



ಏಕಾಂಗಿ ಜೀವನ,

ನೆನಪು ಸದಾ ನಿನ್ನ, 

ಏಕಾಂಗಿ ಜೀವನ.....


ಏರು ಪೇರು ಸಾಗರದ ಅಲೆಯಲ್ಲಿ, 

ತಳಮಳ ಯಾಕೋ ಮನಸ್ಸಲ್ಲಿ, 

ನೀನೇ ಇರುವೆ ಸ್ಮೃತಿಯಲ್ಲಿ,

ತುಂಬಿರುವೆ ಕಣ್ಣೀರಾಗಿ ನೀನೇ ಕಣ್ಣಲ್ಲಿ, 

ಅಳುತ್ತಿದೆ ಈ ಮನ, 

ಏಕಾಂಗಿ ಜೀವನ.....


ಖಾಲಿ ಖಾಲಿ ಈ ಹಾದಿಯಲಿ,

ಅಪರಿಚಿತ ಈ ಪಥದಲ್ಲಿ, 

ನಡೆಯುತ್ತಿರುವೆ ನಾನು ಹಗಲಲಿ ರಾತ್ರಿಯಲಿ, 

ಹೋಗುತ್ತಿರುವೆ ನನ್ನದೇ ಗುಂಗಿನಲ್ಲಿ, 

ಗೊತ್ತಿಲ್ಲ ಯಾವುದು ತಾಣ ನನ್ನ,

ಏಕಾಂಗಿ ಜೀವನ.....


ಅದೇಕೆ ನೀನು ನನ್ನನ್ನು ಬಿಟ್ಟು ಹೋದೆ, 

ಗಾಜಿನಂತೆ ಹೃದಯ ಮುರಿದು ಹೋದೆ, 

ನೀನಿಲ್ಲದೆ ಜೀವನದಲಿ ಏನಿದೆ?

ಬದುಕು ಅಶ್ರುವಿನ ಸಾಗರದಲ್ಲಿ ತೇಲಿದೆ, 

ಚಡಪಡಿಕೆಯಲ್ಲಿ ನನ್ನ ಪ್ರಾಣ,

ಏಕಾಂಗಿ ಜೀವನ.....


by ಹರೀಶ್ ಶೆಟ್ಟಿ, ಶಿರ್ವ

Friday, October 23, 2020

ಕಂಡೆ ನಾನು ಕಂಡೆ



ಕಂಡೆ ನಾನು ಕಂಡೆ,

ಸ್ವಪ್ನದಲಿ ಅಮ್ಮನ ನವ ಸ್ವರೂಪ ಕಂಡೆ,

ಕಂಡೆ ನಾನು ಕಂಡೆ....


ಪ್ರಥಮ ಸ್ವರೂಪ ಶೈಲಪುತ್ರಿ,

ಈಶ್ವರ ಪತ್ನಿ, ಪರ್ವತ ಪುತ್ರಿ,

ಕಮಲ ಧಾರಿಣಿ ಪಾರ್ವತಿ ಮಾತೆಯೇ,

ಕಂಡೆ ನಾನು ಕಂಡೆ....


ದ್ವಿತೀಯ ಸ್ವರೂಪ ಬ್ರಹ್ಮಚಾರಿಣಿ,

ಒಂದು ಹಸ್ತೇ ಅಕ್ಷಮಾಲೆ, ಇನ್ನೊಂದು ಹಸ್ತೇ ಕಮಂಡಲೇ,

ನಿರಾಹಾರಿ ತಪ್ಪಸ್ವಿನಿ ಮಾತೆಯೇ,

ಕಂಡೆ ನಾನು ಕಂಡೆ....


ತೃತೀಯ ಸ್ವರೂಪ ದೇವಿ ಚಂದ್ರಘಂಟ,

ಅರ್ಧಚಂದ್ರ ಮಸ್ತಕ, ದಶ ಕೈ ವಿಭಿನ್ನ ಅಸ್ತ್ರ, ಖಡ್ಗ,

ಶಾಂತರೂಪಿ ಮಾತೆಯೇ,

ಕಂಡೆ ನಾನು ಕಂಡೆ....


ನಾಲ್ಕನೇ ಸ್ವರೂಪ ಅಮ್ಮ ಕುಶ್ಮಂಡಾ,

ರಚಿಸಿದಳು ಅವಳು ಬ್ರಹ್ಮಾಂಡ,

ದೇವಿ ಆಧಿಶಕ್ತಿ, ಸಿಂಹ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ....


ಐದನೇ ಸ್ವರೂಪ ಸ್ಕಂದಮಾತೆ,

ಶ್ವೇತ ಕಮಲ ಒಂದು ಹಸ್ತೇ, ಮಗ ಕಾರ್ತಿಕೇಯ ಇನ್ನೊಂದು ಹಸ್ತೇ,

ಯಶಶ್ವಿನಿ ತೇಜೋಮಯಿ ದೇವಿ ಮಾತೆಯೇ,

ಕಂಡೆ ನಾನು ಕಂಡೆ....


ಆರನೇ ಸ್ವರೂಪ ಅಮ್ಮ ಕಾತ್ಯಾಯನಿ,

ಉಜ್ಜ್ವಲ ಕಾಂತಿ ರೂಪಿಣಿ, ಸ್ವರ್ಣ ವರ್ಣಿ,

ದಾನವ ವಿನಾಶಿನಿ ಮಾತೆಯೇ,

ಕಂಡೆ ನಾನು ಕಂಡೆ....


ಏಳನೇ ಸ್ವರೂಪ ಅಮ್ಮ ಕಾಲರಾತ್ರಿ, 

ಕರಿ ವರ್ಣಿ,ಆನಂದಮಯಿ, ಸರ್ವ ರಾಕ್ಷಸ ಶಕ್ತಿ ವಿನಾಶಿನಿ, ತ್ರಿನೇತ್ರಿ, 

ಕಾಲರಾತ್ರಿ ಭಯಂಕರೀ ಮಾತೆಯೇ,

ಕಂಡೆ ನಾನು ಕಂಡೆ....


ಎಂಟನೇ ಸ್ವರೂಪ ಅಮ್ಮ ಮಹಾಗೌರಿ,

ಶ್ವೇತ ವರ್ಣಿ, ಶ್ವೇತ ವಸ್ತ್ರ ಧಾರಿಣಿ, ಮಹಾ ತಪಸ್ವಿನಿ,

ವೃಷಭ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ....


ಒಂಬತ್ತನೇ ಸ್ವರೂಪ ಅಮ್ಮ ಸಿದ್ಧಿದಾತ್ರಿ,

ಶಂಖ ಚಕ್ರ ಗದ ಹಸ್ತೇ, ಅಷ್ಟಸಿದ್ಧಿ ಪ್ರಧಾಯಿನೀ,

ಸಿಂಹ ಸವಾರಿ ಮಾತೆಯೇ,

ಕಂಡೆ ನಾನು ಕಂಡೆ......


by ಹರೀಶ್ ಶೆಟ್ಟಿ,  ಶಿರ್ವ






Thursday, October 22, 2020

ಭಕ್ತಿರಸ



ಮುಂಜಾನೆ ಮುಂಜಾನೆ ಬೇಗನೆ ಎದ್ದು ವನಕ್ಕೆ ಓಡಿದ,   

ಅಮ್ಮ ಅಮ್ಮ ಜಪಿಸುತ ಸ್ಮರಿಸಿದ,

ವನ ವನ ಸುತ್ತುತಾ ಮಲ್ಲಿಗೆ ಹೂವ ಹುಡುಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಮಲ್ಲಿಗೆ ಮಲ್ಲಿಗೆ ಮುಟ್ಟಿ ಮುಟ್ಟಿ ನೋಡಿದ,

ಶ್ರದ್ಧೆಯಿಂದ ಮೂಸಿ ಮೂಸಿ ನೋಡಿದ,

ಹುಡುಕಿ ಹುಡುಕಿ ಒಳ್ಳೆ ಹೂವ ಹೆಕ್ಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಬೇಗ ಬೇಗ ಮನೆಗೆ ಬಂದು ಹೂವ ಮಾಲೆ ಕಟ್ಟಿದ,

ಸುಂದರ ಸುಂದರ ಮಾಲೆ ತಯ್ಯಾರಿಸಿದ,

ಪದೇ ಪದೇ ಅದನ್ನು ನೋಡಿ ತನ್ನನ್ನು ಹೊಗಳಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಸ್ನಾನ ಪಾನ ಶೀಘ್ರವೇ ಮುಗಿಸಿದ,

ಶುಭ್ರ ಶುಭ್ರ ವಸ್ತ್ರವ ಧರಿಸಿದ,

ಹೂ ಹಣ್ಣು ಹರಿವಾಣದಲ್ಲಿಟ್ಟು ಮನೆಯಿಂದ ತೆರಳಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಎಷ್ಟೋ ದೂರ ನಡೆದು ಅಮ್ಮನ ಮಂದಿರಕ್ಕೆ ಮುಟ್ಟಿದ,

ಅಮ್ಮನ ಗುಡಿ ಸ್ಥಾನ ಶುಚಿಯಾಗಿ ಸ್ವಚ್ಛ ಮಾಡಿದ,

ಅಮ್ಮನ ಮೂರ್ತಿಗೆ ಸ್ನಾನವ ಮಾಡಿಸಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಚಂದನದ ಲೇಪವನ್ನು ಅಮ್ಮನ ಮೂರ್ತಿಗೆ ಹಚ್ಚಿದ,

ಭಕ್ತಿಭಾವದಿಂದ ಗುಡಿಯನ್ನು ಅಲಂಕರಿಸಿದ,

ತಾನು ತಂದ ಮಲ್ಲಿಗೆಯ ಹೂವ ಮಾಲೆ ಶ್ರದ್ದೆಯಿಂದ ಅಮ್ಮನ ಕೊರಳಿಗೆ ಹಾಕಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ದೀಪ ಧೂಪ ಹಚ್ಚಿ ಗುಡಿ ಬೆಳಗಿಸಿದ,

ತೀರ್ಥ ಮತ್ತು ಹಣ್ಣಿನ ಪ್ರಸಾದ ತಯ್ಯಾರಿಸಿದ,

ಮಂತ್ರ ಪಠನೆ ಮಾಡುತ ಪೂಜೆ ಆರಂಭಿಸಿದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಹಲವು ಅನ್ಯ ಭಕ್ತರೂ ಬಂದು ಸೇರಿದರು,

ಗಂಟೆ ಚೆಂಡೆಯ ಭಾರಿಸಿ ಭಕ್ತಿಯಲಿ ಮುಳುಗಿದರು,

ಪೂಜೆಯ ಮುಗಿಸಿ ಭಕ್ತ ತೃಪ್ತಿಯ ಉಸಿರೆಳೆದ,

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ,


ಕೈ ಮುಗಿದು ಭಕ್ತ ಎಲ್ಲರಿಗೂ ದೇವರಿಂದ ಸುಖ ಬೇಡಿದ,

ಸಾಷ್ಟಾಂಗ ಬಿದ್ದು ಅಮ್ಮನ ಆಶೀರ್ವಾದ ಪಡೆದ,

ಎಲ್ಲರಿಗೆ ತೀರ್ಥ ಪ್ರಸಾದ ಹಂಚಿದ, 

ಭಕ್ತ ನೋಡಿ ಭಕ್ತಿರಸದಲಿ ಮುಳುಗಿದ.


ಹರೀಶ್ ಶೆಟ್ಟಿ, ಶಿರ್ವ




Wednesday, October 21, 2020

ಎಷ್ಟು ಸುಂದರ ಕಾಣುವೆ ಅಮ್ಮ

 


ಎಷ್ಟು ಸುಂದರ ಕಾಣುವೆ ಅಮ್ಮ,

ನೋಡುವುದು ನನ್ನ ಪುಣ್ಯ,

ಹೆತ್ತ ತಾಯಿ ನೀವೇ ಎಂದು,

ಅಪ್ಪಿಕೊಳ್ಳಲು ಆಸೆ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ಎಷ್ಟು ಜನ್ಮದ ಒಳ್ಳೆತನದ ಫಲವೋ ನಿಮ್ಮನ್ನು ನೋಡುವುದೊಂದು,

ನಿಮ್ಮ ಸಮ್ಮುಖ ಕುಳಿತುಕೊಳ್ಳುವುದು ಮಗುವಾಗಿವೊಂದು,

ನಿಮ್ಮ ಮುಖವನ್ನೇ ನೋಡುತ್ತಿರಬೇಕೆಂಬ ಆಸೆ ನನಗೊಂದು,

ದೂರ ಮಾಡದಿರು ನನ್ನನ್ನು ನೀವು,

ಪಾದದ ಅಡಿಯಲ್ಲಿ ಕುಳಿತುಕೊಳ್ಳಿರುವೆ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ಮಲ್ಲಿಗೆ ಅರಳುವ ಸುಂದರ ನಗುವು ಹೊಟ್ಟೆ ತುಂಬಿಸುತ್ತದೆ, 

ಹುಣ್ಣಿಮೆ ಚಂದ್ರನಂತಹ ಮುಖದ ಕಾಂತಿಯೂ ಭಕ್ತಿ ಏರಿಸುತ್ತದೆ,

ಹಿಂತಿರುಗಿ ನನ್ನನ್ನು ಕಳುಹಿಸದಿರು ನೋಡಿ,

ಅಳುವೇ ನಾನು ನಂತರ,

ಬಿದ್ದಿರುವೆ ನಿಮ್ಮ ಕಾಲ ಅಡಿಯಲಿ, 

ಹೋಗುವುದಿಲ್ಲ ಬಿಟ್ಟು ನಿಮ್ಮನ್ನು,

ಎಷ್ಟು ಸುಂದರ ಕಾಣುವೆ ಅಮ್ಮ....


ಸುಮ್ಮನೆ ಇರುವೆ, ಮಾತಾಡುವುದಿಲ್ಲ ನಾನು, ಆದರೆ ನೋಡುವುದು ಕೇವಲ ನಿಮ್ಮನ್ನು,

ಬೈಯಬೇಡಿ ನನಗೆ, ಕೋಪಿಸದಿರಿ, ಮುಗ್ಧ ಬಾಲೆ ನಾನು,

ನಿಮ್ಮನ್ನೇ ನಂಬಿದ ಮಗು ನಾನು,

ಗತಿಯೇ ನೀವೇ ಅಮ್ಮ,

ನಿಮ್ಮದೊಂದು ಕರುಣೆ ಸಿಕ್ಕಿದರೆ ಸಾಕು, 

ಬೇರೆ ಏನೂ ಬೇಡ ಅಮ್ಮ,

ಎಷ್ಟು ಸುಂದರ ಕಾಣುವೆ ಅಮ್ಮ....


ತುಳು ಸಾಂಗ್ 'ಯೇತ್ ಪೊರ್ಲು ತೋಜುವರಮ್ಮ'

ಅದರ ಕನ್ನಡ ಅನುವಾದ ಮಾಡಿದ್ದೇನೆ.

ತುಳು ಸಾಂಗ್ ರೈಟರ್ : ಗೊತ್ತಿಲ್ಲ, ಕ್ಷಮಿಸಿ 

ಕನ್ನಡ ಅನುವಾದ : ಹರೀಶ್ ಶೆಟ್ಟಿ, ಶಿರ್ವ

Listen Tulu song:

https://youtu.be/8BJ8w8-gtBQ


yeth porlu tojuvaramma

toopinenna punya,

peddi appene eere pand

arant patthare aase yenna,

yeth porlu tojuvaramma,


yeth janmada edendi phalana iren tupinonji,

irena edurude incha kullare baale aad onji,

irena monene tuvondu kullare aase yenk onji,

doora malpa de enaan eer, 

paadada adit kulluve amma,

yeth porlu tojuvaramma....


mallige araluna muguru telkene banjin jinjavundu,

punneme chandrana bolpuda mone bhaktin urkavundu,

kadapudade pira ir enan bulpuve tule bokka

uraluve irena kaardadi,

povayya bokka iren budd yaan,

yeth porlu tojuvaramma...


manpande kulluve

pateruji yaan,

aanda tupini maatra Irene,

nerade eer, kopa malpade, paapadal yaan

iren nambina baale yaan,

gatiye ir amma,

irena onji karune tikknda yaavoo,

bethe daala bodchi amma

yeth porlu tojuvaramma...

------

ಯೇತ್ ಪೊರ್ಲು ತೋಜುವರಮ್ಮ

ತೂಪಿನೆನ್ನ ಪುಣ್ಯ,

ಪೆದ್ದಿ ಅಪ್ಪೆನ್ ಈರೇ ಪಂದ್

ಅರಂಟ್ ಪತ್ಥರ್ ಆಸೆ ಎನ್ನ,

ಯೇತ್ ಪೊರ್ಲು ತೋಜುವರಮ್ಮ,


ಯೇತ್ ಜನ್ಮದ ಎಡ್ಡೆoದಿ ಫಲನ ಇರೆನ್ ತುಪಿನೊಂಜಿ,

ಈರೆನ ಎದುರುದೇ ಇಂಚ ಕುಲ್ಲರೆ ಬಾಲೆ ಆದ್ ಒಂಜಿ,

ಈರೆನ ಮೊನೆನೆ ತುವೊಂದು ಕುಲ್ಲರೆ ಆಸೆ ಎಂಕ್ ಒಂಜಿ

ದೂರ ಮಲ್ಪಡೇ ಏನಾನ್ ಇರ್, 

ಪಾದದ ಅಡಿಟ್ ಕುಲ್ಲುವೆ ಅಮ್ಮ,

ಯೇತ್ ಪೊರ್ಲು ತೋಜುವರಮ್ಮ,


ಮಲ್ಲಿಗೆ ಅರಳುನ ಮೂಗೂರು ತೆಳ್ಕೆನ್ ಬಂಜಿನ್ ಜಿಂಜವುಂಡು,

ಪುನ್ನೆಮ್ ಚಂದ್ರನ ಬೊಲ್ಪುದ ಮೊನೆ ಭಕ್ತಿನ್ ಉರ್ಕವುಂಡು,

ಕಡಪುಡದೆ ಪಿರ ಇರ್ ಏನನ್, ಬಲ್ಪುವೆ ತೂಲೆ ಬೊಕ್ಕ,

ಉರಳುವೆ ಈರೆನ ಕಾರ್ ದಡಿ,

ಪೋವಯ್ಯಾ ಬೊಕ್ಕ ಇರೆನ್ ಬುಡ್ದ್ ಯಾನ್,

ಯೇತ್ ಪೊರ್ಲು ತೋಜುವರಮ್ಮ,


ಮನಿಪಂದೆ ಕುಲ್ಲುವೆ

ಪಾತೆರುಜಿ ಯಾನ್,

ಆಂಡ ತೂಪಿನಿ ಮಾತ್ರ ಇರೆನ್,

ನೆರಡೇ ಇರ್, ಕೋಪ ಮಲ್ಪಡೇ, ಪಾಪದಲ್ ಯಾನ್,

ಇರೆನ್ ನಂಬಿನಾ ಬಾಲೆ ಯಾನ್,

ಗತಿಯೇ ಇರ್ ಅಮ್ಮ,

ಈರೆನ ಒಂಜಿ ಕರುನ್ ತಿಕಂಡ ಯಾವೂ,

ಬೇತೆ ದಾಲ ಬೋಡಚಿ ಅಮ್ಮ,

ಯೇತ್ ಪೊರ್ಲು ತೋಜುವರಮ್ಮ.....

Tuesday, October 20, 2020

ಹಾಡುವೆ ನಾ ಹಾಡುವೆ


 

ಹಾಡುವೆ ನಾ ಹಾಡುವೆ,

ಅಮ್ಮ ನಿನ್ನ ಭಕ್ತಿ ಗೀತೆ ಹಾಡುವೆ,

ನಿನ್ನ ಹೊಗಳುತ್ತ ನಮಿಸುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನನ್ನು ಸ್ಮರಿಸದೆ ಕಣ್ಣುತೆರಯಲಾಗುವುದಿಲ್ಲ,

ನಿನ್ನನ್ನು ನೋಡುವ ತನಕ ಮನಸ್ಸಿಗೆ ನೆಮ್ಮದಿ ಇಲ್ಲ,

ಪ್ರಾತಃಕಾಲ ಸ್ನಾನ ಮುಗಿಸಿ ನಿನ್ನ ಮಂದಿರಕ್ಕೆ ಓಡುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನನ್ನು ಸಿಂಗಾರಿಸುವುದರಲ್ಲಿ ಅಯ್ಯೋ ನಾನು ಪಡೆಯುವೆ ಸಂತೋಷ ಎಷ್ಟು,

ದೀಪ ಬೆಳೆಗಿಸಿದ ನಂತರ ಅಯ್ಯೋ ನಿನ್ನ ರೂಪ ಕಾಣುವುದು ಸುಂದರ ಎಷ್ಟು,

ಹೂ ಹಣ್ಣು ಅರ್ಪಿಸಿ ಪೂಜೆಯ ಮಾಡುವೆ,

ಹಾಡುವೆ ನಾ ಹಾಡುವೆ....


ಅಮ್ಮ ನಿನ್ನ ದಾಸ ನಾನು ನನ್ನ ತಪ್ಪನ್ನು ಕ್ಷಮಿಸು ನೀನು,

ನಿನ್ನ ಸಾನಿಧ್ಯ ಕೇವಲ ಸಿಗಲಿ ಬೇಡ ನನಗೆ ಹಾಲು ಜೇನು,

ನನ್ನ ಸರ್ವಸ್ವ ಅರ್ಪಿಸಿ ನಿನ್ನ ಪಾದ ಸೇವೆ ಮಾಡುವೆ,

ಹಾಡುವೆ ನಾ ಹಾಡುವೆ....


ನಿನ್ನ ಭಕ್ತಿ ಗೀತೆ ಹಾಡದೆ ಮನಸ್ಸಿಗೆ ತೃಪ್ತಿ ಸಿಗದು,

ದಿನನಿತ್ಯ ಹಾಡುವುದು ಎಂಥ ಅದ್ಭುತ ಯೋಗ ನನ್ನದು,

ನಿನ್ನ ಕರುಣೆಯಿಂದಲಿ ನಾನು ಬದುಕಿರುವೆ,

ಹಾಡುವೆ ನಾ ಹಾಡುವೆ....


ಸಂಸಾರದಲ್ಲಿ ಇದ್ದಲ್ಲಿ ಕಷ್ಟ ಸುಖಗಳು ಬರುವುದು ಸಹಜ,

ನಿನ್ನ ಕೃಪೆಯಿಂದಲಿ ಸಾಗುತ್ತಿದೆ ಬದುಕು ಸಹಜ,

ಏನೋ ಪುಣ್ಯ ಮಾಡಿರುವೆ,

ಹಾಡುವೆ ನಾ ಹಾಡುವೆ....


by ಹರೀಶ್ ಶೆಟ್ಟಿ, ಶಿರ್ವ


Monday, October 19, 2020

ಅಮ್ಮ ನೀ ಇಳಿದು ಬಾ ಧರೆಗೆ


 

ಅಮ್ಮ ನೀ ಇಳಿದು ಬಾ ಧರೆಗೆ,

ನಿನ್ನ ಪ್ರೀತಿಯ ಭಕ್ತರ ಕೋರಿಕೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಭೂಮಿಯಲಿ ದುಷ್ಟರ ಹಾವಳಿ ಹೆಚ್ಚಾಗುತ್ತಿದೆ,

ಸತ್ಯವಂತರಿಗೆ ಬದುಕು ಕಷ್ಟವಾಗುತ್ತಿದೆ,

ಸ್ಪಂದಿಸು ನಮ್ಮ ಈ ಮೊರೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ದುರ್ಜನರು ತಿಂದು ಉಂಡು ತೇಗುತ್ತಿದ್ದಾರೆ,

ಸಜ್ಜನರು ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ,

ಬೆಲೆ ಇಲ್ಲ ಈ ಕಲಿಯುಗದಲ್ಲಿ ಅವರ ಸತ್ಯ ಮಾತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾಲೆಯರ ಮೇಲೆ ಅತ್ಯಾಚಾರ ನಡೆಯುವುದು ಮಾಮೂಲಿಯಾಗಿದೆ,

ನ್ಯಾಯದ ಕಣ್ಣು ಕುರುಡಾಗಿದೆ,

ಸ್ಪಂದಿಸು ಹೆಣ್ಣು ಮಕ್ಕಳ ಈ ಕೂಗಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ನ್ಯಾಯ ಸಿಗದೇ ಮನುಜ ಚಡಪಡಿಕೆಯಲಿ,

ನ್ಯಾಯ ಮಾಡುವವರು ನೀಚರ ಒತ್ತಡದಲ್ಲಿ,

ಮನುಜ ಇನ್ನೆಲ್ಲಿಗೆ ಹೋಗುವುದು ಫಿರ್ಯಾದು ನೀಡೋಕ್ಕೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾ ಬೇಗ ದುಷ್ಟರ ನೀ ಸಂಹಾರ ಮಾಡು,

ಸಜ್ಜನರ ಸಂಕಟ ದೂರ ಮಾಡಿ ಉದ್ಧಾರ ಮಾಡು,

ಕೃಪೆ ತೋರು ನೀತಿವಂತರ ಈ ವಿನಂತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


by ಹರೀಶ್ ಶೆಟ್ಟಿ, ಶಿರ್ವ


Photo : Google





Sunday, October 18, 2020

ಶರಣು ನಾನು ಅಮ್ಮ

 


ಶರಣು ನಾನು ಅಮ್ಮ,

ನಿನ್ನ ಶರಣು ನಾನಮ್ಮ,

ನಿನ್ನ ಪಾದದಲ್ಲಿ ನನ್ನ ಶಿರವನು ಇಟ್ಟು ವಂದಿಸುವೆ ನಾನಮ್ಮ,

ನಿನ್ನ ಶರಣು ನಾನಮ್ಮ,


ನಿನ್ನ ಸ್ವರೂಪದಿ ತಾಯಿಯನ್ನು ನೀಡಿದೆ,

ಭೂಮಿಗೆ ತಂದು ಕಣ್ಣನು ತೆರೆಸಿದೆ,

ಪ್ರಥಮ ನೋಟದಲ್ಲಿಯೇ ನೀನು ಹೃದಯದಲಿ ನೆಲೆಸಿದೆ ಅಮ್ಮ,

ನಿನ್ನ ಶರಣು ನಾನಮ್ಮ,


ಬಾಲ್ಯದ ಕೃಷ್ಣ ತುಂಟಾಟದಲಿ ಅಮ್ಮನನು ನೋಡಿ ನಾನೂ ಕೈ ಮುಗಿದೇ,

ಪಾದಕ್ಕೆ ನಿನ್ನ ಅಡ್ಡವ ಬಿದ್ದೆ,

ನಿನ್ನ ಪ್ರಸಾದ ಕದ್ದು ತಿಂದೇ ಅಮ್ಮ,

ನಿನ್ನ ಶರಣು ನಾನಮ್ಮ,


ಯೌವನದಲ್ಲಿ ನಿನ್ನ ಆಶೀರ್ವಾದದಿಂದ ಜ್ಞಾನ, ಬುದ್ದಿಯ ಪಡೆದೆ,

ಸತ್ಯ ಸುಳ್ಳಿನ ಭೇದವ ತಿಳಿದೇ,

ನಿನ್ನ ದಯೆಯಿಂದಲೇ ಸಂಸಾರ ಕಟ್ಟಿದೆ ಅಮ್ಮ,

ನಿನ್ನ ಶರಣು ನಾನಮ್ಮ


ದುಃಖದ ಸಮಯದಲ್ಲಿ ನೀನಿದ್ದೆ ಹಿಂದೆ,

ಸುಖದಲ್ಲಿ ನೀನಿನ್ನೂ ಬಳಿ ಬಂದೆ,

ನಿನ್ನ ಭಕ್ತಿಯಿಂದಲೇ ಬದುಕ ಬಂಡಿ ಸಾಗಿತಮ್ಮ,

ನಿನ್ನ ಶರಣು ನಾನಮ್ಮ,


ಕಷ್ಟದಲಿ ತಾಳ್ಮೆ ಧೈರ್ಯ ನಿನ್ನಿಂದಲೇ ಕಲಿತೆ,

ಜೀವನದ ಸಂತೋಷ ನಿನ್ನಿಂದಲೇ ಪಡೆದೆ,

ನಿನ್ನ ಸ್ಮರಣೆಯಿಂದಲೇ ಕಷ್ಟ ಓಡುತ್ತದೆ ಅಮ್ಮ,

ನಿನ್ನ ಶರಣು ನಾನಮ್ಮ,


by ಹರೀಶ್ ಶೆಟ್ಟಿ, ಶಿರ್ವ

Saturday, October 17, 2020

ನಂಬಿದೆ ಅಮ್ಮ ನಿನ್ನ ನಂಬಿದೆ


 

ನಂಬಿದೆ ಅಮ್ಮ ನಿನ್ನ ನಂಬಿದೆ,

ದುರ್ಗಾ ಪರಮೇಶ್ವರಿ ಅಮ್ಮ ನಿನ್ನ ನಂಬಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಮಮತೆಯ ರೂಪ ನೀನು ಅಂಬಿಕೆ,

ಸತ್ಯದ ಸ್ವರೂಪ ನೀನು ಅಂಬಿಕೆ,

ವರ ನೀಡುವ ಶಕ್ತಿ ನಿನ್ನಲ್ಲಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ನವರಾತ್ರಿಯ ಈ ಒಂಬತ್ತು ದಿನವೂ,

ಭಕ್ತರ ಪಾಲಿಗೆ ಇದು ಉತ್ಸಾಹದ ಸಂಭ್ರಮವೂ, 

ಮನೆ ಮನೆಯಲಿ ನಿನ್ನ ಪೂಜೆ ನಡೆಯುತ್ತದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಲೋಕದ ಏಳಿಗೆ ಕೇವಲ ನಿನ್ನಿಂದಲೇ,

ದುಷ್ಟ ಶಕ್ತಿಯ ನಾಶ ಕೇವಲ ನಿನ್ನಿಂದಲೇ,

ಭಕ್ತರ ಶ್ರದ್ಧೆ ನಿನ್ನಲ್ಲಿದೆ,

ನಂಬಿದೆ ಅಮ್ಮ ನಿನ್ನ ನಂಬಿದೆ,


ಕಲ್ಯಾಣಕಾರಿ ನೀನು ಜಗದಂಬಿಕೆ,

ಮಾರ್ಗದರ್ಶಿನಿ ನೀನು ಜಗದಂಬಿಕೆ,

ಅಪ್ರತಿಮ ತೇಜಸ್ಸು ನಿನ್ನ ಮುಖದಲ್ಲಿದೆ

ನಂಬಿದೆ ಅಮ್ಮ ನಿನ್ನ ನಂಬಿದೆ


by ಹರೀಶ್ ಶೆಟ್ಟಿ, ಶಿರ್ವ



Friday, October 16, 2020

ಅಮ್ಮ ನಿನ್ನ


ಅಮ್ಮ ನಿನ್ನ ಮನೆಗೆ ಬಂದು,

ಅದೆಷ್ಟು ಸಂತೋಷ ಎನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಕೋಟಿ ಸಂಪತ್ತು ಇದ್ದರೂ 

ಮಿತಿಯಿಲ್ಲ ಯಾಕೆ ಆಸೆಗೆ,

ಎಷ್ಟು ಪಡೆದರೂ 

ಇನ್ನು ಬೇಕು ಎಂಬ ಯಾಕೆ ಬಯಕೆ,

ತೃಪ್ತಿ ಇಲ್ಲ ಯಾಕೆ ಈ ಮನಸ್ಸಿಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಸಂಬಂಧ, ಬಂಧ, ಅನುಬಂಧ 

ಬರಿ ಒಂದು ಮಾಯೆ ಮೋಹ,

ಕಷ್ಟ ಬಂದಾಗ 

ಯಾರೂ ಬರುವುದಿಲ್ಲ ಸನಿಹ,

ನಿನ್ನ ಹೆಸರು ಜಪಿಸುವುತ್ತಲೇ 

ಸಿಗುತ್ತದೆ ಮಾರ್ಗ ನನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಜೀವನದಲ್ಲಿ ಎಲ್ಲಾ ಪಡೆದದ್ದು 

ಆಶೀರ್ವಾದದಿಂದ ನಿನ್ನ,

ಸದಾ ಸತ್ಯದ ಪಥದಲ್ಲಿ ನಡೆಯುವೆ 

ಎಂಬ ಸಂಕಲ್ಪ ನನ್ನ,

ನಿನ್ನ ದಯೆ ಇಲ್ಲದೆ 

ಏನು ಬೆಲೆ ನನ್ನ ಬದುಕಿಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


ಸುಖ ಕಷ್ಟದಲ್ಲಿ 

ಕೇವಲ ನಿನ್ನದೇ ಆಸರೆ,

ಆಪತ್ತು ವಿಪತ್ತಿನಲ್ಲಿ 

ಶರಣು ನಿನ್ನ ಮೊರೆ,

ಸಂಕಟದಲ್ಲಿ ನೀನಲ್ಲದೆ 

ಬೇರೆ ಯಾರ ನೆನಪು ಬರುವುದಿಲ್ಲ ನನಗೆ,

ನಿನ್ನ ದರ್ಶನ ಮಾಡಿ 

ನೆಮ್ಮದಿ ಸಿಗುತ್ತದೆ ನನ್ನ ಮನ್ನಸ್ಸಿಗೆ,

ಅಮ್ಮ ನಿನ್ನ....


by ಹರೀಶ್ ಶೆಟ್ಟಿ, ಶಿರ್ವ



Thursday, October 15, 2020

ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ

 


ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ,

ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಾನೆ,

ಭೀಕರ ಕಾಡು ಬರಿ ಸಾಧಾರಣ ಕಾಡಾಗಿ ಪರಿವರ್ತಿಸಿದೆಯಲ್ಲ ಎಂದು ಕಣ್ಣೀರು ಬಿಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಈಗ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ,

ಎಷ್ಟೇ ಪ್ರಾಣಿಗಳ ಸಂತಾನವೇ ಮುಗಿದೋಗಿದೆ,

ಬೃಹತ್ ಮೌಲ್ಯವಾನ ಮರಗಳು ಕಡಿದೋಗಿದೆ,

ಕೆಲವೇ ನದಿಗಳು ಉಳಿದಿದೆ,

ನಮ್ಮ ಸುಂದರ ಕಾಡು ಬಂಜರವಾಗುತ್ತಿದೆಯೆಂದು ಚಿಂತಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಜಿಂಕೆಗಳ ಓಡಾಟ ನೋಡಿ ಎಷ್ಟೋ ವರುಷ ಆಗಿದೆ,

ಆನೆಯ ಗುಂಪು ಕಾಣದಂತಾಗಿದೆ,

ಬಲಶಾಲಿ ಸಿಂಹ ನೋಡಿ ಎಷ್ಟೋ ಸಮಯ ಕಳೆದಿದೆ,

ಕಾಗೆಯ ತಂಡ ಸಹ ಆಹಾರಕ್ಕಾಗಿ ಪಟ್ಟಣ ಹೋಗಿದೆ,

ನೀಚ ನರಿಯೂ ಮಾಯವಾಗಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಯಾಕೆ ನಾವು ಪ್ರಾಣಿಗಳ ಮೇಲೆ ಈ ಹಿಂಸೆ?

ಎಲ್ಲಿದೆ ಪ್ರಾಣಿಗಳ ಪರವಾಗಿ ಕೆಲಸ ಮಾಡುವ ಸಂಸ್ಥೆ?

ಇನ್ನೇನು ನಾವು ಪ್ರಾಣಿಗಳು ಕಲಿಸಬೇಕೇ ಮಾನವನಿಗೆ ಅಹಿಂಸೆ?

ಯಾಕೆ ಕೆಡಿಸುವಿರಿ ಕಾಡಿನ ಶಾಂತತೆ?

ಹತಾಶ ವ್ಯಾಘ್ರ ಪ್ರಶ್ನಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಓ ದೇವರೇ ನಮ್ಮ ಕಾಡನ್ನು ಬೆಳೆಸಿ,

ಮಾನವರೇ ನಮ್ಮ ಕಾಡನ್ನು ಉಳಿಸಿ,

ನಿಮ್ಮಿಂದ ಬೇಕು ಕೇವಲ ಒಂದು ಗಿಡದ ಸಸಿ,

ಒಂದು ಗಿಡ ನೆಟ್ಟು ಕಾಡು ಉಳಿಸಿ ಕಾಡು ಬೆಳೆಸಿ,

ನಮ್ಮ ಮನೆಯನ್ನು ಧ್ವಸ್ತ ಮಾಡಬೇಡಿ ಎಂದು ವ್ಯಾಘ್ರ ಬೇಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ.


by ಹರೀಶ್ ಶೆಟ್ಟಿ, ಶಿರ್ವ





Wednesday, October 14, 2020

ಶಕ್ತಿ ಕೊಡು ಅಮ್ಮ

 





ಈ ನವರಾತ್ರಿಯಲ್ಲಿ 

ಭಕ್ತಿಭಾವದಿಂದ ಪೂಜಿಸುವೆ ನಿನ್ನನ್ನು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಅಜ್ಞಾತ ದುಷ್ಟ ಶಕ್ತಿ ಪೀಡಿಸುತ್ತಿದೆ, 

ನಮ್ಮ ಮೈಮನಸ್ಸು ಕೆಡಿಸಿದೆ, 

ಇದರ ಸಂಹಾರ ಮಾಡಿ ನವ ಚೈತನ್ಯ ನೀಡು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ವಿಕಟ ಪರಿಸ್ಥಿತಿ ಬಂದು ಒದಗಿದೆ,

ಬದುಕು ನೀರಸ ಆಗಿದೆ,

ಜೀವನಕ್ಕೆ ಅರ್ಥ ಕೊಟ್ಟು ನವರಸ ನೀಡು ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಖಾಲಿ ಹಾಳೆಯಂತೆ ಈಗ ಮನಸ್ಸು,

ರಂಗಹೀನ ಈಗ ಬದುಕು,

ರಂಗಮಯ ಮಾಡು ಜೀವನ ನವರಂಗ ಸುರಿಸಿ ಅಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ,


ಬೇಡುವೆ ನಾನಮ್ಮ,

ವರದಾನ ನೀಡಮ್ಮ,

ಈ ನವ ದಿನದಲಿ ನವ ಸ್ವರೂಪ ತೋರಿಸಮ್ಮ,

ಅಭಯ ಕೊಡು ಅಮ್ಮ,

ಶಕ್ತಿ ಕೊಡು ಅಮ್ಮ.


by ಹರೀಶ್ ಶೆಟ್ಟಿ,  ಶಿರ್ವ


Photo courtesy:kateel.in

Tuesday, October 13, 2020

ಮಧುರ ಮಧುರ ಸುಂದರ



ಮಧುರ ಮಧುರ ಸುಂದರ,

ಎಷ್ಟು ಸುಮಧುರ ನುಡಿ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಕರಂದದ ಸಿಹಿತನ

ಹೃದಯದ ಮಾತಿನಲಿ ನಿನ್ನ,

ನುಡಿಯುವ ಆ ಲಯದಲಿ

ನರ್ತಿಸುತ್ತದೆ ಕಂಗಳು ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಒಲವು ನಮ್ಮ ಬೆಳೆದಿದೆ

ಪ್ರೀತಿಯ ಮಾತಿನಿಂದ ನಿನ್ನ,

ಸಕ್ಕರೆ ಬೆಲ್ಲ ಯಾಕೆ ಬೇಕು

ಸಿಹಿ ಸವಿಯುವೆ ನಾನು ನುಡಿಯಿಂದ ನಿನ್ನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು

ಮನಸ್ಸಿನ ಬಯಕೆ ನನ್ನ .....


ಮಾತಾಡುವಾಗ ಅದೆಷ್ಟು ಮೋಹಕ 

ಮೊಗದ ಭಾವ ನಿನ್ನ,

ಮುಖದಲ್ಲಿ ಮೂಡುವ 

ಮುದ್ದು ನಗು ಎಷ್ಟು ಚೆನ್ನ

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


ಒಂದು ವೇಳೆ ನೀನು ಮೌನ ಇದ್ದಲ್ಲಿ,

ಮನಸ್ಸ ಸಾಗರದಲ್ಲಿ ಕಳವಳ ನನ್ನ,

ಏನೋ ಬೇಸರ ಮನಸಲಿ,

ಹೃದಯದಲಿ ಅಲೆಗಳು ನೋವಿನ,

ಹೀಗೆಯೇ ನೀ ನುಡಿಯುತ್ತಿರಬೇಕೆಂದು...

ಮನಸ್ಸಿನ ಬಯಕೆ ನನ್ನ .....


by ಹರೀಶ್ ಶೆಟ್ಟಿ, ಶಿರ್ವ



Photo : Google


Monday, October 12, 2020

ಹೂ ಕಾಗದದ ಹೂ

 


ಹೂ ಕಾಗದದ ಹೂ,

ನೀ ಕೊಟ್ಟ ಕಾಗದದ ಹೂ,

ಗುಲಾಬಿ ಬಣ್ಣದ ಕಾಗದದ ಹೂ,

ಹೂ ಕಾಗದದ ಹೂ.....


ಹೃದಯ ಮಿಡಿಸಿದ ಕಾಗದದ ಹೂ,

ಮೌನ ಮುರಿದ ಕಾಗದದ ಹೂ,

ಸಂಭಾಷಣೆ ಪ್ರಾರಂಭಿಸಿದ ಕಾಗದದ ಹೂ,

ನಿನ್ನೊಪ್ಪಿಗೆಯ ಕಾಗದದ ಹೂ,

ಹೂ ಕಾಗದದ ಹೂ.....


ಪ್ರಥಮ ಭೇಟಿಯ ಕಾಗದದ ಹೂ,

ನಮ್ಮ ಮಿಲನದ ಕಾಗದದ ಹೂ,

ಆತ್ಮೀಯತೆ ಬೆಳೆಸಿದ ಕಾಗದದ ಹೂ,

ಹಿಂಜರಿಕೆ ಮರೆಸಿದ ಕಾಗದದ ಹೂ,

ಹೂ ಕಾಗದದ ಹೂ.....


ನಿನ್ನೊಲವಿನ ಕಾಗದದ ಹೂ,

ಬಂಧ ಬೆಸೆದ ಕಾಗದದ ಹೂ,

ಖುಷಿ ತಂದ ಕಾಗದದ ಹೂ,

ಹೊಸ ಆರಂಭದ ಕಾಗದದ ಹೂ,

ಹೂ ಕಾಗದದ ಹೂ.....


ನನ್ನನ್ನು ಕವಿ ಮಾಡಿದ ಕಾಗದದ ಹೂ,

ಕವನ ಬರೆಸಿದ ಕಾಗದದ ಹೂ,

ನಿದ್ದೆ ಮರೆಸಿದ ಕಾಗದದ ಹೂ,

ಹಗಲು ಕನಸು ಕೊಟ್ಟ ಕಾಗದದ ಹೂ,

ಹೂ ಕಾಗದದ ಹೂ.....


by ಹರೀಶ್ ಶೆಟ್ಟಿ, ಶಿರ್ವ

Sunday, October 11, 2020

ಮಾನವ ಪರಿಸ್ಥಿತಿಯ ಕೈಗೊಂಬೆ



ಮಾನವ ಪರಿಸ್ಥಿತಿಯ ಕೈಗೊಂಬೆ,

ದಿನನಿತ್ಯ ನೂರಾರು ಸವಾಲುಗಳು ಅವನ ಮುಂದೆ,

ಹುಟ್ಟು ಸಾವಿನ ಮಧ್ಯೆ ಬದುಕೊಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಸ್ಥಿತಿಗಳು ಅವನು ಎನಿಸುವಂತೆ ಒದಗುವುದಿಲ್ಲ,

ಪರಿಶ್ರಮ ತಕ್ಕ ಅವನು ಪಡೆಯುವುದಿಲ್ಲ,

ಯೋಚಿಸಿದ್ದು ಆಗುವುದಿಲ್ಲ, ಆಗುವುದು ಇನ್ನೊಂದೇ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬಾಲ್ಯ ಸಾಗುತ್ತದೆ ಮಮತೆಯಲ್ಲೇ,

ಯೌವನ ಕಳೆದೋಗುತ್ತದೆ ಬದುಕನ್ನು ಅರ್ಥೈಸುವುದಲ್ಲೇ,

ಜೀವನ ಒಂದು ಹೋರಾಟ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಕಲ್ಲು ಮುಳ್ಳು ಅದೆಷ್ಟೋ ಅಡಚಣೆ,

ಇದೇ ಬದುಕಿನಾಟ ಮನೆ ಮನೆ, 

ವಿಧಿಯ ಶರಣ ಮಕ್ಕಳು ತಾಯಿ ತಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನ ಒಂದು ರಂಗಮಂಚ,

ನಟಿಸಿದಂತೆ ಚಿತ್ರ ಬಿಡಿಸುತ್ತಲೇ ಹೋಗುತ್ತದೆ ಕುಂಚ,

ಶರಣು ನಾವು ಆ ಚಿತ್ರಕಾರನ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬದುಕಿನ ಓಡಾಟದಲ್ಲಿ ಸೋಲು ಗೆಲುವು

ಸಾಧನೆ ಮಾಡುವುದು ನಮ್ಮ ಧರ್ಮವು, 

ಮಾಡಿದ ಕರ್ಮ ಹಿಂಬಾಲಿಸುತ್ತದೆ ಹಿಂದೆ ಹಿಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನದ ದೊಂಬರಾಟದಲ್ಲಿ,

ನಮ್ಮ ನಿಯಂತ್ರಣ ಇರುವುದು ಸೃಷ್ಟಿಕರ್ತನ ಕೈಯಲ್ಲಿ,

ಒಂದು ಎಲೆಯೂ ಅಲುಗದು ಅವನ ಅಪ್ಪಣೆಯಿಲ್ಲದೆ,

ಮಾನವ ಪರಿಸ್ಥಿತಿಯ ಕೈಗೊಂಬೆ.


by ಹರೀಶ್ ಶೆಟ್ಟಿ, ಶಿರ್ವ

Saturday, October 10, 2020

ವಿರಹ


ರಾಧೆಯ ವ್ಯಥೆ ನೋಡಿ ನೊಂದುಕೊಳ್ಳುತ್ತಿದ್ದ ಕೃಷ್ಣ,

ಕಣ್ಣೀರು ಅಡಗಿಸಿ ಅಳುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಕೃಷ್ಣ ಅಂದರೆ ಪ್ರೀತಿಯ ಪರಾಕಾಷ್ಠ,

ಕೃಷ್ಣನ ಪ್ರೀತಿಯಲ್ಲೂ ಅವಳಿಗಿತ್ತು ಪೂರ್ಣ ನಿಷ್ಠ,

ರಾಧೆಯ ಭಾವನೆ ಅರಿತು ಅರಿಯದಂತೆ ನಟಿಸುತ್ತಿದ್ದ ಕೃಷ್ಣ

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪಾದದಲ್ಲಿ ರಾಧೆ ಪಡೆಯುತ್ತಿದ್ದಳು ಸ್ವರ್ಗದ ಹಿತ,

ಕೃಷ್ಣನ ಹೆಸರು ಕೇಳುತ್ತಲೆ ಸಂಗೀತಮಯ ಅವಳ ಹೃದಯದ ಮಿಡಿತ,

ರಾಧೆಯ ಪ್ರೀತಿಯ ಜ್ವಾಲೆಯಲಿ ಉರಿಯುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಗೊತ್ತಿತ್ತು ಕೃಷ್ಣನ ಅಸಹಾಯಕತೆ,

ಅವನ ನಟನೆ ನೋಡಿ ಅವಳೂ ನಟಿಸುತ್ತಿದ್ದಳು ಅರಿವಿಲ್ಲದಂತೆ,

ರಾಧೆಯ ವೇದನೆಗೆ ಮುರಳಿ ನಾದದ ಹಿತ ನೀಡುತ್ತ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪ್ರತಿ ಅವಳಿಗೆ ಇತ್ತು ಅಪಾರ ನಂಬಿಕೆ, 

ಅವನ ಎಲ್ಲಾ ಮಾತಿಗೆ ಅವಳ ಇತ್ತು ಸಮ್ಮತೆ,

ರಾಧೆಯ ಮುಗ್ದ ಮನಸ್ಸಿಗೆ ಸೋತು ಹೋಗುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಯಮುನೆಯ ತಟದಲ್ಲಿ ಹರಿದು ಬರುತ್ತಿತ್ತು ರಾಧೆಯ ಕಣ್ಣೀರ ಸಾಗರ,

ವೇದನೆಯಿಂದ ಅವಳ ಆಗುತ್ತಿತ್ತು ಹೃದಯ ಭಾರ ಭಾರ,

ಎಲ್ಲಾ ನೋಡಿಯೂ ಅಸಹಾಯಕನಂತೆ ವರ್ತಿಸುತ್ತಿದ್ದ ತ್ರಿಲೋಕದರ್ಶಿ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಅಲ್ಪ ಸಮಯದ ಭೇಟಿ ರಾಧೆಗೆ ನೀಡುತ್ತಿತ್ತು ತೃಪ್ತಿ ಕಿಂಚಿತ,

ಹಸನ್ಮುಖ ಇರುತ್ತಿದ್ದ ಕೃಷ್ಣ ತನ್ನ ನೋವು ಅಡಗಿಸುತ ಅವಳ ಸಮ್ಮುಖ,

ರಾಧೆಯನ್ನು ನೋಡಿ ಅಯ್ಯಯ್ಯೋ ಎನ್ನುತ್ತಿತ್ತು ಅವನ ಚಿತ್ತ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


by ಹರೀಶ್ ಶೆಟ್ಟಿ, ಶಿರ್ವ


 

Friday, October 9, 2020

ಅಮ್ಮ ನೀನು


ಅಮ್ಮ ನೀನು ಕಣ್ಣು ತೆರೆದು ನೋಡು,

ಬದುಕನ್ನು ಪುನಃ ಸಾಮಾನ್ಯವಾಗಿ ಸಾಗಿಸುವಂತೆ ಮಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಜೀವನದಲಿ ತಿಳಿಯದ ಸಂಕಟ ಬಂದು ಒದಗಿದೆ,

ಬದುಕು ನಿಂತೋಗಿದಂತೆ ಆಗಿದೆ,

ಯಾರು ಹೊಣೆಗಾರ ಗೊತ್ತಿಲ್ಲ ಎನಗೆ,

ಜನರ ಅವಸ್ಥೆ ತಿಳಿದಿದ್ದೆ ನಿನಗೆ, 

ಕ್ಷಮಿಸಿ ನಮ್ಮ ತಪ್ಪನ್ನು ದಯವನ್ನು ತೋರು,

ಅಮ್ಮ ನೀನು ಕಣ್ಣು ತೆರೆದು ನೋಡು,


ಕಷ್ಟದಲ್ಲಿ ನೀನೆ ನಮ್ಮ ಆಧಾರ,

ಪೂಜಿಸಿವರು ನಿನ್ನನ್ನು ದಿನ ನಿತ್ಯ ನೀನೆ ಮಾಡು ನಮ್ಮ ಉದ್ಧಾರ,

ಭಕ್ತರು ಮಾಡುವರು ನಿನಗೆ ವಿಶೇಷ ಪೂಜೆ ಪ್ರತಿ ಶುಕ್ರವಾರ,

ಕೈ ಮುಗಿದು ಮಾಡುವರು ನಿನ್ನ ಸಾಕ್ಷಾತ್ಕಾರ,

ನಂಬಿಕೆಯನ್ನು ನಮ್ಮ ನೀನೆ ಇನ್ನು ಕಾಪಾಡು,

ಅಮ್ಮ ನೀನು ಕಣ್ಣು ತೆರೆದು ನೋಡು,


ಹೂ ಹಣ್ಣು ನಿನಗೆ ಅರ್ಪಣೆ,

ಅಮ್ಮ ನಿನಗೆ ಮಲ್ಲಿಗೆ ಹೂವಿನ ಸಿಂಗಾರ ಸಮರ್ಪಣೆ,

ನಿನ್ನ ದೀಪದಿಂದ ಬೆಳಗಲಿ ಮನೆ ಮನೆ,

ಭಕ್ತಿ ಭಾವದಿಂದ ಬೇಡುವರು ಸುಖ ಶಾಂತಿಯನ್ನೇ,

ನಿನ್ನ ಒಲವಿನ ಆಸೆಯಲ್ಲಿದ್ದೇವೆ ನಾವು ನೋಡು,

ಅಮ್ಮ ನೀನು ಕಣ್ಣು ತೆರೆದು ನೋಡು.


by ಹರೀಶ್ ಶೆಟ್ಟಿ,ಶಿರ್ವ


Wednesday, October 7, 2020

ಬಾಲ್ಯದ ದಿನ






ಹೇಗೆ ಮರೆಯಲಿ ಆ ದಿನ,

ಸರಳ ಮುಗ್ಧ ಬಾಲ್ಯದ ದಿನ,


ಮಾವಿನ ಮರದ ಅಡಿಯಲ್ಲಿ ಆಡುತ್ತಿದ್ದ ದಿನ,

ಸಮುದ್ರದ ತೀರದಲ್ಲಿ ಮರಳು ಮನೆ ಕಟ್ಟುತ್ತಿದ್ದ ದಿನ,

ಅಳುತ ನಗುತ ಮುನಿಸಿ ಶಾಲೆಗೆ ಹೋಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಸಾಬೂನಿನ ನೀರಿನ ಗುಳ್ಳೆ ಬಿಡುವ ದಿನ,

ಕ್ಲಾಸ್ಸಲ್ಲಿ ಕಾಗದದ ವಿಮಾನ ಮಾಡಿ ಎಸೆಯುವ ದಿನ,

ತೆಂಗಿನ ಮರದ ಎಲೆಯಿಂದ ವಿವಿಧ ಆಟಿಕೆ ಮಾಡುವ ದಿನ,

ಹೇಗೆ ಮರೆಯಲಿ ಆ ದಿನ,


ಸೈಕಲ್ ಟೈಯರ್ ಚಡಿಯಿಂದ ಓಡಿಸುತ್ತಿದ್ದ ದಿನ,

ತೆಂಗಿನ ಕೊಂಬೆಯಲ್ಲಿ ಕುಳಿತು ಸವಾರಿ ಮಾಡಿದ ದಿನ,

ಮರದ ಮೇಲೆ ಹತ್ತಿ ಹಣ್ಣು ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಅಮ್ಮನ ಸೆರಗಿನಲಿ ನಾಚುತ ಅಡಗುತ್ತಿದ್ದ ದಿನ,

ನೆಂಟರನ್ನು ನೋಡಿ ಕೋಣೆಯೊಳಗೆ ಓಡಿ ಹೋಗುತ್ತಿದ್ದ ದಿನ,

ಅಡುಗೆ ಮನೆಯಿಂದ ಬೆಲ್ಲ ಕದಿಯುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಕಾರಣವಿಲ್ಲದೆ ಮುನಿಸಿ ಕುಳಿಯುತ್ತಿದ್ದ ದಿನ,

ಬಾಡಿಗೆ ಸೈಕಲ್ ಬಿಡಲು ಹಣ ಸೇರಿಸುತ್ತಿದ್ದ ದಿನ,

ಆಡಿ ಓಡಿ ದಣಿದು ಮನೆಗೆ ಬಂದು ಸುಸ್ತಾಗಿ ಮಲಗುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮಳೆಯ ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಖುಷಿ ಪಡುತ್ತಿದ್ದ ದಿನ,

ಮಳೆಯಲ್ಲಿ ನೆನೆದು ನಲಿಯುತ್ತಿದ್ದ ದಿನ,

ಕೆಸರಲ್ಲಿ ಮುಳುಗಿ ಬಂದಾಗ ಅಮ್ಮನ ಬೈಗುಳ ಕೇಳುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಮುಗಿಯದ ಅಜ್ಜಿಯ ಕಥೆ ಕೇಳುತ್ತಿದ್ದ ದಿನ,

ಚಂದಮಾಮ, ಬಾಲಮಿತ್ರ, ಪುಟಾಣಿ ಓದುತ್ತಿದ್ದ ದಿನ,

ರಾಮಾಯಣ ಮಹಾಭಾರತ ಪಾತ್ರದ ವೇಷ ಧರಿಸಿ ಆಡುತ್ತಿದ್ದ ದಿನ,

ಹೇಗೆ ಮರೆಯಲಿ ಆ ದಿನ,


ಬೇಸಿಗೆಯಲ್ಲಿ ಒಟ್ಟುಗೂಡಿ ಟೆರೇಸ್ ಹೋಗಿ ಮಲಗುವ ದಿನ,

ಮಧ್ಯಾಹ್ನ ಪರ್ಯಂತ ಮಲಗುವ ದಿನ,

ಅಮ್ಮ ಎಸೆದ ನೀರಿನಲ್ಲಿ ಒದ್ದೆಯಾಗಿ ಎದ್ದೇಳುವ ದಿನ,

ಹೇಗೆ ಮರೆಯಲಿ ಆ ದಿನ,


ಸುಂದರ, ಅಮೂಲ್ಯ, ಪಾವನ ಆ ದಿನ,

ಮರೆಯಲಾಗದ ಅದ್ಭುತ ದಿನ,

ಸರಳ ಮುಗ್ಧ ಬಾಲ್ಯದ ದಿನ,

ಹೇಗೆ ಮರೆಯಲಿ ಆ ದಿನ


by ಹರೀಶ್ ಶೆಟ್ಟಿ, ಶಿರ್ವ

Photo courtesy:paperboat, google 🙏



Tuesday, October 6, 2020

ಬದುಕು ಬಣ್ಣ

 


ಬದುಕಿನಲ್ಲಿ 
ಎಷ್ಟೊಂದು ಬಣ್ಣಗಳು,

ಪ್ರತಿಯೊಂದು ಬಣ್ಣದ 

ಅದರದ್ದೇ ವಿಶಿಷ್ಟತೆ,

ಪ್ರತಿಯೊಂದು ಬಣ್ಣದ 

ವಿವಿಧ ಮಹತ್ವ,

ಒಂದೊಂದಂತೆ 

ಎಲ್ಲಾ ಬಣ್ಣಗಳು ನಮ್ಮ

ಜೀವನದಲ್ಲಿ ಬರುತ್ತವೆ,

ಆದರೆ ಮುಖ್ಯವಾಗಿ 

ಎರಡು ಬಣ್ಣದ 

ನಮ್ಮ ಜೀವನದಲ್ಲಿ 

ವಿಶಿಷ್ಟ ಮಹತ್ವ ಇದೆ,

ಒಂದು ಸುಖದ ಬಣ್ಣ,

ಇನ್ನೊಂದು ದುಃಖದ ಬಣ್ಣ,

ಈ ಎರಡು ಬಣ್ಣಗಳು 

ನಮ್ಮ ಜೀವನದಲ್ಲಿ  

ಒಟ್ಟೊಟ್ಟಿಗೇ ಸಾಗುತ್ತವೆ,

ಸುಖದ ಬಣ್ಣ ಬಂದಂತೆ 

ನಾವು ಸಂತೋಷದ 

ಕಡಲಲ್ಲಿ ತೇಲುತ್ತೇವೆ,

ಆದರೆ ದುಃಖದ ಬಣ್ಣ ಬಂದಾಗ

ನಾವು ಕಣ್ಣೀರ ಸಾಗರದಲ್ಲಿ ಮುಳುಗುತ್ತೇವೆ.

ಸುಖದ ಬಣ್ಣ ಬದುಕಲ್ಲಿ 

ನಮಗೆ ವಿವಿಧ  ಸೌಲಭ್ಯ 

ನೀಡುತ್ತದೆ,

ಸುಖದ ಬಣ್ಣದ 

ಎಲ್ಲಾ ಕೊಡುಗೆ 

ನಮಗೆ ಆನಂದ ನೀಡುತ್ತದೆ,

ದುಃಖದ ಬಣ್ಣ 

ನಮ್ಮನ್ನು ಪೀಡಿಸುತ್ತದೆ, 

ನಮಗೆ ತುಂಬಾ ವ್ಯಥೆ ನೀಡುತ್ತದೆ, 

ಆದರೆ ಈ ಬಣ್ಣ ನಮಗೆ 

ಸತ್ಯದ ಅರಿವು ನೀಡಿ ಹೋಗುತ್ತದೆ, 

ನಮ್ಮನ್ನು ಗಟ್ಟಿಗನಾಗಿ ಮಾಡುತ್ತದೆ,

ನಮ್ಮ ಶಕ್ತಿ ಪ್ರಭಲ ಮಾಡುತ್ತದೆ, 

ಪ್ರತಿಯೊಂದು ಬಣ್ಣ 

ನಮಗೆ ಒಂದು 

ಹೊಸ ಪಾಠ 

ಕಲಿಸಿ ಹೋಗುತ್ತದೆ, 

ಹೊಸ ಪ್ರೇರಣೆ 

ನೀಡಿ ಹೋಗುತ್ತದೆ.

ನಾವು ಬದುಕಲ್ಲಿ 

ಎಲ್ಲಾ ಬಣ್ಣದ ಸ್ವಾಗತ 

ಆಧಾರ ಸತ್ಕಾರ, 

ಧೈರ್ಯದಿಂದ ಮಾಡಿದರೆ, 

ನಮ್ಮ ಜೀವನ 

ವಿವಿಧ ಸುಂದರ ಬಣ್ಣದಿಂದ 

ವರ್ಣಮಯವಾಗಬಹುದು.


by ಹರೀಶ್ ಶೆಟ್ಟಿ, ಶಿರ್ವ

Monday, October 5, 2020

ಪಾದ ಸೇರುವೆ ನಿನ್ನ


ಪಾದ ಸೇರುವೆ ನಿನ್ನ,

ಭಕ್ತನನ್ನು ಕಳಿಸು,

ಪಾದ ಸೇರುವೆ ನಿನ್ನ,


ಅಂದವಾಗಿ ಅರಳಿದ್ದೇನೆ ನಾನು,

ಎಲ್ಲರ  ಸೆಳೆಯುತ್ತಿದ್ದೇನೆ ಮನವನ್ನು,

ನಿನ್ನನ್ನು ಸೌಂದರಿಯಿಸಲು ಕಾಯುತ್ತಿದ್ದೆ ಮನ,

ಕೃಪೆ ತೋರು ದೇವಾ ನನ್ನ,

ಪಾದ ಸೇರುವೆ ನಿನ್ನ...


ಸುಂದರಿ ಮುಡಿಯಬೇಕಂತ ಆಸೆ ಇಲ್ಲ,

ಕಿತ್ತು ಬಿಳಲು ಮನ ಇಲ್ಲ,

ಹಂಬಲಿಸುವೆ ಕೊರಳ ಮಾಲೆ ಆಗಲು ನಿನ್ನ,

ಪಾದ ಸೇರುವೆ ನಿನ್ನ...


ಅಲ್ಪ ದಿನದ ಈ ಬದುಕು,

ಸೌಂದರ್ಯದ ಮಾಡುವುದಿಲ್ಲ ನಾನು ಸೊಕ್ಕು,

ನಿನ್ನ ಪಾದ ಸೇರಿ ಈ ಜೀವನ ಮಾಡುವೆ ಧನ್ಯ,

ಪಾದ ಸೇರುವೆ ನಿನ್ನ...


by ಹರೀಶ್ ಶೆಟ್ಟಿ, ಶಿರ್ವ

Sunday, October 4, 2020

ಸಂಬಂಧ



ಸಂಬಂಧ, 
ಬಂಧುತ್ವ, ಬಾಂಧವ್ಯ 
ಸದಾ ಹಸಿರಾಗಿರಬೇಕು,
ಉಸಿರು 
ಕಟ್ಟುವಂತಾಗಬಾರದು,
ಪ್ರೀತಿ ವಿಶ್ವಾಸ 
ಸ್ಥಿರವಾಗಿರಬೇಕು,
ಪದೇ ಪದೇ 
ವಿಚಲಿಸಬಾರದು,
ಸಹಾಯ, 
ಉಪಕಾರ, ನೆರವು 
ಕೇಳುವುದಕ್ಕೆ 
ಒಂದು ಮಿತಿ ಇರಬೇಕು,
ಇನ್ನೊಬ್ಬರ ಮೇಲೆ 
ಆಶ್ರಿತವಾಗಿರಬಾರದು,
ಸ್ವಾಭಿಮಾನ, ಆತ್ಮ ಗೌರವ 
ತುಂಬಿ ಇರಬೇಕು,
ಅನ್ಯರ ಮೇಲೆ
ಭಾರವಾಗಬಾರದು,
ಸ್ವತಃ
ಕಷ್ಟಪಟ್ಟು ದುಡಿದು,
ತನ್ನ ಜೀವನ 
ಸುಧಾರಿಸಿಕೊಳ್ಳಬೇಕು,
ಬದುಕು 
ಅರ್ಥಪೂರ್ಣವಾಗಿರಬೇಕು,
ಸ್ವತಃ ದುಡಿಯದೇ, 
ಇನ್ನೊಬ್ಬರ ನೆರವಿಗೆ 
ಕಾಯುತ್ತಿರಬಾರದು,
ಬದುಕು
ಅರ್ಥಹೀನವಾಗಿ
ಮಾಡಿಕೊಳ್ಳಬಾರದು

by ಹರೀಶ್ ಶೆಟ್ಟಿ,ಶಿರ್ವ

Saturday, October 3, 2020

ಬಾಡಿದ ಚಹರೆ




ಆ ಇಳಿಸಂಜೆಯಲಿ

ಏಕಾಂಗಿ ನಾನು,

ನದಿಯ ತೀರ,

ಬಂಡೆಯ ಹತ್ತಿರದಿಂದ

ಏನೋ ಯೋಚನೆಯಲಿ,

ಸಾಗುತ್ತಿದ್ದಂತೆ,

ಸ್ಮರಿಸಿತು

ಅವಳ

ಬಾಡಿದ ಚಹರೆ,

ಹೆಜ್ಜೆ ತನ್ನಿಂತಾನೆ

ಮಲ್ಲಿಗೆ ಹೂವಿನ

ಅಂಗಡಿಯತ್ತ

ಸಾಗಿತು.

by ಹರೀಶ್ ಶೆಟ್ಟಿ, ಶಿರ್ವ


Friday, October 2, 2020

ಗಾಂಧೀಜಿ ಮತ್ತು ಶಾಸ್ತ್ರೀಜಿ

 



ಗಾಂಧೀಜಿಯವರ

ಆದರ್ಶ,

ಶಾಸ್ತ್ರೀಜಿಯವರ 

ಸರಳ ವ್ಯಕ್ತಿತ್ವ,

ಗಾಂಧೀಜಿಯವರ

ಅಹಿಂಸಾ ಪರಮ ಧರ್ಮ,

ಶಾಸ್ತ್ರೀಜಿಯವರ

ಸೌಮ್ಯ ನಡೆ ನುಡಿ,

ಇಬ್ಬರೂ ನಮಗೆ ಮಾದರಿಯಾಗಿ

ದಾರಿ ತೋರಿಸಿದವರು, 

ಆದರೆ,

ಇಂದಿನ ಸಾಮಾಜಿಕ ಸಬಲೀಕರಣ 

ಹಾಗೂ 

ಜಗತ್ತಿನ ವೇಗದ ಬೆಳವಣಿಗೆಯ 

ಸಂದರ್ಭದಲ್ಲಿ 

ಇವರ ಬೋಧನೆಗಳ ಬಗ್ಗೆ ಯೋಚಿಸಿದರೆ,

ವಿರೋಧಾಭಾಸವಾಗಿ 

ಮಾನವೀಯ ಮೌಲ್ಯಗಳು 

ಕ್ರಮೇಣ 

ಲುಪ್ತವಾಗುತ್ತಿದ್ದಂತೆ 

ಭಾಸವಾಗುತ್ತಿದೆ.


ಮತ್ತೊಮ್ಮೆ ಗಾಂಧೀಜಿ ಹಾಗು ಶಾಸ್ತ್ರೀಜಿಯವರಿಗೆ

ನಮನ ಸಲ್ಲಿಸೋಣ🙏


ಜೈ ಹಿಂದ್🙏


by ಹರೀಶ್ ಶೆಟ್ಟಿ, ಶಿರ್ವ

Wednesday, September 30, 2020

ಮನೆ ಅಂದರೆ


 

ಮನೆ ಅಂದರೆ,

ನಾಲ್ಕು ಚಕ್ರದ ಮೇಲೆ ಮಾಡಿದ 

ಆಧುನಿಕ ವಠಾರ ಅಲ್ಲ,

ಮನೆ ಅಂದರೆ,

ನಾಲ್ಕು ಗೋಡೆ ಚಪ್ಪರ ಇದ್ದ ವಸತಿ ಅಲ್ಲ,

ಮನೆ ಅಂದರೆ,

ಐಷಾರಾಮಿ ಕಟ್ಟಡ ಅಲ್ಲ,

ಮನೆ ಅಂದರೆ,

ವೃದ್ಧರನ್ನು ಬಲವಂತವಾಗಿ 

ಅವರ ಅಸಹಾಯಕತೆ ನಿರ್ಲಕ್ಷಿಸಿ, 

ಅವರನ್ನು ಇಷ್ಟವಿಲ್ಲದೇ 

ಇಟ್ಟಿದ್ದ ಆಶ್ರಯ ಸ್ಥಾನ ಅಲ್ಲ,

ಮನೆ ಅಂದರೆ 

ಒಂದು ಭಾವನೆ, 

ಕುಟುಂಬದ ಮಧ್ಯೆ ಪರಸ್ಪರ ಪ್ರೀತಿ,

ತಿಳುವಳಿಕೆ, ನಂಬಿಕೆ, ತ್ಯಾಗ 

ಇದ್ದ ಆವಾಸವೇ

ನಿಜವಾದ ಮನೆ.


by ಹರೀಶ್ ಶೆಟ್ಟಿ,ಶಿರ್ವ



Tuesday, September 29, 2020

सौ सौ यादें दिल की गहराई से,




ನೂರೊಂದು ನೆನಪು' ಈ ಹಾಡನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿದ್ದೇನೆ.
सौ सौ यादें दिल की गहराई से, गीत बनके निकले आज ख़ुशी से|3 माथे की सिन्दूर मुस्कुराते रहे इसी तरह से, सदा खिलता रहे ये पावन बंधन सलामती से| सौ सौ यादें दिल की गहराई से, गीत बनके निकले आज ख़ुशी से| प्रेम की ढ़ाली से लगा वो फूल, बालों में सजे तो ख़ुशी दे, बालों से गिरे तो दे दर्द कितना| हाथों में लिए हाथ, देखा जो सपना, खेल किस्मत का, लाया जो आनंद इतना| प्यार हँसता रहे, जीवन चमकता रहे, प्यार हँसता रहे, जीवन चमकता रहे, तू रहे हमेशा ख़ुशी से| सौ सौ यादें दिल की गहराई से, गीत बनके निकले आज ख़ुशी से| होंठों पे आयी सिर्फ एक बात, दिल में दबाये कहीं हज़ारों राज़, तीन गांठ में बंधा ये जीवन के रिश्ते, मन का मिला तो कटे हँसते हँसते, तेरी हर ख़ुशी में, मेरा साँस रहे, तेरी हर ख़ुशी में, मेरा साँस रहे, मेरी शुभकामनाएँ इस गीत से| सौ सौ यादें दिल की गहराई से, गीत बनके निकले आज ख़ुशी से| गीतकार : आर एन जयगोपाल हिंदी में : हरीश शेट्टी, शीर्वा Song : noorondu nenapu ede aaLadinda Movie : Bandhana Singer : SPB Music : M.Ranga Rao Lyrics : R N Jayagopal Director : S.V. Ragendra Singh Babu Producer : S.V. Ragendra Singh Babu
ನೂರೊಂದು ನೆನಪು......,ಎದೆಯಾಳದಿಂದ..........
ಹಾಡಾಗಿ ಬಂತು........ಆನಂದದಿಂದ....... 
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ...

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ  ಈ ಹಾಡಿನಿಂದಾ

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...