Thursday, October 15, 2020

ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ

 


ಕಾಡಿನಲ್ಲಿ ವ್ಯಾಘ್ರ ಅಳುತ್ತಿದ್ದಾನೆ,

ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಾನೆ,

ಭೀಕರ ಕಾಡು ಬರಿ ಸಾಧಾರಣ ಕಾಡಾಗಿ ಪರಿವರ್ತಿಸಿದೆಯಲ್ಲ ಎಂದು ಕಣ್ಣೀರು ಬಿಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಈಗ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ,

ಎಷ್ಟೇ ಪ್ರಾಣಿಗಳ ಸಂತಾನವೇ ಮುಗಿದೋಗಿದೆ,

ಬೃಹತ್ ಮೌಲ್ಯವಾನ ಮರಗಳು ಕಡಿದೋಗಿದೆ,

ಕೆಲವೇ ನದಿಗಳು ಉಳಿದಿದೆ,

ನಮ್ಮ ಸುಂದರ ಕಾಡು ಬಂಜರವಾಗುತ್ತಿದೆಯೆಂದು ಚಿಂತಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಜಿಂಕೆಗಳ ಓಡಾಟ ನೋಡಿ ಎಷ್ಟೋ ವರುಷ ಆಗಿದೆ,

ಆನೆಯ ಗುಂಪು ಕಾಣದಂತಾಗಿದೆ,

ಬಲಶಾಲಿ ಸಿಂಹ ನೋಡಿ ಎಷ್ಟೋ ಸಮಯ ಕಳೆದಿದೆ,

ಕಾಗೆಯ ತಂಡ ಸಹ ಆಹಾರಕ್ಕಾಗಿ ಪಟ್ಟಣ ಹೋಗಿದೆ,

ನೀಚ ನರಿಯೂ ಮಾಯವಾಗಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಯಾಕೆ ನಾವು ಪ್ರಾಣಿಗಳ ಮೇಲೆ ಈ ಹಿಂಸೆ?

ಎಲ್ಲಿದೆ ಪ್ರಾಣಿಗಳ ಪರವಾಗಿ ಕೆಲಸ ಮಾಡುವ ಸಂಸ್ಥೆ?

ಇನ್ನೇನು ನಾವು ಪ್ರಾಣಿಗಳು ಕಲಿಸಬೇಕೇ ಮಾನವನಿಗೆ ಅಹಿಂಸೆ?

ಯಾಕೆ ಕೆಡಿಸುವಿರಿ ಕಾಡಿನ ಶಾಂತತೆ?

ಹತಾಶ ವ್ಯಾಘ್ರ ಪ್ರಶ್ನಿಸುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ,


ಓ ದೇವರೇ ನಮ್ಮ ಕಾಡನ್ನು ಬೆಳೆಸಿ,

ಮಾನವರೇ ನಮ್ಮ ಕಾಡನ್ನು ಉಳಿಸಿ,

ನಿಮ್ಮಿಂದ ಬೇಕು ಕೇವಲ ಒಂದು ಗಿಡದ ಸಸಿ,

ಒಂದು ಗಿಡ ನೆಟ್ಟು ಕಾಡು ಉಳಿಸಿ ಕಾಡು ಬೆಳೆಸಿ,

ನಮ್ಮ ಮನೆಯನ್ನು ಧ್ವಸ್ತ ಮಾಡಬೇಡಿ ಎಂದು ವ್ಯಾಘ್ರ ಬೇಡುತ್ತಿದ್ದಾನೆ,

ವ್ಯಾಘ್ರ ತನ್ನೊಳಗೆ ತಾನೇ ಕೊರಗುತ್ತಿದ್ದಾನೆ.


by ಹರೀಶ್ ಶೆಟ್ಟಿ, ಶಿರ್ವ





No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...