Sunday, October 11, 2020

ಮಾನವ ಪರಿಸ್ಥಿತಿಯ ಕೈಗೊಂಬೆ



ಮಾನವ ಪರಿಸ್ಥಿತಿಯ ಕೈಗೊಂಬೆ,

ದಿನನಿತ್ಯ ನೂರಾರು ಸವಾಲುಗಳು ಅವನ ಮುಂದೆ,

ಹುಟ್ಟು ಸಾವಿನ ಮಧ್ಯೆ ಬದುಕೊಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಸ್ಥಿತಿಗಳು ಅವನು ಎನಿಸುವಂತೆ ಒದಗುವುದಿಲ್ಲ,

ಪರಿಶ್ರಮ ತಕ್ಕ ಅವನು ಪಡೆಯುವುದಿಲ್ಲ,

ಯೋಚಿಸಿದ್ದು ಆಗುವುದಿಲ್ಲ, ಆಗುವುದು ಇನ್ನೊಂದೇ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬಾಲ್ಯ ಸಾಗುತ್ತದೆ ಮಮತೆಯಲ್ಲೇ,

ಯೌವನ ಕಳೆದೋಗುತ್ತದೆ ಬದುಕನ್ನು ಅರ್ಥೈಸುವುದಲ್ಲೇ,

ಜೀವನ ಒಂದು ಹೋರಾಟ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಕಲ್ಲು ಮುಳ್ಳು ಅದೆಷ್ಟೋ ಅಡಚಣೆ,

ಇದೇ ಬದುಕಿನಾಟ ಮನೆ ಮನೆ, 

ವಿಧಿಯ ಶರಣ ಮಕ್ಕಳು ತಾಯಿ ತಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನ ಒಂದು ರಂಗಮಂಚ,

ನಟಿಸಿದಂತೆ ಚಿತ್ರ ಬಿಡಿಸುತ್ತಲೇ ಹೋಗುತ್ತದೆ ಕುಂಚ,

ಶರಣು ನಾವು ಆ ಚಿತ್ರಕಾರನ ಮುಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಬದುಕಿನ ಓಡಾಟದಲ್ಲಿ ಸೋಲು ಗೆಲುವು

ಸಾಧನೆ ಮಾಡುವುದು ನಮ್ಮ ಧರ್ಮವು, 

ಮಾಡಿದ ಕರ್ಮ ಹಿಂಬಾಲಿಸುತ್ತದೆ ಹಿಂದೆ ಹಿಂದೆ,

ಮಾನವ ಪರಿಸ್ಥಿತಿಯ ಕೈಗೊಂಬೆ,


ಜೀವನದ ದೊಂಬರಾಟದಲ್ಲಿ,

ನಮ್ಮ ನಿಯಂತ್ರಣ ಇರುವುದು ಸೃಷ್ಟಿಕರ್ತನ ಕೈಯಲ್ಲಿ,

ಒಂದು ಎಲೆಯೂ ಅಲುಗದು ಅವನ ಅಪ್ಪಣೆಯಿಲ್ಲದೆ,

ಮಾನವ ಪರಿಸ್ಥಿತಿಯ ಕೈಗೊಂಬೆ.


by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...