Monday, October 19, 2020

ಅಮ್ಮ ನೀ ಇಳಿದು ಬಾ ಧರೆಗೆ


 

ಅಮ್ಮ ನೀ ಇಳಿದು ಬಾ ಧರೆಗೆ,

ನಿನ್ನ ಪ್ರೀತಿಯ ಭಕ್ತರ ಕೋರಿಕೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಭೂಮಿಯಲಿ ದುಷ್ಟರ ಹಾವಳಿ ಹೆಚ್ಚಾಗುತ್ತಿದೆ,

ಸತ್ಯವಂತರಿಗೆ ಬದುಕು ಕಷ್ಟವಾಗುತ್ತಿದೆ,

ಸ್ಪಂದಿಸು ನಮ್ಮ ಈ ಮೊರೆಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ದುರ್ಜನರು ತಿಂದು ಉಂಡು ತೇಗುತ್ತಿದ್ದಾರೆ,

ಸಜ್ಜನರು ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ,

ಬೆಲೆ ಇಲ್ಲ ಈ ಕಲಿಯುಗದಲ್ಲಿ ಅವರ ಸತ್ಯ ಮಾತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾಲೆಯರ ಮೇಲೆ ಅತ್ಯಾಚಾರ ನಡೆಯುವುದು ಮಾಮೂಲಿಯಾಗಿದೆ,

ನ್ಯಾಯದ ಕಣ್ಣು ಕುರುಡಾಗಿದೆ,

ಸ್ಪಂದಿಸು ಹೆಣ್ಣು ಮಕ್ಕಳ ಈ ಕೂಗಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


ನ್ಯಾಯ ಸಿಗದೇ ಮನುಜ ಚಡಪಡಿಕೆಯಲಿ,

ನ್ಯಾಯ ಮಾಡುವವರು ನೀಚರ ಒತ್ತಡದಲ್ಲಿ,

ಮನುಜ ಇನ್ನೆಲ್ಲಿಗೆ ಹೋಗುವುದು ಫಿರ್ಯಾದು ನೀಡೋಕ್ಕೆ,

ಅಮ್ಮ ನೀ ಇಳಿದು ಬಾ ಧರೆಗೆ,


ಬಾ ಬೇಗ ದುಷ್ಟರ ನೀ ಸಂಹಾರ ಮಾಡು,

ಸಜ್ಜನರ ಸಂಕಟ ದೂರ ಮಾಡಿ ಉದ್ಧಾರ ಮಾಡು,

ಕೃಪೆ ತೋರು ನೀತಿವಂತರ ಈ ವಿನಂತಿಗೆ,

ಅಮ್ಮ ನೀ ಇಳಿದು ಬಾ ಧರೆಗೆ,


by ಹರೀಶ್ ಶೆಟ್ಟಿ, ಶಿರ್ವ


Photo : Google





No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...