Saturday, October 10, 2020

ವಿರಹ


ರಾಧೆಯ ವ್ಯಥೆ ನೋಡಿ ನೊಂದುಕೊಳ್ಳುತ್ತಿದ್ದ ಕೃಷ್ಣ,

ಕಣ್ಣೀರು ಅಡಗಿಸಿ ಅಳುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಕೃಷ್ಣ ಅಂದರೆ ಪ್ರೀತಿಯ ಪರಾಕಾಷ್ಠ,

ಕೃಷ್ಣನ ಪ್ರೀತಿಯಲ್ಲೂ ಅವಳಿಗಿತ್ತು ಪೂರ್ಣ ನಿಷ್ಠ,

ರಾಧೆಯ ಭಾವನೆ ಅರಿತು ಅರಿಯದಂತೆ ನಟಿಸುತ್ತಿದ್ದ ಕೃಷ್ಣ

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪಾದದಲ್ಲಿ ರಾಧೆ ಪಡೆಯುತ್ತಿದ್ದಳು ಸ್ವರ್ಗದ ಹಿತ,

ಕೃಷ್ಣನ ಹೆಸರು ಕೇಳುತ್ತಲೆ ಸಂಗೀತಮಯ ಅವಳ ಹೃದಯದ ಮಿಡಿತ,

ರಾಧೆಯ ಪ್ರೀತಿಯ ಜ್ವಾಲೆಯಲಿ ಉರಿಯುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ರಾಧೆಗೆ ಗೊತ್ತಿತ್ತು ಕೃಷ್ಣನ ಅಸಹಾಯಕತೆ,

ಅವನ ನಟನೆ ನೋಡಿ ಅವಳೂ ನಟಿಸುತ್ತಿದ್ದಳು ಅರಿವಿಲ್ಲದಂತೆ,

ರಾಧೆಯ ವೇದನೆಗೆ ಮುರಳಿ ನಾದದ ಹಿತ ನೀಡುತ್ತ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಕೃಷ್ಣನ ಪ್ರತಿ ಅವಳಿಗೆ ಇತ್ತು ಅಪಾರ ನಂಬಿಕೆ, 

ಅವನ ಎಲ್ಲಾ ಮಾತಿಗೆ ಅವಳ ಇತ್ತು ಸಮ್ಮತೆ,

ರಾಧೆಯ ಮುಗ್ದ ಮನಸ್ಸಿಗೆ ಸೋತು ಹೋಗುತ್ತಿದ್ದ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಯಮುನೆಯ ತಟದಲ್ಲಿ ಹರಿದು ಬರುತ್ತಿತ್ತು ರಾಧೆಯ ಕಣ್ಣೀರ ಸಾಗರ,

ವೇದನೆಯಿಂದ ಅವಳ ಆಗುತ್ತಿತ್ತು ಹೃದಯ ಭಾರ ಭಾರ,

ಎಲ್ಲಾ ನೋಡಿಯೂ ಅಸಹಾಯಕನಂತೆ ವರ್ತಿಸುತ್ತಿದ್ದ ತ್ರಿಲೋಕದರ್ಶಿ ಕೃಷ್ಣ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


ಅಲ್ಪ ಸಮಯದ ಭೇಟಿ ರಾಧೆಗೆ ನೀಡುತ್ತಿತ್ತು ತೃಪ್ತಿ ಕಿಂಚಿತ,

ಹಸನ್ಮುಖ ಇರುತ್ತಿದ್ದ ಕೃಷ್ಣ ತನ್ನ ನೋವು ಅಡಗಿಸುತ ಅವಳ ಸಮ್ಮುಖ,

ರಾಧೆಯನ್ನು ನೋಡಿ ಅಯ್ಯಯ್ಯೋ ಎನ್ನುತ್ತಿತ್ತು ಅವನ ಚಿತ್ತ,

ಕರುಣೆ ಇಲ್ಲದಂತೆ ನಟಿಸಿ ಬಿಟ್ಟು ಹೋಗುತ್ತಿದ್ದ ದುಷ್ಟ,


by ಹರೀಶ್ ಶೆಟ್ಟಿ, ಶಿರ್ವ


 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...