Saturday, June 27, 2020

ಗೆಲುವು ಸೋಲು


ಬದುಕಿನ ಸ್ಪರ್ಧೆಯಲಿ 
ಗೆಲುವಾಗಲಿ ಸೋಲಾಗಲಿ
ಎರಡನ್ನು ಸ್ವೀಕರಿಸು
ಒಂದೇ ಮನೋಭಾವದಿಂದಲಿ

ಗೆಲುವಿನ ಸೊಕ್ಕಿನಲಿ
ನೋಡದಿರು ಎದುರಾಳಿಯನ್ನು ತಾತ್ಸಾರದಿಂದಲಿ
ಅಪ್ಪುಗೆ ನೀಡಿ  ಪ್ರೇರಿಸು
ಹುರುಪು ತುಂಬಲಿ ಅವನಲಿ

ಪರಾಜಯದ ಅಳುಕಲಿ
ಖಿನ್ನತೆಗೆ ಒಳಗಾಗದೆ
ಮುಂದೆ ಮರು ಹೆಜ್ಜೆಯಿಡು ಸಾಹಸದಿಂದಲಿ
ತಲುಪುವೆ ನೀನು ಶೀಘ್ರವೇ ಜಯದ ಮಾರ್ಗದಲಿ

by ಹರೀಶ್ ಶೆಟ್ಟಿ, ಶಿರ್ವ


Photo : Google

ಬಾಳು


ಬಾಳೊಂದು ತೇಲುತ್ತಿರುವ ದೋಣಿ
ಸಂಸಾರದ ಕಡಲಲಿ ಸರಿಯುತ್ತಿರಲಿ
ಖಾಲಿ ಖಾಲಿ ಈ ಜೀವನದಲಿ 
ಬಿಡಿಸಿ ಸುಂದರ ಕನಸಿನ ರಂಗೋಲಿ

ಒದಗಿದ ದೆಸೆಯ ಸ್ವೀಕರಿಸಿ
ಹೊಂದಿಸುತ ಹೋಗಿ ಅದೇ ಪಥದಲಿ
ಬರುವ ಸಂಕಟದ ಬಿರುಗಾಳಿಯಲಿ
ಧೈರ್ಯದ ಶಕ್ತಿ ತುಂಬಿರಲಿ

ಸುಖ ದುಃಖದ ಕಿನಾರೆಯಲಿ
ಬದುಕಿನ ಈ ದೋಣಿ ತೇಲುತ್ತಿರಲಿ
ಭರವಸೆಯ ಬೆಳಕಿನೆಡೆ
ಪ್ರಯಾಣ ಸಾಗುತ್ತಿರಲಿ

by ಹರೀಶ್ ಶೆಟ್ಟಿ, ಶಿರ್ವ


Photo : Google 

Thursday, June 25, 2020

ವಯಸ್ಸಿನ ಆಟ


ಬಾಲ್ಯ
ಮುದ್ದು ಮುದ್ದು,
ಆರೈಕೆ ಪಾಲನೆ,
ಅಮ್ಮನ ಆಟಿಕೆ,
ಮುಗ್ದತೆ,
ಪರಿಶುದ್ದ ಮನಸ್ಸು ...

ಯೌವನ, ಬಿಸಿ ರಕ್ತ
ಕುದಿಯುತ್ತದೆ,
ತಾಳ್ಮೆ ಇರಲ್ಲ,
ಸಂಯಮ ಏನಂತ ಗೊತ್ತಿಲ್ಲ,
ಅನುಭವಿಸುತ್ತಾರೆ,
ಸಮಯ ಬೇಕು...

ವಯಸ್ಸಾದಂತೆ
ಸರಿ ತಪ್ಪು ತಿಳಿಯುತ್ತದೆ ,
ತಿಳುವಳಿಕೆ ಬೆಳೆಯುತ್ತದೆ ,
ಸಹನಶೀಲತೆ ನಿರ್ಮಾಣವಾಗುತ್ತದೆ,
ವ್ಯವಹಾರಜ್ಞಾನದ  ಅರಿವಾಗುತ್ತದೆ,
ಸ್ವಭಾವ ಬದಲಾಗುತ್ತದೆ... 

ಇಳಿವಯಸ್ಸಲ್ಲಿ
ನೆನಪು ಗತಕಾಲದ,
ದೈವ ಭಕ್ತಿ,
ನಾನೇ ಜ್ಞಾನಿಯೆಂಬ ಛಲ,
ಇತರರಿಗೆ ಪ್ರವಚನ, 
ಸ್ವಭಾವದಲ್ಲಿ ಕಿರಿಕಿರಿ...

ಅಂತಿಮ ತಾಣ
ಆರೋಗ್ಯ ಪ್ರಜ್ಞೆ,
ಅನ್ಯರ ಗೋಚಾರವಿಲ್ಲ,
ತನ್ನದೇ ಧ್ಯಾನ, 
ಆಸೆಯಲ್ಲಿ ಹೆಚ್ಚಳ,
ಕುಂದುತ್ತಿರುವ  ವಯಸ್ಸು...

by ಹರೀಶ್ ಶೆಟ್ಟಿ, ಶಿರ್ವ

Wednesday, June 24, 2020

ಲೇಖಕ


ಎಲ್ಲಾ ಕಥೆಯೂ ಅಪೂರ್ಣ, ಬರೆಯುವವರ ಇಚ್ಛೆ, ಓದುಗಾರರು ವ್ಯಾಕುಲ
---- ಕಲ್ಪನೆಯ ಲೋಕ, ಲೇಖಕನ ಕಲ್ಪನೆ, ಹಾಳೆಯಲ್ಲಿ ಭಾವನೆ ----
ಅವನು ಬರೆದ ಕಥೆಯ ಅವನೇ ಓದುಗಾರ, ವಿಷಾದ!! ಕಾದಂಬರಿ ಬಿಕ್ರಿ ಆಗಿಲ್ಲ
----
ಲೇಖನಿ ಹರಿತವಾಗಿದೆ, ಭಾವನೆಯೂ ಮೂಡುತ್ತಿದೆ, ಹೊಸ ಬರಹಗಾರ, ಗದ್ಯ ಪದ್ಯದ ವ್ಯತ್ಯಾಸ ಗೊತ್ತಿಲ್ಲ ಅಷ್ಟೇ
----
ಬಡ ಲೇಖಕ ಪುಸ್ತಕ ಅಂಗಡಿಗೆ ಬಂದು
ಒಂದು ಕಾದಂಬರಿ ತೆರೆದು ನೋಡಿದ,
ಅದು ಅವನು ಬರೆದ ಕಾದಂಬರಿ,
ಕಾದಂಬರಿಯ ಮುಖಪುಟದಲ್ಲಿ
ಪ್ರಸಿದ್ಧ ಲೇಖಕನ ಹೆಸರು. by ಹರೀಶ್ ಶೆಟ್ಟಿ, ಶಿರ್ವ

Photo : Google

ಜೀವನ ಮರಣ


ಬದುಕಿದ್ದಾಗ ಯಾರೂ ಬಂದು
ಅವನ ಯೋಗಕ್ಷೇಮ ವಿಚಾರಿಸಲಿಲ್ಲ,
ಈಗ ಅವನ ಅಕಸ್ಮಾತ ಮರಣದ ನಂತರ
ಎಲ್ಲೆಡೆ ಅವನದ್ದೇ ಚರ್ಚೆ

---

ಇಡೀ ಜೀವನ ಅವನು
ದುರಭ್ಯಾಸದಲ್ಲಿ ಲೀನವಾಗಿದ್ದ,
ಸತ್ತ ನಂತರ
ಕುಟುಂಬದಲ್ಲಿ ನೆಮ್ಮದಿಯ ಉಸಿರು

---

ಕುಟುಂಬದಿಂದ ದೂರ ಅವನು
ಎಷ್ಟೋ ವರುಷದಿಂದ,
ಕುಟುಂಬದ ಪುರಾವೆ ಸಿಗದೇ
ರಸ್ತೆಯಲ್ಲಿ ಬಿದ್ದ ಅವನ ಶವವನ್ನು
ಪುರಸಭೆಯವರು ಅಂತ್ಯಸಂಸ್ಕಾರಕ್ಕೆ ಕಳಿಸಿದರು

----

ಸಂಸಾರ ಬಿಟ್ಟು ಅವನು
ದೈವ ಭಕ್ತಿಯಲ್ಲಿ ಲೀನವಾಗಿದ್ದ,
ಈಹಲೋಕ ತ್ಯಜಿಸಿದ ನಂತರ
ಕುಟುಂಬದವರು ಭಕ್ತಿ ಭಾವದಿಂದ
ಅವನ ಅಂತ್ಯ ಕ್ರಿಯೆ ಮುಗಿಸಿದರು

by ಹರೀಶ್ ಶೆಟ್ಟಿ, ಶಿರ್ವ


Photo : Google 

Tuesday, June 23, 2020

ಹಳೆ


ನಾನು ಬರೆದ ಹಳೆ ಕವಿತೆಯ ಆ ಕಾಗದದ ಹಾಳೆ
ಮಳೆಯ ನೀರಿನಲ್ಲಿ ದೋಣಿಯಾಗಿ ಸಾಗಿ ಹೋಯಿತು
ಒಟ್ಟಿಗೆ ಅದೆಷ್ಟೋ ಭಾವನೆಗಳೂ ಸಾಗಿ ಹೋದವು 
-----
ಕಪಾಟು ತೆರೆದಾಗ
ಬಟ್ಟೆಯ ಅಡಿಯಲ್ಲಿ ಒಂದು ಹಳೆ ಪತ್ರ ಸಿಕ್ಕಿತು,
ತೆರೆದು ನೋಡಿದೆ
ಖಾಲಿ ಹಾಳೆ,
ಅವಳ ಚಹರೆ ಕಣ್ಣ ಮುಂದೆ ಸಾಗಿ ಹೋಯಿತು 
-----
ಅಪ್ಪ ತಂದು ಕೊಟ್ಟಿದ್ದ
ಆ ಹಳೆ ಅಂಗಿ ಧರಿಸಿದೆ,
ಅಮ್ಮನ ಕಣ್ಣಲ್ಲಿ ಕಣ್ಣೀರು ತುಂಬಿ ಬಂತು
-----
ಓದಲೆಂದು ಹಳೆ ಪುಸ್ತಕದ ಧೂಳು ಜಾಡಿಸಿದೆ
ಒಣಗಿದ ಗುಲಾಬಿ ಹೂವು ಕೆಳಗೆ ಬಿತ್ತು,
ನೆನಪಿನ ಯಾತ್ರೆ ಆರಂಭವಾಯಿತು
ಒಂದಕ್ಷರ ಸಹ ಓದಲಾಗಲಿಲ್ಲ
-----
ಬಾಲ್ಯ ಮಿತ್ರನೊಬ್ಬ ಹಳೆ ಫೋಟೋ
ವಾಟ್ಸಪ್ಪಲ್ಲಿ ಕಳಿಸಿದ,
ನನ್ನ ಕಣ್ಣು ಗುಂಪಲ್ಲಿ ಅವಳನ್ನು ಹುಡುಕುತ್ತಿತ್ತು

by ಹರೀಶ್ ಶೆಟ್ಟಿ, ಶಿರ್ವ  

Monday, June 22, 2020

ಕಣ್ಣೀರು

ಕಣ್ಣೀರು ಹರಿದು ಬಂದರೆ ನೀವೇ ಒರೆಸಿಕೊಳ್ಳಿ,
ಅನ್ಯರು ಒರೆಸಲು ಬಂದರೆ ವ್ಯವಹರಿಸುತ್ತಾರೆ

ಮೂಲ : ಸಲೀಮ್ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ

आंसू निकल आये तो खुद पोछ लेना,
लोग पोछने आएंगे तो सौदा करेंगे

Friday, June 19, 2020

ಪ್ರೀತಿ

ನೆನಪಿನ ಕಪಾಟಿನಲ್ಲಿ ನೋಡಿದೆ,
ಅಲ್ಲಿ ಪ್ರೀತಿ ದುಸ್ಥಿತಿಯಲ್ಲಿ ನೇತಾಡುತ್ತಿದೆ....

ಮೂಲ : ಗುಲ್ಜಾರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ


यादों की अलमारी में देखा...
वहॉं मुहब्बत फटेहाल लटक रही है....
-गुलज़ार

Thursday, June 18, 2020

ಧೀರ


ಮನೆಯಿಂದ ದೂರ
ತನ್ನವರಿಂದ ದೂರ
ನೀಡಲು ದೇಶಕ್ಕೆ ಆಧಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ದುಃಖದಲ್ಲಿ ಬಿಟ್ಟು ಎಲ್ಲರನ್ನು
ಗಟ್ಟಿ ಮಾಡಿ ಹೃದಯವನ್ನು
ಕೇಳಿ ದೇಶದ ಸ್ವರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಅಪ್ಪನಿಗೆ ಧೈರ್ಯ ನೀಡಿ
ಅಮ್ಮನ ಕಣ್ಣೀರನ್ನು ಒರಸಿ
ಮನಸ್ಸು ಮಾಡಿ ಭಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಹೆಂಡತಿಗೆ ಹೇಳಿ ಸಾಂತ್ವನೆ
ಮಕ್ಕಳಿಗೆ ಕೊಟ್ಟು ಪ್ರಲೋಭನೆ
ಹರಸಿ ಪ್ರೇಮ ಅಪಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

by , ಹರೀಶ್ ಶೆಟ್ಟಿ, ಶಿರ್ವ 

Tuesday, June 16, 2020

ನೀರವ ಮೌನ

ನೀರವ ಮೌನ ತುಂಬಿತ್ತು,
ಒಂದು ಬಲೂನಿನಂತಹ ಕೋಣೆಯಲ್ಲಿ
ನಿನ್ನ ಫೋನ್ ರಿಂಗಣಿಸುವ ಮೊದಲು.
ಹಳಸಿದ ವಾತಾವರಣ ಇದೆಲ್ಲ
ಕಿಂಚಿತ ಮಿಡಿಯಿತು,
ಉಸಿರು ಅಲ್ಲಾಡಿತು, ನಾಡಿಮಿಡಿತ ನಡೆಯಿತು,
ನಿರಾಶೆಯ ಛಾಯೆ ಕಣ್ಣಿಂದ ಜಾರಿತು ಕೆಲವು ಕ್ಷಣ
ಮತ್ತೆ ನಿನ್ನ ಸ್ವರವನ್ನು, ಅಂತಿಮ ಬಾರಿ ವಿದಾಯ
ಹೇಳಿ ಹೋಗುವುದನ್ನು ನೋಡಿದೆ!!
ನೀರವ ಮೌನ ತುಂಬಿತ್ತು,
ದೇಹದ ಈ ಬಲೂನಿನಲ್ಲಿ
ನಿನ್ನ ಅಂತಿಮ ಕರೆಯ ನಂತರ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ

इक सन्नाटा भरा हुआ था,
एक गुब्बारे से कमरे में,
तेरे फोन की घंटी के बजने से पहले.
बासी सा माहौल ये सारा
थोड़ी देर को धड़का था
साँस हिली थी, नब्ज़ चली थी,
मायूसी की झिल्ली आँखों से उतरी कुछ लम्हों को-- 
फिर तेरी आवाज़ को, आखरी बार "खुदा हाफिज़"
कह के जाते देखा था!
इक सन्नाटा भरा हुआ है,
जिस्म के इस गुब्बारे में,
तेरी आखरी फोन के बाद

Monday, June 15, 2020

ಯಾಕೆ ಸುಮ್ಮನೆ

ಯಾಕೆ ಸುಮ್ಮನೆ ನೀನು ನಗುತ್ತಿರುವೆ,
ಅದೇಕೆ ಮನಸ್ಸಲ್ಲೇ ಕಣ್ಣೀರು ಕುಡಿಯುತ್ತಿರುವೆ,
ತಗ್ಗಿದ ತಲೆಯನ್ನು ಎತ್ತಿ ನೋಡು,
ಅದೇಕೆ ಇಷ್ಟು ಕಷ್ಟ ಪಡುತ್ತಿರುವೆ
ಅದೇಕೆ ಮನಸ್ಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...

ನಿನ್ನದೆಲ್ಲ ನನಗೆ ನೀಡಿರುವೆ,
ಪ್ರೀತಿಯನ್ನು ನನ್ನಿಂದಲೇ ಹಂಚಿರುವೆ,
ಏನನ್ನು ನನ್ನಿಂದ ಅಡಗಿಸುತ್ತಿರುವೆ 
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...

ನಂಬಿಕೆ ಇಲ್ಲವೇ ನಿನಗೆ ನನ್ನಲ್ಲಿ,
ಭರವಸೆ ಇಲ್ಲವೇ ನಮ್ಮ ಒಲವಿನಲ್ಲಿ,
ಅದೇಕೆ ನನ್ನನ್ನು ಸುಮ್ಮನೆ ಹಂಬಲಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...

ಬೆಲೆ ಇಲ್ಲವೆ ನನ್ನ ಈ ಮಾತಿಗೆ,
ಹೇಳಿ ನೆಮ್ಮದಿ ನೀಡು ನನ್ನ ಮನಸ್ಸಿಗೆ,
ಅದೇಕೆ ನನ್ನನ್ನು ಪೀಡಿಸುತ್ತಿರುವೆ
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...

ನಿನ್ನ ಈ ಭಂಗಿ ನನ್ನನ್ನು ಕೊಲ್ಲುತ್ತಿದೆ
ನಿನ್ನ ವೇದನೆಗೆ ಹೃದಯ ಅಳುತ್ತಿದೆ
ಅದೇಕೆ ಮೌನದಿ ನನ್ನನ್ನು ಹಿಂಸಿಸುತ್ತಿರುವೆ 
ಅದೇಕೆ ಮನಸಲ್ಲೇ ಕಣ್ಣೀರು ಕುಡಿಯುತ್ತಿರುವೆ
ಯಾಕೆ ಸುಮ್ಮನೆ ನೀನು ನಗುತ್ತಿರುವೆ...


by ಹರೀಶ್ ಶೆಟ್ಟಿ, ಶಿರ್ವ 

Sunday, June 14, 2020

ನಟ

ದಫನ ಮಾಡುವ ಮೊದಲು ನಾಡಿಮಿಡಿತ ಪರೀಕ್ಷಿಸಿ ನೋಡಿ,
ಉತ್ತಮ ನಟ ಅವನು, ಅಭಿನಯ ಮಾಡುತ್ತಿರಬಹುದು!!

ಅನುವಾದ : ಹರೀಶ್ ಶೆಟ್ಟಿ, ಶಿರ್ವ
Photo: Google

Friday, June 12, 2020

ಪಯಣ

ಪಯಣ
ಕಾಲ್ಪನಿಕವಲ್ಲ, ಸತ್ಯ
ನಮ್ಮೂರಿನತ್ತ
ಪುನಃ ಆ ಸುಂದರ ಸೊಬಗು ಕಾಣಲು
ಸ್ವಚ್ಛ ಪರಿಸರದಲ್ಲಿ ಉಸಿರಾಡಲು
ಕೋಗಿಲೆ ಗಾನ ಕೇಳಲು

ಸಾಗುತ್ತಿದೆ ಅದೆಷ್ಟೋ ಕನಸಿನೊಟ್ಟಿಗೆ
ಹಿಂದೆ ಬಿಟ್ಟು ಹೋಗಿದೆ
ಹಲವು ನೆನಪುಗಳು
ವಾಸ್ತವ
ಈ ಜೀವ ಮುಖ್ಯವಾಗಿದೆ
ಬದುಕು ಕಷ್ಟವಾಗಿದೆ
ಪ್ರಾಣಕ್ಕೇ ಅಪಾಯ ಒದಗಿದಾಗ

ಹುಟ್ಟಿದ ಊರೇ ಆಸರೆಯಾಗಿದೆ

ಪಯಣ ಜೀವನದ
ಮರಳಿ ನಿಜ ಬದುಕಿನತ್ತ

ಹರೀಶ್ ಶೆಟ್ಟಿ, ಶಿರ್ವ

ಮೌನ ಮಾತಾದಾಗ

ಮೌನ ಮಾತಾದಾಗ ಅಶ್ರು ಹರಿಯಿತು ಹೃದಯ ಕರಗಿತು ಕೋಪ ಮಾಯವಾಯಿತು ಸಂಬಂಧ ಸದೃಡವಾಯಿತು

ಮೌನ ಮಾತಾದಾಗ ವಿಷಯ ಅರಿಯಿತು ಭಾವನೆ ಮೂಡಿತು ಮನಸ್ಸು ಅರಳಿತು ಹೊಸ ನಂಟು ಆರಂಭವಾಯಿತು

ಮೌನ ಮಾತಾದಾಗ ಮಧುರ ಸಂಗೀತ ದನಿಸಿತು ಕೋಗಿಲೆ ಹಾಡಿತು ಪರಿಸರ ನಲಿಯಿತು ರಾಗ ಅನುರಾಗವಾಯಿತು

ಮೌನ ಮಾತಾದಾಗ
ಅಹಂ ಮುರಿಯಿತು
ವೈರತ್ವ ಮುಗಿದೊಯೀತು
ವಿಶ್ವಾಸದ ದೀಪಕ ಬೆಳಗಿತು
ಬಾಂಧವ್ಯ ಬೆಳೆಯಿತು

by ಹರೀಶ್ ಶೆಟ್ಟಿ, ಶಿರ್ವ

Wednesday, June 10, 2020

ಅಸಹಾಯಕತೆ


ಒಳ್ಳೆ ಮನುಷ್ಯನಾಗಿ ಇರುವ
ನಿಮ್ಮ ಅಸಹಾಯಕತೆ ಏನೆಂದರೆ
ನೀವು ಕೆಟ್ಟ ಮನುಷ್ಯನಾಗಲು ಸಾಧ್ಯನೇ ಇಲ್ಲ, ನಿಮ್ಮ ಸಂಸ್ಕಾರ ನಿಮಗೆ ಇದರ
ಅನುಮತಿ ನೀಡುವುದಿಲ್ಲ
ಮನಸ್ಸಿಗೆ ನೋವಾದರೆ ಒಂದು ಸಲ ಆಕಾಶದತ್ತ ನೋಡಿ. ಹರೀಶ್ ಶೆಟ್ಟಿ, ಶಿರ್ವ

अच्छे इंसान बने रहने की
मजबूरी यही है कि आ
बुरे बन ही नहीं सकते,
आपके संस्कार आपको इ
बात की इजाजत नहीं देते,
कभी दिल दुखे तो एक बार
आसमान की तरफ़ देख लिया करो.
हरीश शेट्टी

ಮುಲಾಮು

ಬಿಡಿ...ಈ ನೋವನ್ನೂ ಮರೆತು ಬಿಡುವ, ಮುಲಾಮು ಅಂತೂ ಸಿಗಬಹುದು ಎಲ್ಲಾದರೂ..... ಹರೀಶ್ ಶೆಟ್ಟಿ, ಶಿರ್ವ

चलो इस दर्द को भी छुपा लेते है, मरहम तो मिल ही जायेगा कहीं न कहीं....
हरीश शेट्टी

ಅದೃಷ್ಟ

ಪ್ರಯತ್ನ ಸಹ ಮಾಡು,
ಭರವಸೆ ಸಹ ಇಡು,
ಮಾರ್ಗ ಸಹ ನಿರ್ಧರಿಸು,
ಮತ್ತೆ ಇದರ ನಂತರ ಸ್ವಲ್ಪ ಅದೃಷ್ಟವನ್ನು ಹುಡುಕು

ಮೂಲ: ನಿದಾ ಫಾಜ್ಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

कोशिश भी कर, उमीद भी रख, रास्ता भी चुन

फिर इस के बाद थोड़ा मुक़द्दर तलाश कर

~निदा फ़ाज़ली

Monday, June 8, 2020

ನಲಿವ ಗುಲಾಬಿ ಹೂವೆ

https://m.facebook.com/story.php?story_fbid=3377604835591186&id=100000251075221


ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ
ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ ಹೀಗೇಕೆ ಮರೆಯಾದೆ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ
ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ಸುಮವೇ ನೀ ಬಾಡದಂತೆ ಬಿಸಿಲಾ ನೀ ನೋಡದಂತೆ
ನೆರಳಲ್ಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು ಎಂದೆಂದು
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ ನಿನಗಾಗಿ ನನಗಾಗಿ
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವು ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ
ಒಲವೋ ಛಲವೋ ಒಲವೋ ಛಲವೊ
Songwriters: Rajan Nagendra
Film: Auto Raja





Saturday, June 6, 2020

Daane ponne

Tried to sing tulu song 'Daane ponne'just for fun.


Daane ponne ninna
manasenk teriyande pova
manasenk teriyande pova
aase deedh e kapuva
pingara poova
kapuva
pingara poova

Bolpaadh soorye
palokaad moodye
kei daikle moked koodiye
sinagari ponne
madimaal manne
ennudala siridevi eeye..
chili pili panpina pakkilu paaruna
chili pili panpina pakkilu paaruna
Badhkda ullasa daane

Daane ponne ninna
manasenk teriyande pova
manasenk teriyande pova

manasde kaate
madapande sothe
ire gunak mechid poyene
e porlu nenpu
jinjina sampu
e sukatha eneyaad kaatene
parapuna neerda nalipuna porlugu
parauna neerda nalipuna porlugu
manasenna marlundu daane

Daane panle
irna manasenke teriyande pova
manasenke teriyande pova
aase deedh ir kapunu pingara
poova
kapunu pingara
poova

Thursday, June 4, 2020

ಕ್ರೂರ ಮಾನವ

ಮೂಕ ಮಮತೆ
ಸೋತ ಅಮ್ಮ
ಬಿಸಿಲು, ಹಸಿವು,
ಕುಸಿದ ತ್ರಾಣ

ರಾಕ್ಷಸ ಮಾನವ
ಹೂಡಿದ ಸಂಚು
ಬಗೆದ ದ್ರೋಹ,
ಕ್ರೂರ ಮನಸ್ಸು

ನಂಬಿಕೆ ಕಣ್ಣಲ್ಲಿ
ಕೂಸು ಗರ್ಭದಲಿ
ಸ್ವೀಕರಿಸಿ ಕೊಟ್ಟಿದನ್ನು
ಗ್ರಹಿಸಿ ಆಹಾರವನ್ನು

ತಳಮಳ ಮೈಯಲ್ಲಿ
ಕಂಬನಿ ಕಣ್ಣಲ್ಲಿ
ಜ್ವಾಲೆ ಜೀವದಲಿ
ಓಡಾಟ ಅಲ್ಲಿಲ್ಲಿ

ದೇವರ ಕರೆಯಾಯಿತು
ಎರಡು ಜೀವ ಹೊರಟಾಯಿತು
ಮಾನವತೆ ನಗ್ನವಾಯಿತು
ಹೊರ ಜಗತ್ತು ನೋಡದೆ ಕೂಸಿನ ಕಣ್ಣು ಮುಚ್ಚಿಹೋಯಿತು.


by ಹರೀಶ್ ಶೆಟ್ಟಿ,ಶಿರ್ವ


Cartoon:Shri.Satish Acharya

Photo:funchershop

Monday, June 1, 2020

Ajeeb dastan

अजीब दास्तां है ये
कहाँ शुरू कहाँ खतम
ये मंज़िलें है कौन सी
न वो समझ सके न हम
अजीब दास्तां है ये
कहाँ शुरू कहाँ खतम
ये मंज़िलें है कौन सी
न वो समझ सके न हम
ये रोशनी के साथ क्यों
धुआँ उठा चिराग से
ये रोशनी के साथ क्यों
धुआँ उठा चिराग से
ये ख़्वाब देखती हूँ मैं
के जग पड़ी हूँ ख़्वाब से
अजीब दास्तां है ये
कहाँ शुरू कहाँ खतम
ये मंज़िलें है कौन सी
न वो समझ सके न हम
मुबारकें तुम्हें के तुम
किसीके नूर हो गए
मुबारकें तुम्हें के तुम
किसीके नूर हो गए
किसीके इतने पास हो
के सबसे दूर हो गए
अजीब दास्तां है ये
कहाँ शुरू कहाँ खतम
ये

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...