Thursday, June 4, 2020

ಕ್ರೂರ ಮಾನವ

ಮೂಕ ಮಮತೆ
ಸೋತ ಅಮ್ಮ
ಬಿಸಿಲು, ಹಸಿವು,
ಕುಸಿದ ತ್ರಾಣ

ರಾಕ್ಷಸ ಮಾನವ
ಹೂಡಿದ ಸಂಚು
ಬಗೆದ ದ್ರೋಹ,
ಕ್ರೂರ ಮನಸ್ಸು

ನಂಬಿಕೆ ಕಣ್ಣಲ್ಲಿ
ಕೂಸು ಗರ್ಭದಲಿ
ಸ್ವೀಕರಿಸಿ ಕೊಟ್ಟಿದನ್ನು
ಗ್ರಹಿಸಿ ಆಹಾರವನ್ನು

ತಳಮಳ ಮೈಯಲ್ಲಿ
ಕಂಬನಿ ಕಣ್ಣಲ್ಲಿ
ಜ್ವಾಲೆ ಜೀವದಲಿ
ಓಡಾಟ ಅಲ್ಲಿಲ್ಲಿ

ದೇವರ ಕರೆಯಾಯಿತು
ಎರಡು ಜೀವ ಹೊರಟಾಯಿತು
ಮಾನವತೆ ನಗ್ನವಾಯಿತು
ಹೊರ ಜಗತ್ತು ನೋಡದೆ ಕೂಸಿನ ಕಣ್ಣು ಮುಚ್ಚಿಹೋಯಿತು.


by ಹರೀಶ್ ಶೆಟ್ಟಿ,ಶಿರ್ವ


Cartoon:Shri.Satish Acharya

Photo:funchershop

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...