Thursday, June 18, 2020

ಧೀರ


ಮನೆಯಿಂದ ದೂರ
ತನ್ನವರಿಂದ ದೂರ
ನೀಡಲು ದೇಶಕ್ಕೆ ಆಧಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ದುಃಖದಲ್ಲಿ ಬಿಟ್ಟು ಎಲ್ಲರನ್ನು
ಗಟ್ಟಿ ಮಾಡಿ ಹೃದಯವನ್ನು
ಕೇಳಿ ದೇಶದ ಸ್ವರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಅಪ್ಪನಿಗೆ ಧೈರ್ಯ ನೀಡಿ
ಅಮ್ಮನ ಕಣ್ಣೀರನ್ನು ಒರಸಿ
ಮನಸ್ಸು ಮಾಡಿ ಭಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

ಹೆಂಡತಿಗೆ ಹೇಳಿ ಸಾಂತ್ವನೆ
ಮಕ್ಕಳಿಗೆ ಕೊಟ್ಟು ಪ್ರಲೋಭನೆ
ಹರಸಿ ಪ್ರೇಮ ಅಪಾರ
ಗಡಿಗೆ ಹೊರಟ ಧೀರ
ವೀರ, ಬಹದ್ದೂರ

by , ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...