Wednesday, June 24, 2020

ಜೀವನ ಮರಣ


ಬದುಕಿದ್ದಾಗ ಯಾರೂ ಬಂದು
ಅವನ ಯೋಗಕ್ಷೇಮ ವಿಚಾರಿಸಲಿಲ್ಲ,
ಈಗ ಅವನ ಅಕಸ್ಮಾತ ಮರಣದ ನಂತರ
ಎಲ್ಲೆಡೆ ಅವನದ್ದೇ ಚರ್ಚೆ

---

ಇಡೀ ಜೀವನ ಅವನು
ದುರಭ್ಯಾಸದಲ್ಲಿ ಲೀನವಾಗಿದ್ದ,
ಸತ್ತ ನಂತರ
ಕುಟುಂಬದಲ್ಲಿ ನೆಮ್ಮದಿಯ ಉಸಿರು

---

ಕುಟುಂಬದಿಂದ ದೂರ ಅವನು
ಎಷ್ಟೋ ವರುಷದಿಂದ,
ಕುಟುಂಬದ ಪುರಾವೆ ಸಿಗದೇ
ರಸ್ತೆಯಲ್ಲಿ ಬಿದ್ದ ಅವನ ಶವವನ್ನು
ಪುರಸಭೆಯವರು ಅಂತ್ಯಸಂಸ್ಕಾರಕ್ಕೆ ಕಳಿಸಿದರು

----

ಸಂಸಾರ ಬಿಟ್ಟು ಅವನು
ದೈವ ಭಕ್ತಿಯಲ್ಲಿ ಲೀನವಾಗಿದ್ದ,
ಈಹಲೋಕ ತ್ಯಜಿಸಿದ ನಂತರ
ಕುಟುಂಬದವರು ಭಕ್ತಿ ಭಾವದಿಂದ
ಅವನ ಅಂತ್ಯ ಕ್ರಿಯೆ ಮುಗಿಸಿದರು

by ಹರೀಶ್ ಶೆಟ್ಟಿ, ಶಿರ್ವ


Photo : Google 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...