Showing posts with label ಚುಟುಕು. Show all posts
Showing posts with label ಚುಟುಕು. Show all posts

Wednesday, February 4, 2015

ಮೌನ-ಧ್ಯಾನ

ಹೂವಿನ ಪಕಳೆಗಳು
ಒಂದೊಂದಾಗಿ ಬೀಳುತ್ತಿವೆ
ದುಂಬಿ ರಸ ಸವಿಯುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

ಆಧಾರ

ಆ ತೋಟದ ಅಂದಕ್ಕೆ
ನಾವು ಕಾರಣ ಎಂದು
ಹೂಗಳು ಮೆರೆಯುತ್ತಿದ್ದವು
ಮಾಲಿ ಗಿಡಗಳಿಗೆ ನೀರೆರೆಯುವುದರಲಿ ಮಗ್ನ!
---
ಧಾನ್ಯದ ಪಾಲಿಗೋಸ್ಕರ
ರೈತನ ಕುಟುಂಬದ ಮಧ್ಯೆ ಜಗಳ
ರೈತ ಹೊಲದಲ್ಲಿ ಶ್ರಮಿಸುವುದರಲಿ ಮಗ್ನ!

by ಹರೀಶ್ ಶೆಟ್ಟಿ, ಶಿರ್ವ

Tuesday, January 13, 2015

ದೇವ ನಕ್ಕ

ಕಲ್ಲಿಗೆ ಕೈ ಮುಗಿದ
ಮನಸ್ಸಲ್ಲಿದ್ದ ದೇವ ನಕ್ಕ
ಹರೀಶ್ ಶೆಟ್ಟಿ, ಶಿರ್ವ

Sunday, January 11, 2015

ಪ್ರತಿಭೆ

ಬೆಣ್ಣೆ ಕರಗ ಬೇಕೆಂದರೆ
ಬಿಸಿ ಸೋಕಲೇ ಬೇಕು,
ಪ್ರತಿಭೆ ಹೊರ ಹೊಮ್ಮ ಬೇಕೆಂದರೆ
ಪ್ರಯತ್ನದ ಬಿಸುಪಲ್ಲಿ ಉರಿಯಲೆ ಬೇಕು.
ಹರೀಶ್ ಶೆಟ್ಟಿ, ಶಿರ್ವ

Thursday, October 2, 2014

ವಿರೋಧ

ಇರಬೇಕು
ವಿರೋಧ
ಆವಾಗಲೇ
ತಿಳಿಯುತ್ತದೆ
ಮೌಲ್ಯ 
ಕಾರ್ಯದ
by ಹರೀಶ್ ಶೆಟ್ಟಿ, ಶಿರ್ವ

Tuesday, September 30, 2014

ಲೋಪ ದೋಷ

ಎಷ್ಟೇ ಒಳ್ಳೆ ಕವಿತೆ ಬರೆದರು ಏನು
ತಪ್ಪು ಹುಡುಕುವವರಿಗೆ
ಲೋಪ ಕಾಣುತ್ತದೆ
ಎಷ್ಟೇ ಒಳ್ಳೆ ನುಡಿ ನುಡಿದರು ಏನು
ಮಾತನ್ನು ಮುರಿಯುವವರಿಗೆ
ದೋಷ ಕಾಣುತ್ತದೆ
by ಹರೀಶ್ ಶೆಟ್ಟಿ, ಶಿರ್ವ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಲೋಪ, ದೋಷ ಹುಡುಕುವ ತವಕದಲ್ಲಿ ಇರುವ ಜನರನ್ನು ನೋಡಿ ಹೊಳೆದದ್ದು.

Monday, September 29, 2014

ನಾಳೆಯ ದಿನವಾದರೂ ಶುಚಿಯಾಗಲಿ

ದ್ವೇಷ ತುಂಬಿದ ಎದೆಯಲ್ಲಿ ಹೆಮ್ಮೆ ಹೇಗೆ ನೆಲೆಸುವುದು
ಕಲ್ಮಶ ತುಂಬಿದ ಮನಸ್ಸಿನಲ್ಲಿ ಪಾವನತೆ ಹೇಗೆ ನಿಲ್ಲುವುದು 
ಹರಿಯಲಿ ದ್ವೇಷ 
ಸ್ವಚ್ಚವಾಗಲಿ ಕಲ್ಮಶ 
ನಾಳೆಯ ದಿನವಾದರೂ ಶುಚಿಯಾಗಲಿ

by ಹರೀಶ್ ಶೆಟ್ಟಿ, ಶಿರ್ವ 

Saturday, September 27, 2014

ಬದುಕು

ಬದುಕು
ಸಿರಿವಂತರಿಗೆ
ಆಟ
ಬಡವರಿಗೆ
ಹೋರಾಟ
by ಹರೀಶ್ ಶೆಟ್ಟಿ, ಶಿರ್ವ

ಕಠಿಣ ಸಮಯ

ಕಠಿಣ
ಸಮಯ
ಇರಲಿ
ಸಂಯಮ
ಇರಲಿ
ಧೈರ್ಯ
ಇರಲಿ
ಭರವಸೆ
by ಹರೀಶ್ ಶೆಟ್ಟಿ, ಶಿರ್ವ

ಮಾತಲ್ಲಿ

ಮಾತಲ್ಲಿ
ನಮ್ರತೆ
ಮುತ್ತು
ಮಾತಲ್ಲಿ 
ಕಠೋರತೆ
ಆಪತ್ತು
by ಹರೀಶ್ ಶೆಟ್ಟಿ, ಶಿರ್ವ

ಸಹಾಯ ಹಸ್ತ

ನೀಡು
ಸಹಾಯ
ಹಸ್ತ
ಸಂತಸದ 
ಓಟ
ನಿನ್ನತ್ತ
by ಹರೀಶ್ ಶೆಟ್ಟಿ, ಶಿರ್ವ

Tuesday, September 23, 2014

ಕದನ

ಕದನ
ನಿಲ್ಲಬಹುದು
ಮೈತ್ರಿಯ
ಸಂಧಾನದಿಂದ

by ಹರೀಶ್ ಶೆಟ್ಟಿ, ಶಿರ್ವ

ಹಸಿರು ಪ್ರಾಣ

ಉಸಿರು ಪ್ರಾಣ
ಬಸಿರು ಪ್ರಾಣ
ಹಸಿರು ಪ್ರಾಣ
ಉಳಿಸಿದರೆ ಜೀವನ
ಕಡಿದರೆ ಮರಣ

by ಹರೀಶ್ ಶೆಟ್ಟಿ, ಶಿರ್ವ 

ಸ್ನೇಹ

ಮಲಗಿಕೊಂಡಿರಲಿ
ದ್ವೇಷ
ಎಚ್ಚರದಲ್ಲಿರಲಿ
ಸ್ನೇಹ
by ಹರೀಶ್ ಶೆಟ್ಟಿ, ಶಿರ್ವ

ಪ್ರಾಣ ಹಕ್ಕಿ

ಪ್ರಾಣ
ಹಕ್ಕಿ
ಹಾರಬಹುದು
ಯಾವುದೇ
ಕ್ಷಣದಲಿ 
ಬದುಕು
ಹೀಗಿರಲಿ
ಅಂದರೆ
ತೆರಳಿದ
ನಂತರವೂ
ಜನರು
ಹೊಗಳಲಿ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಉಷ್ಣತೆ

ಕರಗಬಹುದು
ಮುನಿದ ಮನಸ್ಸ
ನೀರ್ಗಲ್ಲು
ಪ್ರೀತಿಯ
ಉಷ್ಣತೆ
ನೀಡಿದರೆ

by ಹರೀಶ್ ಶೆಟ್ಟಿ, ಶಿರ್ವ

Thursday, September 4, 2014

ವಿಧಿ

ಸುನಿಶ್ಚಿತ
ವಿಧಿ
ಆದರೆ
ತಿಳಿಯಲಾಗುವುದಿಲ್ಲ
ಇದರ ಕಾರ್ಯವಿಧಿ

by ಹರೀಶ್ ಶೆಟ್ಟಿ, ಶಿರ್ವ 

ನನ್ನ ಧ್ಯೇಯ

ಅಯ್ಯೋ
ಇಂತಹ ಹೃದಯವನ್ನು ಪಡೆದು
ನನ್ನ ದೇಹದ
ಕಲ್ಮಶಗಳೆಲ್ಲ ಶುಚಿಯಾಯಿತು
ಈಗಂತೂ 
ಈ ಹೃದಯಕ್ಕೆ
ಒಂದು ಅರ್ಥ ನೀಡುವುದೇ
ನನ್ನ ಧ್ಯೇಯ
by ಹರೀಶ್ ಶೆಟ್ಟಿ, ಶಿರ್ವ

ನನ್ನ ತಪ್ಪು

ಕಣ್ಣೀರು
ಕನ್ನಡಿಯಾಗಿದೆ
ಅದು ನನ್ನ
ತಪ್ಪುಗಳನ್ನು ತೋರಿಸುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

Thursday, May 15, 2014

ಅವಶ್ಯಕತೆ ಇದೆ

ಅವಶ್ಯಕತೆ ಇದೆ 
ಆ ಏಕಾಗ್ರತೆಯ
ಆ ಮೌನತೆಯ
ಆ ಶಾಂತತೆಯ 
ಆ ತ್ಯಾಗದ 
ಆ ಶಕ್ತಿಯ 
ಆ ದಯೆ, ಕರುಣೆ, ಭಕ್ತಿಯ 
ಅವಶ್ಯಕತೆ ಇದೆ, ಅವಶ್ಯಕತೆ ಇದೆ, ಅವಶ್ಯಕತೆ ಇದೆ.

by ಹರೀಶ್ ಶೆಟ್ಟಿ,ಶಿರ್ವ

ಸಿದ್ಧಿದಾತ್ರಿ