Saturday, December 26, 2020

ಲಕ್ಷ್ಮಣ ರೇಖೆ



ಎಷ್ಟೋ ಸಮಯ ಉರುಳೊಯೀತು,

ಅದೆಷ್ಟೋ ಬದಲಾವಣೆ, 

ನೀನು ನೀನಾಗಿ ಉಳಿಯಲಿಲ್ಲ, 

ನಾನೂ ನಾನಾಗಿ ಉಳಿಯಲಿಲ್ಲ, 

ನಿನಗೆ ನಿನ್ನ ಸಂಸಾರದ ಬಂಧನ, 

ನನಗೆ ನನ್ನವರೇ ಜೀವನ,

-

ಆನಂದದಲ್ಲಿಯೇ ಇದ್ದೇವೆ ನಾವಿಬ್ಬರೂ, 

ಆದರೆ ಹಳೆ ನೆನಪಿನ ಕಾರವಾಸದಲಿ ಈಗಲೂ, 

ಮುಖಾಮುಖಿ ಅದಾಗ ಅದೇಕೋ ಸಂಕೋಚ ಇಬ್ಬರಲ್ಲಿಯೂ, 

ಆದರೆ ಇಬ್ಬರ ಕಣ್ಣಿನ ಹೊಳಪು ನುಡಿಯುತ್ತದೆ ಎಲ್ಲವೂ,

-

ಇದೇ ನಮ್ಮ ವಿಧಿಯೆಂದು ಸಾಗುತ್ತಿದೆ ಬದುಕು, 

ಆದರೆ ಅನಿಸುತ್ತದೆ ಕೆಲವೊಮ್ಮೆ, 

ಸ್ವಲ್ಪ  ಧೈರ್ಯ ಇರುತ್ತಿದ್ದರೆ ನಮ್ಮಲ್ಲಿ, 

ಇಂದು ಇರುತ್ತಿರಲಿಲ್ಲ ನಮ್ಮಲ್ಲಿ ಈ ಅಳುಕು,

-

ನಮ್ಮ ಮಿಲನದ ಕೊನೆಯ ಸಂಜೆಯಿಂದ, 

ಈ ಹೃದಯ ಎಂತೂ ಕಲ್ಲಾಗಿದೆ, 

ಇನ್ನು ಯಾವುದೇ ಒಲವ ಕಂಪನ ಇದರಲ್ಲಿ ಉಳಿದಿರಲಿಕ್ಕಿಲ್ಲ, 

ಆದರೆ ಯಾಕೆ ನನ್ನಲ್ಲಿ ಇನ್ನೂ ನಿನ್ನ ಬಗ್ಗೆ ಯೋಚನೆ ಇದೆ,

-

ಬಹುಶ ಈ ಕಲ್ಲಲ್ಲಿ ಬರೆದ ನಿನ್ನ ಹೆಸರು ಇನ್ನೂ ಅಳಿಸಿ ಹೋಗಲಿಲ್ಲ, 

ಸರಿ ಬಿಡು, 

ಇರೋಣ ನಮ್ಮ ಪಾಡಿಗೆ ನಾವು, 

ನಮ್ಮ ನಮ್ಮ ಜೀವನದಲ್ಲಿ ಸಂತೋಷವಾಗಿರೋಣ,

-

ಮೊದಲ ಪ್ರೀತಿಯ ನೆನಪನ್ನು ಸ್ಮೃತಿಯಿಂದ ಅಳಿಸುವುದು ಕಷ್ಟ ಎಂದು ತಿಳಿದಿದೆ, 

ಪ್ರೇಮ ಪ್ರಣಯದ ಆ ನೆನಪನ್ನು ನಮ್ಮಲ್ಲಿಯೇ ಜೋಪಾನವಾಗಿಡೋಣ, 

ಇನ್ನು ಮೇಲೆ ನಮ್ಮ ಮಧ್ಯೆ ಒಂದು ಲಕ್ಷ್ಮಣ ರೇಖೆ ಎಳೆಯೋಣ, 

ತನ್ನ ತನ್ನ ಹೊಸ ಸಂಸಾರದ ಜವಾಬ್ಧಾರಿ ವಹಿಸೋಣ.


by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...