Sunday, July 15, 2012

ಕಮಲ


ಕನಕವೆಂದು ಭಾವಿಸಿ
ಕೆಸರಲ್ಲಿ ಕಾಲಿಟ್ಟೆ ನಾನು
ಕಮಲವಾಗುವ ಬಯಕೆಯಲ್ಲಿ
ಕೆಸರ ಮೆತ್ತಿ ಹೊರ ಬಂದಾಗ
ಸೂರ್ಯೋದಯದ ಸಮಯ
ಅರಳುತ್ತಿದ್ದೆ ಸುಂದರ ಚೆಲುವೆಯಂತೆ
ನನ್ನ ಅಂದ ಕಂಡು ಹೊಗಳಿದರು
ನನ್ನ ಮೃದು ಶರೀರವನ್ನು ಕೊಂಡಾಡಿದರು
ಹಲವರು ಬಂದು ನನ್ನ ಮೈಯ ರಸ ಹೀರಿದರು
ಸೂರ್ಯಾಸ್ತ ಆಗುತ್ತಲೇ
ನಾ ಬಾಡಿ ಆ ಕೆಸರಲ್ಲೇ ಅಡ್ಡ ಬಿದ್ದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...