Tuesday, March 3, 2020

ವೃದ್ಧಾಶ್ರಮ ೨೨

ಎರಡು ದಿವಸ ಬಿಟ್ಟು ರಮೇಶನಿಗೆ ದಿರೇಶನ ಮಿಸ್ ಕಾಲ್ ಬಂತು, ರಮೇಶ ಕೂಡಲೇ ದಿರೇಶನಿಗೆ ಕಾಲ್ ಮಾಡಿದ. 

ದಿರೇಶ "ಕೇಳು, ಒಂದು ಹುಡುಗಿ ಸಿಕ್ಕಿದ್ದಾಳೆ, ಆದರೆ ಅವಳು ಹನ್ನೆರಡು ಸಾವಿರ ಸಂಬಳ ಕೇಳುತ್ತಿದ್ದಾಳೆ ಮತ್ತು ತಿಂಗಳಿಗೆ ೩ ದಿವಸ ರಜೆ ಸಹ ಬೇಕಂತೆ ಅವಳ ಮನೆಗೆ ಹೋಗಿ ಬರಲಿಕ್ಕೆ, ಘಟ್ಟದಾಚೆಯವಳು, ಏನು ಹೇಳುವೆ". 

ರಮೇಶ "ಹನ್ನೆರಡು ಸಾವಿರ ತುಂಬಾ ಹೆಚ್ಚಲ್ಲ"???

ದಿರೇಶ "ಹೆಚ್ಚು ಹೌದು, ಆದರೆ ಏನು ಮಾಡುವುದು, ಇಲ್ಲಿ ಬೇರೆ ಯಾರೂ ಅಷ್ಟು ದೂರ ಮನೆಗೆ ಬರಲಿಕ್ಕೆ ರೆಡಿ ಇಲ್ಲ". 

ರಮೇಶ "ಹ್ಮ್ಮ್"

ದಿರೇಶ "ಮತ್ತೆ ಆಸ್ಪತ್ರೆಯ ಬಿಲ್ ನಿನ್ನೆ ತನಕ ಇಪ್ಪತೇಳು ಸಾವಿರ ಆಗಿತ್ತು". 

ರಮೇಶ "ಅಷ್ಟು ಹೇಗೆ !!!"?

ದಿರೇಶ "ಅಷ್ಟು ಹೇಗೆಂದರೆ  ...... ಆಸ್ಪತ್ರೆ ಚಾರ್ಜ್, ಡಾಕ್ಟರ್ ಚಾರ್ಜ್, ಮದ್ದಿನ , ಹೋಮ್  ನರ್ಸ್ ಎಲ್ಲ ಸೇರಿಸಿ". 

ರಮೇಶ "ಹ್ಮ್ಮ್.... ". 

ರಮೇಶನಿಗೆ ಈಗ ಹಣದ ಚಿಂತೆ ಶುರುವಾಯಿತು, ಅವನ ಹತ್ತಿರ ಅಷ್ಟೇನೂ ಉಳಿತಾಯ ಇರಲಿಲ್ಲ, ವಿದೇಶದಿಂದ ಪ್ರತಿ ತಿಂಗಳು ಸುಮಾಳ ಖರ್ಚಿಗೆ  ಮತ್ತು ಅಮ್ಮನ ಖರ್ಚಿಗೆ ತಂಗಿ ಸುನೀತಾಳಿಗೆ ಹಣ ಕಳಿಹಿಸುತ್ತಿದ್ದ, ಮಿಕ್ಕಿದ್ದು ಅವನ ಖರ್ಚು ತೆಗೆದು ಅಷ್ಟೇನೂ ಉಳಿತಾಯ ಆಗುತ್ತಿರಲಿಲ್ಲ,  ಇದ್ದದೆಲ್ಲ ಈಗ ಊರಿಗೆ ಹೋಗಿ ಬರುವಾಗ ಮುಗಿದೋಗಿತ್ತು, ಅವನ ಲೆಕ್ಕಾಚಾರದ ಪ್ರಕಾರ ಈ ತಿಂಗಳು ಒಂದು ಅದಿನೈದು ಸಾವಿರ ಬಿಲ್ ಬರಬಹುದೆಂದಿತ್ತು ಹಾಗು ಅದು ದಿರೇಶನಿಗೆ ಕೊಟ್ಟು ಬಂದ  ಮೂವತ್ತು ಸಾವಿರದಲ್ಲಿ  ಸರಿಹೊಂದಿಸಿ ಹೋಗಬಹುದೆಂದು ತಿಳಿದಿದ್ದ, ಆದರೆ  ಆ ಮೂವತ್ತು ಸಾವಿರದಲ್ಲಿ ಏನು ಉಳಿದಿರಲಿಲ್ಲ ಎಂದು ದಿರೇಶನಿಂದ ತಿಳಿದ ನಂತರ ಮತ್ತು ಆಸ್ಪತ್ರೆಯ ಇಪ್ಪತೇಳು ಸಾವಿರದ  ಬಿಲ್  ಕೇಳಿ ಇನ್ನೇನು ಮಾಡುವುದು ಎಂಬ  ಚಿಂತೆ ಅವನಲ್ಲಿ ಆವಾರಿಸಿತು.   

ರಮೇಶ ಮೌನ ಇರುವುದನ್ನು ನೋಡಿ  ದಿರೇಶ "ಏನು ಮಾಡುವುದು ಈಗ"?

ರಮೇಶ "ಓ ಕೆ, ಬೇರೆ ದಾರಿ ಇಲ್ಲ ಆ ಹುಡುಗಿಗೆ ಫೈನಲ್ ಮಾಡು ಮತ್ತು ಎರಡು ಮೂರು ದಿವಸ ನಂತರ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಆಸ್ಪತ್ರೆಯಲ್ಲಿ ಹೇಳಿಡು". 

"ಓ ಕೆ , ಹಣ ಸ್ವಲ್ಪ ಹೆಚ್ಚಿಯೇ ಕಳುಹಿಸು, ಎರಡು ಮೂರು ದಿವಸದಲ್ಲಿ ಬಿಲ್ ಇನ್ನು ಹೆಚ್ಚಾಗಬಹುದು ಮತ್ತು ಬೇರೆ ಸಹ ಖರ್ಚು ಇದೆಯಲ್ಲ" ಎಂದು ದಿರೇಶ ಹೇಳಿದ. 

ರಮೇಶ "ಬೇರೇನು ಖರ್ಚು"?

ದಿರೇಶ ಆವೇಶದಿಂದ " ಬೇರೆ ಖರ್ಚು ಇಲ್ಲವ, ಅಮ್ಮನನ್ನು ಕರೆದುಕೊಂಡು ಹೋಗುವಾಗ ಕಾರ್ ಮಾಡಬೇಕು, ಹೋಗಲಿಕ್ಕೆ ಬರಲಿಕ್ಕೆ, ಮತ್ತೆ ನೀನು ಕೊಟ್ಟು ಹೋದ ಹಣ ಮುಗಿದು ಈಗ ನಾನು ಸಾಲ ಮಾಡಿ ಖರ್ಚು ಮಾಡುತ್ತಿದ್ದೇನೆ". 

ರಮೇಶ "ಆಯಿತಾಯಿತು, ನಾನು ಹಣದ ಬಂದೋಬಸ್ತ್ ಮಾಡಿ ಕಳುಹಿಸುತ್ತೇನೆ"

ದಿರೇಶ "ಚಿಕ್ಕಮ್ಮನ ಅಕೌಂಟಿಗೆ ಕಳುಹಿಸು, ಅವರು ಬ್ಯಾಂಕಿನಿಂದ ತೆಗೆದು ನನಗೆ ಕೊಡುತ್ತಾರೆ". 

ರಮೇಶ "ಓ ಕೆ" ಎಂದು ಮಾತು ಮುಗಿಸಿ ಮುಂದಿನ ಚಿಂತೆಯಲ್ಲಿ ಮುಳುಗಿದ. 

ರಮೇಶನ ಜೀವನ ಬಹುತೇಕ ಹೀಗೆ ಕಷ್ಟವನ್ನು ಎದುರಿಸುವುದರಲ್ಲೇ ಕಳೆದಿತ್ತು, ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅವನು ಹಿಂಜರಿಯಲಿಲ್ಲ, ತುಂಬಾ ಕಷ್ಟ ಎದುರಿಸಿದ ನಂತರ ಈಗ ತಾನೇ ಅವನ ಜೀವನದಲ್ಲಿ ಸ್ವಲ್ಪ ಸುಖದ ಸೂರ್ಯ ಪ್ರಭೆ ಬಿದ್ದಿತ್ತು, ಆದರೆ ಕಷ್ಟದ ಕಾರ್ಮೋಡ  ಈಗಲೂ ಪದೇ ಪದೇ ಅವನ ಜೀವನದಲ್ಲಿ ಹಬ್ಬುತಿತ್ತು, ಅಂತಹ ಯಾವುದೇ ಪರಿಸ್ಥಿಯಲ್ಲಿ ರಮೇಶನ ದೇವರ ಪ್ರತಿ ಭಕ್ತಿ ಶ್ರದ್ಧೆಕಡಿಮೆಯಾಗಿಲ್ಲ, ಅವನು  ಯಾವುದಕ್ಕೂ ಮೊದಲು ದೇವರಿಗೆ ಧನ್ಯವಾದ ಸಲ್ಲಿಸುತ್ತಿದ್ದ, ಶಾಂತವಾಗಿರುತ್ತಿದ್ದ, ಒಂದು ನಿಟ್ಟುಸಿರು ಎಳೆಯುತ್ತಿದ್ದ ಹಾಗು ಧನಾತ್ಮಕವಾಗಿ  ಮುಂದೆ ಸಾಗುತ್ತಿದ್ದ


(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ :ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...