Sunday, March 15, 2020

ವೃದ್ಧಾಶ್ರಮ ೨೫


ರಜೆಯಲ್ಲಿ ಅಲ್ಲಿ ಇಲ್ಲಿ ಅಂತ ರಮೇಶನವರ ರಜೆ ಮುಗಿಯುತ್ತ ಬಂತು, ಅಮ್ಮನ ಆರೋಗ್ಯ ಅವಸ್ಥೆ ಈಗಲೂ ಹಾಗೆಯೇ ಇತ್ತು, ಹೇಚ್ಛೆನು ಬದಲಾವಣೆ ಕಂಡು ಬರಲಿಲ್ಲ, ಕೇವಲ ಹೇಳಿದರೆ  ಸ್ವಲ್ಪ ಸ್ವಲ್ಪ ನಡೆಯುತ್ತಿದ್ದರು, ಇಲ್ಲಾದರೆ ಉದಾಸೀನದಿಂದ ಹಾಸಿಗೆಯಿಂದ ಏಳುತ್ತಿರಲಿಲ್ಲ, ಯಾವುದೇ ಹೋಮ್ ನರ್ಸ್ ಸಹ ಹೆಚ್ಚು ದಿನ ಇರುತ್ತಿರಲಿಲ್ಲ, ಒಂದೆರಡು ತಿಂಗಳು ಇದ್ದು ಹೋದ ನಂತರ ಬರುತ್ತಿರಲಿಲ್ಲ, ಆಗ ಮನೆಯ ಕೆಲಸದ ಮಧ್ಯೆ ವಿಜಯ ಮಾಮ ಹಾಗು ಅಮ್ಮನ ಕೆಲಸ ಮಾಡಲು ಚಿಕ್ಕಮನವರಿಗೆ ತುಂಬಾ ಕಷ್ಟವಾಗುತ್ತಿತ್ತು, ಸ್ವಾಭಾವಿಕವಾಗಿ ಅವರ ತಾಳ್ಮೆ ಕುಸಿದು ಅವರು ಕಿರಿಕಿರಿ ಮಾಡುತ್ತಿದ್ದರು, ಇದರ ಬಗ್ಗೆ ಅವರು ರಮೇಶನಿಗೆ ಏನಾದರೂ ಅಮ್ಮನ ಕಾಯಂ ವ್ಯವಸ್ಥೆ ಮಾಡಲು ಹೇಳುತ್ತಿದ್ದರು, ರಮೇಶನಿಗೆ ಇದೆಲ್ಲ ಸಹಜ ಅನಿಸಿದರೂ ಏನು ಮಾಡುವುದು ಎಂದು ಅರ್ಥವಾಗುತ್ತಿರಲಿಲ್ಲ.

ಹೇಗೋ ರಮೇಶನ ರಜೆ ಮುಗಿದು ವಿದೇಶ ಹೋಗುವ ಸಮಯ ಬಂತು, ಚಿಕ್ಕಮನವರು ಆಗ ಸಹ ರಮೇಶನಿಗೆ ಏನಾದರೂ ಅಮ್ಮನ ವ್ಯವಸ್ಥೆ ಮಾಡಲು ಹೇಳಿದರು, ಕಡೆಗೆ ರಮೇಶ ಸುಮಾ ಜೊತೆ ಚರ್ಚೆ ಮಾಡಿ ಅಮ್ಮನನ್ನು ಸ್ವಲ್ಪ ದಿವಸದ ನಂತರ ವಿದೇಶ ಕರೆದು ಕೊಂಡು ಹೋಗುವ ನಿರ್ಣಯ ಮಾಡಿದ, ಅದಕ್ಕೆ ರಮೇಶ ದಿರೇಶನಿಗೆ ಹಣ ಕೊಟ್ಟು ಅಮ್ಮನ ಬೇಗನೆ ಪಾಸ್ ಪೋರ್ಟ್ ಮಾಡಲು ಹೇಳಿದ ಹಾಗು ಪಾಸ್ ಪೋರ್ಟ್ ಮಾಡಿದ ನಂತರ ತಿಳಿಸಲಿಕ್ಕೆ ಹೇಳಿದ, ರಮೇಶ ಚಿಕ್ಕಮ್ಮನವರಿಗೆ ಸಹ ಈ ಬಗ್ಗೆ ತಿಳಿಸಿ ಸ್ವಲ್ಪ ಸಮಯ ಅಮ್ಮನನ್ನು ನೋಡಲು ಹಾಗು ಧೈರ್ಯ ಇಡಲು ಹೇಳಿದ.

ರಜೆ ಮುಗಿಯುತ್ತಲೇ ರಮೇಶ, ಸುಮಾ ಆತೀಶನ ಜೊತೆ ವಿದೇಶ ಹಿಂತಿರುಗಿದರು ಹಾಗು ರಮೇಶ ತನ್ನ ಕೆಲಸ ಕಾರ್ಯದಲ್ಲಿ ಹಾಗು ಸುಮಾ ತನ್ನ ಗೃಹಸ್ಥಿಯಲ್ಲಿ ಮುಳುಗಿದಳು. 

ಸ್ವಲ್ಪ ದಿವಸದ ನಂತರ ರಮೇಶ ಊರಿಗೆ ಫೋನ್ ಮಾಡಿದಾಗ ಆಶಾ ಚಿಕ್ಕಮ ಅಮ್ಮನನ್ನು ನೋಡಲು ಕೆಲವು ದಿವಸದಿಂದ ಹೋಮ್ ನರ್ಸ್ ಇಲ್ಲವೆಂದು  ಹಾಗು ಅವರಿಗೆ ತುಂಬಾ ಕಷ್ಟ ಆಗುತ್ತಿದೆ ಎಂದು ತಿಳಿಸಿದರು, ರಮೇಶ ದಿರೇಶನ ಬಗ್ಗೆ ಕೇಳಿದಾಗ ಅವರು ದಿರೇಶನನ್ನು ದೂರಿ "ಅವನೆಲ್ಲಿ ಬರುತ್ತಾನೆ, ಕೆಲವು ದಿನದಿಂದ ಅವನ ಸುದ್ದಿಯೇ  ಇಲ್ಲ" ಎಂದು  ಅವನ ಬಗ್ಗೆ ಕೆಲವು ದೂರು ನೀಡಿದ್ದರು. 

ರಮೇಶ ಕೂಡಲೇ ದಿರೇಶನಿಗೆ ಫೋನ್ ಮಾಡಿದ "ಏನು ಏನಾಯಿತು ಅಮ್ಮನ ಪಾಸ್ ಪೋರ್ಟ್"?

ದಿರೇಶ  "ಏಜೆಂಟನಿಗೆ ಪೇಪರ್ ಎಲ್ಲ ಕೊಟ್ಟಿದ್ದೇನೆ, ಇನ್ನು ಕೆಲವು ದಾಖಲೆ ಮಾಡಿಸ ಬೇಕಂತ ಹೇಳಿದ್ದಾನೆ, ನೋಡುವ ನಾನು ಅವನ ಹಿಂದೆ ಬಿದ್ದಿದ್ದೇನೆ".

ರಮೇಶ "ನೀನೇನು ಮನೆಗೆ ಹೋಗಲೇ ಇಲ್ಲವ ಅಮ್ಮನನ್ನು ನೋಡಲು"?

ದಿರೇಶ "ಕಳೆದ ತಿಂಗಳು ಹೋಗಿದ್ದೆ, ಏನು ಏನಾಯಿತು"?

ರಮೇಶ "ಅಲ್ಲ ಚಿಕ್ಕಮ್ಮ ಹೋಮ್ ನರ್ಸ್ ಇಲ್ಲ ಅಂತ ಕಿರಿಕಿರಿ ಮಾಡುತ್ತಿದ್ದರು, ನೀನು ಪ್ರತಿ ವಾರ ಹೋಗಿ ಸ್ವಲ್ಪ ನೋಡಲ್ಲ, ಇಲ್ಲಾದರೆ ಹೋಮ್ ವ್ಯವಸ್ಥೆಯಾದರೂ  ಮಾಡು".

ದಿರೇಶ ಸಿಡುಕಿನಿಂದ "ಪ್ರತಿ ವಾರ ಹೋಗಲು ಇಲ್ಲಿ ಕೆಲಸದಲ್ಲಿ ನನಗೆ ರಜೆ ಯಾರು ಕೊಡುತ್ತಾರೆ ಮತ್ತೆ ಹೋಮ್ ನರ್ಸ್ ಸಿಕ್ಕಿದರು ಅವರಿಗೆ  ಹೆಚ್ಚು ದಿವಸ ನಮ್ಮ ಮನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, ಅಲ್ಲಿ ಅಮ್ಮನ ಕೆಲಸದಿಂದ ಹೆಚ್ಚು ಚಿಕ್ಕಮನವರು ಮನೆ ಕೆಲಸ ಹೆಚ್ಚು ಮಾಡಿಸುತ್ತಾರೆ, ಯಾರು ಮಾಡುತ್ತಾರೆ ಕೆಲಸ ಹಾಗೆ, ಅದಕ್ಕೆ ಓಡಿ ಹೋಗುತ್ತಾರೆ".

ರಮೇಶ "ಹಾಗಾದರೆ ಹೀಗೆ ಮಾಡು ಇನ್ನು ಸ್ವಲ್ಪ ದಿವಸ ತಾನೇ, ಹೇಗೂ ನಾನು ಅಮ್ಮನನ್ನು ವಿದೇಶ ಕರೆದು ಕೊಂಡು ಹೋಗುತ್ತಿದ್ದೇನೆ, ನಿನಗೆ ಸಹ ಅವರ ಪಾಸ್ ಪೋರ್ಟ್ ಮಾಡಲು ಕೆಲಸ ಇದೆ, ನೀನು ಸ್ವಲ್ಪ ದಿವಸ ಕೆಲಸಕ್ಕೆ  ರಜೆ ಮಾಡಿ  ಅಮ್ಮನನ್ನು ನೋಡು, ಹೋಮ್ ನರ್ಸಿಗೆ ಕೊಡುವ ಸಂಬಳ ನೀನು ತೆಗೆದುಕೊಳ್ಳು, ಇಲ್ಲಿ ಸಹ ನಿನಗೆ ಎಷ್ಟು ಸಂಬಳ,  ಅಷ್ಟೇ ತಾನೇ ಸಿಗುವುದು".

ದಿರೇಶ ಸ್ವಲ್ಪ ಯೋಚಿಸಿ "ಹಾಗೆ ಹೇಳುತ್ತೀಯಾ".

ರಮೇಶ "ನೋಡು, ಇದರ ನಂತರ  ಚಿಕ್ಕಮ್ಮನವರ ಕಿರಿಕಿರಿ ಸಹ ಇರುವುದಿಲ್ಲ".

ದಿರೇಶ "ಓ ಕೆ ಹಾಗಾದರೆ, ನಾನು ಇವತ್ತು ಸೇಠ್ ಬಂದ ನಂತರ ಅವರತ್ತಿರ ರಜೆ ಕೇಳಿ ಮನೆಗೆ ಹೋಗುತ್ತೇನೆ, ಆದರೆ ನೀನು ಆಶಾ ಚಿಕ್ಕಮನಿಗೆ ಹೇಳು ಹೋಮ್ ನರ್ಸಿನ ಹಣ ನನಗೆ ಕೊಡುಬೇಕಾಂತ".

ರಮೇಶ "ಅದು ಹೇಳುತ್ತೇನೆ, ನೀನು ಆದಷ್ಟು ಬೇಗ  ಹೋಗು". 

ದಿರೇಶ : ಓ ಕೆ "ಎಂದು ಫೋನ್ ಇಟ್ಟ.

ಅಮ್ಮನ ಪಾಸ್ ಪೋರ್ಟ್ ಮಾಡಲು  ದಿರೇಶ ತುಂಬಾ ಓಡಾಡಿದ, ಆದರೆ ಆ ಪೇಪರ್ ಈ ದಾಖಲೆ ಎಂದು ತುಂಬಾ ಸಮಯ ಕಳೆದೋಯ್ತು, ಮೇಲಿಂದ ಈ ಮಧ್ಯೆ ವಿಕ್ರಮ ಮಾಮ ಹಾಗು ದಿನಕರ ಮಾಮ ಊರಿನ ಮನೆ ದುರಸ್ತಿ ಮಾಡುವ ನಿರ್ಣಯ ತೆಗೆದುಕೊಂಡರು ಹಾಗು ಕುಟುಂಬದ ಎಲ್ಲ ಸದಸ್ಯರಿಂದ ಹಣ ಒಟ್ಟು ಮಾಡಿ ದುರಸ್ತಿ ಕಾರ್ಯ ಶುರು ಮಾಡಿದರು, ರಮೇಶ ಸಹ ಈ ಕಾರ್ಯಕ್ಕೆ ತನ್ನ ಕೊಡುಗೆ ನೀಡಿ ಸಹಕರಿಸಿದ, ದುರಸ್ತಿ ಕಾರ್ಯ ನಡೆಯುವಾಗ ಅಮ್ಮನಿಗೆ ಹಾಗು ವಿಕ್ರಮ ಮಾಮನವರಿಗೆ ತುಂಬಾ ಕಷ್ಟ ಎದುರಿಸ ಬೇಕಾಯಿತು, ಅವರ ಕೋಣೆ ದುರಸ್ತಿ ಆಗುವ ತನಕ ಅವರ ಮಂಚ ಅಂಗಳದಲ್ಲಿ ಹಾಕಲಾಯಿತು, ಈಗ ಅಮ್ಮನನ್ನು ನೋಡಲು ಹೋಮ್ ನರ್ಸ್ ಇರಲಿಲ್ಲ, ದಿರೇಶ ಅವರ ಚಾಕರಿ ಮಾಡುತ್ತಿದ್ದ, ಆದರೆ ಕೇವಲ ಹೆಸರಿಗೆ ಮಾತ್ರ,  ಹೆಚ್ಚು ಕೆಲಸ ಚಿಕ್ಕಮ್ಮನವರಿಗೆ ಆಗುತ್ತಿತ್ತು ಹಾಗು ಈ ಬಗ್ಗೆ ಚಿಕ್ಕಮ್ಮನವರು ರಮೇಶನತ್ತಿರ ದಿರೇಶನ ದೂರು ಮಾಡುತ್ತಲೇ ಇದ್ದರು. 

ಸಮಯ ತನ್ನದೇ ವೇಗದಿಂದ ಓಡುತ್ತಿತ್ತು, ಸಮಯ  ದೊಡ್ಡ ವ್ಯಾಪಾರಿ, ಇದು ಪ್ರತಿ ಕ್ಷಣ ನಮ್ಮ ಜೀವನದೊಂದಿಗೆ ಆಡುತ್ತಿರುತ್ತದೆ, ಸಮಯ ಸಮಯದಲ್ಲಿ ನಮಗೆ ಸಿಗುವ ಮೋಸದಿಂದಲೇ ಹಾಗು ನಮ್ಮನ್ನು ಮುಗ್ಗರಿಸಿ ಬೀಳಿಸುವುದರಿಂದಲೇ  ಯಾರು ನಮ್ಮವರು, ಯಾರು ಬೇರಯವರು, ಯಾರು ಒಳ್ಳೆಯವರು, ಯಾರು ಕೆಟ್ಟವರೆಂದು  ತಿಳಿಯುತ್ತದೆ, ಸಮಯ ನಮಗೆ ಕಾಣುವುದಿಲ್ಲ ಆದರೆ ನಮಗೆ ಬಹಳಷ್ಟು ತೋರಿಸಿ ಕೊಡುತ್ತದೆ.  

(ಮುಂದುವರಿಯುತ್ತದೆ )

by ಹರೀಶ್ ಶೆಟ್ಟಿ, ಶಿರ್ವ 

ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...