Monday, April 8, 2013

ಮರಣ

ಮರಣ 
______
ದೂರ ತನಕ 
ನೀರವತೆ 
ಕೇವಲ 
ಕಣ್ಣೀರ ಕೋಲಾಹಲ 
-----
ನೆಲದ ಮೇಲೆ ಗಂಡನ ಶವ 
ನೂರಾರು ಹೂ ಮಾಲೆಗಳು 
ಅವಳಿಗೆ ಪುಟ್ಟ ಮಗು ಕೇಳುತ್ತಿದೆ 
"ಅಮ್ಮ , ಅಪ್ಪನಿಗೆ ಏನಾಯಿತು?"
-----
ಸತ್ತವನ ಆತ್ಮ
ಎಲ್ಲರನ್ನೂ ನೋಡುತ್ತಿದೆ
ತುಟಿಯಲಿ ಒಂದು ನಗು
ಶವ ಸಂಸ್ಕಾರಕ್ಕೆ ಬಂದಿದ
ಗೆಳೆಯರನ್ನು ಕಂಡು
---
ಆತ್ಮ
ನೋಡುತ್ತಿದೆ
ಹೀಗೆ ಎಲ್ಲರನ್ನೂ ನೋಡುತ್ತಿದ್ದಂತೆ
ಹೆಂಡತಿ ಮಗುವನ್ನು
ಕಂಡು ಮೌನವಾಯಿತು
ಕಣ್ಣೀರ ಹನಿಯಾಗಿ
ಹೆಂಡತಿಯ ಕಣ್ಣಿಂದ ಹರಿಯಿತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...