Thursday, November 10, 2011

ಸತ್ಯ ಸುಳ್ಳು

ಯಾರನ್ನು ನಂಬುವುದು
ಯಾರನ್ನು ದೂರುವುದು
ಸತ್ಯ ಇಂದು ಇಲ್ಲದಿದ್ದರೆ
ನಾಳೆ ಹೊರ ಬೀಳುವುದು

ಕಟ್ಟಿದ ಮನೆಯಲ್ಲಿ ಹೋಗಿ ನೀ ಇರುವೆ
ತನ್ನ ಮನೆಯೆಂದು ನೀ ಹೆಮ್ಮೆಯಿಂದ ಹೇಳುವೆ
ಒಂದಲ್ಲ ಒಂದು ದಿವಸ ಈ ಮನೆ ಬಿಳಲಿದೆ
ಹೊಸ ಕಟ್ಟಡ ನಿರ್ಮಾಣ ಆಗಲಿದೆ

ನೀನೇಕೆ ಬೇರೆಯವರ ಮುಖವನ್ನು ಹೊರುವೆ
ಅವರ ನಂಬಿಕೆಯನ್ನು ಕಳೆಯುವೆ
ಸುಳ್ಳು ಸತ್ಯವನ್ನು ನುಂಗಲಾರದು
ಸತ್ಯದ ಪತಾಕೆ ಎಂದಿಗೂ ಬೀಳಲಾರದು

ಮನುಜನಿಂದ ತಪ್ಪು ಆಗುವುದು ಸಹಜ
ತಪ್ಪು ಮಾಡಿಯೂ ವಾದಿಸುವವನು ನಿರ್ಲಜ
ಮುಳ್ಳ ಸೇತುವೆಯಲ್ಲಿ ಯಾರೂ ನಡೆಯಲಾರರು
ಕೊಳೆತ ರಕ್ತ ಹರಿದ ನಂತರ ಗಾಯ ಒಣಗಲಾರದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...