ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, November 20, 2011
ಯಾಕೆ ?
ತುತ್ತು ಅನ್ನಕ್ಕಾಗಿ ಪರದಾಡುವ ನನಗೆ
ಮುಪ್ಪು ಬರುವ ಚಿಂತೆ ಯಾಕೆ ?
ಸಮುದ್ರ ತಟದಲ್ಲಿ ನಿವಾಸ ಇದ್ದ ನನಗೆ
ಸುನಾಮಿ ಬರುವ ಹೆದರಿಕೆ ಯಾಕೆ ?
ತುಂಡು ಜೋಪಡಿಯಲ್ಲಿರುವ ನನಗೆ
ಭೂಕಂಪ ಆಗುವ ಭಯ ಯಾಕೆ ?
ಆಕಾಶದಂತ ಚಾವಣಿ ಇದ್ದ ನನಗೆ
ಮಳೆ ನೀರಿನ ಭೀತಿ ಯಾಕೆ ?
ಹರಿದ ಅಂಗಿ ಧರಿಸುವ ನನಗೆ
ಚಳಿಗಾಲದ ದಿಗಿಲು ಯಾಕೆ ?
ದಿನಾಲೂ ಸಾವಿರಾರು ಸರಿ ಸಾಯುವ ನನಗೆ
ಮೃತ್ಯುವಿನ ಗಾಬರಿ ಯಾಕೆ ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ನೀಲ ಗಗನದ ನೆರಳಲಿ
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
No comments:
Post a Comment