Sunday, November 20, 2011

ಯಾಕೆ ?

ತುತ್ತು ಅನ್ನಕ್ಕಾಗಿ ಪರದಾಡುವ ನನಗೆ
ಮುಪ್ಪು ಬರುವ ಚಿಂತೆ ಯಾಕೆ ?

ಸಮುದ್ರ ತಟದಲ್ಲಿ ನಿವಾಸ ಇದ್ದ ನನಗೆ
ಸುನಾಮಿ ಬರುವ ಹೆದರಿಕೆ ಯಾಕೆ ?

ತುಂಡು ಜೋಪಡಿಯಲ್ಲಿರುವ ನನಗೆ
ಭೂಕಂಪ ಆಗುವ ಭಯ ಯಾಕೆ ?

ಆಕಾಶದಂತ ಚಾವಣಿ ಇದ್ದ ನನಗೆ
ಮಳೆ ನೀರಿನ ಭೀತಿ ಯಾಕೆ ?

ಹರಿದ ಅಂಗಿ ಧರಿಸುವ ನನಗೆ
ಚಳಿಗಾಲದ ದಿಗಿಲು ಯಾಕೆ ?

ದಿನಾಲೂ ಸಾವಿರಾರು ಸರಿ ಸಾಯುವ ನನಗೆ
ಮೃತ್ಯುವಿನ ಗಾಬರಿ ಯಾಕೆ ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...