ಹೀಗೊಮ್ಮೆ ಒಂದು ದಿವಸ
ಚಂಚಲವಾಯಿತು ಮನ
ಕುಳಿತೆ ಬರೆಯಲು ಕವನ
ಪ್ರೀತಿಯ ಕಲ್ಪನೆಗಳ ಭ್ರಮಣ
ನಿಸರ್ಗ ಪ್ರೇಮದ ಉಲ್ಲೇಖನ
ಕಷ್ಟ ಸುಖಗಳ ವ್ಯವಹಾರಜ್ಞಾನ
ಜೋಡಿಸಿದೆ ಪದಗಳ ಕಣ ಕಣ
ನೆನಪಿಸಿದೆ ಆ ಎಲ್ಲ ಮಧುರ ಕ್ಷಣ
ಮಾಡಿದೆ ಭಾವನೆಗಳ ಸಂಯೋಜನ
ಮೂಡಿತು ಒಂದು ಸುಂದರ ಕವನ
ಆದರು ಮನಸ್ಸಲಿ ಅನುಮಾನ
ಹೇಗಿರಬಹುದು ಓದುಗರ ವಿಶ್ಲೇಷಣ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment