Sunday, July 31, 2011

ಋಣವೇ ಋಣ

ಋಣವೇ ಋಣ
ಋಣವೇ ಋಣ

ಜನ್ಮವ ನೀಡಿದ
ತಾಯಿಯ ಮಮತೆ,
ಪ್ರೀತಿ ,ವಾತ್ಸಲ್ಯಕ್ಕೆ
ಮಾಡಿದ ತ್ಯಾಗಕ್ಕೆ
ಸಾಕಿ ಬೆಳೆಸಿದಕ್ಕೆ  
ಆ ದೇವತೆಯ ಋಣ.....

ಶಾಲೆಯ  ದಿವಸವ
ಅನಂತ ವಿದ್ಯೆ ಪಡೆದು
ವಿದ್ಯ ದಾನ  ಮಾಡಿದ
ಆ ಗುರುಗಳ ಋಣ......  

ಬಂಧು ಬಳಗದವರು
ಕಷ್ಟದ ಸಮಯವ 
ಆಶ್ರಯವನ್ನು ನೀಡಿ
ಕಾಪಾಡಿದಕ್ಕೆ
ಅವರ ಉಪಕಾರದ ಋಣ.....

ಮಿತ್ರರ ಅಮೂಲ್ಯ ಸಂಗತ
ಆನಂದದ ಆ ಮಧುರ ಕ್ಷಣಗಳು
ನಿಸ್ವಾರ್ಥ ಮನದಿಂದ ನೀಡಿದ
ಸುಖ ಸಹಾಯದ ಋಣ.....

ತನ್ನ ತನು ಮನದಿಂದ
ಮದುವೆ ಆಗಿ ಬಂದ
ಹೆಂಡತಿಯ ಪ್ರೀತಿ, ಪ್ರೇಮ
ಸಂಸಾರದ ಕಷ್ಟ  ಸುಖ  
ಗುಣ ಅವಗುಣ ಸಹಿಸಿದ
ಆ ಅರ್ಧಾಂಗಿಯ ಋಣ ......

ಮುಗಿಯಲಾರದ ಈ ಋಣ
ಋಣದಿಂದ ಮುಕ್ತಿ ಇಲ್ಲವೇ?
ಋಣವೇ ಋಣ.....
ಋಣವೇ ಋಣ.......
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...