Saturday, July 16, 2011

ನಾನು ಕವಿಯಲ್ಲ

ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
ಬರೆಯಲೆಂದು ಬರೆದೆ
ಎರಡು ಮೂರು ಪದಗಳ ಗೀಚಿದೆ
ಅದ್ದನ್ನೇ ಕೆಲವು ಸಲ ಓದಿದೆ
ಹಲವು ಸಮಯ ವ್ಯರ್ಥವಾಯಿತು
ಶಬ್ದಗಳನ್ನು ನೆನೆಯುತ ಸಂಜೆಯಾಯಿತು
ಕಡೆಗೆ ಹೇಗಾದರೂ ಪೂರ್ಣವಾಯಿತು
ನಾನು ಬರೆದ  ಪದಗಳು
ವಾಹ್....ಗುಲಾಬಿ ಹೂವಿನ  ಎಸಳುಗಳು
ಸುಂದರ ಮನಮೋಹಕ
ನನ್ನನು ನಾನೇ ಹೊಗಳಿದೆ
ಬರೆದ ನಂತರ ಆತುರ
ಯಾರಿಗೋ ತೋರಿಸಬೇಕೆಂಬ ಕುತೂಹಲ
ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
 by ಹರೀಶ್ ಶೆಟ್ಟಿ , ಶಿರ್ವ

2 comments:

  1. ಕೆಲವು ಬದಲಾವಣೆಗಳು ನಮಗನ್ನಿಸಿದ್ದು..
    ಬದಲಾಗಬೇಕಾದ ಆ ಸಾಲುಗಳು...
    ------------------------------------------------
    ಎರಡು ಮೂರು ಅಕ್ಷರ ಗೀಚಿದೆ
    ಅನ್ನೋದು..
    ಎರಡು ಮೂರು ಪದಗಳ ಗೀಚಿದೆ..
    -------------------------------------------------
    ಕೆಲವು ಸಮಯ ವ್ಯರ್ಥವಾಯಿತು
    ಅನ್ನೋದು
    ಹಲವು ಸಮಯ ವ್ಯರ್ಥವಾಯಿತು
    ---------------------------------------------------
    ಯಾರಿಗೂ ತೋರಿಸಬೇಕೆಂಬ ಕುತೂಹಲ
    ಅನ್ನೋದು
    ಯಾರಿಗೋ ತೋರಿಸಬೇಕೆಂಬ ಕುತೂಹಲ
    ---------------------------------------------------
    ಅವರ ಪ್ರತಿಕ್ರಿಯೆ ಏನಿರಬಹುದೆಂಬ ಮನದಲ್ಲಿ ತಳಮಳ
    ಅನ್ನೋದು
    ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
    -------------------------------------------------------

    ಒಮ್ಮೆ ನೀವೇ ನೋಡಿ.. ತಪ್ಪಾಗಿ ತಿಳಿಯಬೇಡಿ...
    ಈ ರೀತಿ ಬದಲಾದರೆ ಓದಲು ಸೊಗಸಾಗಿರುತ್ತದೆ... :)

    ReplyDelete
  2. ತುಂಬಾ ಧನ್ಯವಾದಗಳು ಪ್ರಶಾಂತ್ ರವರೆ,ನೀವು ಹೇಳಿದಂತೆ ಬದಲಾವಣೆ ಮಾಡಿದ್ದೇನೆ :):):)

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...