Wednesday, October 2, 2013

ಬಾಪು



ಬಾಪು
ಇಂದು ನಿಮ್ಮ ಜನ್ಮ ದಿವಸದಂದು
ನಾನು ಮಾಡುವೆ ತಪ್ಪೊಪ್ಪು

ಅಹಿಂಸೆಯನ್ನು ಎಂದೂ ಪಾಲಿಸಲಿಲ್ಲ
ಒಂದೆರಡು ಸೊಳ್ಳೆಗಳನ್ನು ನಾನು ಕೊಂದಿರಬಹುದು
ಆದರೆ ಹಿಂಸೆಯಿಂದ ದೂರವಿರಲು ಯತ್ನಿಸಿದೆ
ಇದು ಸತ್ಯ

ಸದಾ ಸತ್ಯ ನುಡಿಯಿರಿ ಎಂದು ಹೇಳಿದಿರಿ
ನಿಮ್ಮಾಣೆ ಸತ್ಯವೇ ನುಡಿದೆ
ಆದರೆ ಸುಳ್ಳು ನುಡಿಯಲೇ ಇಲ್ಲವೆಂದು
ಸುಳ್ಳು ಹೇಳಲಾರೆ

ಕೆಟ್ಟದನ್ನು ನೋಡಬೇಡಿ ಎಂದಿರಿ
ಹೆಜ್ಜೆ ಹೆಜ್ಜೆಯಲಿ ಗಲೀಜು
ನೋಡದೆ ನಡೆದರೆ
ನನ್ನ ಅವಸ್ಥೆ ಏನು?
ಮತ್ತೆ ನಡೆಯುವುದು ಹೇಗೆ ?

ಕೆಟ್ಟದನ್ನು ಕೇಳಬೇಡಿ ಎಂದಿರಿ
ದಿನ ಹಾಳು ಸುದ್ಧಿಗಳ ಹಾವಳಿ
ಕಿವಿ ಎಷ್ಟೆಂದು ಮುಚ್ಚುವುದು
ಕೇಳದೆ ಇರಲು ಸಾಧ್ಯವೇ ?

ಕೆಟ್ಟದನ್ನು ನುಡಿಯಬೇಡಿ ಎಂದಿರಿ
ಸತ್ಯ ಹೇಳುವೆ
ನಾನು ನುಡಿಯುವಾಗ
ತುಂಬಾ ಎಚ್ಚರಿಕೆ ವಹಿಸುವೆ
ಆದರೂ ಇತರರಿಗೆ
ಕೆಲವೊಮ್ಮೆ ನಾನು ನುಡಿದದ್ದು ಹಿಡಿಸುವುದಿಲ್ಲ
ಏನು ಮಾಡಲಿ ಹೇಳಿ?

ಬಾಪು
ನೀವೆಲ್ಲಾ ಹೇಳಿದನ್ನು
ಈಗಿನ ಭ್ರಷ್ಟ ಸಮಾಜದಲ್ಲಿ
ಎಷ್ಟು ಪ್ರಯತ್ನಿಸಿದ್ದರು ಪಾಲಿಸಲು ಸಾಧ್ಯವೇ ?

ಬಾಪು ನೀವು ಆದರ್ಶ
ಆದರೆ ಕಾಲ ಬದಲಾಗಿದೆ
ಈಗ ನಿಮ್ಮಷ್ಟು ತಾಳ್ಮೆ ,ಧೈರ್ಯ ಯಾರಲ್ಲೂ ಇಲ್ಲ
ಮತ್ತೆ ಹುಟ್ಟಿ ಬನ್ನಿ ಬಾಪು

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...