Wednesday, October 16, 2013

ಕವಿ ಮನಸ್ಸು ಮರುಳು

ಪುನಃ 
ಮುಂಜಾನೆ ಆಯಿತು 
ಆದರೆ ಸುಳಿವಿಲ್ಲ 
ಎಲ್ಲೋಯಿತು 
ಮನಸ್ಸು 
ಕವಿ ಮರುಳು 

by ಹರೀಶ್ ಶೆಟ್ಟಿ,ಶಿರ್ವ

ಕವಿ 
ಮನಸ್ಸು ಮರುಳೆ 
ರಜೆಯಲ್ಲೂ 
ನೀನು
ಸತತ 
ಕಾರ್ಯನಿರತ 
by ಹರೀಶ್ ಶೆಟ್ಟಿ,ಶಿರ್ವ

ನದಿಯ ಧಾರೆಯಂತೆ 
ಈ ಮನಸ್ಸಿನ 
ಭಾವಗಳು, 
ತಡೆಹಿಡಿಯುವುದು 
ಹೇಗೆ? 
ಹರಿಯ ಬಿಡುವೆ 
by ಹರೀಶ್ ಶೆಟ್ಟಿ,ಶಿರ್ವ

ಕವಿ ಮನಸ್ಸು ಮರುಳೆ 
ನಿನ್ನ ಆಪ್ತ ವಿಷಯ 
ಈ ಉಗಮ ಸೂರ್ಯನ 
ಒಟ್ಟಿಗೆ 
ನಿನ್ನ ದಿನಾರಂಭ 
ಹಾಗು 
ಚಂದ್ರ ತಾರೆಯರ 
ಜೊತೆ ಆಡಿದ 
ನಂತರ 
ನಿನ್ನ ಭಾವಗಳಿಗೆ ಸ್ವಲ್ಪ ವಿಶ್ರಾಮ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...