Wednesday, April 18, 2012

ಅಸೂಯೆ

ಬಣ್ಣ ಬಣ್ಣದ ಲೋಕವ ಕಂಡು
ಕಪ್ಪು ಮಸಿಯನ್ನು ಬಿಸಾಕಿ
ತನ್ನದೇ ಮುಖ
ಕಪ್ಪು  ಮಾಡಿ
ಏನು ಪ್ರಯೋಜನ !

ಪರರ ಅಲಂಕಾರವನ್ನು ಕಂಡು
ಹೊಟ್ಟೆಕಿಚ್ಚು ಪಟ್ಟು
ತನ್ನ ಹೃದಯದ ಅಗ್ನಿ ಜ್ವಾಲೆಯಲ್ಲಿ
ಸ್ವತ ಸುಟ್ಟು
ಏನು ಪ್ರಯೋಜನ !

ಪರರ  ಜ್ಞಾನವನ್ನು
ಕೀಳ ದೃಷ್ಟಿಯಿಂದ ನೋಡಿ 
ಹೃದಯ ಬೇಗುದಿ ಹೊರ ತಂದು
ತನ್ನ ಮಾನ ಕಳೆದು
ಏನು ಪ್ರಯೋಜನ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...