Tuesday, April 3, 2012

ಇನ್ನೊಂದು ಜೀವನ

ನನ್ನ ಭಾವನೆಯ ಒಸರಿಂದಾಗಿದೆ
ನನ್ನ ಕಾವ್ಯ
ಭೂಮಿಯಲಿ ವಸಂತದ ಹಸಿರು!

ನನ್ನ ಕಲ್ಪನೆಯ ಓಟದಿಂದಾಗಿದೆ
ನನ್ನ ರಚನೆಯ
ಕಣಕಣದಲ್ಲಿ ಹೊಸತನದ ಉಸಿರು!

ನನ್ನ ಪದಗಳ ಚೆಂದದಿಂದಾಗಿದೆ
ನನ್ನ ಕವಿತೆಯಲಿ
ನನ್ನದೇ ಶೈಲಿಯ ನೆರಳು!

ನನ್ನ ಬರವಣಿಗೆಯ ಆಸಕ್ತಿಯಿಂದಾಗಿದೆ
ನನ್ನ ಈ ಇನ್ನೊಂದು ಜೀವನ
ಸಾಹಿತ್ಯ ಲೋಕದಲಿ ಸಣ್ಣ ಹರಳು!
by ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...