Sunday, November 18, 2012

ಮಾನನೀಯ ಬಾಳ ಸಾಹೇಬ್ ಠಾಕ್ರೆ ಅವರ ಮೇಲೊಂದು ನನ್ನ ಕವಿತೆಯ ಶ್ರದ್ದಾಂಜಲಿ

ಮಾನನೀಯ ಬಾಳ ಸಾಹೇಬ್ ಠಾಕ್ರೆ ಅವರ ಮೇಲೊಂದು ನನ್ನ ಕವಿತೆಯ ಶ್ರದ್ದಾಂಜಲಿ
_______________
ಸಾಲದು ನಿನ್ನ ಈ ಒಂದು ಜನ್ಮ
ಇನ್ನೂ ಮಾಡಲಿದೆ
ನಿನಗೆ ಅನೇಕ ಕಾರ್ಯಗಳು !

ಸಾಮಾನ್ಯನಲ್ಲ ನೀನು
ನಿನ್ನಂತ ನೀನೊಬ್ಬನೇ
ನೀನು ಒಬ್ಬನೇ ಒಂದು ಸೇನೆ !

ಭಯ ಇಲ್ಲದೆ ಸಾಗಿದೆ ನೀನು
ರಾಷ್ಟ್ರ ಪ್ರೇಮ ಅದ್ಭುತ ನಿನ್ನ
ಕಾಪಾಡಿದೆ ನೀ ತಂದೆ ಆಗಿ ಎಲ್ಲರನ್ನ !

ಯಾರೂ ನಿನ್ನ ಹಾಗೆ ಇಲ್ಲ
ಭಾಷಾ ಪ್ರೇಮ ನಿನ್ನ ಹಾಗೆ ಯಾರಲ್ಲೂ ಇಲ್ಲ
ನಿನಗೆ ಯಾವುದೇ ಹುದ್ದೆ ಬೇಕೆಂದು ಆಸೆ ಇಲ್ಲ ! 

ಅನನ್ಯ ನೀನೊಬ್ಬ ವ್ಯಂಗ ಚಿತ್ರಕಾರ
ನಿನ್ನ ಪ್ರತಾಪದಿಂದ ಉಳಿದವರು ಯಾರೂ
ಅತ್ಮಿಯತೆಯಿಂದ ಪ್ರೀತಿಸುತ್ತಾರೆ ನಿನಗೆ ಎಲ್ಲರೂ !

ನಿನ್ನ ನೇರ ಮಾತನ್ನು
ನಿನ್ನ ಅವಗುಣ ಎಂದು ಭಾವಿಸುತ್ತಿದ್ದರು ಅನೇಕರೂ
ಇಂದು ಅವರೇ ನಿನ್ನ ಈ ಸ್ವಭಾವನ್ನು ಹೊಗಳುವರು !

ಹಕ್ಕುಗಳಿಗಾಗಿ ಹೋರಾಟ ಇತ್ತು ನಿನ್ನ
ರಾಷ್ಟ್ರಕ್ಕಾಗಿ ಸಮರ್ಪಿಸಿದೆ ಈ ಬದುಕು ನಿನ್ನ
ಪಡೆಯಲೆ ಬೇಕು ನಿನಗೆ ಇನ್ನೊಂದು ಜೀವನ !
by ಹರೀಶ್ ಶೆಟ್ಟಿ, ಶಿರ್ವ
 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...