ಮೌನವೆ ಒಳಿತು
ಸಂಭಾಷಣೆಯ ಸಂತೆಯಲಿ
ಮಾತುಗಳ ಕೊರತೆ ಉಂಟಾದಾಗ !
ಖಾಲಿ ಹಾಳೆಯೆ ಒಳಿತು
ಭಾವಗಳ ಮಂಥನದಲಿ
ಪದಗಳು ತೇಲಿ ಹೋದಾಗ !
ಅರ್ಥೈಸುವುದೆ ಒಳಿತು
ಮುಖವ ಓದಿ
ಕಣ್ಣೀರು ತುಂಬಿದ ಕಣ್ಣುಗಳು ಯಾಚಿಸುವಾಗ !
ಕ್ಷಮಿಸುವುದೆ ಒಳಿತು
ಪ್ರಮಾದ ತಿಳಿದು
ಪಶ್ಚಾತಾಪದ ಅಗ್ನಿಯಲಿ ಉರಿಯುವಾಗ !
by ಹರೀಶ್ ಶೆಟ್ಟಿ, ಶಿರ್ವ
ಹಲವು ದಿನಗಳಿಂದ ನಿಮ್ಮ ಬ್ಲಾಗ್ ನೋಡುತ್ತಿದ್ದೆ. ಒಂದೇ ಗುಕ್ಕಿಗೆ ಸೆಳೆದುಕೊಂಡ ಈ ನುಡಿಗಟ್ಟುಗಳಿಗೆ ಓಡಿ ಬಂದುಬಿಟ್ಟೆ. ಮುಂದೆಯೂ ಇಂತಹದ್ದನ್ನೇ ಆಶಿಸುತ್ತೇನೆ. ಮನಸ್ಸಿಗೆ ಹಾಗೇ ಕಚ್ಚಿ ಕುಳಿತುಕೊಳ್ಳುವ ಭಾವುಕ ಪದಗಳು. ತುಂಬಾ ಖುಷಿ ಆಯಿತು. ಒಳ್ಳೆಯದಾಗಲಿ.
ReplyDeleteಪ್ರತಿ ಚರಣವನ್ನೂ ಗೋಡೆ ಬರಹವಾಗಿಸುವ ಹಾಗೆ ತಿದ್ದುವಂತಿದೆ.
ReplyDeleteತುಂಬಾ ಧನ್ಯವಾದಗಳು ರವಿ ಸರ್, ಬದರಿ ಸರ್ ....
ReplyDelete