Tuesday, August 2, 2011

ನದಿಯ ಉದ್ದೇಶ

ಕೇಳಿದೆ ಹರಿಯುವ ನದಿಗೆ 
"ಸದಾ ಹರಿಯುವ ನೀನು,
ಕಲ್ಲನ್ನೂ ತುಂಡು ಮಾಡುವಿ
ಎಂಥ ನಿನ್ನ ಶಕ್ತಿ, 
ಏನು ನಿನ್ನ ಉದ್ದೇಶ "
ನದಿ ಹೇಳಿತು ನಕ್ಕು
"ಹರಿಯ ಬಿಡು ನನ್ನನ್ನು,
ಇದೇ ನನ್ನ  ಶಕ್ತಿ, 
ಇದೇ ನನ್ನ ಸ್ಥಿರತೆ,
ನನ್ನದೊಂದೇ ಉದ್ದೇಶ
ಪ್ರಯತ್ನಿಸುವುದನ್ನು ಬಿಡಬಾರದು 
ಬಿಡಬಾರದು ಯಾವಾಗಲು ಆಸೆ"
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...