ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Sunday, August 28, 2011
ವೀಸಾ ಬಂದಿತು
ವೀಸಾ ಬಂದಿತು
ಕನಸು ವಾಸ್ತವ ಹಂತಕ್ಕೆ ಸೇರಿತು
ಮನದಲಿ ಒಂದು ಭಯ ಮೂಡಿತು
ದೂರ ಹೋಗುವೆ ಇನ್ನೂ ಎಂದು ಜೀವ ನಡುಗಿತು
ಎಲ್ಲರಿಂದ ಬೇಟಿ ಮಾಡಿ ಆಯಿತು
ಔತಣ ,ಉಪಚಾರ ಆಯಿತು
ಬ್ಯಾಗ್ ಎಲ್ಲ ತುಂಬಿಸಿ ಆಯಿತು
ಹೋಗುವ ಸಮಯ ಹತ್ತಿರವಾಯಿತು
ಅವಳ ಮುಖ ಬಾಡಿತು
ಹತಾಶೆಯಿಂದ ಕೂಡಿತು
ಹೃದಯ ಅವಳ ಅಳುತ್ತಿತ್ತು
ಕಣ್ಣಲಿ ನೀರು ತುಂಬಿತು
ಮಗ ಅಲ್ಲೇ ಕೂತಿದ್ದ
ಆಟ ಓಟಗಳ ಮರೆತಿದ್ದ
ಕಣ್ಣಿರನ್ನು ಅವಿತಿದ್ದ
ನನ್ನನ್ನೇ ನೋಡುತ್ತಿದ್ದ
ಆ ಕಡೆ ಕನಸಿನ ಸಾಗರ
ಈ ಕಡೆ ಬಿಟ್ಟು ಹೋಗುತ್ತಿದ್ದೆ ಸಂಸಾರ
ಕಾಣುವೆನೇ ಇನ್ನು ಮನೆಯ ದ್ವಾರ ?
ಹೆಚ್ಚಾಯಿತು ಕನಸಿಗಿಂತ ಕಣ್ಣಿರ ಭಾರ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
ಕೋಗಿಲೆ ಸ್ವರ
ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ by ಹರೀಶ್ ಶೆಟ್ಟಿ, ಶಿರ್ವ
ಸಿದ್ಧಿದಾತ್ರಿ
No comments:
Post a Comment