Saturday, August 6, 2011

ದೀಪದ ಸಂದೇಶ

ಕೇಳಿದೆ ನಾ ದೀಪವ
"ಸ್ವತಃ ಕತ್ತಲೆ ಆವರಿಸಿ,
ತನ್ನನ್ನು ಉರಿಸಿ,
ಬೇರೆಯವರಿಗೆ ಬೆಳಕು ನೀಡುತಿ,
ಏಕೆ ನಿನಗೆ ಈ ಕಷ್ಟ ?"
ದೀಪ ಹೇಳಿತು ನಕ್ಕು
" ನನಗಿಲ್ಲ ಏನೂ ಕಷ್ಟ
ನನಗೆ ಇದೇ ಇಷ್ಟ
ನನ್ನಿಂದ ಸಂದೇಶ ಸ್ಪಷ್ಟ
ನೀವೂ ನನ್ನಂತೆ ಜೀವನ ಸಾಗಿಸಿ 
ನನ್ನಂತೆ  ಉರಿದು ಬೇರೆಯವರ ಬಾಳನ್ನು ಬೆಳಗಿಸಿ "
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...