Saturday, December 29, 2012

ಇಂದು ಒಂದು ಜೀವ ಸತ್ತಿದೆ

ಇಂದು ಒಂದು ಜೀವ ಸತ್ತಿದೆ 
ಮಾನವ ರೂಪ ರಕ್ಕಸರ ಬಲಿಯಾಗಿ
ಮಾನವತೆ ಅಳುತ್ತಿದೆ!

ಈಗ ತಾನೇ ಜೀವನ ಆರಂಭವಾಗಿತ್ತು
ಯೌವನದ ಮೊಗ್ಗು ಅರಳಲಿತ್ತು
ಹೂವೊಂದು ಅರಳುವ ಮುನ್ನ ಬಾಡಿದೆ !

ಹರಿಯುವ ನದಿಯಂತೆ ಇತ್ತು ಜೀವನ
ಸುಂದರ ಮನೋಹರ
ಅತ್ಯಾಚಾರದ ಪ್ರಕೋಪದಿಂದ ಬತ್ತಿ ಹೋಗಿದೆ!

ಸತ್ತಿದೆ ಒಂದು ಸುಂದರ ಕನಸು
ಸತ್ತಿದೆ ಬಡ ಅಮ್ಮ ಅಪ್ಪನ ಕೂಸು
ಅವರ ನೋವು ತಾಳಲಾಗದೆ ಕಣ್ಣೀರು ಸಹ ಸ್ತಬ್ಧವಾಗಿದೆ !

ಈ ಸಾವು ಕೇವಲ ಆ ಜೀವದ ಅಲ್ಲ
ಇದು ನಮ್ಮ ಸಮಾಜದ ಶವ
ಇಲ್ಲಿ ಪ್ರತಿ ಘಟನೆಯೂ ಇಂದಿನ ರಾಜಕೀಯವಾಗಿದೆ !
by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...