Tuesday, February 4, 2020

ವೃದ್ಧಾಶ್ರಮ ೫


ರಮೇಶ ಕುಳಿತ್ತಲ್ಲಿಯೇ ಅವನ ಕಣ್ಣ ಮುಂದೆ ಗತಕಾಲದಲ್ಲಿ ಅವನ ಜೀವನದಲ್ಲಿ ನಡೆದ ಎಲ್ಲ ಘಟನೆಗಳು ಅವನ ಸುತ್ತಮುತ್ತ ತಿರುಗಲಾರಂಭಿಸಿತು.

ಬಾಲ್ಯದ ಜೀವನ, ಅಣ್ಣ ಸೋಮೇಶ ಹಾಗು ದಿರೇಶನ ಯೌವನದಲ್ಲಿಯೇ ಕೆಟ್ಟ ಚಟ ಹಾಗು ಕೆಟ್ಟ ಸಂಗಡಕ್ಕೆ ಶರಣಾದದ್ದು, ಅವರ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸೋಮೇಶನ ಅಸಡ್ಡೆ ವ್ಯವಹಾರ,  ಅವರ ಬೇಜವಾಬ್ದಾರಿತನ, ಮನೆಯ ಪ್ರತಿ ಅವರ ನಿರಾಸಕ್ತಿ, ತಂದೆ ಅವರ ಮೇಲೆ ವಿಶ್ವಾಸ ಇಟ್ಟು ತನ್ನ ಎಲ್ಲ ಉಳಿತಾಯ ಅವರಿಗೆ ನೀಡಿದ್ದು, ಅವರ ವ್ಯಾಪಾರದಲ್ಲಿ ನಷ್ಟ, ಅವರ ಮದುವೆ, ಸೋಮೇಶನ ಮಗ ಅರ್ಜುನನ ಜನ್ಮ,  ದಿರೇಶನ ಮಕ್ಕಳ ಜನ್ಮ, ಮದುವೆ  ಆದ ನಂತರ ಸಹ ಅವರ ಬೇಜವಾಬ್ದಾರಿತನ, ಕಷ್ಟ ಸಮಯದಲ್ಲಿ ಮನೆಯ ಎಲ್ಲ ಭಾರ ಅವನ ಮೇಲೆ ಬಿದ್ದದ್ದು,  ತಂಗಿ ಸುನೀತಾಳ ಅಂತರ ಜಾತಿ ವಿವಾಹ, ಅವನ  ಪ್ರಥಮ ವಿದೇಶ ಪ್ರವಾಸ, ಅವನ ಸುಮಾ ಜೊತೆ ಮದುವೆ,  ತಂದೆಯ  ಮೃತ್ಯು, ವಿದೇಶದ ಕೆಲಸ ಕಳೆದು ಭಾರತದಲ್ಲಿ ಕೆಲವು ಸಮಯ ಕೆಲಸಕ್ಕಾಗಿ ಅಲೆದ್ದದ್ದು, ಅವನ ಮಗ ಅತೀಶನ ಜನ್ಮ, ಸೋಮೇಶನ ಹಾಗು ಅವನ ಹೆಂಡತಿಯ ಆಕಸ್ಮಾತ್ ಮರಣ, ಅಮ್ಮನ ಅರ್ಜುನನ ಪ್ರತಿ ಅಪಾರ ಪ್ರೀತಿ, ಮುಂಬೈಯ ಮನೆ ಮಾರಿದ ನಂತರ ಅಮ್ಮ ಅರ್ಜುನನ ಜೊತೆ ಕಾಯಂ ಊರಿಗೆ ಹೋದದ್ದು, ಮುಂಬೈಯಲ್ಲಿ ಅವನು ನಾಲ್ಕೈದು ವರುಷ ಜೀವನದಲ್ಲಿ ಅಪಾರ ಕಷ್ಟಗಳನ್ನು ಎದುರಿಸಿ ಪುನಃ ಅವನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದು ಹಾಗು ಜೀವನದಲ್ಲಿ ಒದಗಿದ ಎಲ್ಲ ಕಷ್ಟ ಸುಖಗಳು ಚಲನಚಿತ್ರದ ಹಾಗೆ ರಮೇಶನ ಕಣ್ಣ ಮುಂದೆ ಹಾದು ಹೋಯಿತು.

"ಕೇಳಿತಾ, ನಿಮ್ಮನ್ನು ಅಮ್ಮ ಕರೆಯುತ್ತಿದ್ದಾರೆ" ಪತ್ನಿ ಸುಮಾಳ ಸ್ವರ ಕೇಳಿ ರಮೇಶನ ಧ್ಯಾನ ಮುರಿಯಿತು.

ರಮೇಶ ಎದ್ದು ಅಮ್ಮನ ಕೋಣೆಗೆ ಹೋದ.

ರಮೇಶ "ಏನಮ್ಮ, ಟಾಯ್ಲೆಟ್ ಹೋಗಲಿಕ್ಕಿದೆಯಾ"?

ಅಮ್ಮ "ಇಲ್ಲ, ನೀನು ಊರಿನ ಟಿಕೆಟ್ ತೆಗೆದಿಯ"?

ರಮೇಶ " ಇಲ್ಲಮ್ಮ, ನಾನು ಆಶಾ ಚಿಕ್ಕಮ್ಮನಿಗೆ ಫೋನ್ ಮಾಡುತ್ತೇನೆ"?

ಅಮ್ಮ ಕೋಪದಿಂದ "ಫೋನ್ ಏನು ಮಾಡುವುದು, ನೀನು ಟಿಕೆಟ್ ತೆಗೆ, ನನಗೆ ಅರ್ಜುನನ ನೆನಪು ಬರುತ್ತಾ ಇದೆ, ಪಾಪ ಹೇಗಿದ್ದಾನೆ ಯಾರಿಗೊತ್ತು".

ರಮೇಶ "ನೀವು ಅರ್ಜುನನ ಟೆನ್ಶನ್ ತೆಕೊಳ್ಳುವುದು ಬೇಡ, ಅವನನ್ನು ಆಶಾ ಚಿಕ್ಕಮ್ಮ ಸ್ವಂತ ಮಗನ ಹಾಗೆ ನೋಡುತ್ತಿದ್ದಾರೆ".

ಎಂಟು ವರ್ಷದ ಅರ್ಜುನ ರಮೇಶನ ತೀರಿ ಹೋದ ಅಣ್ಣ ಸೋಮೇಶನ ಮಗ, ಸೋಮೇಶ ಹಾಗು ಅವನ ಹೆಂಡತಿ ತೀರಿ ಹೋದ ನಂತರ ಅವನನ್ನು ಅಮ್ಮನೇ ನೋಡುತ್ತಿದ್ದರು, ಅಮ್ಮನ ಅವನಲ್ಲಿ  ಜೀವ ಅಡಗಿತ್ತು, ಅರ್ಜುನನನ್ನು ಊರಿನ ಮನೆಯಲ್ಲಿ ಎಲ್ಲರು ಪ್ರೀತಿಸುತ್ತಿದ್ದರು, ಅಮ್ಮನಿಗೆ ಪಕ್ಷವಾತ ಆದ ನಂತರ ಆಶಾ ಚಿಕ್ಕಮ್ಮ ಅಂತು ಅವನನ್ನು ಸ್ವಂತ ಮಗನ ಹಾಗೆ ನೋಡುತ್ತಿದ್ದರು, ಅರ್ಜುನನ ಅಪ್ಪ ಅಮ್ಮ ತೀರಿ ಹೋದ ನಂತರ ಅರ್ಜುನನ ಎಲ್ಲ ಖರ್ಚಿನ ಜವಾಬ್ಧಾರಿ ರಮೇಶ ವಹಿಸಿಕೊಂಡಿದ್ದ ಹಾಗು ರಮೇಶ ಅವನನ್ನು ತುಂಬಾ ಪ್ರೀತಿಯಿಂದ ನೋಡುಕೊಳ್ಳುತ್ತಿದ್ದ, ಅವನು ಊರಲ್ಲಿಯೇ ಶಾಲೆಗೆ ಹೋಗುತ್ತಿದ್ದ.

ಅವರ ಸಂಭಾಷಣೆಯ ಮಧ್ಯೆ ಸುಮಾ "ಅಮ್ಮ ಅರ್ಜುನ ಅಲ್ಲಿ ಮನೆಯಲ್ಲಿ ಆರಾಮದಲ್ಲಿದ್ದಾನೆ, ನೀವು ಸುಮ್ಮನೆ ಚಿಂತಿಸುತ್ತಿದ್ದೀರಿ, ಅಲ್ಲಿ ಅವನನ್ನು ಎಲ್ಲ ತುಂಬಾ ಪ್ರೀತಿಸುತ್ತಾರೆ". 

ಇದೆಲ್ಲ ಅಮ್ಮನಿಗೆ ತಿಳಿದಿತ್ತು, ಆದರೂ ಅರ್ಜುನನ ಪ್ರತಿ ಅವರ ಅಜ್ಜಿ ಅಕ್ಕರೆ ಅವರಲ್ಲಿ ಚಿಂತೆ ಹುಟ್ಟಿಸುತ್ತಿತ್ತು. 

ಸುಮಾಳ ಮಾತು ಕೇಳಿ ಅಮ್ಮ "ಅದೆಲ್ಲ ಇರಲಿ, ನೀವು  ನನ್ನನ್ನು ಊರಿಗೆ ಕರೆದುಕೊಂಡೋಗಿ".

"ಆಯಿತು.....  ಇವರು ಟಿಕೆಟ್ ಮಾಡುತ್ತಾರೆ, ಆದರೆ ಮೊದಲು ನಿಮ್ಮ ಫಿಸಿಯೋಥೆರಪಿ ಚಿಕೆತ್ಸೆ ಮಾಡುತ್ತಿದ್ದ ಡಾಕ್ಟರ್ ಹತ್ತಿರ ಕೇಳಬೇಕಲ್ಲ, ಸುನೀತಕ್ಕ ಡಾಕ್ಟರ್ ನ ಫೋನ್ ನಂಬರ್ ಕೊಟ್ಟಿದ್ದರು,   ನಾನು ಡಾಕ್ಟರ್ ಗೆ ಫೋನ್ ಮಾಡಿ ನಾಳೆಯ ಅಪ್ಪೋಯಿಂಟ್ಮೆಂಟ್ ತೆಗೆದುಕೊಂಡಿದ್ದೇನೆ, ನಾಳೆ ಅವರು ನಿಮ್ಮ ಟ್ರೀಟ್ಮೆಂಟ್ ಮಾಡಲು ಬಂದಾಗ ಅವರಿಗೆ ಕೇಳೋಣ ನೀವು ಪ್ರಯಾಣ ಮಾಡಬಹುದ ಎಂದು, ಅವರು ಮಾಡಬಹುದು ಎಂದು  ಹೇಳಿದ್ದಾರೆ ಇವರು ಟಿಕೆಟ್ ಮಾಡುತ್ತಾರೆ, ಈಗ ನೀವು ಆರಾಮದಿಂದ ಮಲಗಿರಿ" ಎಂದು ಹೇಳಿ  ಸುಮಾ ಅವರ ಹಾಸಿಗೆ ಸರಿ ಮಾಡಿ ಅವರನ್ನು ನಿಧಾನವಾಗಿ ಮಲಗಿಸಿದಳು.

ಹೊರಗೆ ಬಂದು ರಮೇಶ  ಸುಮಾಳಿಗೆ "ಏನು ಮಾಡುವುದು, ಅಮ್ಮ ಹಠ ಮಾಡುತ್ತಿದ್ದಾರೆ".

ಸುಮಾ "ನಾಳೆ ಡಾಕ್ಟರ್ ಹತ್ತಿರ ಕೇಳಿ  ನಂತರ  ಊರಿಗೆ ಫೋನ್ ಮಾಡಿ, ಹೇಗೋ  ಬರುವ ವಾರ ಊರಲ್ಲಿ ದೇವರ ಕೆಲಸ ಇದೆ, ಅದಕ್ಕೆ ಎಲ್ಲ ಕುಟುಂಬ ಬರುತ್ತಾರೆ, ನಾವು ಸಹ ಅಮ್ಮನನ್ನು ಕರೆದುಕೊಂಡು ಹೋಗುವ".

ರಮೇಶ "ಓ ಕೆ " ಎಂದು ನಿಟ್ಟುಸಿರು ಬಿಟ್ಟ, ಆದರೆ ಅವನ ಮನಸ್ಸು ಈಗಲೂ ಕಳವಳದಲ್ಲಿತ್ತು. 

(ಮುಂದುವರಿಯುತ್ತದೆ)

by  ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...