Monday, February 24, 2020

ವೃದ್ಧಾಶ್ರಮ ೧೭


ಮಾರನೇ ದಿನ ಬೆಳಿಗ್ಗೆ ಮನೆಯಲ್ಲಿ ಒಟ್ಟಿಗೆ ಎಲ್ಲರು ಕೂತು ಚಹಾ ಉಪಹಾರ ಮಾಡುವಾಗ  ಮನೆಗೆ ದಿರೇಶನನ್ನು ಕೇಳಿ ಒಬ್ಬ ವಯಸ್ಕ ಮನುಷ್ಯ ಒಂದು ಚಿಕ್ಕ ಹುಡುಗಿಯ ಜತೆ ಬಂದ, ಹುಡುಗಿಗೆ  ಸಾಧಾರಣ ೧೬, ೧೭ ವಯಸ್ಸಾಗಿರಬೇಕು ಅವಳೊಟ್ಟಿಗೆ ಒಂದು ಹ್ಯಾಂಡ್ ಬ್ಯಾಗ್ ಸಹ ಇತ್ತು, ಎಲ್ಲರಿಗೆ ಅಂದಾಜಾಯಿತು ಇದು ಅಮ್ಮಗೋಸ್ಕರ ಕೆಲಸಕ್ಕೆ ಹೇಳಿದ ಹುಡುಗಿಯೇ ಇರಬೇಕೆಂದು, ದಿರೇಶ ಅವರನ್ನು ನೋಡಿ ಅವರಿಗೆ ಒಳಗೆ ಬರಲು ಹೇಳಿ ರಮೇಶನನ್ನು ಕರೆದು "ರಮೇಶ ಇವರೇ, ಈ ಹುಡುಗಿಯೇ ಅಮ್ಮಗೋಸ್ಕರ ಹೇಳಿದ್ದು".

ರಮೇಶ ಅವಳನ್ನು ನೋಡಿ "ಆದರೆ ಇವಳು ತೀರಾ ಚಿಕ್ಕ ಹುಡುಗಿ ಇವಳಿಂದ ಅಮ್ಮನ ಕೆಲಸ ಆಗಬಹುದ"?

ಹುಡುಗಿಯ ತಂದೆ "ಚಿಕ್ಕ ಏನಿಲ್ಲ ಸಾರ್, ೧೯ ವರುಷ ಆಗಿದೆ ಇವಳಿಗೆ, ಮೈ ಬೆಳೆಯಲಿಲ್ಲ ಅಷ್ಟೇ  ಎಲ್ಲ ಕೆಲಸ ಮಾಡುತ್ತಾಳೆ ಸಾರ್,  ಈ ತರಹದ ಕೆಲಸ ಮಾಡಿದ್ದಾಳೆ, ನಿಮಗೆ ಏನೂ ತೊಂದರೆ ಆಗದು".

ಅದಕ್ಕೆ ಆಶಾ ಚಿಕ್ಕಮ "ನೀವು ನಮ್ಮ ಅಕ್ಕನವರನ್ನು ನೋಡಿದ್ದೀರಾ, ಅವರನ್ನು ಎತ್ತಲು ಎರಡು ಮೂರು ಜನ ಬೇಕು, ಇವಳಿಂದ ಅದೆಲ್ಲ ಹೇಗೆ ಸಾಧ್ಯ".

ಆಗ ಆ ಹುಡುಗಿ "ಇಲ್ಲಕ್ಕ, ನನಗೆ ಗೊತ್ತು ಕೆಲಸ,ನಾನು ಮಾಡಿದ್ದೇನೆ ವಯಸ್ಕರ ಸೇವೆ ಜೊತೆಗೆ ನಾನು ಮನೆಯ ಕೆಲಸದಲ್ಲೂ ನಿಮ್ಮ ಸಹಾಯ  ಮಾಡುತ್ತೇನೆ" ಎಂದಳು.

ಆಶಾ ಚಿಕ್ಕಮ್ಮ "ನಂತರ ನೀನು ಅದಾಗುದಿಲ್ಲ, ಇದಾಗುದಿಲ್ಲ ಎಂದು ಹೇಳ ಬಾರದು".

ಹುಡುಗಿಯ ತಂದೆ "ಇಲ್ಲಮ್ಮ, ನೀವು ಏನೂ ಚಿಂತೆ ಮಾಡಬೇಡಿ, ಇವಳೆಲ್ಲ ಮಾಡುತ್ತಾಳೆ ಮತ್ತೆ ಇಲ್ಲೆ ಇರುತ್ತಾಳೆ, ಅವಳ ಬಟ್ಟೆ ಎಲ್ಲ ತಂದಿದ್ದೇನೆ, ಕೇವಲ ತಿಂಗಳಿಗೊಮ್ಮೆ ಮನೆಗೆ ಹೋಗಿ ಬರುತ್ತಾಳೆ ಅಷ್ಟೇ".

ರಮೇಶ ಎಲ್ಲರೊಟ್ಟಿಗೆ ವಿಚಾರ ವಿಮರ್ಶೆ ಮಾಡಿದ ನಂತರ ಆ ಹುಡಿಗಿಯನ್ನು ಕೆಲಸಕ್ಕೆ ಇಡಬೇಕೆಂದು ನಿರ್ಧಾರ ಆಯಿತು.

ರಮೇಶ ದಿರೇಶನಿಗೆ "ಸಂಬಳ ಎಷ್ಟು ಎಂಟು ಸಾವಿರನೇನ"?

ದಿರೇಶ "ಹೌದು, ಇವರು ಕಡಿಮೆ ಆಗಲ್ಲ ಅಂತ ಹೇಳಿದ್ದಾರೆ"

ಹುಡುಗಿಯ ತಂದೆ " ಸಾರ್, ಇದು ಕಡಿಮೇನೆ, ಎಲ್ಲೂ ಕೇಳಿ ನೋಡಿ"

ರಮೇಶ "ಓ ಕೆ, ಹಾಗಾದರೆ, ಬ್ಯಾಗ್ ತಂದಿದ್ದಿ ತಾನೇ, ಹೋಗು ಒಳಗೆ "ಎಂದು ಹುಡುಗಿಗೆ ಅಮ್ಮನ ಕೋಣೆ ತೋರಿಸಿದ. 

ಹುಡುಗಿಯ ತಂದೆ "ಸಾರ್, ನನ್ನ ಒಂದು ಕಂಡೀಶನ್ ಸಾರ್, ಸಂಬಳ ವಾರೊಕ್ಕೊಮ್ಮೆ ಕೊಡಬೇಕೆಂದು, ಮತ್ತೆ ಈಗ ಸ್ವಲ್ಪ  ಅಡ್ವಾನ್ಸ್ ಸಿಕ್ಕಿದರೆ ಒಳ್ಳೆಯದಿತ್ತು"

ಇದನ್ನು ಕೇಳಿ ರಮೇಶ ದಿರೇಶನ ಮುಖ ನೋಡಿದ.

ದಿರೇಶ ಹುಡುಗಿಯ ತಂದೆಗೆ "ಏನು ನೀವು ಇದನೆಲ್ಲ ಮೊದಲು ಹೇಳಬೇಕಲ್ಲ, ರಮೇಶ ಕೊಡು ಇವರಿಗೆ ಒಂದು ಸಾವಿರ"

ಹುಡುಗಿಯ ತಂದೆ "ಅಷ್ಟು ಕಡಿಮೇನಾ, ಒಂದು ಎರಡು ಸಾವಿರ ಆದರೂ ಕೊಡಿ"

ಆಗ ಉಷಾ ಚಿಕ್ಕಮ್ಮ " ನಿಮ್ಮದು ಒಳ್ಳೆಯದು ಇನ್ನು ಕೆಲಸ ಶುರುವಾಗಲಿಲ್ಲ ನಿಮಗೆ ಅಡ್ವಾನ್ಸ್ ಬೇಕಾ, ಯಾವ ಊರು ನಿಮ್ಮದು".

ಹುಡುಗಿಯ ತಂದೆ "ನಮ್ಮದ್ದು ಹಳೆ ಊರು ಅಲ್ಲಿಯ ದೇವಸ್ಥಾನದ ಬದಿಯಲ್ಲಿ ಗೂಡು ಮನೆ ಇದೆಯಲ್ಲ, ಅದೇ ನಮ್ಮ ಮನೆ".

ಉಷಾ ಚಿಕ್ಕಮ್ಮ "ಓಹ್, ಅದು ಮನೆಯ!!! ಹಾಗಾದರೆ, ಇವಳೇ ಸುಮ್ಮಿಯ , ನಿಮ್ಮ ಮಗಳ ಹೆಸರು ಸುಮ್ಮಿ ತಾನೇ"

ಊರಿನಲ್ಲಿದ್ದವರಿಗೆ ವಿಶೇಷವಾಗಿ ಹೆಂಗಸರಿಗೆ ಹೀಗೆ ದೂರ ದೂರದವರ ಪರಿಚಯ ಇರುವುದು ಸಾಮಾನ್ಯ ಸಂಗತಿ, ಊರಿನಲ್ಲಿ ಹೆಂಗಸರ ಗುಂಪು  ಅಲ್ಲಿ ಇಲ್ಲಿಯ ಮಾತಾಡಿ ಹೀಗೆ ಎಲ್ಲೆಲ್ಲಿಯ ಸುದ್ಧಿ ಗೊತ್ತು ಮಾಡುತ್ತಾರೆ ಹಾಗು ಈ ಎಲ್ಲ ಸುದ್ಧಿ ಬಿ. ಬಿ. ಸಿ ದವರ ಸುದ್ದಿಕ್ಕಿಂತಲೂ ಹೆಚ್ಚು ಬೇಗ ಇಡೀ ಊರಲ್ಲಿ ಹರಡುತ್ತದೆ. 

ಹುಡುಗಿಯ ತಂದೆ "ಹೌದು, ನಿಮಗೆ ಪರಿಚಯ ಇದೆಯಾ ನಮ್ಮ".

ಉಷಾ ಚಿಕ್ಕಮ್ಮ "ಹ್ಮ್ಮ್, ಕೇಳಿದ್ದೇನೆ ನಿಮ್ಮ ಬಗ್ಗೆ"

ದಿರೇಶ " ಇರಲಿ ಚಿಕ್ಕಮ್ಮ, ಬಿಡಿ ......ರಮೇಶ  ಎರಡು ಸಾವಿರ ಕೊಡು ಇವರಿಗೆ" ಎಂದು ಹೇಳಿದ.

ರಮೇಶ ಒಳಗಿನಿಂದ ತಂದು ಅವನಿಗೆ ಎರಡು ಸಾವಿರ ಕೊಟ್ಟ.

ಹುಡುಗಿಯ ತಂದೆ ಹೋದ ನಂತರ ಹುಡುಗಿ ಅಮ್ಮನ ಕೋಣೆಗೆ ಹೋದಳು.

ಉಷಾ ಚಿಕ್ಕಮ್ಮ ರಮೇಶನಿಗೆ" ಅಡ್ವಾನ್ಸ್ ಕೊಡಬಾರದಿತ್ತು ರಮೇಶ, ನಿನಗೆ ಗೊತ್ತಿಲ್ಲ ಇಲ್ಲಿ ಎಂತ ಎಂತ ತರಹದ ಜನರಿದ್ದಾರೆಂದು, ನಾನು ಇವನ ಬಗ್ಗೆ ಕೇಳಿದ್ದೇನೆ ಇವನು ದೊಡ್ಡ ಕುಡುಕನಂತೆ,  ಇಷ್ಟು ಚಿಕ್ಕ ಹುಡುಗಿ ಕೆಲಸ ಮಾಡಿ ಇವನು ಅವಳ ಸಂಬಳ ತಿನ್ನುವುದ?, ಈ ದಿರೇಶನಿಗೆ ಅವಸರ ಇಲ್ಲಾದರೆ ಈಗಲೇ ಅವನಿಂದ ಎಲ್ಲ ತಿಳಿದು ಕೊಳ್ಳುತ್ತಿದ್ದೆ"

ದಿರೇಶ "ನಮಗೇನು ಮಾಡಲಿಕ್ಕಿದೆ ಚಿಕ್ಕಮ್ಮ, ಹುಡುಗಿ ಕೆಲಸ ಮಾಡಿದರೆ ಸಾಕು, ಇವನು ಹೀಗೆಯೇ ಹಣ ಸಿಕ್ಕಿದ ಕೂಡಲೇ ಗಡಂಗಿಗೆ ಹೋಗಿ ಕುಡಿಯುತ್ತಾನೆ, ಈಗ ಇಲ್ಲಿಂದ ಸೀದಾ ಗಡಂಗಿಗೆ ಕುಡಿಲಿಕ್ಕೆ ಹೋಗುತ್ತಾನೆ " ಎಂದು ನಕ್ಕ. 

ಉಷಾ ಚಿಕ್ಕಮ್ಮ ದಿರೇಶನಿಗೆ "ಮತ್ತೇನು, ನಿನಗೆ ನಗು ಬರಬಹುದು, ನಿನಗೆ ಕುಡುಕನಲ್ಲದೆ ಬೇರೆ ದೋಸ್ತಿ ಇಲ್ಲವ" ಎಂದು ಬೈದರು.   

ದಿರೇಶ "ಅವನು ಕುಡುಕನಾದರೆ ನಮಗೇನು, ನಮ್ಮ ಕೆಲಸ ಆಯಿತಲ್ಲ".

ಉಷಾ ಚಿಕ್ಕಮ್ಮ "ಇನ್ನು ಎರಡು ದಿವಸಕ್ಕೊಮ್ಮೆ ಹಣಕ್ಕಾಗಿ ಬರುತ್ತಾನೆ ಇಲ್ಲವ ನೋಡು ಅವನು ಇಲ್ಲಿಗೆ".

ದಿರೇಶ "ಹಾಗೆ ಬಂದರೆ, ಅವನನ್ನು ಒದೆದು ಹೊರಗೆ ಹಾಕಿದರೆ ಸಾಕು" ಎಂದು ಹೇಳಿ ನಕ್ಕು ಒಳಗೆ ಹೋದ.

ಉಷಾ ಚಿಕ್ಕಮ ದಿರೇಶನ ಈ ಕಚ್ಚಾಟದಿಂದ ಮನೆಯಲ್ಲಿ ಎಲ್ಲರ ಮುಖದಲ್ಲೂ ನಗು ಹರಿದು ಬಂತು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...