Thursday, February 6, 2020

ವೃದ್ಧಾಶ್ರಮ ೭


ರಮೇಶ ಊರಿಗೆ ಆಶಾ ಚಿಕ್ಕಮ್ಮನವರಿಗೆ ಫೋನ್ ಮಾಡಿದ. 

ಸುಖ ಕಷ್ಟ, ಅಮ್ಮನ ಬಗ್ಗೆ ಹಾಗು ಸುನೀತಾಳ ನಿರ್ಧಾರದ ಬಗ್ಗೆ ಮಾತಾಡಿದ ನಂತರ ರಮೇಶ ಅಮ್ಮನನ್ನು ಊರಿಗೆ ಕರೆದುಕೊಂಡು ಬರುವ ವಿಷಯ ಅವರಿಗೆ ತಿಳಿಸಿದ, ಅದನ್ನು ಕೇಳಿ ಆಶಾ ಚಿಕ್ಕಮ್ಮ ರಮೇಶನ ಮೇಲೆ ಸಿಡಿದು ಬಿದ್ದರು "ಇಲ್ಲಿ ಕರೆದುಕೊಂಡು ಬಂದರೆ ಅವರನ್ನು ನೋಡುವುದು ಯಾರು? ಮೊದಲೇ ಇಲ್ಲಿ ವಿಜಯನ ಕೆಲಸದಿಂದ ನಮಗೆ ಪುರುಸತ್ತಿಲ್ಲ, ಇನ್ನು ಅವರನ್ನು ಇಲ್ಲಿ ಬಿಟ್ಟರೆ ನಾನೇನು ಸಾಯುವುದ? ಇವರೆಲ್ಲರ ಚಾಕರಿ ಮಾಡುವುದೇ ನನ್ನ ಕೆಲಸನ? ನಮಗೆ ಬೇರೆ ಕೆಲಸವಿಲ್ಲವ?  ಊಷಕ್ಕನವರು ಕೇವಲ ಹೊರಗಿನ ಕೆಲಸದಲ್ಲಿರುತ್ತಾರೆ, ನಾನು ಅಡುಗೆ ಮಾಡುವುದ? ಮನೆಯ ಕೆಲಸ ಮಾಡುವುದ? ಇವರ ಚಾಕರಿ ಮಾಡುವುದ ?, ನೋಡು ರಮೇಶ ನಿನಗೆ ಮೊದಲೇ ಹೇಳಿದ್ದೇವೆ ಇಲ್ಲಿ ಅವರನ್ನು ನೋಡಲು ಸಾಧ್ಯವಿಲ್ಲವೆಂದು ". 

ಇದನೆಲ್ಲ ಕೇಳಿ ರಮೇಶ "ಅಲ್ಲ ಚಿಕ್ಕಮ್ಮ..... ನೀವು ಅವರದ್ದು ಚಾಕರಿ ಮಾಡುವುದು ಬೇಡ, ನಾನು ನಿಮಗೆ ಹೇಳುವುದು ಸಹ ಇಲ್ಲ ಅವರದ್ದು ಚಾಕರಿ ಮಾಡಲಿಕ್ಕೆ, ಅದಕ್ಕಾಗಿ ನಾನು ಹೋಮ್  ನರ್ಸ್ ಇಡುತ್ತೇನೆ, ಅವಳೆಲ್ಲ ಅವರ ಕೆಲಸ ಮಾಡುತ್ತಲೇ,  ಕೇವಲ ಅವರ ಊಟ ತಿಂಡಿಯ ಸಮಸ್ಯೆ, ಅದು ನೀವೇನು ಅಡುಗೆ ಮಾಡುತ್ತಿರೋ ಅದೇ ಅವರಿಗೆ ಬಡಿಸಿ ಅಷ್ಟೇ, ಅವರ ಖರ್ಚು ಎಲ್ಲ ಪ್ರತಿ ತಿಂಗಳು ನಾನು ಕಳುಹಿಸುತ್ತೇನೆ". 

ಆಶಾ ಚಿಕ್ಕಮ್ಮ "ನರ್ಸ್ ಇದ್ದರು ನಮಗೆ ಆಗುವುದು ಕೆಲಸ ಆಗುತ್ತದೆ, ಹೇಳುವುದು ಸುಲಭ, ಆದರೆ ಮಾಡುವುದು ಅಷ್ಟು ಸುಲಭವಿಲ್ಲ, ಅಷ್ಟು ಸುಲಭವಾಗಿದ್ದರೆ ಸ್ವತಃ ಮಗಳಾಗಿ ಸುನೀತಾ ಯಾಕೆ ಅವಳಿಂದ ಆಗುವುದಿಲ್ಲ ಅಂತ ಹೇಳುತ್ತಾಳೆ ". 

ರಮೇಶ ಶಾಂತಿಯಿಂದ "ಚಿಕ್ಕಮ್ಮ ಪ್ಲೀಸ್ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ, ನಾನು ಇವರ ವಿದೇಶದ ವೀಸಾ ಸಹ ಮಾಡಿ ಆಗಿದೆ, ಆತೀಶನ ಸ್ಕೂಲಲ್ಲಿ ಅಡ್ಮಿಶನ್ ಸಹ ಆಗಿದೆ, ಇಷ್ಟೊಂದು ಉಪಕಾರ ಮಾಡಿ ಪ್ಲೀಸ್, ಊರಿಗೆ ಕರೆದುಕೊಂಡು ಬರುವುದಲ್ಲದೆ ಬೇರೆ ನನ್ನ ಹತ್ತಿರ ಬೇರೆ ಯಾವುದೇ ಉಪಾಯವಿಲ್ಲಈಗ ". 

"ಇಲ್ಲಿ ಕರೆದುಕೊಂಡು ಬರುವುದು ಬೇಡ ಅಂತ ನಾನೇನು  ಹೇಳಲಿಲ್ಲ,  ಇದೇನು ನನ್ನ ಒಬ್ಬಳ ಮನೆ ಅಲ್ಲ, ಇದು ಎಲ್ಲರ ಮನೆ, ಆದರೆ ನೀನೆ ಯೋಚಿಸು ನಾವು ಏನಂತ ಮಾಡುವುದು, ಇಲ್ಲಿ ಎಲ್ಲರು ನೆಂಟರ ಹಾಗೆ ಊರಿಗೆ ಬಂದೊಗುತ್ತಾರೆ, ಯಾರೂ ಒಂದು ಕೆಲಸ ಸಹ ಮಾಡುವುದಿಲ್ಲ, ಮಾಡುವುದು ಬಿಡು ಸ್ವಲ್ಪ ಸಹಾಯಕ್ಕೂ ಬರುವುದಿಲ್ಲ, ಕೆಲಸವೆಲ್ಲ ನಮಗೆ ಆಗುತ್ತದೆ, ಅವರದೆಲ್ಲ ಚಾಕರಿ ಮಾಡುವದೇ ನಮ್ಮ ಕೆಲಸವಾಯಿತು, ನಮ್ಮ ಜೀವನ ಹೀಗೆಯೇ ಕಳೆದೋಯ್ತು, ಈ ಎಲ್ಲ ಕಾಟದಿಂದ ಎಲ್ಲಿಗೆ ಬರಲಿಕ್ಕಿಲ್ಲ, ಹೋಗಲಿಕ್ಕಿಲ್ಲ, ನಮ್ಮ ಜೀವನ ಜಿಗುಪ್ಸೆಯಿಂದ ತುಂಬಿ ಹೋಗಿದೆ" ಎಂದು  ಆಶಾ ಚಿಕ್ಕಮ್ಮ ತನ್ನ ಮನಸ್ಸಲ್ಲಿದ್ದ ಎಲ್ಲ ಮಾತನ್ನು ರಮೇಶನ ಮೇಲೆ ಉಗಿದು ಬಿಟ್ಟರು.  

ಯಾವುದೇ ಸಂಬಂಧದಲ್ಲಿ ಪ್ರೀತಿ ಇರುವುದು ತುಂಬಾ ಅವಶ್ಯಕ, ಪ್ರೀತಿ ಇಲ್ಲದೆ ಯಾವುದೇ  ಸಂಬಂಧ ಕೇವಲ ಒಂದು ಭಾರವಾಗಿ ಉಳಿಯುತ್ತದೆ  ಹಾಗು ಇಡೀ ಜೀವನ ನಾವು ಒಂದು ಪ್ರಾಣಿಯಂತೆ ಆ ಹೊರೆಯನ್ನು ಹೊತ್ತುಕೊಂಡಿರುತ್ತೇವೆ. ಪಾರಿವಾರಿಕ  ಜೀವನದಲ್ಲಿ ಅವರವರ ಸಂಸಾರ ಪ್ರತ್ಯೇಕವಾದಂತೆ ಪ್ರಸ್ತುತ ಸಂಬಂಧಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಹಳೆಯ ಸಂಬಂಧವೆಲ್ಲ ವ್ಯಾವಹಾರಿಕವಾಗಿ ಉಳಿಯುತ್ತದೆ, ಇದರಿಲ್ಲಿ ಯಾರೂ ವಿಪರೀತ ಇಲ್ಲ, ಇದು ಎಲ್ಲರ ಜೀವನದ ಸತ್ಯ. 

ಆಶಾ ಚಿಕ್ಕಮನ ಮನಸ್ಸ ವ್ಯಥೆ ಕೇಳಿ ರಮೇಶ "ಚಿಕ್ಕಮ್ಮ ನಿಮ್ಮ ಮಾತು ನನಗೆ  ಅರ್ಥವಾಗುತ್ತದೆ, ಆದರೆ ಈಗ ನನ್ನತ್ತಿರ ಬೇರೆ ಯಾವುದೇ ದಾರಿ ಇಲ್ಲ, ಈ ಸಮಯ ನೀವು ನನ್ನ ಸಹಾಯ ಮಾಡಲೇ ಬೇಕು, ಪ್ಲೀಸ್" ಎಂದು ಅಕ್ಷರಶಃ ಬೇಡಿದ. 

ಮನಸ್ಸ ಭಾರವೆಲ್ಲ ಉಗಿದ ನಂತರ ಸ್ವಲ್ಪ ಹಗುರವಾಗಿ ಸಮಾಧಾನದಿಂದ ಆಶಾ ಚಿಕ್ಕಮ್ಮ "ನಾನು ಇಷ್ಟೆಲ್ಲಾ ಹೇಳಿದೆಯೆಂದು ಬೇಸರಿಸಬೇಡ, ನನ್ನ ಗೊತ್ತಿದೆಯಲ್ಲ ನಿನಗೆ, ಕೋಪ ಬಂದಾಗ ಎಲ್ಲ ಹೇಳಿ ಬಿಡುತ್ತೇನೆ, ನೋಡು ನಿನಗೆ ಸರಿ ಕಂಡದ್ದು ಮಾಡು, ನಾನೇನು  ಹೇಳಲಿ" ಎಂದು ಹೇಳಿ ಫೋನ್ ಇಟ್ಟು ಬಿಟ್ಟರು. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...