Saturday, February 8, 2020

ವೃದ್ಧಾಶ್ರಮ ೮

ಆಶಾ ಚಿಕ್ಕಮ್ಮನಿಗೆ ಫೋನ್ ಮಾಡಿದ ನಂತರ ಚಿಂತಿತನಾದ ರಮೇಶ ಸುಮಾಳ ಬಳಿ ಬಂದು ಅವಳಿಗೆ ಎಲ್ಲ ಮಾತು ತಿಳಿಸಿದ. 

ಈ ಕಳವಳದಲ್ಲಿ ರಮೇಶ  "ನರ್ಸ್ ಇಟ್ಟ ಮೇಲೆ ಅವರಿಗೇನು ಅಷ್ಟು ಕಷ್ಟ ಯಾರಿಗೊತ್ತು?  ನನಗನಿಸುವುದಿಲ್ಲ ನರ್ಸ್ ಇಟ್ಟ ಮೇಲೆ ಅವರಿಗೆ ಅಮ್ಮನ ಕೆಲಸ ಮಾಡಬೇಕಾಗಬಹುದೆಂದು, ಕೇವಲ ಅಡುಗೆ, ಅದರಲ್ಲಿಯೂ ಏನಷ್ಟು? ಬಹುಶಃ ಅಮ್ಮ ಊರಿಗೆ ಬರುಹುದೇ ಅವರಿಗೆ ಇಷ್ಟವಿಲ್ಲ ಕಾಣುತ್ತದೆ, ಈಗ ವಿಜಯ ಮಾಮ ಇಲ್ಲವೇ ಅಲ್ಲಿ, ವಿಜಯ ಮಾಮ ಇಡೀ ದಿನ ಎಷ್ಟು ಬೊಬ್ಬೆ ಹಾಕುತ್ತಿರುತ್ತಾರೆ,  ಎಷ್ಟು ಅವರಿಗೆ ಉಪದ್ರ ಕೊಡುತ್ತಾರೆ, ಆದರೂ ಅವರ ಎಲ್ಲ ಕೆಲಸ ಮಾಡುತ್ತಾರೆ, ಅಮ್ಮ ಅಂದರೆ ಅಷ್ಟೇನು ಸಸಾರ, ನಮ್ಮ ಪ್ರಾಬ್ಲಮ್ ಇದೆಯೆಂದು ನಾವು ಹೇಳುವುದಲ್ಲವೇ, ಇಲ್ಲಾದರೆ ಯಾರು ಅವರಿಗೆ ಕಷ್ಟ ಕೊಡುತ್ತಾರೆ, ಸ್ವಲ್ಪ ಸಹ ಕರುಣೆ ಇಲ್ಲವೇ" ಎಂದು ಸುಮಾಳೊಂದಿಗೆ ಗೊಣಗಿದ.

ರಮೇಶನ ಮಾತು ಕೇಳಿ ಸುಮಾ "ನೀವು ಶಾಂತವಾಗಿರಿ, ವಿಜಯ ಮಾಮ ಮೊದಲಿನಿಂದ ಅವರೊಟ್ಟಿಗೆ ಇದ್ದವರು, ಆದರಿಂದ  ಅವರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ,  ಮೇಲಿಂದ ಅವರತ್ತಿರ ಅವರನ್ನು ನೋಡಿಕೊಳ್ಳದೆ ಬೇರೆ ಉಪಾಯ ಸಹ ಇಲ್ಲ, ವಿಜಯ ಮಾಮನ ಹೆಂಡತಿ ಮಕ್ಕಳು ಅವರಿಂದ ದೂರವಾಗಿದ್ದಾರೆ, ಅವರನ್ನು ನೋಡಲು ಸಹ ಬರುವುದಿಲ್ಲ, ಅಮ್ಮ ಅಂದರೆ ಹೇಗೆ, ಮದುವೆ ಆದ ನಂತರ ಮುಂಬೈಯಲ್ಲಿ ಇದ್ದವರು, ಅಮ್ಮನ ಮೇಲೆ ಅವರಿಗೆ ಅಷ್ಟೇನೂ ಅಟ್ಯಾಚ್ಮೆಂಟ್ ಸಹ ಇಲ್ಲದಿರಬಹುದು, ಮೇಲಿಂದ  ಅವರ ಮಕ್ಕಳಿರುವಾಗ ನಾವು ಯಾಕೆ ಮಾಡಬೇಕು ಎಂಬ ವಿಚಾರ ಸಹ  ಅವರ ಮನಸ್ಸಲ್ಲಿರಬೇಕು, ಈಗ ಅವರಿಗೆ ಏನೂ ಹೇಳುವುದು ಸರಿಯಲ್ಲ, ಅವರ ಮನಸ್ಥಿತಿಯ ಮೇಲೆ ನಮ್ಮ ನಿಯಂತ್ರಣವಿಲ್ಲ, ನೀವು ಹೆಚ್ಚು ವಿಚಾರ ಮಾಡಬೇಡಿ,  ಊರಿನ ಟ್ರೈನ್ ಟಿಕೆಟ್ ಮಾಡಿ ಬಿಡಿ, ಬಸ್ಸಲ್ಲಿ ಅಮ್ಮನಿಗೆ ಆಗಲಿಕ್ಕಿಲ್ಲ ಮೇಲಿಂದ ಬಸ್ಸಲ್ಲಿ ಅವರನ್ನು ಕರೆದುಕೊಂಡೋಗುವುದು ಸಹ ತುಂಬಾ ಕಷ್ಟ, ಅದಕ್ಕೆ ಟ್ರೈನ್ ಟಿಕೆಟ್ ಮಾಡಿ,  ಹೆಚ್ಚು ವಿಚಾರ ಮಾಡಿ ಸಹ ಪ್ರಯೋಜನವಿಲ್ಲ,  ದೇವರು ಒಳ್ಳೆಯದ್ದೇ ಮಾಡುತ್ತಾರೆ ".

ಸುಮಾಳ ಇಷ್ಟೆಲ್ಲ ಮಾತು ಕೇಳಿ ಸಹ  ಈಗಲೂ ಸ್ವಲ್ಪ ಸಂದಿಗ್ಧತೆದಲ್ಲಿದ್ದ ರಮೇಶ, ಆದರೆ ಅದೇ ಸಮಯದಲ್ಲಿ ಅವನ ಮನಸ್ಸಲ್ಲಿ ಕೆಲವು ದಾರ್ಶನಿಕ ವಿಚಾರಗಳು ಬಂತು.

ಜೀವನದ ಸಂಕಷ್ಟಗಳು ನಮ್ಮನ್ನು ಇನ್ನು ಸಶಕ್ತ ಮಾಡುತ್ತವೆ, ಒಂದು ವೇಳೆ ಜೀವನದಲ್ಲಿ ಕೇವಲ ಸುಖ ಇದ್ದರೆ ಜೀವನ ಸಹ ನೀರಸವಾಗುವುದು, ಆದ್ದರಿಂದ ವ್ಯಕ್ತಿಗೆ ಬಂದ ಕಷ್ಟಗಳನ್ನು  ಧೈರ್ಯದಿಂದ ಸ್ವೀಕರಿಸಿ ಅದನ್ನು ಎದುರಿಸಬೇಕು. ಒಂದು  ವೇಳೆ  ಜೀವನದಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೆ,  ಜೀವನದ  ಲೌಕಿಕತೆಯನ್ನು  ಸಹ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಈ ಕಠಿಣ ಸಮಯದಲ್ಲಿಯೇ ಯಾರು ನಮ್ಮವರು ಯಾರು ಪರಕೀಯರು ಎಂದು ನಮಗೆ ತಿಳಿಯುವುದು.

ಈಯೆಲ್ಲ ಉತ್ತಮ ವಿಚಾರದಿಂದ ರಮೇಶನ ಮನಸ್ಸಲ್ಲಿ ಒಂದು ಹೊಸ ಭರವಸೆಯ  ನಿರ್ಮಾಣವಾಯಿತು ಹಾಗು ಮನಸ್ಸು ಗಟ್ಟಿ ಮಾಡಿ  ರಮೇಶ ಊರಿಗೆ ಹೋಗಲು ಎಲ್ಲರದ್ದು ತತ್ಕಾಲಲ್ಲಿ ಆನ್ಲೈನ್ ಟ್ರೈನ್ ಟಿಕೆಟ್ ಬುಕ್ ಮಾಡಿದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ. ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...