Sunday, February 9, 2020

ವೃದ್ಧಾಶ್ರಮ ೯

ಅಮ್ಮನ  ಮಲ ಮೂತ್ರಕ್ಕೆಲ್ಲ ಹಾಸಿಗೆಯಲ್ಲಿಯೇ ಬೆಡ್ ಪ್ಯಾನ್  ಕೊಡಬೇಕಾಗುತ್ತಿತ್ತು, ರಮೇಶ ಮತ್ತು ಸುಮಾ ಎಷ್ಟು ಪ್ರಯತ್ನ ಮಾಡಿದ್ದರು ಶೌಚಾಲಯ ಹೋಗುವಷ್ಟು ಅವರ ಶರೀರ ಜಡವಾಗುತ್ತಿತ್ತು, ನಿಂತಲ್ಲಿಯೇ  ನಿಲ್ಲುತ್ತಿದ್ದರು ಹಾಗು ಉದ್ದ ದಪ್ಪ ಇದ್ದ ಅಮ್ಮನ ಭಾರ ಅವರಿಂದ ನಿಯಂತ್ರಿಸಲಾಗುತ್ತಿರಲಿಲ್ಲ. ಅಮ್ಮ ಮಲ ಮೂತ್ರಕ್ಕೆ ಹಾಸಿಗೆಯಿಂದಲೇ ಕರೆಯುತ್ತಿದ್ದರು, ನಂತರ  ರಮೇಶ ಅಲ್ಲದೆ  ಸುಮಾ  ಅವರಿಗೆ ಬೆಡ್ ಪ್ಯಾನ್ ಇಟ್ಟು ಮಲ ಮೂತ್ರ ಮಾಡಿಸಿ ಸ್ವಚ್ಛ ಮಾಡುತ್ತಿದ್ದರು.  

ಒಳ್ಳೆ ಸೌಖ್ಯ ಇದ್ದವರು ಅಮ್ಮ ಈಗ ಹೇಗೆ ವೇದನೆಯಿಂದ ಹೊರಳಾಡುತ್ತಿದ್ದಾರೆ, ಅಮ್ಮನನ್ನು  ಈಗ ಈ ಸ್ಥಿತಿಯಲ್ಲಿ ನೋಡಿ ರಮೇಶನಿಗೆ ದುಃಖ ಉಕ್ಕಿ ಬರುತಿತ್ತು, ಜನ್ಮ ನೀಡಿ ಸಾಕಿದ ಅಮ್ಮನಿಗೆ ಇಂದು ಹೀಗೆ  ನರಳುವುದನ್ನು  ನೋಡಿ ಅವನ ಕಣ್ಣೀರು ನಿಲ್ಲುತ್ತಿರಲಿಲ್ಲ, ಒಂದೊಂದು ಸಲ ಅವನಿಗೆ ವಿದೇಶದ ಕೆಲಸ ಬಿಟ್ಟು ಬಿಡಬೇಕೆಂದು ಅನಿಸುತ್ತಿತ್ತು, ಆದರೆ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡುವಾಗ ಅವನ ತೀರ್ಮಾನ ಬದಲಾಗುತ್ತಿತ್ತು, ರಮೇಶ ಈಗ ತಾನೇ ಸ್ವಲ್ಪ ತನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡಿದ್ದ, ಅಷ್ಟೇನು ಹಣಕಾಸಿನ ಉಳಿತಾಯ ಸಹ ಇರಲಿಲ್ಲ ಅವನ ಹತ್ತಿರ, ಸ್ವತಃ ಮನೆ ಸಹ ಇರಲಿಲ್ಲ, ಇದೆಲ್ಲ ಯೋಚಿಸಿದಾಗ ಅವನಿಗೆ ವಿದೇಶದ  ಕೆಲಸ ಅವನ ಮುಂದಿನ ಜೀವನಕ್ಕೆ ಎಷ್ಟು ಮಹತ್ವಪೂರ್ಣವೆಂದು ತಿಳಿಯುತ್ತಿತ್ತು, ಈಗ ಅಸಹಾಯಕನಾದ ಅವನಿಗೆ ಅಮ್ಮನನ್ನು ಊರಿಗೆ ಕರೆದೆಕೊಂಡು ಹೋಗದೆ ಇತರ ಯಾವುದೇ ದಾರಿ ಕಾಣುತ್ತಿರಲಿಲ್ಲ. 

ಮಾನವ ಜೀವನವನ್ನು ಸೃಷ್ಟಿಸಲು ದೇವರು ಮಹಿಳೆಯನ್ನು ಸೃಷ್ಟಿಸಿದನು, ಮಹಿಳೆ ತನ್ನ ಶಕ್ತಿಯನ್ನು ಜೀವವನ್ನು ಸೃಷ್ಟಿಸಲು ಬಳಸಿದಾಗ ಅವಳನ್ನು ತಾಯಿ ಎಂದು ಕರೆಯಲಾಯಿತು, ಈ ಜಗತ್ತಿನಲ್ಲಿ ಅತ್ಯಂತ ಪವಿತ್ರ ಮತ್ತು ಸಹಾನುಭೂತಿಯ ಅಸ್ತಿತ್ವ ಅಂದರೆ ತಾಯಿಯೇ. 

ಈಗ ಟ್ರೈನ್ನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಏನು ಮಾಡುವುದೆಂದು ಸುಮಾಳಿಗೆ ಅರ್ಥವಾಗುತ್ತಿರಲಿಲ್ಲ, ಆಗ ಅಕಸ್ಮಾತ್ ಅವಳಿಗೆ ಮಕ್ಕಳು ಉಪಯೋಗಿಸುವ ಡೈಪರ್ ಬಗ್ಗೆ ಹೊಳೆಯಿತು.

ಸುಮಾ ರಮೇಶನನ್ನು ಕರೆದು "ಕೇಳಿತಾ, ಈಗ ಟ್ರೈನಲ್ಲಿ ಪ್ರಯಾಣ ಮಾಡುವಾಗ ಅಮ್ಮನ ಮಲ ಮೂತ್ರಕ್ಕೆ ಸಮಸ್ಯೆ ಆಗುತ್ತದೆ, ಅದಕ್ಕೆ ನಾನೇನು ಹೇಳುವುದು ನೀವು ಮೆಡಿಕಲ್ ಹೋಗಿ ಹಿರಿಯರು ಬಳಸುವ ಡೈಪರ್ ಸಿಗುತ್ತದೆಯೇ ನೋಡಿ, ಸಿಕ್ಕಿದರೆ ಒಂದು ಪ್ಯಾಕೆಟ್ ತೆಗೆದುಕೊಂಡು ಬನ್ನಿ, ಇದು ಸಿಕ್ಕಿದರೆ ಅಮ್ಮನಿಗೆ ಪ್ರಯಾಣಿಸುವಾಗ ಮಲ ಮೂತ್ರದ ಸಮಸ್ಯೆ ಆಗುವುದಿಲ್ಲ. 

ರಮೇಶ "ವಾವ್, ಇದು ಒಳ್ಳೆ ಐಡಿಯಾ, ಡೈಪರ್ ಸಿಕ್ಕಿದರೆ ನಮಗೆ ಅಮ್ಮನ ಮಲಮೂತ್ರದ ಟೆನ್ಶನ್ ಇರುವುದಿಲ್ಲ, ನಾನು ಈಗ ಮೆಡಿಕಲ್ ಹೋಗಿ ಬರುತ್ತೇನೆ" ಎಂದು ರಮೇಶ ಮೆಡಿಕಲ್ ಹೋಗಲು ಸಿದ್ಧನಾದ.

ಮಾರ್ಕೆಟಲ್ಲಿ ತುಂಬಾ ಸಮಯ ಅಲೆದ ನಂತರ ಹಾಗು ಕೆಲವು ಮೆಡಿಕಲಲ್ಲಿ ವಿಚಾರಿಸಿದ ನಂತರ ಅವನಿಗೆ ಒಂದು ಮೆಡಿಕಲಲ್ಲಿ ಹಿರಿಯರು ಬಳಸುವ ದೊಡ್ಡ ಡೈಪರ್ ಪ್ಯಾಕೆಟ್ ಸಿಕ್ಕಿತು, ಕೂಡಲೇ ಅವನು ಅದನ್ನು ಖರೀದಿ ಮಾಡಿಕೊಂಡು ಬಂದ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ
ಚಿತ್ರ ಕೃಪೆ : ಗೂಗಲ್

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...