Tuesday, February 11, 2020

ವೃದ್ಧಾಶ್ರಮ ೧೧


ರಮೇಶನ ಅಣ್ಣ ದಿರೇಶ   ಊರಲ್ಲಿಯೇ  ಒಂದು ಹೋಟೆಲಲ್ಲಿ ಕೆಲಸ ಮಾಡುತ್ತಿದ್ದ ಹಾಗು ಹೋಟೆಲ್  ಮನೆಯಿಂದ  ದೂರ ಇದ್ದ ಕಾರಣ ಅವನು ಹೊಟೇಲಲ್ಲಿಯೇ  ಇರುತ್ತಿದ್ದ, ಅವನ ಹೆಂಡತಿ ಮತ್ತು ಎರಡು ಮಕ್ಕಳು ಕುಂದಾಪುರದಲ್ಲಿ  ಅವಳ ಊರ ಮನೆಯಲ್ಲಿರುತ್ತಿದ್ದರು, ಅವರ ಖರ್ಚಿಗೆಲ್ಲ ಅವನು ಹಣ ಕಳಿಹಿಸುತ್ತಿದ್ದ ಹಾಗು ಯಾವಾಗಲೊಮ್ಮೆ ಅಲ್ಲಿ ಹೋಗಿ ಒಂದು ವಾರ ಇದ್ದು ಬರುತ್ತಿದ್ದ. ಅಮ್ಮ ಊರಲ್ಲಿರುವಾಗ ಅವನು ವಾರಕೊಮ್ಮೆ ಮನೆಗೆ ಬರುತ್ತಿದ್ದ ಆದರೆ ಅಮ್ಮ ಮುಂಬೈ ಹೋದ ನಂತರ  ಯಾವಾಗಲೊಮ್ಮೆ ಮನೆಗೆ  ಬಂದು  ಎರಡು ಮೂರು ದಿನ ಇದ್ದು ಹೋಗುತ್ತಿದ್ದ. ಅವನು ಎಲ್ಲಿಯೂ ಒಂದು ಸ್ಥಾನದಲ್ಲಿ ಹೆಚ್ಚು ಸಮಯ ಕೆಲಸ ಮಾಡುತ್ತಿರಲಿಲ್ಲ, ಸತತ ಕೆಲಸ ಬದಲಾಯಿಸುತ್ತಿರುತ್ತಿದ್ದ, ಸಂಬಳ ಸಹ ಅಷ್ಟೇನೂ ಇರಲಿಲ್ಲ ಅದಕ್ಕೆ  ಯಾವಾಗ ನೋಡಿದರು ಅವನು ಹಣದ ಬಿಕ್ಕಟ್ಟಿನಲ್ಲಿರುತ್ತಿದ್ದ. ಮೂರು ನಾಲ್ಕು ತಿಂಗಳಿಗೊಮ್ಮೆ ಅವನು ಹಣಕ್ಕಾಗಿ ರಮೇಶನ ಹಿಂದೆ  ಬೀಳುತ್ತಿದ್ದ ಹಾಗು ಹೇಗಾದರೂ ಅವನಿಂದ ಹಣ ಪಡೆಯುತ್ತಿದ್ದ ಹಾಗು ಇದು ಅವನ ರೂಢಿ ಆಗಿ ಹೋಗಿತ್ತು, ರಮೇಶ ಅವನಿಗೆ ಹಣ ಕೊಟ್ಟು ಕೊಟ್ಟು ಸೋತುಹೋಗಿದ, ಆದರೆ ಉಪಕಾರಬುದ್ಧಿಯುಳ್ಳ ರಮೇಶ ದಯೆ, ದಾಕ್ಷಿಣ್ಯಯಿಂದ ಅವನಿಗೆ ಅಂತು ಇಂತು ಹಣ ಕೊಟ್ಟು ಸಹಾಯ ಮಾಡುತ್ತಿದ್ದ. 

ಟ್ರೈನಲ್ಲಿ ಸುಮಾ ರಮೇಶನಿಗೆ "ಕೇಳಿತ, ಅಮ್ಮನನ್ನು ನೋಡಲು ಹೋಮ್ ನರ್ಸ್ ಬೇಕಲ್ಲವೇ"?

ರಮೇಶ "ಒಹ್!! ಹೌದು ನಾನು ಮರೆತೇ ಹೋಗಿದೆ" ಎಂದು ಅವನು ಅವನ ಅಣ್ಣ ದಿರೇಶನಿಗೆ ಮೊಬೈಲ್ನಿಂದ ಫೋನ್ ಮಾಡಿದ.

ಅಲ್ಲಿಂದ ದಿರೇಶ್ " ಹಲೋ"

ರಮೇಶ "ಎಲ್ಲಿದ್ದೀಯಾ"?

ದಿರೇಶ "ಇಲ್ಲೇ,... ಹೋಟೆಲಲ್ಲಿ ಹೇಳು".

ರಮೇಶ "ಅಮ್ಮನನ್ನು ಊರಿಗೆ ಕರೆದುಕೊಂಡು ಬರತ್ತಾ ಇದ್ದೇನೆ".

ದಿರೇಶ "ಹೌದ, ಯಾವಾಗ? ಹೇಗಿದ್ದಾರೆ ಅಮ್ಮ ಈಗ, ನೀನು ಯಾವಾಗ ಬಂದೆ"? ತನ್ನನೆ ಜಗತ್ತಲ್ಲಿರುವ ದಿರೇಶ ಅವನದ್ದೇ ಗುಂಗಿನಲ್ಲಿ ಕೆಲವು ಪ್ರಶ್ನೆ ಕೇಳಿದ.

ರಮೇಶ "ನಾನು ಬಂದು ಕೆಲವು  ದಿನ ಆಯಿತು, ಈಗ ನಾವು ಟ್ರೈನಲ್ಲಿ ಇದ್ದೇವೆ, ಅಮ್ಮನನ್ನು ಕರೆದುಕೊಂಡು ಬರತ್ತಾ ಇದ್ದೇವೆ, ನೀನೊಂದು ಕೆಲಸ ಮಾಡು, ಅಮ್ಮಗೋಸ್ಕರ ಒಂದು ಹೋಮ್ ನರ್ಸ್ ಹುಡುಕು, ನಾಳೆ ನಾವು ಊರಿಗೆ ತಲುಪುತ್ತೇವೆ".

ಅದಕ್ಕೆ ದಿರೇಶ "ಇಲ್ಲಿ ಒಂದು ಊರಿನಲ್ಲಿ ಒಂದು ಆಯುರ್ವೇದಿಕ್ ಆಸ್ಪತ್ರೆ ಇದೆಯಂತೆ, ತುಂಬಾ ಫೇಮಸ್, ಅಲ್ಲಿ ಅಮ್ಮನ ಹಾಗೆ ಕಾಯಿಲೆದವರೇ ಇರುವುದು, ಅಲ್ಲಿ ಕೆಲವು ಪಕ್ಷವಾತ ಆದ ರೋಗಿಗಳು ಕೆಲವು ದಿನ ಅಲ್ಲಿ ಚಿಕೆತ್ಸೆ ಪಡೆದು ಈಗ ಓಡ್ತಾ ಇದ್ದರಂತೆ" ದೊಡ್ಡ ದೊಡ್ಡ ಮಾತಾಡುವುದರಲ್ಲಿ ನಿಸ್ಸಿಮ ದಿರೇಶ  ರಮೇಶನಿಗೆ ಹೇಳಿದ.

ರಮೇಶ " ಯಾವ ಆಸ್ಪತ್ರೆ "?

ದಿರೇಶ "ಇಲ್ಲೇ ಸಮೀಪ ಇದೆ, ನೀವು ಬಂದ ನಂತರ ಅಮ್ಮನನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಮತ್ತೆ ಅಲ್ಲಿಂದಲೇ ಹೋಮ್ ನರ್ಸ್ ನ ವ್ಯವಸ್ಥೆ ಮಾಡುವ".

ರಮೇಶ "ಓ. ಕೆ , ಆದರೆ ನೀನು ಬೇರೆ ಕಡೆ ಸಹ ಹೇಳಿ ಇಡು".

ದಿರೇಶ "ಅದೆಲ್ಲ ನೀನು ಟೆನ್ಶನ್ ಮಾಡಬೇಡ, ಅದರ ವ್ಯವಸ್ಥೆ ನಾನು ಮಾಡುತ್ತೇನೆ, ಆದರೆ ಅವರಿಗೆ ಸಂಬಳ ಎಷ್ಟು ಹೇಳುವುದು"?

ರಮೇಶ "ಸಂಬಳ.....ನೋಡು........ಎಷ್ಟು ಕೇಳುತ್ತಾರೆ, ಮತ್ತೆ ಅಲ್ಲಿ ನಮ್ಮ ಹಳ್ಳಿಯ ಮನೆಗೆ ಬರಬೇಕಾಗುತ್ತದೆಯಲ್ಲ , ಸ್ವಲ್ಪ ಹೆಚ್ಚು ಕೇಳಬಹುದು, ಕೇಳಿ ನೋಡು".
  
ದಿರೇಶ "ಓ. ಕೆ, ನಾನು ಎಲ್ಲ ವಿವರವಾಗಿ ಕೇಳಿ ನಾಳೆ ಮನೆಗೆ ಬರುತ್ತೇನೆ"

ರಮೇಶ "ಓ. ಕೆ, ಬೈ".

ದಿರೇಶ "ಓ.ಕೆ" ಎಂದು ಫೋನ್ ಇಟ್ಟ. 

(ಮುಂದುವರಿಯುತ್ತದೆ)

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...