Sunday, June 3, 2012

ಬಹುಮಾನ

ತುಂಬು ಹುರುಪು
ಗೆಲ್ಲುವೆ ಎಂದು
ಆದರೆ ಇದೇನು
ಅವನ ಹೆಸರು ಕರೆಯಲಿಲ್ಲ
ಹಲವರು ಬಂದು
ತನ್ನ ತನ್ನ ಬಹುಮಾನ
ಕೊಂಡು ಹೋದರು!

ಈಗ ಮನಸ್ಸಲ್ಲಿ
ತಳಮಳ ಚಿಂತೆ
ಷೇ... ಅಮ್ಮ ಅಪ್ಪನಿಗೆ
ಎಷ್ಟು ಬೇಜಾರಾಗಬಹುದು
ಸುಮ್ಮನೆ ಅವರಿಗೆ ಹೇಳಿದು
ನನಗೆ ಬಹುಮಾನ
ಸಿಗುತ್ತದೆ ಎಂದು!

ಕಣ್ಣಲ್ಲಿ ನೀರು
ಹತಾಷೆ ನಿರಾಶೆ
ಮೌನ
ಕಂಪಿಸುವ ಕಾಲುಗಳು
ಏನಾಯಿತು
ಯಾಕೆ ಸಿಗಲಿಲ್ಲ
ಅವರಿಂದ ಏನು ತಪ್ಪಾಯಿತೇ!

ಅವಾಗ ಒಮ್ಮೆಲೇ
ಅವನ ಹೆಸರು
ಕರೆಯಲಾಯಿತು
ಪ್ರಥಮ ಬಹುಮಾನ
ಅವನಿಗೆ ಎಂದು
ಆನಂದ ಬಾಷ್ಪ
ಕಣ್ಣ ಮುಂದೆ ತಂದೆ ತಾಯಿಯ
ಆನಂದಮಯ ನಗು ಮುಖ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...