ಏನು ಮಾಡಲಿ
ಯಾರನ್ನು ಕೇಳಲಿ
ಮನಸ್ಸಲ್ಲಿ ಅಡಗಿಸಿದ ವ್ಯಥೆಯನ್ನು
ಹೇಗೆ ಹೇಳಲಿ!
ಮಾಡಿದ ತಪ್ಪಿಗೆ
ಯಾವ ಶಿಕ್ಷೆ ಅನುಭವಿಸಲಿ
ಕಲ್ಲ ಬಂಡೆಯಲಿ
ಹೇಗೆ ಹೂವು ಅರಳಿಸಲಿ!
ಮೌನದ ಮಾತಿಗೆ
ಹೇಗೆ ಉತ್ತರಿಸಲಿ
ಶಾಂತ ಸರೋವರದಲಿ
ಹೇಗೆ ಕಲ್ಲು ಎಸೆಯಲಿ!
ಕೋಪದ ಜ್ವಾಲೆಯನ್ನು
ಹೇಗೆ ತಣಿಸಲಿ
ದುಃಖದ ಏರು ಸಮುದ್ರದಲಿ
ಹೇಗೆ ದೋಣಿ ಸಾಗಿಸಲಿ!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment