Wednesday, June 27, 2012

ತಥ್ಯವಿಲ್ಲದ ಕಲ್ಪನೆ

ಮನುಜ...
ತಥ್ಯವಿಲ್ಲದ ಕಲ್ಪನೆ ಕಾಗೆಯಂತೆ ಕಪ್ಪು
ಕೋಗಿಲೆಯಂತೆ ಮಧುರ ಸ್ವರ ನುಡಿಯಲಾರದು
ಯಾರ ಬಗ್ಗೆಯೂ ತಿಳಿಯದೆ ಅವರ ಬಗ್ಗೆ ಹಾಳು ನುಡಿಯ ಬೇಡ
ಅನ್ಯರ ಬಗ್ಗೆ ಏನೋ ಕಲ್ಪನೆ ಮಾಡಿ ತನ್ನ ಸುಳ್ಳು ಬಾಣ ಬಿಡ ಬೇಡ
ಅನ್ಯರ ನಿಂದನೆ ಮಾಡುವವ ಸ್ವತ ಆ ಉರಿಯಲಿ ಸುಡುವನು
ನೀ ನುಡಿಯುವಾಗ ಮಲ್ಲಿಗೆಯ ಮಳೆಯಾಗಲಿ
ಕೇಳುವವರು ಅದರ ಸುಗಂಧ ಹನಿಯಲಿ ನೆನೆಯಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...